ಸಾಹಿತ್ಯ ಸಮ್ಮೇಳನದ ಹೊಸ್ತಿಲಿಗೊಂದು ಆಶಯ ಕವನ.
ನಾಳಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗೆಯಲ್ಲಿ. ಆ ಸಂದರ್ಭದಲ್ಲೊಂದು ಆಶಯ ಕವನ, ಕನ್ನಡಕ್ಕಾಗಿ.
ಬಾ ಕಂದ ಕನ್ನಡದ ಬಳಿಗೆ....
ಒಂದೆರಡು ಘಳಿಗೆ, ಕನ್ನಡದ ಬಳಿಗೆ
ಬಾರೋ ಕಂದಾ ನಿನ್ನ ತಾಯಿಯಿವಳು.
ಒಮ್ಮೆ ಬಂದರೆ ನೀನು, ಮತ್ತೆ ಹೋಗೆಯೋ ಹಿಂದೆ
ಬಲು ಶಕ್ತಿಯನು ಈ ತಾಯಿ ನೀಡುವಂಥವಳು.
ಕನ್ನಡದ ನವಿರು ನುಡಿ, ಸರಳ ಸುಂದರ ಬಂಧ
ಬೇರೆಲ್ಲಿ ದೊರಕುವುದೊ ಕಂದ ನಿನಗೆ?
ಪರಕೀಯ ಭಾಷೆಯದು ಬಾಡಿಗೆಯ ಒಲುಮೆ, ತಿಳಿ.
ಕನ್ನಡಮ್ಮನೆ ಬೆಳಕು, ಕೊನೆಯವರೆಗೆ.
ನಮ್ಮತನ, ನಮ್ಮ ಜನ, ನಮ್ಮದೀ ಭಾಷೆ
ಎನ್ನೋ ಹೆಮ್ಮೆಯು ಬೇಕು ಕಂದ ಎಲ್ಲರಿಗು.
ಹೊರಗಿಂದ ಬಂದವಗೆ ಗೌರವವ ಕೊಡಿ ಸಾಕು,
ಕಾಲು ನೆಕ್ಕುವ ಚಟವ ಮೊದಲು ಬಿಡಬೇಕು.
ಕನ್ನಡವ ನೀ ಬೆಳೆಸೋ ಕೈಂಕರ್ಯದಲಿ ತೊಡಗು,
ಕನ್ನಡಮ್ಮನು ನಿನ್ನ ಸಲಹುವಳು ಮಗುವೇ.
ಎಲ್ಲೆ ನೀ ಹೋದರೂ ಕನ್ನಡವು ಜೊತೆಗಿರಲಿ,
ಬದುಕ ದಾರಿಯ ತುಂಬ ನಿನಗೆ ಜಯವೇ

- Login or register to post comments
- 467 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ನನ್ನ ಸಾಹಸ : ಸಾಹಿತ್ಯ ಸಮ್ಮೇಳನದ ಹೊಸ್ತಿಲಿಗೊಂದು ಆಶಯ ಕವನ.
ನೋಡಿ, ಶ್ರೀನಿಧಿಯವರೆ, ಈ ಹೊತ್ತಿನಲ್ಲಿ ನಾನೂ ಒಂದು ಸಾಹಸಗೈಯುತ್ತಿದ್ದೇನೆ.