ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪತಂಜಲಿಯ ಯೋಗ ಭಾಗ ೪

August 23, 2005 - 10:43am — R M Rao

ಪತಂಜಲಿಯ ಯೋಗ

ನಾಲ್ಕನೆಯ ಲೇಖನ

ಮನಸ್ಸಿನಲ್ಲಿ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಅಭ್ಯಾಸ ಮಾಡುತ್ತಿದ್ದಾಗ ಅನೇಕ ತಡೆ-ಅಡಚಣೆಗಳು ಬರುತ್ತವೆ. ಅವು ಯಾವುವೆಂದರೆ
ವ್ಯಾಧಿ(ಕಾಹಿಲೆ), ಸ್ತ್ಯಾನ (ಸೋಮಾರಿತನ), ಸಂಶಯ (ನಂಬಿಕೆ ಇಲ್ಲದಿರುವುದು), ಪ್ರಮಾದ (ತಪ್ಪು), ಅವಿರತಿ (ದೇಹದ ಕಾಮನೆಗಳು), ಭ್ರಾಂತಿದ‍ರ್ಶನ (ಆಗದಿದ್ದನ್ನು ಆಯಿತೆಂದು ತಿಳಿಯುವುದು), ಅಲಭ್ದಭೂಮಿಕತ್ವ (ಮನಸ್ಸನ್ನು ಹರಿಬಿಡುವುದು;ಅನುಪಸ್ಥಿತಿ), ಅನವಸ್ಥಿತತ್ವ (ಒಂದು ಸ್ಥಿತಿ ಏರಿದ್ದನ್ನು ಉಳಿಸಿಕೊಳ್ಳದಿರುವುದು), ದುಃಖ , ದೌ‍ರ್ಮನಸ್ಯ (ಮನಸ್ಸಿನ ಪರಿತಾಪ), ಅಂಗಮೇಜಯತ್ವ (ದೇಹದ ಚಲನೆ),ಶ್ವಾಸಪ್ರಶ್ವಾಸ (ಅಸಮವಾದ ಉಸಿರಾಟ).
ಇವುಗಳಲ್ಲಿ ಸಂಶಯ ಮತ್ತು ಭ್ರಾಂತಿದ‍ರ್ಶನದ ಬಗ್ಗೆ ಹೆಚ್ಚಿನ ವಿವರಣೆಯ ಅಗತ್ಯವಿದೆ. ಸಂಶಯ ಯೋಗದ ಯಾವ ಸ್ಥಿತಿಯಲ್ಲಿದ್ದವರನ್ನೂ ಬಿಡುವುದಿಲ್ಲ. ಮುಖ್ಯವಾಗಿ ಯೋಗ ಮನಸ್ಸಿನ ಮೇಲೆ ನಡೆಸುವ ಪ್ರಯೋಗ-ಸ್ವಪ್ರಯೋಗ. ಉದಾಹರಣೆಗೆ ಅದು ಮಂಜು ಕವಿದ ಹಾದಿ ಎನ್ನಬಹುದು. ನಾವು ಯಾವಾಗ ಎಲ್ಲಿದ್ದೇವೆ ಎಂದು ತಿಳಿಯುವುದು ಕಠಿಣ. ಪ್ರಜ್ಞಾಪೂರ್ವಕವಾಗಿ ಅಭ್ಯಾಸ ವೈರಾಗ್ಯಗಳಲ್ಲಿ ವ‍ರ್ಷಗಟ್ಟಲೆ ನಿರತರಾದಾಗ ನಾವು ಯಾವುದಾದರೊಂದು ಸ್ಥಿತಿಯನ್ನು ತಲುಪುವವರೆಗೆ ನಾವು ಯೋಗದಲ್ಲಿ ಮುಂದುವರೆಯುತ್ತಿದ್ದೇವೆಯೇ ಎಂಬ ಅನುಮಾನ ಬಂದೇ ಬರುತ್ತದೆ. ಒಂದು ಸ್ಥಿತಿಯನ್ನು ತಲುಪುವ ಹಿಂದಿನ ದಿನ ಕೂಡ ಪ್ರಾರಂಭಿಕ ದಿನದ ಮನೋಸ್ಥಿತಿಯೇ ಇದ್ದಂತೆ ಅನಿಸುತ್ತದೆ.
ನಮ್ಮ ಮನಸ್ಸು ಅಭ್ಯಾಸ ವೈರಾಗ್ಯಗಳಲ್ಲಿ ಸ್ವಲ್ಪ ಮುಂದುವರೆದಲ್ಲಿ ಅದೇ ಮುಂದಿನ ಸ್ಥಿತಿ ಎನ್ನಿಸಬಹುದು. ಉದಾಹರಣೆಗೆ ಮನಸ್ಸನ್ನು ಒಂದು ಜಾಗದಲ್ಲಿ ನೆಲೆಗೊಳಿಸಲು ಸಾಧ್ಯವಾದಾಗ ಅದೇ ಸಮಾಧಿ ಎನಿಸಬಹುದು. ಮನಸ್ಸು ಸ್ವಲ್ಪ ತಿಳಿಯಾದಾಗ ನಮಗೆ ಸಂಪ್ರಜ್ಞಾತ ಸ್ಥಿತಿ ಉಂಟಾಯಿತು ಎಂದು ಭಾಸವಾಗಬಹುದು.
ಅಡ್ಡಿ-ಅಡಚಣೆಗಳ ನಿವಾರಣೆಗೆ ಯೋಗದ ಹಾದಿಯಲ್ಲಿ ನಡೆಯುವವರು ಕೆಳಕಂಡ ವಿಧಾನಗಳಲ್ಲಿ ತಮಗೆ ಸರಿಹೊಂದುವ ಒಂದನ್ನು ಆರಿಸಿ ಅದನ್ನೇ ಅಭ್ಯಾಸ ಮಾಡಬೇಕು.ಯೋ.ಸೂ.ಪಾದ೧. ಸೂತ್ರ.೩೨
ಸುಖಿಜನರಲ್ಲಿ ಸ್ನೇಹ, ದುಃಖಿತರಲ್ಲಿ ಕರುಣೆ, ಒಳ್ಳೆಯಜನರನ್ನು ಕಂಡರೆ ಸಂತೋಷ, ಕೆಟ್ಟವರಲ್ಲಿ ಉಪೇಕ್ಷೆ ಈ ಭಾವನೆಗಳನ್ನು ಬೆಳಸಿಕೊಳ್ಳುವುದರಿಂದ ಮನಸ್ಸು ಒಂದು ಹದಕ್ಕೆ ಬರುತ್ತದೆ. ಎಂದರೆ ನಮಗಿಂತ ಸುಖವಾಗಿರುವವರನ್ನು ಕಂಡಾಗ ಅಸೂಯೆಯಾಗಬಾರದು. ದುಃಖಿತರನ್ನು ನೋಡಿದಾಗ ಅನುಕಂಪ ಮೊಡಬೇಕೇ ವಿನಹಃ ಅಹಂಕಾರವಾಗಲೀ(ಸಾಮಾನ್ಯ ಮಾತಿನಲ್ಲಿ ಬರುವ ಕೊಬ್ಬು ಎಂದ‍‌ರ್ಥ), ಉಪೇಕ್ಷೆಯಾಗಲೀ ಇರಬಾರದು. ಕೆಟ್ಟವರನ್ನು ಕಂಡಾಗ ಮನದಲ್ಲಿ ದ್ವೇಷಭಾವ ಏಳಕೂಡದು.
ಸಮವಾದ ಶ್ವಾಸಪ್ರಶ್ವಾಸದಿಂದಲೂ ಸಾಧ್ಯ(ಪ್ರಾಣಾಯಾಮ).
ಮೊಗಿನ ತುದಿ, ಹಣೆಯ ಮಧ್ಯ ಹೀಗೆ ಕೆಲವು ಜಾಗಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿದಾಗ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಮನಸ್ಸಿನಲ್ಲಿ ಜ್ಯೋತಿ ಅಥವಾ ಆನಂದದ ಬಗ್ಗೆ ಧ್ಯಾನಿಸಿದಾಗ ಸಾಧ್ಯ.
ವಿರಾಗ ಅಥವಾ ವಿರಾಗಿಗಳ ಬಗ್ಗೆ ಅಭ್ಯಸಿಸುವುದರಿಂದ ಸಾಧ್ಯ.
ಕನಸು ಅಥವಾ ನಿದ್ರೆ ಇವುಗಳ ಬಗ್ಗೆ ಆಳವಾಗಿ ಚಿಂತಿಸುವುದರಿಂದಲೂ ಸಾಧ್ಯ.
ಅಥವಾ ಯಾವುದಾದರೂ ಒಂದು ಒಳ್ಳೆಯ ಆಲೋಚನೆಯಿಂದ ನಿಮ್ಮ ಮನಸ್ಸಿನಲ್ಲಿ ವೃತ್ತಿಗಳು ಏಳುವುದು ಕಡಿಮೆ ಮಾಡಲು ಸಾಧ್ಯವಾದಲ್ಲಿ ಅದನ್ನೇ ಮುಂದುವರಿಸಬಹುದು.
ಹೀಗೆ ಧೀ‍ರ್ಘ ಕಾಲ ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮನಸ್ಸಿನಲ್ಲಿ ವೃತ್ತಿಗಳು ಏಳುವುದು ಕಡಿಮೆಯಾಗುತ್ತಾಬರುತ್ತದೆ. ಮನಸ್ಸು ಪಕ್ವವಾದಂತೆ ಹೊರಗಿನ ವೃತ್ತಿಗಳ ನಿಯಂತ್ರಣ ಸಾಧ್ಯವಾಗುತ್ತದೆ. ಅವುಗಳಿಂದ ಚಿತ್ತಕ್ಷೋಭೆಯುಂಟಾಗುವುದನ್ನು ತಡೆಯುವ ಶಕ್ತಿ ಬರುತ್ತದೆ. ಇದರಿಂದ ಹೊಸದಾಗಿ ಮನಸ್ಸಿನಲ್ಲಿ ಕ್ಲೇಷಗಳು ಉಂಟಾಗುವುದಿಲ್ಲ.
ಮನಸ್ಸಿನಲ್ಲಿ ವೃತ್ತಿಗಳು ಏಳುವುದರ ಮೇಲೆ ಸಂಪೂ‍ರ್ಣ ಹತೋಟಿಗೆ ಬಂದಾಗ ಆತ್ಮ ಸಚೇತನವಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೪೭
ಇದರಿಂದ ಋತಂಭರಾ ಎಂಬ ಪ್ರಜ್ಞಾಸ್ಥಿತಿ ಉಂಟಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೪೮
ಇದು ಸಾಮಾನ್ಯವಾಗಿ ಕಂಡು, ಕೇಳಿ ತಿಳಿದ ಜ್ಞಾನಕ್ಕಿಂತ ಭಿನ್ನವಾದುದು;ಎಂದರೆ ಜ್ಞಾನ ತಾನಾಗಿಯೇ- ಮನಸ್ಸು ಬುದ್ದಿ ಮತ್ತು ಅಹಂಕಾರಗಳ ನೆರವಿಲ್ಲದೆಯೇ, ಉದಯವಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೪೯
ಇದರಿಂದ ಹುಟ್ಟುವ ಸಂಸ್ಕಾರಗಳು ಸಾಮಾನ್ಯವಾಗಿ ಹುಟ್ಟುವ ಸಂಸ್ಕಾರಗಳನ್ನು ಪ್ರತಿಬಂಧಿಸುತ್ತದೆ.ಯೋ.ಸೂ.ಪಾದ೧. ಸೂತ್ರ.೫೦
ಮನಸ್ಸಿನಲ್ಲಿ ಹುಟ್ಟುವ ಪ್ರತಿಯೊಂದು ವೃತ್ತಿ ಸಹ ಒಂದೊಂದು ಸಂಸ್ಕಾರವನ್ನು ಮನದಲ್ಲಿ ಬಿಡುತ್ತದೆ. ಅದು ನೋವನ್ನುಂಟುಮಾಡುವ ಅಥವಾ ನೋವನ್ನುಂಟುಮಾಡದಿರುವ ಗುಣಗಳನ್ನು ಹೊಂದಿರುತ್ತದೆ. ಈ ಸಂಸ್ಕಾರಗಳು ಸ್ಮೃತಿಯ ಜೊತೆ ಸೇರಿ ಮನಸ್ಸಿನಲ್ಲಿ ಎಡಬಿಡದೆ ಆಲೋಚನಾ ತರಂಗಗಳನ್ನು ಎಬ್ಬಿಸುತ್ತಿರುತ್ತದೆ. ಮನಸ್ಸಿನ ಕ್ಲೇಷಗಳಿಗೆ ಕಾರಣವಾಗುತ್ತದೆ.
ಋತಂಭರಾ ಪ್ರಜ್ಞಾಸ್ಥಿತಿಯನ್ನೂ ನಿರೋಧಿಸಿದಾಗ ನಿ‍‍ರ್ಬೀಜ ಸಮಾಧಿಯಾಗುತ್ತದೆ.ಯೋ.ಸೂ.ಪಾದ೧. ಸೂತ್ರ.೫೧

ಪತಂಜಲಿಯ ಪ್ರಥಮ ಸಮಾಧಿಪಾದದ ಮುಖ್ಯಸೂತ್ರಗಳನ್ನು ಯೋಗದಲ್ಲಿ ಪ್ರಾರಂಭಿಕ ಆಸಕ್ತಿ ಇರುವವರಿಗೆಂದು ಬರೆದ ಲೇಖನ.

ಆದರೆ ಮನಸ್ಸಿನಲ್ಲಿ ಕ್ಲೇಷಗಳು ಇರುವ ತನಕ ವೃತ್ತಿಗಳನ್ನು ಉತ್ಪಾದಿಸುತ್ತಿರುತ್ತವೆ. ಅವುಗಳನ್ನು ಹೇಗೆ ನಿಯಂತ್ರಿಸಿಬೇಕೆಂಬುದನ್ನು ಪತಂಜಲಿಯ ಎರಡನೆಯ ಸಾಧನ ಪಾದ ಹೇಳುತ್ತದೆ.

೨೩/೮/೦೫
ಮುಂದುವರೆಯುವುದು...

  • ಅಧ್ಯಾತ್ಮ
~.~
  • Login or register to post comments
  • 731 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪತಂಜಲಿಯ ಯೋಗ ಭಾಗ ೩
  • ಪತಂಜಲಿಯ ಯೋಗ : ಭಾಗ ೨
  • ಪತಂಜಲಿಯ ಯೋಗ
  • ಪತಂಜಲಿಯ ಯೋಗ ಭಾಗ ೮
  • ಪತಂಜಲಿಯ ಯೋಗ ಅಂತಿಮ ಭಾಗ
Syndicate content

ಲೇಖಕರು

R M Rao's picture

ಪರಿಚಯ

ನನ್ನ ಬಗ್ಗೆ ನಾನೇ ಹುಡುಕಾಟ ಪ್ರಾರಂಭ ಮಾಡಿ
ಈಗ ಯೋಗದ ಹಾದಿಯಲ್ಲಿ ಹುಡುಕಾಟ ಮುಂದುವರಿಸಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 51 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator