20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬೇಲಿ

June 27, 2010 - 12:41am
vishu7334

ಚಂದದರಮನೆ ಕಟ್ಟಿ

ಬಿಂಕದರಸಿಯನಿರಿಸಿ

ರತ್ನಗಂಬಳಿ ಹೊದ್ದು

ಮಲಗಿದ್ದು ಸಾಕು.

 

ಬದುಕಿನಲಿ ಮಾಡಿರುವೆ

ಸಾಕಷ್ಟು ನಿದ್ದೆ,

ಸ್ವಪ್ನದಲೂ ಏಕಯ್ಯ

ನಿದ್ದೆಯಲಿ ಬಿದ್ದೆ?

 

ಹೇಗೆ ಆದೀತು ನನಸು

ಅಂಥ ಬಾಳ್ವೆಯ ಕನಸು,

ಸುತ್ತ ಕಟ್ಟಿಕೊಂಡು ನೀ

ಬೇಲಿಗಳ ಸಾಕಷ್ಟು.

 

ಎಂದೋ ಒಮ್ಮೆ ಎದ್ದು

ನಾಯಿನರಿಯೋ ನೋಡದೆ

ತಿಜೋರಿಯ ಕೀಲಿ ಕೈ ಕೊಟ್ಟು

ಬೀಳುವುದೇಕೋ ಮತ್ತದೇ ನಿದ್ದೆಗೆ?

 

ಹೇಗೆ ನಿಂತೀತು ಅರಮನೆ

ಸಿಗುವಳೇಕೆ ಯಾವ ಅರಸಿ,

ರತ್ನಗಳ ಬಿಡು ನೀ

ನೂಲಾದರೂ ಸಿಕ್ಕೀತೆ?

 

ತರವೇ ನಿನ್ನಯ ಮೌನ

ಹೇಳು ಭಾರತೀಯನೆ

ಸುಳ್ಳು ಕತ್ತಲೆ ಸರಿಸಿ

ಬರುವುದೇ ನಿನ್ನಯ ದನಿ?

 

ಬೇಲಿಗಳ ಕಿತ್ತೊಗೆದು

ಕಂದಕಗಳ ಹಾರಿ

ನರಿಗಳ ಬೇಟೆಯಾಡಲು

ಬರುವುದೇನು ನಿನ್ನ ದನಿ?

ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by santhosh_87 on

ತನ್ನತನದ ಅರಿವಿಗೆ ಕೆಲವೊಮ್ಮೆ ಬೇಲಿ ಹಾಕಿ ಕೊಳ್ಳುವುದೂ ಒಳ್ಳೆಯದೇ. ನರಿಗಳ ಬೇಟೆಯಾಡುವ ಅಗತ್ಯ ಇಲ್ಲ, ಬರದಂತೆ ತಡೆಗಟ್ಟಿದರೆ ಸಾಕು. 'Bold' ನಲ್ಲಿ ಹಾಕುವ ಅಗತ್ಯ ಇಲ್ಲ ವಿಶ್ವನಾಥ್. ಕವನ ಚೆನ್ನಾಗಿದೆ.

Submitted by ksraghavendranavada on

ಸಕತ್ ಪ್ರತಿಕ್ರಿಯೆ ಆಚಾರ್ಯರೇ.
ವಿಶು, ಸೊಗಸಾದ ಕವನ.
ಮು೦ದುವರೆಸಿ ನಿಮ್ಮ ಕಾವ್ಯ ಕೃಷಿಯನ್ನು..
ನಮಸ್ಕಾರಗಳು.