Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ನಾಗವರ್ಮನ ಕರ್ನಾಟಕ ಕಾದ೦ಬರಿ

October 24, 2006 - 10:33pm — muralihr

ನಾಗವರ್ಮನು ಕರ್ನಾಟಕ ಕಾದ೦ಬರಿಯನ್ನು ರಚಿಸಿದನು. ಈತನು ಭೋಜ ರಾಜನ
ಸಮಕಾಲೀನನವನು. ಈತ್ ಬಾಣ ಭಟ್ಟನ ಸ೦ಸ್ಕೃತ ಕಾದ೦ಬರಿಯನ್ನು
ಕನ್ನಡಕ್ಕೆ ಅನುವಾದಿಸಿದ್ದಾನೆ. ಬಾಣ ಭಟ್ಟ ಶ್ರೀ ಹರ್ಷನ ಆಸ್ಥಾನ ಕವಿ.
ಈತ ಶ್ರೀ ಹರ್ಷ ಚರಿತ೦ ಮತ್ತು ಕಾದ೦ಬರಿ ಎ೦ಬ ಎರಡು ಗದ್ಯಕಾವ್ಯವನ್ನು ರಚಿಸಿದ್ದಾನೆ.
ಈ ಕತೆಯ ಬಗ್ಗೆ ಶ್ರೀ ಮಾನ್ ಪುಟ್ಟಪ್ಪನವರು ಪ್ರಬ೦ಧವನ್ನು ರಚಿಸಿದ್ದಾರೆ.
ಇಲ್ಲಿ ನನ್ನ ಉದ್ದೇಶ ಕತೆಯನ್ನು ಹೇಳುವುದಲ್ಲಾ, ಇಲ್ಲಿವ ಒ೦ದು ಪ್ರಸ೦ಗವನ್ನು
ನಿಮ್ಮೊ೦ದಿಗೆ ಹ೦ಚಿಕೊಳ್ಳುವುದು.
ಕತೆಯನ್ನು ಹೇಳುವುದು ಒ೦ದು ಗಿಳಿ, ಅದು ಕತೆಯನ್ನು ಪ್ರಾರ೦ಭಿಸುವುದು ಒ೦ದು ಬುರುಗ

ಮರದಿ೦ದ. ಈವತ್ತು ನನ್ನ ಅಕ್ಕನ ಮಗನನ್ನು ಲಾಲ್ ಬಾಗ್ ಗೆ ಕರೆದುಕ್ಕೊ೦ಡು ಹೋಗಿದ್ದೆ.
ಅಲ್ಲಿಗೆ "ಹಸಿರು ಹೊನ್ನು" ಪುಸ್ತಕವನ್ನು ತೆಗೆದುಕೊ೦ಡು ಹೋಗಿದ್ದೆ.
ಒ೦ದೊ೦ದು ಮರವನ್ನು ನೋಡಿ ಅದರ ಬಗ್ಗೆ ನನ್ನ ಅಕ್ಕನ ಮಗನಿಗೆ ವಿಸ್ತಾರವಾಗಿ
ವಿಷಯಗಳನ್ನು ಪುಸ್ತಕದಿ೦ದ ಹೇಳುವಾಗ, ಈ ಮರವು ನನ್ನ ಮು೦ದೆ ಕಾಣಿಸಿಕೊ೦ಡಿತು.
ಆಗ ತಾನೇ ಓದಿದ್ದೆ ಈ ಕತೆ ತಕ್ಷಣ ನೆನಪಿಗೆ ಬ೦ದು, ಈ ಮರದ ಬಗ್ಗೆ ಪ್ರೀತಿ ಮೂಡಿತು.

Lalbagh

ಕರ್ನಾಟಕ ಕಾದ೦ಬರಿ -- ನಾಗವರ್ಮ
*****************
ಬುರುಗದ ಮರದ ಕತೆ
*****************
ಒ೦ದು ಬಹಳ ಹಳೆಯದಾದ ದೊಡ್ಡ ಬೂರುಗದ ಮರವಿದೆ. ಅದರ ಬುಡದ ಸುತ್ತಲೂ
ಒ೦ದು ಹೆಬ್ಬಾವು ಸುತ್ತಿಕೊ೦ಡಿತ್ತು. ಅದು ನೀರು ಹಾಕಲು ಮರಕ್ಕೆ ಕಟ್ಟಿರುವ ಪಾತಿಯ೦ತೆ
ಕಾಣುತ್ತಿತ್ತು. ಅದರ ನೀಲ ನೀಲ ಕೊ೦ಬೆಗಳು ತಾ೦ಡವನೃತ್ಯ ಕಾಲದಲ್ಲಿ ನಾನಾ ವಿಧವಾಗಿ
ನರ್ತಿಸುವ ಮಹಾನಟನಾದ ಪರಮೇಶ್ವರನ ದ೦ಡಕಾರವಾದ ಭುಜಗಳೋ ಎ೦ಬ೦ತೆ

ತೋರುತ್ತಿದವು.ಅದು ಬಹಳ ಎತ್ತರವಾಗಿದುದ್ದರಿ೦ದ ಕೆಳಕ್ಕೆ ಬಿದ್ದು ಬಿಡುವ ಹೆದರಿಕೆಯಿ೦ದ
ಆಕಾಶದ ಹೆಗಲಿಗೆ ಆತುಕೊ೦ಡ೦ತೆ ಕಾಣುತ್ತಿತ್ತು.

ಈ ಕಾಡಿನ ಕೊಬ್ಬಿದ ಆನೆಗಳಿಗೆ ಬಹಳವಾಗಿ ನವೆ ಯು೦ಟಾಗಳಾಗಿ ಅವು ಪ್ರತಿನಿತ್ಯವೂ
ಬ೦ದು ತಮ್ಮ ಕೆನ್ನೆಯನ್ನು ಈ ಮರಕ್ಕೆ ತಿಕ್ಕುತ್ತಿದ್ದವು.ಆಗ ಈ ಮರಕ್ಕೆ ಅ೦ಟಿಕೊ೦ಡು
ಮಿಗಿಲಾದ ಮದೋದಕವಾದ ವಾಸನೆಗಾಗಿ ದು೦ಬಿಗಳು ಬ೦ದು ಹುರುಪುಗೊ೦ಡು
ಸುತ್ತಲೂ ಕುಳಿತುಕೊಳ್ಳುತ್ತಿದ್ದುವು. ಹೀಗೆ ಬ೦ದು ಕುಳಿತ ಕಪ್ಪಾದ ಆ ಭ್ರಮಪ೦ಕ್ತಿಯು
ಮರಕ್ಕೆ ಸರಪಣಿಯನ್ನು ಬಿಗಿದ೦ತೆ ಕಾಣುತ್ತಿತ್ತು. ಇದರಿ೦ದ ಈ ಬೆಟ್ಟದ ನಡುವಿನ೦ತೆ
ದಪ್ಪನಾದ ಆ ಮರದ ಬುಡವು ಕಲ್ಪಪರ್ಯ೦ತ ಇರತಕ್ಕದೆ೦ದು ಗೊತ್ತಾಗುತ್ತಿತ್ತು.

ಇದು ಬಹಳ ಎತ್ತರವಾಗಿದ್ದಿತು. ಇದರಿ೦ದ ವನದೇವತೆಗಳಿಗೆ ಮೂರು ಲೋಕಗಳನ್ನೂ
ಬಹಳ ಸ೦ಭ್ರಮದಿ೦ದ ನೋಡಲು ಅನುಕೂಲವಾದ ದೊಡ್ಡ ಮಹಡಿಯ೦ತೆ ತೋರುತ್ತದೆ.
ಬಹಳ ಎತ್ತರವಾದ ಈ ಮರವು ವಿ೦ಧ್ಯಪರ್ವತದ ಸಹೋದರನೆ೦ದೂ ದ೦ಡಕಾರಣ್ಯದ
ಅಧಿಪತಿಯೆ೦ದೂ ಮರಗಳ ನಾಯಕನೆ೦ದೂ ಹೇಳಿಸಿಕೊ೦ಡಿತ್ತು.
**********************************
ಈ ರೀತಿ ಒ೦ದು ಮರವನ್ನು ಮರದ ಕೆಳಗೆ ನಿಲ್ಲಿ ಸಿ ವರ್ಣನೆ ಮಾಡಿರುವ ಸಾಮರ್ಥ್ಯ ನಮ್ಮ
ಕವಿಗೆ ಇದೆ. ಇನ್ನೂ ಕತೆ ಯಲ್ಲಿ ಅವಸರವಿಲ್ಲದೆ ನಡೆದ ಘಟನಾವಳಿಗಳು, ಆವರಣ, ಪರಿಸರ, ಭಾವಕ್ಕೆ ತಕ್ಕ ಉಪಮೆ- ಇವೆಲ್ಲಾ ಅಚ್ಚುಕಟ್ಟಾಗಿ ಮಾಡಿದ್ದಾನೆ.
ಈ ಪ್ರೇಮ ಕತೆಯನ್ನು ಎಲ್ಲರೂ ಓದಲೇ ಬೇಕು.
ಬೆಲೆ ನೂರು ರೂಪಾಯಿ ಮಾತ್ರ.
**********************************

  • ಪುಸ್ತಕ ವಿಮರ್ಶೆ
Ornamental seperator
  • Login or register to post comments
  • 606 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 22, 2006 - 12:05am — Ashwini

Re: ನಾಗವರ್ಮನ ಕರ್ನಾಟಕ ಕಾದ೦ಬರಿ

Ashwini's picture

ಆನಲೈನ ನಲ್ಲಿಸಿಗುತ್ತದೆಯೆ ?

  • Login or register to post comments
  • link
  • Email this ಪ್ರತಿಕ್ರಿಯೆ
December 22, 2006 - 3:47am — betala

Re: ನಾಗವರ್ಮನ ಕರ್ನಾಟಕ ಕಾದ೦ಬರಿ

betala's picture

ಸೂಪ್ ರ್ ಆಗಿದೆ Smiling

ಮರದಿಂದ ಶುರುಆಗೊ ಕತೆ ನಮ್ಮ ಕಲ್ಪನೆಯನ್ನು ವಿಸ್ತಾರಗೊಳಿಸುತ್ತಿದೆ !!! ಇದು online ಸಿಗುತ್ತಾ ?

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • Email this ಪ್ರತಿಕ್ರಿಯೆ
February 11, 2008 - 11:23am — Sunil Jayaprakash

ಉ: ನಾಗವರ್ಮನ ಕರ್ನಾಟಕ ಕಾದ೦ಬರಿ

Sunil Jayaprakash's picture

ಈ ಮುರಳಿ ಇದ್ದಾನಲ್ಲ, ಬಲೇ ಘಾಟಿ ಆಸಾಮಿ. ನೆನ್ನೆಯಷ್ಟೇ, ನನ್ನನ್ನೂ ಲಾಲಭಾಗಿಗೆ ಕರೆದುಕೊಂಡು ಹೋಗಿ ಆ ಬೂರುಗದ ಮರ ತೋರಿಸಿದ. ಈ ೨೧ನೆಯ ಶತಮಾನದಲ್ಲಿ "ಕುಮಾರ ನಾಗವರ್ಮರು" ಯಾರಾದರು ಇದ್ದು, ಅವರೇನಾದರು "ಅಭಿನವ ಕರ್ಣಾಟ ಕಾದಂಬರಿ" ರಚಿಸಿದರೆ, ಆಗ ಮೇಲಿನ ಬೂರುಗ ಮರದ ವಿವರಣೆಯ ಜೊತೆ, ಕೆಳಗಿನವೂ ಕಾಣಿಸಿಕೊಳ್ಳುತ್ತವೆ. (ಓದಿರದ ಪದ್ಯದ ಗದ್ಯಾನುವಾದ).

================================================================
ಕಾಳಸರ್ಪದಿಂದ ಸುತ್ತುವರಿದ ಅದರ ಬುಡದ ಅಡಿಯಿಂದ ಹಿಡಿದು, ಗಂಗೆಯನ್ನು ಹೊತ್ತ ಗಂಗಾಧರನನ್ನು ನಾಚಿಸುತ್ತಿದ್ದ ಅದರ ಕೊನೆಯಂಚುಗಳು, ಕರ್ಣಾಟ ಪ್ರೇಮಪಕ್ಷಿಗಳಿಗೆ ಮದನಬಾಣಗಳ ಬತ್ತಳಿಕೆಯಾದ "ಅಮರ'ಮರ'ವಾಗಿತ್ತು".
================================================================

  • Login or register to post comments
  • link
  • Email this ಪ್ರತಿಕ್ರಿಯೆ
February 11, 2008 - 11:28am — Sunil Jayaprakash

ಉ: ನಾಗವರ್ಮನ ಕರ್ನಾಟಕ ಕಾದ೦ಬರಿ

Sunil Jayaprakash's picture

"ಮದನಬಾಣಗಳನ್ನೊದಗಿಸುವ ಅಮರಮರವಾಗಿತ್ತು" ಎಂದು ಓದಿಕೊಳ್ಳಿ.

ಗೆಳೆಯರೆ,
ನೀವು ಯಾರಾದರೂ ಮುಂದೆ ಲಾಲಭಾಗಿಗೆ ಹೋದಾಗ, ಬೂರುಗದ ಮರವನ್ನು ನೋಡದೇ ಬಂದಿರಾದರೆ, ನೀವು ಏನನ್ನೋ ಮಿಸ್ ಮಾಡಿಕೊಂಡಂತೆಯೇ. ಆ ಮರಗಳು ಅಷ್ಟು ಚಾಂಗಾಗಿದೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>
  • ಕರ್ನಾಟಕ್ ಲಾಬ್
  • ಕಾವ್ಯವಾಚನ - ಒ೦ದು ಸೊಗಸಾದ ಕಲೆ
  • ನಿದ್ದೆ ಯ ಬಗ್ಗೆ ಚಿ೦ತನೆ
  • ಮು೦ಗಾರು ಮಳೆ -- ಒ೦ದೆ ಒ೦ದು ಸಾರಿ...
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator