ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹೊಳೆ ನರಸೀಪುರ ಮಂಜುನಾಥ
ಪರಿಚಯ
ಹುಟ್ಟಿದ್ದು ಮೈಸೂರಿನಲ್ಲಿ, ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ. ಓದಿದ್ದು ಬೆಳೆದಿದ್ದು ಪದವೀಧರನಾಗಿದ್ದು ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ. ಆದರೆ ಜೀವನದ ನದಿಯಲ್ಲಿ ಈಜುವುದ ಕಲಿತು ಧೃಡವಾಗಿ ನಿಂತದ್ದು, ಹೇಮಾವತಿಯ ದಡದಲ್ಲಿ, ಹೊಳೆ ನರಸೀಪುರದಲ್ಲಿ, ಹಲವಾರು ವರ್ಷಗಳು ಬೆಂಗಳೂರೆಂಬ ಬೆಂಗಳೂರಲ್ಲಿ ದುಡಿದು ಈಗ ಸಧ್ಯಕ್ಕೆ ಸಂಯುಕ್ತ ಅರಬ್ ರಾಷ್ಟ್ರದ ಹೆಮ್ಮೆಯ ನಗರ ದುಬೈನಲ್ಲಿದ್ದೇನೆ. ಆಗಾಗ ಸಂಪದ ಓದುವುದು, ಕೆಲವು ಕವನ, ಲೇಖನಗಳನ್ನು ಬರೆಯುವುದು ಹವ್ಯಾಸ. ಕಾಲೇಜು ಜೀವನದಲ್ಲಿ ಸಾಕಷ್ಟು ಬರೆದದ್ದುಂಟು, ಆದರೆ, ಜೀವನದ ಹೋರಾಟ ಪ್ರಾರಂಭವಾದಾಗಿಂದ ಬರವಣಿಗೆ ಮರೆತೇ ಹೋಗಿತ್ತು,, ಈಗ ಅದನ್ನು ಮತ್ತೆ ಆರಂಭಿಸಿದ್ದೇನೆ.
ಇಲ್ಲಿಯೂ ಒಮ್ಮೆ ಕಣ್ಣು ಹಾಯಿಸಿ -www.myspace.com/460138030, http://manjus787.hi5..., http://twitter.com/m..., http://manju787.blog...
ಕಬ್ಬನ್ ಪಾರ್ಕಿನಲ್ಲಿ ಒಂದು ಸುಂದರ ಸಂಜೆಗೆ ಆಹ್ವಾನ.
ಆತ್ಮೀಯ ಸಂಪದಿಗರೆ,
ಸುಮಧುರ ಗೀತೆಗಳನ್ನು ಕೇಳುತ್ತಾ ಎಲ್ಲರ ಪರಿಚಯ ಮಾಡಿಕೊಳ್ಳುವ ಒಂದು ಸುಂದರ ಸಂಜೆಗೆ ನಿಮಗೆ ಆಹ್ವಾನ.
ಕಬ್ಬನ್ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡಿನಲ್ಲಿ ಸುಂದರವಾದ ಕಾರ್ಯಕ್ರಮವೊಂದು ಇದೇ ಭಾನುವಾರ ನಡೆಯುತ್ತಿದೆ. "ಪ್ರಕೃತಿ" ತಂಡದವರು ಪ್ರತಿ ಭಾನುವಾರದ ಸಂಜೆ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದಾರೆ. ಈ ವಾರ ಜಯಂತ ಕಾಯ್ಕಿಣಿಯವರ ಗೀತೆಗಳನ್ನು ಹಾಡಲಿದ್ದಾರೆ, ವಾಯ್ಸ್ ಆಫ್ ಬೆಂಗಳೂರು ಖ್ಯಾತಿಯ ಗಾಯಕರಾದ ವ್ಯಾಸರಾಜ್, ಸಂತೋಷ್, ಪೂಜಾರಾವ್ ಮತ್ತು ಸುವರ್ಣ ರಾಥೋಡ್.
ಅತಿಥಿಗಳಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ನಿರ್ದೇಶಕರಾದ ವಿಷ್ಣುಕುಮಾರ್ ಹಾಗೂ ಕವಿ ಜಯಂತ ಕಾಯ್ಕಿಣಿ.
ಸಮಯ: ಸಂಜೆ ೫ ರಿಂದ ೭, ೧೪/೩/೨೦೧೦,
ದುಬೈನಿಂದ ಸ್ವಲ್ಪ ಜರೂರು ಕೆಲಸಕ್ಕಾಗಿ ಬಂದವನು ಮುಂದಿನ ವಾರ ಹಿಂತಿರುಗುತ್ತಿದ್ದೇನೆ. ಸಿಗುವ ಅಲ್ಪ ಸಮಯದಲ್ಲಿ ಭೇಟಿಯಾಗೋಣ. ಬರುವಿರಲ್ಲವೇ ? ನನ್ನ ಮೊಬೈಲ್: ೯೬೨೦೯೩೬೫೭೬.
ಹೊಳೆ ನರಸಿಪುರ ಮಂಜನಾಥ.
- Login or register to post comments
- 150 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: