ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪತಂಜಲಿಯ ಯೋಗ ಭಾಗ ೬

September 2, 2005 - 9:41pm — R M Rao

ಪತಂಜಲಿಯ ಯೋಗ ಭಾಗ ೬

ಆರನೆಯ ಲೇಖನ

ಮನಸ್ಸಿನಲ್ಲಿ ತಾನೇತಾನಾಗಿ ಹುಟ್ಟುವ ಈ ಕ್ಲೇಷವೃತ್ತಿಗಳನ್ನು ಧ್ಯಾನದಿಂದ ಹುಟ್ಟದಂತೆ ಮಾಡಬಹುದು.
ಧ್ಯಾನದಿಂದ (ಕ್ಲೇಷಗಳಿಂದ ಉಂಟಾಗುವ) ಈ ವೃತ್ತಿಗಳನ್ನು ಕೊನೆಗಾಣಿಸಬಹುದು.ಯೋ.ಸೂ.ಪಾದ೨. ಸೂತ್ರ.೧೧
ಪರಿಣಾಮ ದುಃಖ, ತಾಪಗಳಿಂದ ಉಂಟಾಗುವ ದುಃಖ, ಸಂಸ್ಕಾರ ದುಃಖ ಇದಲ್ಲದೆ ಮನಸ್ಸಿನಲ್ಲಿ ಗುಣ ವೃತ್ತಿಗಳ ಪರಸ್ಪರ ವಿರೋಧ ಇವುಗಳನ್ನು ನೋಡಿದ ವಿವೇಕಿಗೆ ಸ‍ರ್ವವೂ ದುಃಖ; ದುಃಖ ಬಿಟ್ಟರೆ ಬೇರೇನೂ ಇಲ್ಲ ಎಂಬ ಅರಿವುಂಟಾಗುತ್ತದೆ.ಯೋ.ಸೂ.ಪಾದ೨. ಸೂತ್ರ.೧೫.
ಇಲ್ಲಿ ಪರಿಣಾಮ ದುಃಖ ಎಂದರೆ ಬದಲಾವಣೆಗಳು ತಂದೊಡ್ಡುವ ದುಃಖ. ತಾಪಗಳಿಂದ ಉಂಟಾಗುವ ದುಃಖ ಮೊರು ಬಗೆ-ಆಧ್ಯಾತ್ಮಿಕ(ಮನಸ್ಸಿನೊಳಗೇ ಕಾಮ ಕ್ರೋಧ ಮುಂತಾದುವುಗಳಿಂದ ಬರುವ ದುಃಖ), ಆದಿಭೌತಿಕ(ಹೊರಗಡೆಯ ಪ್ರಾಪಂಚಿಕ ಘಟನೆಗಳಿಂದ ಬರುವ ದುಃಖ), ಆದಿದೈವಿಕ(ಪ್ರಾಪಂಚಿಕವಲ್ಲದ,ಮನಸ್ಸಿಗೆ ನಿಲುಕದ ಕಾರಣಗಳಿಂದ ಬರುವ ದುಃಖ).ಆದ್ದರಿಂದ ಇವು ತಾಪತ್ರಯಗಳು. ನಾವು ಮಾಡಿದ ಕೆಲಸ, ಮನದಲ್ಲುಂಟಾದ ವೃತ್ತಿಗಳಿಂದ ಬಂದ ಸಂಸ್ಕಾರವೂ ದುಃಖವನ್ನು ಕೊಡುತ್ತದೆ. ಮನಸ್ಸಿನಲ್ಲಿ ಸತ್ವಗುಣ,ರಜೊಗುಣ ಮತ್ತು ತಮೊಗುಣಗಳಿರುತ್ತವೆ. ಹೊರಗಿನಿಂದ (ಪಂಚೇಂದ್ರಿಯಗಳಿಂದ) ಬಂದ ಸಂವೇದನೆಗೆ ಗುಣ ಮತ್ತು ವೃತ್ತಿಗಳ ವಿರೋಧಿ ಮೇಲಾಟ ನಡೆದು ಯಾವುದಾದರೊಂದು ಕ್ಲೇಷಭಾವನೆ ಪ್ರಕಟವಾಗುತ್ತಲೇ ಇರುತ್ತದೆ. ಕ್ಲೇಷ, ಕರ್ಮ, ವಿಪಾಕ, ಆಶಯ ಇವುಗಳಿಂದ ಹೊರತಾದ ಸ್ಥಿತಿಯನ್ನು ವಿವೇಕಿ ಬಯಸುತ್ತಾನೆ. ಏಕೆಂದರೆ ಅದು ಬದಲಾವಣೆ ಇಲ್ಲದ ಸ್ಥಿತಿ. ದುಃಖಾತೀತ-ಕಾಲಾತೀತ ಆನಂದದ ಸ್ಥಿತಿ.
ಆದ್ದರಿಂದಲೇ ಯೋ.ಸೂ.ಪಾದ೨. ಸೂತ್ರ.೧೬ ಹೇಳುತ್ತದೆ:ಬರಲಿರುವ ದುಃಖವನ್ನು ತಡೆಯಬಹುದು.
ಈ ಕ್ಲೇಷಗಳು ನಾವು ಮಾಡುವ ಕರ್ಮ ಮತ್ತು ಆಸೆಗಳ ಫಲ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ; ಕೆಟ್ಟ ಕೆಲಸಕ್ಕೆ ಕೆಟ್ಟ ಫಲ. ಇದು ನಿಶ್ಚಯ. ನಾವು ಮಾಡಿದ ಕ‍ರ್ಮಕ್ಕೆ ತಕ್ಕ ಪ್ರತಿಫಲ ಈ ಜನ್ಮದಲ್ಲಿ ಸಿಗದಿದ್ದರೆ ಅದು ವಿಪಾಕವಾಗಿ ನಾವು ಮುಂದಿನ ಜನ್ಮದಲ್ಲಿ ಎಲ್ಲಿ ಹುಟ್ಟುತ್ತೇವೆ, ಎಷ್ಟು ಆಯಸ್ಸು ಮತ್ತು ಏನು ಸುಖ ದುಃಖ ಅನುಭವಿಸುತ್ತೇವೆ ಎಂಬುದರ ನಿ‍ರ್ಣಯವಾಗುತ್ತದೆ. ಮನುಷ್ಯನ ಈಡೇರದ ಆಸೆಗಳು ಸಹ ಪುನರ್ಜನ್ಮಕ್ಕೆ ಕಾರಣವಾಗುತ್ತದೆ. ಹೀಗೆ ಮನುಷ್ಯನು ಜನ್ಮ-ಕರ್ಮ-ಸುಖದುಃಖ-ಮರಣ-ಜನ್ಮ-ಕರ್ಮ-ಸುಖದುಃಖ-ಮರಣ ಈ ನಿರಂತರವೃತ್ತದಲ್ಲಿ ಸಿಕ್ಕಿಕೊಂಡಿರುತ್ತಾನೆ.
ಈಗಾಗಲೇ ನಮ್ಮೊಡನಿರುವ ಕ‍ರ್ಮದ ಬುತ್ತಿ ತೀರುವವರೆಗೆ ಸುಖದುಃಖ ಅನುಭವಿಸಲೇ ಬೇಕು. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ವಿವೇಕಿಯಾದವನು ಮುಂದೆ ಬರುವ ದುಃಖವನ್ನಾದರೂ ತಡೆಯಲು ಬಯಸುತ್ತಾನೆ.
ಹೇಗೆಂದರೆ ದೃಷ್ಟ ಮತ್ತು ದೃಶ್ಯಗಳ ಸಂಯೋಗವೇ (ವೃತ್ತಿ ಸಾರೂಪ್ಯವೇ)ಈ ಎಲ್ಲಾ ದುಃಖಗಳಿಗೂ ಕಾರಣ. ಇಲ್ಲಿ ದೃಶ್ಯವೆಂದರೆ ಪ್ರಕೃತಿ. ಇದು ಪಂಚೇಂದ್ರಿಯಗಳ ಸಹಾಯದಿಂದ ತಿಳಿಯುವ ಎಲ್ಲಾ ಚರಾಚರ ವಸ್ತುಗಳಿಗೂ ಅನ್ವಯಿಸುತ್ತದೆ. ಅವಿದ್ಯೆಯೇ ಈ ದುಃಖಕ್ಕೆ ಮೊಲ. ಅವಿದ್ಯೆ ಇಲ್ಲದಿದ್ದರೆ
ವೃತ್ತಿ ಸಾರೂಪ್ಯವಿಲ್ಲದಂತಾಗುತ್ತದೆ-ಆಗ ದೃಷ್ಟ ತನ್ನ ಸ್ವರೂಪದಲ್ಲಿರುತ್ತಾನೆ. ಇದೇ ಕೈವಲ್ಯ.
ಅವಿದ್ಯೆ ಇಲ್ಲದಂತೆ ಮಾಡಲು ವಿವೇಕಖ್ಯಾತಿ ಎಂಬ ಪ್ರಜ್ಞಾಸ್ಥಿತಿಯನ್ನು ಹೊಂದಬೇಕು. ಯೋಗಾಂಗಗಳ ಆಚರಣೆಯಿಂದ ಮನಸ್ಸಿನ ಅಶುದ್ದಿ ಕ್ಷೀಣಿಸಿ ಜ್ಞಾನಹೆಚ್ಚುತ್ತಾ ಹೋಗಿ ಕೊನೆಗೆ ವಿವೇಕಖ್ಯಾತಿ ಎಂಬ ಪ್ರಜ್ಞಾಸ್ಥಿತಿಯನ್ನು ಹೊಂದುತ್ತದೆ.ಯೋ.ಸೂ.ಪಾದ೨. ಸೂತ್ರ.೨೮
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಯೇ ಯೋಗದ ೮ ಅಂಗಗಳು.ಯೋ.ಸೂ.ಪಾದ೨. ಸೂತ್ರ.೨೯. ಆದ್ದರಿಂದ ಪತಂಜಲಿಯ ಈ ಯೋಗಕ್ಕೆ ಅಷ್ಟಾಂಗಯೋಗವೆಂದೂ ಹೆಸರಾಗಿದೆ.
ಇವುಗಳ ಬಗ್ಗೆ ಹೆಚ್ಚಿನ ವಿವರಣೆ ಮುಂದಿನ ಲೇಖನದಲ್ಲಿ ನೋಡಬಹುದು.

ಮುಂದುವರೆಯುವುದು...
೨/೯/೦೫

  • ಅಧ್ಯಾತ್ಮ
~.~
  • Login or register to post comments
  • 795 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪತಂಜಲಿಯ ಯೋಗ ಭಾಗ ೩
  • ಪತಂಜಲಿಯ ಯೋಗ ಭಾಗ ೫
  • ಪತಂಜಲಿಯ ಯೋಗ ಭಾಗ ೭
  • ಪತಂಜಲಿಯ ಯೋಗ ಅಂತಿಮ ಭಾಗ
  • ಪತಂಜಲಿಯ ಯೋಗ : ಭಾಗ ೨
Syndicate content

ಲೇಖಕರು

R M Rao's picture

ಪರಿಚಯ

ನನ್ನ ಬಗ್ಗೆ ನಾನೇ ಹುಡುಕಾಟ ಪ್ರಾರಂಭ ಮಾಡಿ
ಈಗ ಯೋಗದ ಹಾದಿಯಲ್ಲಿ ಹುಡುಕಾಟ ಮುಂದುವರಿಸಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator