ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ
ಇಂದು, ಪ್ರಸಕ್ತ ರಣಜಿ ಋತುವಿನ ಕೊನೆಯ ಲೀಗ್ ಪಂದ್ಯ ಪ್ರಾರಂಭವಾಗಿದೆ. ಕರ್ನಾಟಕ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಸೌರಾಷ್ಟ್ರದ ವಿರುದ್ಧ ರಾಜ್ಕೋಟ್ ನಲ್ಲಿ ಸೆಣೆಸುತ್ತಿದೆ.
ಅಂದ ಹಾಗೆ, ಇತ್ತೀಚಿನ ಸ್ಕೋರ್ ಬಂದಾಗ, ಕರ್ನಾಟಕವು ಟಾಸ್ ಗೆದ್ದು, ಬಾಟಿಂಗ್ ಆಯ್ದುಕೊಂಡಿದೆ ಎಂಬುದು ತಿಳಿಯಿತು. ಈಗಾಗಲೇ ಬ್ಯಾರಿಂಗ್ಟನ್ ರೋಲ್ಯಾಂಡ್ ಔಟಾಗಿದ್ದಾರೆ.
ಪ್ರಮುಖ ಅಂಶವೇನೆಂದರೆ ಈ ಪಂದ್ಯದಲ್ಲಿ, ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್, ಕರ್ನಾಟಕದ ಯರ್ರೇ ಗೌಡ ನಾಯಕತ್ವದಡಿ ಆಡುತ್ತಿದ್ದಾರೆ. ದ್ರಾವಿಡ್ ಆಡುತ್ತಿದ್ದಾನೆ ಎಂಬ ಒಂದೇ ಕಾರಣಕ್ಕೆ ಈ ಪಂದ್ಯಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ. ಕರ್ನಾಟಕವು ಈ ಬಾರಿ ಹುಮ್ಮಸ್ಸು ಹುರುಪುನಿಂದ ಮುನ್ನಡೆಯಲಿ ಎಂಬ ಆಶಯಕ್ಕೆ ಹೆಚ್ಚು ಒತ್ತು ನೀಡೋಣ.
ಈ ಋತುವಿನಲ್ಲಿ ಅತ್ಯಂತ ಹೆಚ್ಚು ರನ್ನು ಪೇರಿಸಿರುವ ರಾಬಿನ್ ಉತ್ತಪ್ಪ ಮ್ತತು ಸಿ.ರಘು ಸದ್ಯಕ್ಕೆ ಕ್ರೀಸಿನಲ್ಲಿದ್ದಾರೆ.

- Login or register to post comments
- 549 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಕಸೌರಪ - ಮೊದಲ ದಿನದ ಊಟದ ಸಮಯ ವೇಳಗೆ
ಕಮಸೌರಪ - ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ.
ಸ್ಕೋರ್
೩೧.೦ ಓವರುಗಳಲ್ಲಿ ೧೪೨/೧
ಮೊದಲ ಅವಧಿಯ ಪೂರ್ಣ ಅಂಕಗಳು ಕರ್ನಾಟಕದವರಿಗೆ ಸೇರುತ್ತದೆ. ದಿನದ ಎರಡನೆಯ ಓವರಿನಲ್ಲಿಯೇ ಒಂದು ವಿಕೇಟನ್ನು ಕಳೆದುಕೊಂಡು ಆತಂಕದಲ್ಲಿದ್ದ ತಂಡಕ್ಕೆ, ರಾಬಿನ್ ಉತ್ತಪ್ಪ (* ೮೬) ಮತ್ತು ಸಿ.ರಘು (* ೫೦) ಮುರಿಯದ ೨ನೆ ವಿಕೇಟಿಗೆ ೧೩೬ರನ್ನುಗಳನ್ನು ಕಲೆಹಾಕಿ ಒಳ್ಳೆಯ ಸ್ಥಿತಿಯತ್ತ ಕೊಂಡೊಯ್ಯುತ್ತಿದ್ದಾರೆ.
ಮುಂದಿನ ಎರಡು ಅವಧಿಗಳಲ್ಲಿಯೂ ಹೀಗೆಯೇ ಆಡುವರೆ ಕಾದು ನೋಡಬೇಕು. ಮತ್ತೊಮ್ಮೆ ನಮ್ಮವರಿಗೆ ದೃಷ್ಟಿಯಾಗದಿರಲಿ(ಇದನ್ನು ಎಲ್ಲಾ ಅಪ್ಡೇಟುಗಳಲ್ಲಿಯೂ ಹಾಕಲೇಬೇಕು) ಎಂದು ಹೇಳುತ್ತಾ ಶುಭ ಹಾರೈಸೋಣ.
ಬೃಹತ್ ಮೊತ್ತದತ್ತ ಕರ್ನಾಟಕ
ಬೃಹತ್ ಮೊತ್ತದತ್ತ ಕರ್ನಾಟಕ - ಬಹುಶಃ ಇದು ನಾಳಿನ ಪತ್ರಿಕೆಗಳಲ್ಲಿ ಬರಬಹುದಾದ ಸಾಲು.
ಸೌರಾಷ್ಟ್ರದ ವಿರುದ್ಧ ಆತ್ಮವಿಶ್ವಾಸದಿಂದ ಆಡಿ ನಮ್ಮವರು, ಮೊದಲ ದಿನದಾಟದ ಅಂತ್ಯಕ್ಕೆ ೩೨೯ ರನ್ನುಗಳನ್ನು ಗಳಿಸಿ, ೪ ವಿಕೇಟುಗಳನ್ನು ಒಪ್ಪಿಸಿದ್ದಾರೆ.
ರಾಬಿನ್ ಉತ್ತಪ್ಪ - ೧೦೮, ಸಿ.ರಘು - ೮೩ , ದ್ರಾವಿಡ್ - ೫೬ - ದಿನದ ಪ್ರಮುಖ ಆಕರ್ಷಣೆ.
ನಾಯಕ ಯರ್ರೇ ಗೌಡ(* ೩೮) ಮತ್ತು ವಿ.ಎಸ್.ತಿಲಕ್ ನಾಯ್ಡು(* ೩೦) ಸದ್ಯಕ್ಕೆ ಕ್ರೀಸಿನಲ್ಲಿದ್ದಾರೆ. ನಾಳೆಯೂ ಹೀಗೆಯೇ ಆತ್ಮವಿಶ್ವಾಸದಿಂದ ನಮ್ಮವರು ಆಡಲಿ, ಆದರೆ ಅದು ಅತಿಯಾಗುವುದು ಬೇಡ.
Re: ಬೃಹತ್ ಮೊತ್ತದತ್ತ ಕರ್ನಾಟಕ
ಯಾವುದಾದರೂ ಚ್ಯಾನೆಲ್ಲಿನಲ್ಲಿ ಲೈವ್ ಬರ್ತಾ ಇದೆಯಾ ಮಾರಾಯ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಔಟಾಗದೇ ಉಳಿದ ಯರ್ರೇ ಗೌಡ
ಕರ್ನಾಟಕ ತನ್ನ ಮೊದಲ ಇನ್ನಿಂಗ್ಸನ್ನು ಮುಗಿಸಿದೆ. ನಾಯಕ ಯರ್ರೇ ಗೌಡ ಮತ್ತು ಪಟೇಲ್ ನಡುವೆ ಹತ್ತನೇ ವಿಕೇಟಿಗೆ ದಾಖಲೆಯ ೧೧೨ ರನ್ನುಗಳ ನೆರವಿನಿಂದ ಕರ್ನಾಟಕವು ಒಟ್ಟು ೫೭೦ ರನ್ನುಗಳನ್ನು ಪೇರಿಸಿದೆ.
ತಾಂತ್ರಿಕೆ ತೊಂದರೆಯಿಂದ(Actually, ತೊಂದರೆಯಲ್ಲವದು, goof up) ಮೊದಲ ಪಂದ್ಯದಲ್ಲಿ ಆಡಲಾಗದಿದ್ದ ಯರ್ರೇ ಗೌಡ ಈ ಪಂದ್ಯದಲ್ಲಿ ೧೭೧ ರನ್ನುಗಳನ್ನು ಕಲೆಹಾಕಿ ಔಟಾಗದೆ ಉಳಿದರು.
ರಣಜಿ ಅರಿಕೆಗಳು
ಎರಡನೆಯ ದಿನದಾಟದ ಕೊನೆಗೆ ಕರ್ನಾಟಕ ೫೭೦ ಗಳಿಸಿತು. ಸೌರಾಷ್ಟ್ರ ಕೂಡ ದಿಟ್ಟತನದಿಂದಲೇ ಸವಾಲನ್ನು ಸ್ವೀಕರಿಸಿ ಮುರಿಯದ ಮೊದಲ ವಿಕೇಟಿಗೆ ೧೦೩ ರನ್ನುಗಳನ್ನು ಪೇರಿಸಿದೆ. ಸೌರಾಷ್ಟ್ರದ ಪರ ಜೋಗಿಯಾನಿ ಬಿರುಸಿನ ೬೨(೧೦ ಫೋರು ಮತ್ತು ೨ ಸಿಕ್ಸ್ ಗಳಿಂದ ಕೂಡಿದ) ರನ್ನುಗಳನ್ನು ಗಳಿಸಿದ್ದಾರೆ.
ನಮ್ಮ ಬೌಲರುಗಳಿಗೆ ಏನಾಯಿತೋ ?
Re: ರಣಜಿ ಅರಿಕೆಗಳು
ನಮ್ಮ ಬೌಲರುಗಳಿಗೆ ಏನಾಯಿತೋ ?
ಕೊನೆಯ ವಿಕೆಟಿಗೆ ಕರ್ನಾಟಕೆ ೧೦೨ ರನ್ನುಗಳನ್ನು ಸೇರಿಸಿದೆ ಅಂತೆ..ಇನ್ನು ಸೌರಾಷ್ಟ ಮೊದಲ ವಿಕೆಟಿಗೆ ೧೦೩ ರನ್ನ್ಗುಗಳನ್ನು ಮಾಡಿರೋದ್ರಲ್ಲಿ ....?
ಯಾವುದೋ ಡಬ್ಬಾ ಬ್ಯಾಟಿಂಗ್ ಪಿಚ್ ಇರ್ಬೇಕು..
Re: ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ
ಪಂದ್ಯದಲ್ಲಿ ಶತಕ ಬಾರಿಸಿದ ರಾಬಿನ್ ಉತ್ತಪ್ಪ ಭಾರತೀಯ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕಕ್ಕೆ ಬೃಹತ್ ಮುನ್ನಡೆ..ಆದರೂ ಪ್ರಯೋಜನವಿಲ್ಲ.
ಏನೇನೋ ಆಗುತ್ತಿದೆ ಗೆಳೆಯರೇ.
ಸೌರಾಷ್ಟ್ರದ ಹನ್ನೊಂದನೆಯ ಆಟಗಾರನು ಗಾಯಗೊಂಡು ಆಚೆಉಳಿದಿರುವನು. ಸೌರಾಷ್ಟ್ರ ತನ್ನ ಮೊದಲ ಇನ್ನಿಂಗ್ಸಿನಲ್ಲಿ ೩೫೪ ರನ್ನುಗಳನ್ನು ಗಳಿಸಿ ಒಂಬತ್ತು ವಿಕೇಟುಗಳನ್ನು ಕಳೆದುಕೊಂಡು ಪೂರ್ಣಗೊಳಿಸಿತು. ಒಟ್ಟು ಕರ್ನಾಟಕಕ್ಕೆ ೨೧೪ ರನ್ನುಗಳ ಮುನ್ನಡೆ ಸಿಕ್ಕಿದೆ. ಆದರೂ ಫಾಲೋ-ಆನ್ ಹೇರಲಿಲ್ಲ.
ಒಂದು ಪ್ರಶ್ನೆ, ಎದುರಾಳಿ ತಂಡ ಪೂರ್ಣವಾಗಿ ಔಟಾಗದಿದ್ದರೆ, ಫಾಲೋ-ಆನ್ ಹೇರಲಾಗುವುದಿಲ್ಲವೇ ?
Re: ಕರ್ನಾಟಕಕ್ಕೆ ಬೃಹತ್ ಮುನ್ನಡೆ..ಆದರೂ ಪ್ರಯೋಜನವಿಲ್ಲ.
ಫಾಲೋ ಆನ್ ಹೇರಬಹುದಾಗಿತ್ತು. ಒಬ್ಬ ಆಟಗಾರ ಗಾಯಗೊಂಡು ಉಳಿದರೆ ಫಾಲೋ ಆನ್ ಹೇರಬಾರದು ಎಂಬ ನಿಯಮವಿಲ್ಲ. ಆದರೆ ಇಲ್ಲಿ ಕರ್ನಾಟಕ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಿರಬಹುದು.
೧. ಬೌಲರ್ ಗಳು ದಣಿದಿರಬಹುದು.
೨. ಕರ್ನಾಟಕವಿರುವ ಗುಂಪಿನಲ್ಲಿ ಈ ಪಂದ್ಯದ ಮೊದಲು ಕರ್ನಾಟಕಕ್ಕೆ ೧೫ ಮತ್ತು ಬರೋಡಕ್ಕೆ ೧೭ ಅಂಕಗಳು ಇದ್ದವು. ಬರೋಡ ತಮಿಳುನಾಡು ವಿರುದ್ಧ ಸೋತಿದೆ. ಆದ್ದರಿಂದ ಅದು ೧೭ರಲ್ಲೇ ಇರುತ್ತೆ. ಕರ್ನಾಟಕ ಈ ಪಂದ್ಯ ಗೆದ್ದರೆ ಅಂಕಗಳು ೧೭ರಕ್ಕಿಂತ ಹೆಚ್ಚಾಗಿ ಕರ್ನಾಟಕ ಗೊಂಪಿನಲ್ಲಿ ಮೊದಲ ಸ್ಥಾನಕ್ಕೆ ಬರುತ್ತೆ. ಈ ಗುಂಪಿನಲ್ಲಿ ಮೊದಲ ಸ್ಥಾನದವರು ಮತ್ತೊಂದು ಗುಂಪಿನ ದ್ವಿತೀಯ ಸ್ಥಾನದವರೊಂದಿಗೆ ಆಡಬೇಕು. ಮತ್ತೊಂದು ಗುಂಪಿನ ದ್ವೀತಿಯ ಸ್ಥಾನವನ್ನು ಬಲಶಾಲಿಯಾದ ಮುಂಬೈ ಗಳಿಸಲಿದೆ. ಕರ್ನಾಟಕಕ್ಕೆ ಸೆಮಿ ಫೈನಲ್ ನಲ್ಲಿ ಮುಂಬೈ ಬೇಡವಾಗಿರಬಹುದು. ಈ ಪಂದ್ಯ ಡ್ರಾ ಆದರೆ ಕರ್ನಾಟಕದ ಅಂಕಗಳೂ ೧೭ ಆಗುತ್ತವೆ. ಆಗ ಕರ್ನಾಟಕವನ್ನು ಸೋಲಿಸಿದ ಆಧಾರದಲ್ಲಿ ಬರೋಡ ಗುಂಪಿನ ಪ್ರಥಮ ಸ್ಥಾನಿಯಾಗಿ ಕರ್ನಾಟಕ ದ್ವಿತೀಯ ಸ್ಥಾನಿಯಾಗುತ್ತದೆ. ದ್ವಿತೀಯ ಸ್ಥಾನಿಯಾದಲ್ಲಿ ಮತ್ತೊಂದು ಗುಂಪಿನ ಅಗ್ರಸ್ಥಾನಿಯಾಗುವ ಬಂಗಾಲದ ವಿರುದ್ಧ ಕರ್ನಾಟಕ ಸೆಮಿ ಫೈನಲ್ ಆಡುತ್ತದೆ. ಸೆಮಿ ಫೈನಲ್ ನಲ್ಲಿ ಬಂಗಾಲದ ವಿರುದ್ಧ ಆಡುವುದೇ ಲೇಸು ಎಂದು ಕರ್ನಾಟಕ ತಂಡದ ಅನಿಸಿಕೆಯಾಗಿರಬಹುದು. ಆದ್ದರಿಂದ ಫಾಲೋ ಆನ್ ಹೇರದೆ ಸ್ವಲ್ಪ ಬ್ಯಾಟಿಂಗ್ ಪ್ರಾಕ್ಟೀಸ್ ಗಳಿಸುವ ಇರಾದೆ.
೩.ಬ್ಯಾಟಿಂಗ್ ಪಿಚ್ ಆಗಿರುವ ಕಾರಣ ಸೌರಾಷ್ಟ್ರವನ್ನು ಮತ್ತೊಂದು ಸಲ ಔಟ್ ಮಾಡುವುದು ಕಷ್ಟಸಾಧ್ಯ ಎಂಬ ಕಾರಣವೂ ಇರಬಹುದು.
ನನ್ನ ಅನಿಸಿಕೆ ಪ್ರಕಾರ ಎರಡನೇ ಕಾರಣವೇ ಸರಿ.