20
June
2013

ಅನನ್ಯ ಅಲ್ಲಮ ೮ (೧)

October 1, 2010 - 5:06pm
csomsekraiah

 

ಅಲ್ಲಮ ಸಿದ್ದರಾಮರು ಕಲ್ಯಾಣದ ಹೊರವಳಯದಲ್ಲಿ ಬಂದು ನಿಂತರು . ಕಲ್ಯಾಣವನ್ನು ಅವರು ತಲುಪುತ್ತಿದ್ದಂತೆ ಕಲ್ಯಾಣದ ದಾರಿ ಗೌಜಿನಿಂದ ತುಂಬಿದ್ದು ಕಂಡಿತು . ಪಟ್ಟಣಕ್ಕೆ ಪ್ರತ್ಯೇಕ ಮಾರ್ಗದಲ್ಲಿ ಅವಸರದಿಂದ ಪ್ರವೇಶಿಸುತ್ತಿದ್ದ ಮತ್ತು ನಿರ್ಗಮಿಸುತ್ತಿದ್ದ ರಥಗಳು ಮತ್ತು ಆಶ್ವಗಳು ;  ಇನ್ನೊಂದು ಮಾರ್ಗದಲ್ಲಿ ಸಾಲಾಗಿ ನಿಂತಿದ್ದ ಸರಕು ತುಂಬಿದ ಬಂಡಿಗಳು , ತೆರುವ ಸುಂಕವನ್ನು ತೆತ್ತು ನಿಧಾನಕ್ಕೆ ಪುರ ಪ್ರವೇಶ ಮಾಡುತ್ತಿದ್ದವು . ಒಳ ಪ್ರವೇಶಿಸುವ ಎಲ್ಲ ವಾಹನಗಳು ,  ಪಾದಚಾರಿಗಳು ಮತ್ತು ಪ್ರಾಣಿಗಳ ಸಕಲ ವಿವರಗಳನ್ನು  ನಮೂದಿಸಿಕೊಳ್ಳುವ ಅನೇಕ ಸುಂಕದ ಕಟ್ಟೆಗಳು . ಇವೆಲ್ಲವನ್ನು ಕಂಡು ಅಚ್ಚರಿಗೊಂಡ ಸಿದ್ದರಾಮರು
 " ಸೊನ್ನಲಿಗೆ , ಮಂಗಳವೇಡೆಗಳಿಗಿಂತ ಇದು ಬಹಳ ದೊಡ್ಡ ನಗರ . ಇದರ ಪಾರುಪತ್ಯ ಬಸವೇಶ  ಬಿಜ್ಜಳಾದಿಗಳಿಗೆ ಸಾಮಾನ್ಯವಲ್ಲ  ,, ಎಂದರು . 
ಪ್ರಭುದೇವರು ನಗುತ್ತಾ 
"ಕಲ್ಯಾಣ ಸಾಮಾನ್ಯ ನಗರವಲ್ಲ . ರಾಜಹಂಸಗಳು ತೇಲುವ ಸುಂದರಕೊಳ ; ಹಾಗೇಯೇ ಪಕ್ಕದಲ್ಲಿಯೇ ಕೊಳದ ಪರಿಚಯವೇ ಇಲ್ಲದೆ ಜವಾಬ್ದಾರಿಯ ಪರಿವೆ ಇಲ್ಲದೆ  ಹರಟುತ್ತಾ , ಕೊಚ್ಚೆಗಳಲ್ಲಿಯೇ ಮುಳುಗೇಳುತ್ತಿರುವ ಕ್ರಿಮಿಗಳ  ರಾಸಿಗಳು . ಒಂದೆರಡಲ್ಲ ಇದರ ಅದ್ಭುತಗಳು ! ಅರಸನಿಷ್ಟ ರಾಜದೂತರು ; ನಿಷ್ಟೆಯ ವೇಷ ತಳೆದ ಧೂರ್ತ ವಿದೂಷಕರು , ಹೊರಗೆ ಢಂಬದಿಂದ ಮೆರೆಯುತ್ತಾ , ಒಳಗೆ ಅಧಿಕಾರಸ್ಥರ ಕಾಲು ನೆಕ್ಕುವ ಶ್ವಪಚೋಪಜೀವಿಗಳು . ಹೊರಗೆ ನೋಡಲು ಸಾತ್ವಿಕ ಸುಪ್ರಸಿದ್ದ ಆಚಾರ ನಿಷ್ಟರು ; ಒಳಗೆ ಪರಧನ , ಪರಸ್ತ್ರೀ ಪರಸ್ವತ್ತುಗಳಿಗಾಗಿ  ಬಾಯಿ ಬಾಯಿ ಬಿಡುತ್ತಿರುವ ಹಸೀ ಲಂಪಟರು . ಯಾರು ಬೇಕು ಸಿದ್ದರಾಮಯ್ಯ ನಿನಗೆ ? ರಾಜಕಾರಣದ ವಿಸ್ತಾರವಾದ ಮಜಲುಗಳು ಬೇಕೋ ? ಅಧ್ಯಾತ್ಮದ ಆಳವರಿಯಲಾರದದ ಅನುಭಾವ ಬೇಕೋ ? ನೀನು ಇಷ್ಟಪಡುವುದೆಲ್ಲ ಎಟುಕುತ್ತದೆ .  ಹಾಗೆಯೇ ಅಧ್ಯಯನ ಧ್ಯಾನಸಂಪನ್ನ ಜ್ಞಾನಾರ್ಜನೆಯ ತಾಣಗಳು ಬೇಕೆ ? ಲೆಕ್ಕವಿಲ್ಲದಷ್ಟು ಅಂತಹ ಕೇಂದ್ರಗಳ ಮಾಹಿತಿಯನ್ನೇ ಚನ್ನಬಸವಣ್ಣ ಬಾಗಿಲಲ್ಲಿಯೇ ಟಂಕಿಸಿ ಹಾಕಿಸಿದ್ದಾರೆ ಆಯ್ಕೆ ಮಾತ್ರ ಅಂತರಂಗದ ಅಂತಸ್ತಿಗೆ ಬಿಟ್ಟದ್ದು    .  
" ಚನ್ನಬಸವಣ್ಣನವರ ಶಾಸನವನ್ನು ನಾನೂ ನೋಡಿದೆ , ಅದನ್ನು ನೋಡಿ ಅಚ್ಚರಿವಡೆದು ನಿಂತುಬಿಟ್ಟೆ , ಅಷ್ಟೆಲ್ಲಾ ಇರುವುದು ನಿಜವೆ ಕಲ್ಯಾಣಪಟ್ಟಣದಲ್ಲಿ ?
" ಅದನ್ನು ಪದಶಃ ಅರ್ಥವಿಸಲು ಏಕೆ ಹೋದೆ  ಸಿದ್ದರಾಮಯ್ಯ ? ಅದರ ಅರ್ಥ ಸೀಮಿತವಲ್ಲ , ಸೀಮಾತೀತ . ಕಲ್ಯಾಣವೆಂಬುದು ಬರಿಯ ಪಟ್ಟಣವಲ್ಲ , ’ಹದಿನಾಲ್ಕು ಭುವನಕ್ಕೆ ಕಳಶವೆಂದಿನಿಸುವ ರುದ್ರಲೋಕವೆ ಮರ್ತ್ಯಲೋಕಕ್ಕಿಳಿತಂದು ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯ , ಎನ್ನುತ್ತಾರೆ  ಚನ್ನ ಬಸವಣ್ಣ ,  ಏನು ಅದರ ಅರ್ಥ ? ಇಳೆಗಿಳಿದ ಅಪರೂಪದ ಮಾನವ ಜನ್ಮವೆಂದಲ್ಲವೆ . ಅರ್ಥವಾಗದವರಿಗೆ ಹೇಗೆ ಹೊಳೆದೀತು ಆದರ ಅರ್ಥ ? ಮನುಷ್ಯ , ಮನುಷ್ಯನ ದೇಹ ಎಂದ ಮೇಲೆ ಅಲ್ಲಿ ಏನಿಲ್ಲ ? ಏನುಂಟು ?ಸುಜ್ಞಾನದ ದೀವಟಿಕೆ ಹೊತ್ತಿ ಉರಿಯುತ್ತಿಲ್ಲವೇ ? ಅಜ್ಞಾನದ ಅಂಧಕಾರ ಮುತ್ತಿ ಕಾಡುತ್ತಿಲ್ಲವೇ ? ಅದರ ಪರಿಯನ್ನು ವಿವರಿಸಲು ಚನ್ನಬಸವಣ್ಣ ಹೆಣೆದ ಶಬ್ದಜಾಲ ಈ ಶಾಸನ . ಚನ್ನಬಸವಣ್ಣ ಹೊರಗೆ ತೋರಿಸಿರುವುದು ಕಲ್ಯಾಣ ಪಟ್ಟಣದ ವೀಧಿಗಳ ಪರಿಚಯ ; ಒಳಗೆ ಮಾಡಿಸುತ್ತಾ ಹೋಗುವುದು ಆತ್ಮ ನಡೆದು ಬಂದ ದಾರಿಗಳ ಇಣುಕು ನೋಟ .  ಹೊರಗೆ ಕಲ್ಯಾಣದಲ್ಲಿ ಅಚ್ಚುವಡೆದಿರುವ ಅರಮನೆ ಮಂತ್ರಿ ಪಸಾಯಿತರ ಗೃಹಗಳ ಬಣ್ಣನೆ , ಒಳಗೆ ಮನೋಶೋಧನೆಯ ವಿಚಿತ್ರ ಕೋಶಗಳ ವ್ಯೂಹಾತ್ಮಕ ರಚನೆಗಳ ವಿನ್ಯಾಸದ ವರ್ಣನೆ ,, ಯಾವುದನ್ನು ನಂಬುತ್ತೀಯ ?  
ತನುವೆಂಬ ದೇವಸ್ಥಾನದೊಳಗೆ 
ಮಸ್ತಕಾಗ್ರವೆಂಬ ಸಜ್ಜಾಗೃಹದಲ್ಲಿ ಪ್ರಾಣಲಿಂಗ ಸ್ವಯಂಭು ಪ್ರತಿಷ್ಟೆಯಾಗಿರಲು ..........
ಜ್ಞಾನ ಕ್ರಿಯೆ ಎರಡು ,  ಪಾದ ದ್ವಯವೆರಡು ಕೂಡಿ 
ನಾಲ್ಕು ಗಾಲಿಗಳಂ ಹೂಡಿ 
ಪಂಚೇಂದ್ರಿಯಗಳೆಂಬ ಪತಾಕೆಗಳ ಧರಿಸಿ 
ಏಕೋಭಾವವೆಂಬ ಕಳಶವನಿಟ್ಟು 
ದಶವಾಯುಗಳೆಂಬ ಪಾಶಮಂ ಬಂಧಿಸಿ.................
ಆನಂದವೆಂಬರಸು ನಿರಾಳವೆಂಬಪರಿಮಿತ ಪಟ್ಟಣವ 
ಪ್ರವೇಶವಾದನು ಕಾಣಾ ಗುಹೇಶ್ವರ 
ಚನ್ನಬಸವಣ್ಣ ಹುಡುಗ , ಹೊರಗೆ ನೋಡಿದರೆ ;  ಒಳಗೆ ಪ್ರವೇಶಿಸಿದರೆ ಅತ್ಮವೃದ್ದ  ಜ್ಞಾನಾವೃತ ಜೀವ ಅದು . ಬಸವಣ್ಣನ ಆಟಾಟೋಪ ಒಂದು ಘಳಿಗೆಯೂ ಇಲ್ಲ ; ಚನ್ನಬಸವಣ್ಣನೆಂಬ ಜ್ಞಾನಜ್ಯೋತಿ  ಇಲ್ಲದಿದ್ದರೆ !
ಹಸಿದ ಕಾಳೋರಗನ ಹೆಡೆಯ ನೆಳಲಲ್ಲಿ
ಕಾಳಾಂಧನೆಂಬ ಕಪ್ಪೆ - ಅಂತಹ ಕಾಳೋರಗನ ಏಳ ನುಂಗಿತ್ತು
ಅದರ ಬೇಳುವೆಯಲ್ಲಿ ಮೇಲಾಗಿ ಬದುಕಿದೆ
ಚೆನ್ನಬಸವಣ್ಣನಿಂದ ಗುಹೇಶ್ವರಲಿಂಗವೆಂಬುದು ಪ್ರಾಮಾಣಾಯಿತ್ತು
 
ಸಿದ್ದರಾಮರು   "ನನಗಿದು ಹೊಳೆದೇ ಇರಲಿಲ್ಲ ಪ್ರಭುವೇ , ಆ ಇಡೀ ಶಾಸನವನ್ನು ಪ್ರತಿ ಮಾಡಿಕೊಳ್ಳುತ್ತೇನೆ , ಅದನ್ನು ನಾನು ಅಭ್ಯಾಸ ಮಾಡಬೇಕು ,, 
"  ಸಿದ್ದರಾಮಯ್ಯ , ಆ ಶಾಸನವನ್ನೇಕೆ ಪ್ರತಿಮಾಡಿಕೊಳ್ಳಲು ಹೋಗುವೆ ?  ಆ ಚನ್ನಬಸವಣ್ಣನಿರುವ ಊರಿಗೇ ಬಂದಿದ್ದೀಯಲ್ಲ ,  ಅವರ ಹತ್ತಿರ ತಾನೇ ನೀನು ಹೋಗುತ್ತಿರುವುದು ; ಅಲ್ಲಿ ಅಂತಹ ಎಷ್ಟು ಎಣಿಕೆ ಇಲ್ಲದ ವಚನಗಳು ಬೇಕು ? ನೀನು ಶ್ರೀಶೈಲದಲ್ಲಿ ಕಲಿತುದು ಮಾತ್ರ ವಿದ್ಯೆಯಲ್ಲ ,    ಅಲ್ಲಿ ಕಾಳಾಮುಖ ದರ್ಶನವನ್ನು ನಿನ್ನ ಗುರು ಕಪಿಲ ಸಿದ್ದರು ಮಾಡಿಸಿದರು ; ಇಲ್ಲಿ ನಿನಗಾಗಿ ಬಹು ಮುಖ ದರ್ಶನ ಕಾಯುತ್ತಾ ಕುಳಿತಿದೆ . ಒಂದು ಕಾಳಾಮುಖ , ಒಂದು ಕಾಪಾಲಿಕ , ಒಂದು ಪಾಶುಪತ ಇವೆಲ್ಲ  ಏನು  ? ಗಾಣ ತಿರುಗುವ ಎತ್ತಿನ ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿಗಳು  , ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ವೃಷಭ ಬಲು ದೂರ ಸಂಚರಿಸಿರುವುದಾಗಿ ಭಾವಿಸಿರುತ್ತದೆ ಆದರೆ ಅದು ಹೊಡೆದಿರುವುದು ಮಾತ್ರ  ಗಾಣಕ್ಕೆ ಸುತ್ತು  . ಹಾಗೆಯೇ ಈ ಮತ ಪಂಥಗಳೆಂಬ ಗಾಣಗಳು ಜೀವವನ್ನು ತನ್ನ ಸುತ್ತ ಸುತ್ತು ಹೊಡೆಸುತ್ತವೆ . ಮುಂದಕ್ಕೆ ಕೈ ಹಿಡಿದು ನಡೆಸುವ ಯೋಗ್ಯತೆ ಅವಕ್ಕಿಲ್ಲ . ಕಣ್ಣಿನ ಕಪ್ಪು ಪಟ್ಟಿಯನ್ನು ಹರಿದು , ಸ್ವಛ್ಛಂದ ವಿಚಾರದ ಲಹರಿಗೆ ತೆರೆದುಕೊಳ್ಳದಲ್ಲದೆ ನವ ಜ್ಯೋತಿಯೂ  ಇಲ್ಲ ; ನವ ವಾಯುವೂ ಇಲ್ಲ   ; ನವ ದಿಗಂತಗಳೇ ಇಲ್ಲ . ಶ್ರೀಶೈಲದಲ್ಲಿ  ನೀನು ಕಲಿತ ವಿದ್ಯೆಯ ಮುಂದಿನ ಭಾಗ ಇಲ್ಲಿದೆ ನಿನಗೆ ;  ಈ ಕಲ್ಯಾಣದಲ್ಲಿ  . ನಿನ್ನನ್ನು ಚನ್ನಬಸವಣ್ಣ ಕೈ ಹಿಡಿದು ನಡೆಸುತ್ತಾರೆ , ನಿನ್ನ ಶ್ರೀಶೈಲದ ಗುರು ಕಪಿಲ ಸಿದ್ದ ಮಲ್ಲಿಕಾರ್ಜುನರ ಮುಂದಿನ ಅವತಾರವೇ ಜ್ಞಾನಸಿದ್ದನಾದ ಚನ್ನಬಸವಣ್ಣನ ರೂಪದಲ್ಲಿ ಮೈದಳೆದು ನಿಂತಿದೆ . ನಿನಗೆ ನೆನಪಿದೆಯೇ ? ನಿನಗೆ ಅನುಗ್ರಹಿಸಬೇಕಾದುದನ್ನೆಲ್ಲ ಅನುಗ್ರಹಿಸಲಾಗುತ್ತಿಲ್ಲ  ಸಿದ್ದರಾಮ !  ಈಗ ಅದು ನನ್ನಿಂದ ಸಾಧ್ಯವೂ ಇಲ್ಲ , ಆದರೆ ಖಂಡಿತ ಈ ಜನ್ಮದಲ್ಲಿಯೇ ನನ್ನನ್ನೇ ಧಾರೆ ಎರೆದು ನಿನ್ನೊಳಗೆ ಜ್ಯೋತಿಯಾಗಿ ಉರಿದು ಹೋಗುತ್ತೇನೆ  . ಎಂದು ನಿನ್ನ ಗುರು ನಿನಗೆ  ವಚನವಿತ್ತಿರಲಿಲ್ಲವೆ ? ಅದನ್ನು ಪೂರೈಸಲೆಂದೇ ನಾನು ನಿನ್ನನ್ನು ಇಲ್ಲಿಗೆ ಕರೆ ತಂದುದು , ಕಾರಣ ಜನ್ಮನಾದ ಚನ್ನಬಸವಣ್ಣನ ಮರ್ತ್ಯದ ಇರವು ಹೆಚ್ಚುದಿನ ಇಲ್ಲ ಸಿದ್ದರಾಮಯ್ಯ , ಕಲ್ಯಾಣದ ಪ್ರಣತಿಯನ್ನು ಮುಂದೆ ಹಿಡಿದು ನಡೆಸುವ ಧೀರ ಬೇಕು  ; ಅದಕ್ಕಾಗಿ ಹಾತೊರೆಯುತ್ತಿದೆ ಚನ್ನ ಬಸವಣ್ಣನ ಆತ್ಮ ಜ್ಯೋತಿ , ಆ ಧೀರ ನೀನೆಂದು  ನನ್ನ ಬಗೆಗೆ ಗೋಚರಿಸಿದುದರಿಂದ ನಿನ್ನನ್ನು ನಿನ್ನ ಕಾರ್ಯಕ್ಷೇತ್ರದಿಂದ ವಿಮುಖನನ್ನಾಗಿ ಮಾಡಿ ಇಲ್ಲಿಯವರೆಗೆ ಕರೆತರಬೇಕಾಯಿತು ,, 
ಆಗ ಆರ್ತರಾದ ಸಿದ್ದರಾಮರು , " ಪ್ರಭುವೇ ನೀವು ಕಾರಣ ಜನ್ಮರು , ನಿಮ್ಮನ್ನು ಅರಿಯಲು ನಾನೆಷ್ಟರವನು ? ಕೈ ಹಿಡಿದು ಕರೆ ತಂದಿದ್ದೀರಿ , ಮುನ್ನಡೆಸುವ ಹೊಣೆ ನಿಮ್ಮದೇ , ನಿಮ್ಮ ಆಜ್ಞಾಧಾರಕ ಶಿಶು ಮಾತ್ರ  ನಾನು ,, ಎಂದು ಅಂತಃಕರಣದುಂಬಿ ನುಡಿದರು , 
" ಹಾಗಲ್ಲ ಸಿದ್ದರಾಮಯ್ಯ , ಇಲ್ಲಿ ನಾನೂ ನೀನೂ ಎಷ್ಟರವರು ಎನ್ನುವುದು ಪ್ರಶ್ನೆಯಲ್ಲ , ತುಂಬಿಸಿಕೊಳ್ಳುವ ಯೋಗ್ಯತೆ ಇರುವ ಪಾತ್ರಕ್ಕೆ ಮಾತ್ರ ಧಾರೆ ಎರೆಯಲು ಸಾಧ್ಯ? ಅಪಾತ್ರಕ್ಕೆ ನಾನೆಲ್ಲಿಂದ ತಂದು ಸುರಿಯಲಿ ? ನನ್ನ ಪಾತ್ರವೂ ನಿನ್ನಹಾಗೆಯೇ  ; ಸದ್ಯಕ್ಕೆ ಸುರಿಯುವ ಪಾತ್ರದಲ್ಲಿದ್ದೇನೆ ಸುರಿಯುತ್ತೇನೆ . ಪಾತ್ರ ಬದಲಾದರೆ ನೀನೇ ಸುರಿಯಬೇಕಾಗಿ ಬರಬಹುದು ಯಾರು ಬಲ್ಲ ,,ಎಂದು ನಕ್ಕುಬಿಟ್ಟರು . 
ಕಾಲು, ಕರ , ಕಾಯ , ಜೀವದೊಳಗಾಡುವ ಭಾವವೇ ದೈವವೇ ?
ತಾನೆಂಬುದ ತಾನಳಿದಲ್ಲಿ ಗುಹೇಶ್ವರ ಲಿಂಗವು ತಾನೆ
ಕರ ಚರಣಾದಿಗಳು ಬೇರಾದವಲ್ಲದೆ ಅರಿದು ಮುಟ್ಟುವುದೊಂದೆ ಆತ್ಮ
ಬಿಂದುವಿನೊಂದು ಸಾಗರದಲ್ಲಿ ಸಸಿ ಹಲವು ನಾಮ ಬೆಳೆವಂತೆ !
ಗುಹೇಶ್ವರ ಲಿಂಗದಲ್ಲಿ ನಾನೀನೆಂಬ ಭಾವವಿಲ್ಲ ಸಿದ್ದರಾಮಯ್ಯ
ಸಿದ್ದರಾಮರು ಪ್ರಭುವಿನ ಮಾತುಗಳಿಂದ ಮಂಕುವಡೆದು ಹೋಗಿದ್ದರು , ಅಯ್ಯೋ ಈ ಪುಣ್ಯಾತ್ಮ ನನಗೆ  ಅರ್ಥವೇ ಆಗುತ್ತಿಲ್ಲವೇ ? ಎಂದುಕೊಳ್ಳುತ್ತಾ . 
ಕಲ್ಯಾಣದ ಹೆಬ್ಬಾಗಿಲನ್ನು ಪ್ರವೇಶಿಸುತ್ತಿದ್ದಂತೆಯೇ ಎಲ್ಲ ಒಳ ಪ್ರವೇಶಿಸುವವರ ತನಿಖೆ ನಡೆಯುತ್ತಿತ್ತು ,  ಅವರು ಯಾವ ದೇಶದವರು ? ಬಂದ ಕಾರಣ ಏನು ? ಉಳಿದುಕೊಳ್ಳುವುದೆಲ್ಲಿ ? ಪಟ್ಟಣದಲ್ಲಿ ಅವರ ಪರಿಚಿತರು ಯಾರು  ಯಾರು ? ಎಲ್ಲ ವಿವರಗಳನ್ನು ನಮೂದಿಸಿ ಒಳ ಪ್ರವೆಶಿಸಬೇಕಾಗಿತ್ತು 
ಆದರೆ ಸನ್ಯಾಸಿಯ ವೇಷದಲ್ಲಿದ್ದವರಿಗೆ ಯಾವ ಪರೀಕ್ಷೆಯೂ , ಪ್ರಶ್ನೆಗಳೂ ಏನೊಂದೂ ಇರಲಿಲ್ಲ . ನಮಸ್ಕರಿಸಿ ಒಳಗೆ ಬಿಡುತ್ತಿದ್ದ್ದರು . ಒಳ ಪ್ರವೇಶಿಸಿದ ಸಿದ್ದರಾಮರಿಗೆ ಇದು ತುಂಬಾ ವಿಚಿತ್ರವೆನಿಸಿತು 
" ಅಲ್ಲಮ ತಂದೆ , ಅದೇಕೆ ಇಲ್ಲಿ ಸನ್ಯಾಸಿಗಳಿಂದ ಯಾವ ಮಾಹಿತಿಗಳನ್ನೂ ಕೇಳುತ್ತಿಲ್ಲ ; ಸನ್ಯಾಸಿಗಳ ವೇಷದಲ್ಲಿ ಕಳ್ಳರು  , ಸುಳ್ಳರು ಪುರಪ್ರವೇಶ ಮಾಡಬಾರದೆಂದಿದೆಯೇ ?,,
ಎಂದು ಪ್ರಶ್ನಿಸಿದರು 
" ಕಳ್ಳರೇನು ಪೆದ್ದರೆ , ಸನ್ಯಾಸಿಗಳ ವೇಷದಲ್ಲಿ ಪುರ ಪ್ರವೇಶ ಮಾಡಲು ? ಅವರಿಗೆ ಚನ್ನಾಗಿ ಗೊತ್ತು , ಇಲ್ಲಿ ಪ್ರಶ್ನೆಗಳಿಲ್ಲದೆ ಸಗೌರವಗಳಿಂದ ಒಳ ಕರೆದುಕೊಳ್ಳುವುದು ಕೇವಲ ತೋರಿಕೆಯ ಉಪಚಾರ ಮಾತ್ರ ಎಂಬುದು . ಸಾಮಾನ್ಯರಿಗೆ ಒಮ್ಮೆ ಮುಖ್ಯ ದ್ವಾರದಲ್ಲಿಯೇ ಎಲ್ಲ ಪರೀಕ್ಷೆಗಳೂ ನಡೆದು ಹೋಗುತ್ತವೆ , ನಂತರ ಪುರದಲ್ಲಿ ಅವರನ್ನು ಸಾಮಾನ್ಯವಾಗಿ ಯಾರೂ ಕೇಳುವವರಿರುವುದಿಲ್ಲ . ಆದರೆ ಸನ್ಯಾಸಿಯ ಪಾಡು ಹಾಗಲ್ಲ , ಹೆಜ್ಜೆ ಹೆಜ್ಜೆಗೆ ಅವನ ಮೇಲೆ ಹದ್ದಿನ ಕಣ್ಣಿರುತ್ತದೆ , ಅವನು ಪಟ್ಟಣದಲ್ಲಿ ಎಲ್ಲಿಗೆ ತೆರಳುತ್ತಾನೆ ? ಯಾರನ್ನೆಲ್ಲ ಭೇಟಿ ಮಾಡುತ್ತಾನೆ? ಅವರ ವಿವರಗಳೆಂತಹವು ಅವನು ಗೂಢಚಾರನೆ ? ಕಳ್ಳನೆ ? ಕೊಲೆಗಡುಕನೆ ? ಪಾತಕಿಯೆ ? ಎಲ್ಲ ವಿವರಗಳು ತಲುಪುವ ಜಾಗಕ್ಕೆ ತಲುಪುತ್ತಿರುತ್ತವೆ  ,ಅನುಮಾನ ಬಲವಾದರೆ ಸೆರೆವಾಸ ತಪ್ಪಿದ್ದಲ್ಲ , ಯಾರು ಬಲ್ಲರು ? ನಮ್ಮನ್ನೂ ಬಂಧಿಸಿ ಸೆರೆಗೆ ದೂಡಬಹುದು ! ,, 
ಪ್ರಭುವಿನ ಮಾತು ಕೇಳಿ ಸಿದ್ದರಾಮರಿಗೆ ನಗು ಬಂದಿತು .
 " ನಿಮ್ಮನ್ನು ಕೂಡಿ ಹಾಕುವಂತಹ ಸೆರೆಮನೆಯನ್ನು ಯಾರು ಕಟ್ಟಿದ್ದಾರೆ ದೊರೆಯೇ ? , ನಿಮ್ಮನ್ನು ಕೂಡಿಹಾಕಬಲ್ಲ ಶಕ್ತಿ ಇರುವುದು ಕಲ್ಯಾಣದ ಶರಣರ ಸಂದಣಿಗೆ ಮಾತ್ರ , ಪಾಪ ಅವರೂ ಸಹ ಎಷ್ಟೊಂದು ವರ್ಷಗಳು ನಿಮಗಾಗಿ ಕಾದು ಕುಳಿತರು  ? , ಅವರಿಗೇ ನೀವು ದೊರಕಲು ಇಷ್ಟು ಕಷ್ಟವಾಗಿರುವಾಗ , ಇನ್ನು ಯಾವ ಅರಸ ತಾನೆ ನಿಮ್ಮ ತಂಟೆಗೆ ಬಂದಾನು , ಈಗ ನಾವು ತಮ್ಮ ಆಣತಿಯಂತೆ ಯಾವುದೇ ಮುನ್ಸೂಚನೆ ನೀಡದೆ ಕಲ್ಯಾಣಕ್ಕೆ ಬಂದಾಗಿದೆ , ತಾವು ಇಲ್ಲಿಯೇ ಇರುವ ಮಂಟಪಗಳಲ್ಲೊಂದರಲ್ಲಿ  ವಿಶ್ರಮಿಸುತ್ತಿದ್ದರೆ , ನಾನು ಬೇಗನೆ ಮಹಾಮನೆಗೆ ತೆರಳಿ ಅಲ್ಲಮಪ್ರಭುದೇವರು ಬಂದಿರುವರೆಂಬ ಸಂತಸದ ಸುದ್ದಿಯನ್ನು ಅಲ್ಲಿ ಬಿತ್ತರಿಸುತ್ತೇನೆ , ಆಗ ಶರಣರು ಕಲಶ ಕನ್ನಡಿಗಳೊಡನೆ ಸಂಭ್ರಮದಿಂದ ನಿಮ್ಮನ್ನು ಸ್ವಾಗತಿಸಲು ಬರುವರು. ಕಲ್ಯಾಣಕ್ಕೆ ಅಲ್ಲಮಪ್ರಭುಗಳು ಬಂದಿರುವ ವಾರ್ತೆ ಮನೆ ಮನೆಗೆ ಪಸರಿಸಿ ನಗರಕ್ಕೆ  ನಗರವೇ ಸಂಭ್ರಮಪಡುವುದು ,, 

 

ಅಲ್ಲಮ ಸಿದ್ದರಾಮರು ಕಲ್ಯಾಣದ ಹೊರವಳಯದಲ್ಲಿ ಬಂದು ನಿಂತರು . ಕಲ್ಯಾಣವನ್ನು ಅವರು ತಲುಪುತ್ತಿದ್ದಂತೆ ಕಲ್ಯಾಣದ ದಾರಿ ಗೌಜಿನಿಂದ ತುಂಬಿದ್ದು ಕಂಡಿತು . ಪಟ್ಟಣಕ್ಕೆ ಪ್ರತ್ಯೇಕ ಮಾರ್ಗದಲ್ಲಿ ಅವಸರದಿಂದ ಪ್ರವೇಶಿಸುತ್ತಿದ್ದ ಮತ್ತು ನಿರ್ಗಮಿಸುತ್ತಿದ್ದ ರಥಗಳು ಮತ್ತು ಆಶ್ವಗಳು ;  ಇನ್ನೊಂದು ಮಾರ್ಗದಲ್ಲಿ ಸಾಲಾಗಿ ನಿಂತಿದ್ದ ಸರಕು ತುಂಬಿದ ಬಂಡಿಗಳು , ತೆರುವ ಸುಂಕವನ್ನು ತೆತ್ತು ನಿಧಾನಕ್ಕೆ ಪುರ ಪ್ರವೇಶ ಮಾಡುತ್ತಿದ್ದವು . ಒಳ ಪ್ರವೇಶಿಸುವ ಎಲ್ಲ ವಾಹನಗಳು ,  ಪಾದಚಾರಿಗಳು ಮತ್ತು ಪ್ರಾಣಿಗಳ ಸಕಲ ವಿವರಗಳನ್ನು  ನಮೂದಿಸಿಕೊಳ್ಳುವ ಅನೇಕ ಸುಂಕದ ಕಟ್ಟೆಗಳು . ಇವೆಲ್ಲವನ್ನು ಕಂಡು ಅಚ್ಚರಿಗೊಂಡ ಸಿದ್ದರಾಮರು " ಸೊನ್ನಲಿಗೆ , ಮಂಗಳವೇಡೆಗಳಿಗಿಂತ ಇದು ಬಹಳ ದೊಡ್ಡ ನಗರ . ಇದರ ಪಾರುಪತ್ಯ ಬಸವೇಶ  ಬಿಜ್ಜಳಾದಿಗಳಿಗೆ ಸಾಮಾನ್ಯವಲ್ಲ  ,, ಎಂದರು .

 ಪ್ರಭುದೇವರು ನಗುತ್ತಾ "ಕಲ್ಯಾಣ ಸಾಮಾನ್ಯ ನಗರವಲ್ಲ . ರಾಜಹಂಸಗಳು ತೇಲುವ ಸುಂದರಕೊಳ ; ಹಾಗೇಯೇ ಪಕ್ಕದಲ್ಲಿಯೇ ಕೊಳದ ಪರಿಚಯವೇ ಇಲ್ಲದೆ ಜವಾಬ್ದಾರಿಯ ಪರಿವೆ ಇಲ್ಲದೆ  ಹರಟುತ್ತಾ , ಕೊಚ್ಚೆಗಳಲ್ಲಿಯೇ ಮುಳುಗೇಳುತ್ತಿರುವ ಕ್ರಿಮಿಗಳ  ರಾಸಿಗಳು . ಒಂದೆರಡಲ್ಲ ಇದರ ಅದ್ಭುತಗಳು ! ಅರಸನಿಷ್ಟ ರಾಜದೂತರು ; ನಿಷ್ಟೆಯ ವೇಷ ತಳೆದ ಧೂರ್ತ ವಿದೂಷಕರು , ಹೊರಗೆ ಢಂಬದಿಂದ ಮೆರೆಯುತ್ತಾ , ಒಳಗೆ ಅಧಿಕಾರಸ್ಥರ ಕಾಲು ನೆಕ್ಕುವ ಶ್ವಪಚೋಪಜೀವಿಗಳು . ಹೊರಗೆ ನೋಡಲು ಸಾತ್ವಿಕ ಸುಪ್ರಸಿದ್ದ ಆಚಾರ ನಿಷ್ಟರು ; ಒಳಗೆ ಪರಧನ , ಪರಸ್ತ್ರೀ ಪರಸ್ವತ್ತುಗಳಿಗಾಗಿ  ಬಾಯಿ ಬಾಯಿ ಬಿಡುತ್ತಿರುವ ಹಸೀ ಲಂಪಟರು . ಯಾರು ಬೇಕು ಸಿದ್ದರಾಮಯ್ಯ ನಿನಗೆ ? ರಾಜಕಾರಣದ ವಿಸ್ತಾರವಾದ ಮಜಲುಗಳು ಬೇಕೋ ? ಅಧ್ಯಾತ್ಮದ ಆಳವರಿಯಲಾರದದ ಅನುಭಾವ ಬೇಕೋ ? ನೀನು ಇಷ್ಟಪಡುವುದೆಲ್ಲ ಎಟುಕುತ್ತದೆ .  ಹಾಗೆಯೇ ಅಧ್ಯಯನ ಧ್ಯಾನಸಂಪನ್ನ ಜ್ಞಾನಾರ್ಜನೆಯ ತಾಣಗಳು ಬೇಕೆ ? ಲೆಕ್ಕವಿಲ್ಲದಷ್ಟು ಅಂತಹ ಕೇಂದ್ರಗಳ ಮಾಹಿತಿಯನ್ನೇ ಚನ್ನಬಸವಣ್ಣ ಬಾಗಿಲಲ್ಲಿಯೇ ಟಂಕಿಸಿ ಹಾಕಿಸಿದ್ದಾರೆ ಆಯ್ಕೆ ಮಾತ್ರ ಅಂತರಂಗದ ಅಂತಸ್ತಿಗೆ ಬಿಟ್ಟದ್ದು    .  

 

" ಚನ್ನಬಸವಣ್ಣನವರ ಶಾಸನವನ್ನು ನಾನೂ ನೋಡಿದೆ , ಅದನ್ನು ನೋಡಿ ಅಚ್ಚರಿವಡೆದು ನಿಂತುಬಿಟ್ಟೆ , ಅಷ್ಟೆಲ್ಲಾ ಇರುವುದು ನಿಜವೆ ಕಲ್ಯಾಣಪಟ್ಟಣದಲ್ಲಿ ?

 

" ಅದನ್ನು ಪದಶಃ ಅರ್ಥವಿಸಲು ಏಕೆ ಹೋದೆ  ಸಿದ್ದರಾಮಯ್ಯ ? ಅದರ ಅರ್ಥ ಸೀಮಿತವಲ್ಲ , ಸೀಮಾತೀತ . ಕಲ್ಯಾಣವೆಂಬುದು ಬರಿಯ ಪಟ್ಟಣವಲ್ಲ , ’ಹದಿನಾಲ್ಕು ಭುವನಕ್ಕೆ ಕಳಶವೆಂದಿನಿಸುವ ರುದ್ರಲೋಕವೆ ಮರ್ತ್ಯಲೋಕಕ್ಕಿಳಿತಂದು ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯ , ಎನ್ನುತ್ತಾರೆ  ಚನ್ನ ಬಸವಣ್ಣ ,  ಏನು ಅದರ ಅರ್ಥ ? ಇಳೆಗಿಳಿದ ಅಪರೂಪದ ಮಾನವ ಜನ್ಮವೆಂದಲ್ಲವೆ . ಅರ್ಥವಾಗದವರಿಗೆ ಹೇಗೆ ಹೊಳೆದೀತು ಆದರ ಅರ್ಥ ? ಮನುಷ್ಯ , ಮನುಷ್ಯನ ದೇಹ ಎಂದ ಮೇಲೆ ಅಲ್ಲಿ ಏನಿಲ್ಲ ? ಏನುಂಟು ?ಸುಜ್ಞಾನದ ದೀವಟಿಕೆ ಹೊತ್ತಿ ಉರಿಯುತ್ತಿಲ್ಲವೇ ? ಅಜ್ಞಾನದ ಅಂಧಕಾರ ಮುತ್ತಿ ಕಾಡುತ್ತಿಲ್ಲವೇ ? ಅದರ ಪರಿಯನ್ನು ವಿವರಿಸಲು ಚನ್ನಬಸವಣ್ಣ ಹೆಣೆದ ಶಬ್ದಜಾಲ ಈ ಶಾಸನ . ಚನ್ನಬಸವಣ್ಣ ಹೊರಗೆ ತೋರಿಸಿರುವುದು ಕಲ್ಯಾಣ ಪಟ್ಟಣದ ವೀಧಿಗಳ ಪರಿಚಯ ; ಒಳಗೆ ಮಾಡಿಸುತ್ತಾ ಹೋಗುವುದು ಆತ್ಮ ನಡೆದು ಬಂದ ದಾರಿಗಳ ಇಣುಕು ನೋಟ .  ಹೊರಗೆ ಕಲ್ಯಾಣದಲ್ಲಿ ಅಚ್ಚುವಡೆದಿರುವ ಅರಮನೆ ಮಂತ್ರಿ ಪಸಾಯಿತರ ಗೃಹಗಳ ಬಣ್ಣನೆ , ಒಳಗೆ ಮನೋಶೋಧನೆಯ ವಿಚಿತ್ರ ಕೋಶಗಳ ವ್ಯೂಹಾತ್ಮಕ ರಚನೆಗಳ ವಿನ್ಯಾಸದ ವರ್ಣನೆ ,, ಯಾವುದನ್ನು ನಂಬುತ್ತೀಯ ?  

 

ತನುವೆಂಬ ದೇವಸ್ಥಾನದೊಳಗೆ

 ಮಸ್ತಕಾಗ್ರವೆಂಬ ಸಜ್ಜಾಗೃಹದಲ್ಲಿ

ಪ್ರಾಣಲಿಂಗ ಸ್ವಯಂಭು ಪ್ರತಿಷ್ಟೆಯಾಗಿರಲು ..........

ಜ್ಞಾನ ಕ್ರಿಯೆ ಎರಡು ,

 ಪಾದ ದ್ವಯವೆರಡು ಕೂಡಿ

 ನಾಲ್ಕು ಗಾಲಿಗಳಂ ಹೂಡಿ 

ಪಂಚೇಂದ್ರಿಯಗಳೆಂಬ ಪತಾಕೆಗಳ ಧರಿಸಿ 

ಏಕೋಭಾವವೆಂಬ ಕಳಶವನಿಟ್ಟು 

ದಶವಾಯುಗಳೆಂಬ ಪಾಶಮಂ ಬಂಧಿಸಿ.................

ಆನಂದವೆಂಬರಸು ನಿರಾಳವೆಂಬಪರಿಮಿತ ಪಟ್ಟಣವ

 ಪ್ರವೇಶವಾದನು ಕಾಣಾ ಗುಹೇಶ್ವರ 

 

ಚನ್ನಬಸವಣ್ಣ ಹುಡುಗ , ಹೊರಗೆ ನೋಡಿದರೆ ;  ಒಳಗೆ ಪ್ರವೇಶಿಸಿದರೆ ಅತ್ಮವೃದ್ದ  ಜ್ಞಾನಾವೃತ ಜೀವ ಅದು . ಬಸವಣ್ಣನ ಆಟಾಟೋಪ ಒಂದು ಘಳಿಗೆಯೂ ಇಲ್ಲ ; ಚನ್ನಬಸವಣ್ಣನೆಂಬ ಜ್ಞಾನಜ್ಯೋತಿ  ಇಲ್ಲದಿದ್ದರೆ !

 

ಹಸಿದ ಕಾಳೋರಗನ ಹೆಡೆಯ ನೆಳಲಲ್ಲಿ

ಕಾಳಾಂಧನೆಂಬ ಕಪ್ಪೆ -

ಅಂತಹ ಕಾಳೋರಗನ ಏಳ ನುಂಗಿತ್ತು

ಅದರ ಬೇಳುವೆಯಲ್ಲಿ ಮೇಲಾಗಿ ಬದುಕಿದೆ

ಚೆನ್ನಬಸವಣ್ಣನಿಂದ ಗುಹೇಶ್ವರಲಿಂಗವೆಂಬುದು ಪ್ರಾಮಾಣಾಯಿತ್ತು 

 

ಸಿದ್ದರಾಮರು   "ನನಗಿದು ಹೊಳೆದೇ ಇರಲಿಲ್ಲ ಪ್ರಭುವೇ , ಆ ಇಡೀ ಶಾಸನವನ್ನು ಪ್ರತಿ ಮಾಡಿಕೊಳ್ಳುತ್ತೇನೆ , ಅದನ್ನು ನಾನು ಅಭ್ಯಾಸ ಮಾಡಬೇಕು ,, 

 

"  ಸಿದ್ದರಾಮಯ್ಯ , ಆ ಶಾಸನವನ್ನೇಕೆ ಪ್ರತಿಮಾಡಿಕೊಳ್ಳಲು ಹೋಗುವೆ ?  ಆ ಚನ್ನಬಸವಣ್ಣನಿರುವ ಊರಿಗೇ ಬಂದಿದ್ದೀಯಲ್ಲ ,  ಅವರ ಹತ್ತಿರ ತಾನೇ ನೀನು ಹೋಗುತ್ತಿರುವುದು ; ಅಲ್ಲಿ

ಅಂತಹ ಎಷ್ಟು ಎಣಿಕೆ ಇಲ್ಲದ ವಚನಗಳು ಬೇಕು ? ನೀನು ಶ್ರೀಶೈಲದಲ್ಲಿ ಕಲಿತುದು ಮಾತ್ರ ವಿದ್ಯೆಯಲ್ಲ ,    ಅಲ್ಲಿ ಕಾಳಾಮುಖ ದರ್ಶನವನ್ನು ನಿನ್ನ ಗುರು ಕಪಿಲ ಸಿದ್ದರು ಮಾಡಿಸಿದರು ; ಇಲ್ಲಿ ನಿನಗಾಗಿ ಬಹು ಮುಖ ದರ್ಶನ ಕಾಯುತ್ತಾ ಕುಳಿತಿದೆ . ಒಂದು ಕಾಳಾಮುಖ , ಒಂದು ಕಾಪಾಲಿಕ , ಒಂದು ಪಾಶುಪತ ಇವೆಲ್ಲ  ಏನು  ? ಗಾಣ ತಿರುಗುವ ಎತ್ತಿನ ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿಗಳು  , ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ವೃಷಭ ಬಲು ದೂರ ಸಂಚರಿಸಿರುವುದಾಗಿ ಭಾವಿಸಿರುತ್ತದೆ ಆದರೆ ಅದು ಹೊಡೆದಿರುವುದು ಮಾತ್ರ  ಗಾಣಕ್ಕೆ ಸುತ್ತು  . ಹಾಗೆಯೇ ಈ ಮತ ಪಂಥಗಳೆಂಬ ಗಾಣಗಳು ಜೀವವನ್ನು ತನ್ನ ಸುತ್ತ ಸುತ್ತು ಹೊಡೆಸುತ್ತವೆ . ಮುಂದಕ್ಕೆ ಕೈ ಹಿಡಿದು ನಡೆಸುವ ಯೋಗ್ಯತೆ ಅವಕ್ಕಿಲ್ಲ . ಕಣ್ಣಿನ ಕಪ್ಪು ಪಟ್ಟಿಯನ್ನು ಹರಿದು , ಸ್ವಛ್ಛಂದ ವಿಚಾರದ ಲಹರಿಗೆ ತೆರೆದುಕೊಳ್ಳದಲ್ಲದೆ ನವ ಜ್ಯೋತಿಯೂ  ಇಲ್ಲ ; ನವ ವಾಯುವೂ ಇಲ್ಲ   ; ನವ ದಿಗಂತಗಳೇ ಇಲ್ಲ . ಶ್ರೀಶೈಲದಲ್ಲಿ  ನೀನು ಕಲಿತ ವಿದ್ಯೆಯ ಮುಂದಿನ ಭಾಗ ಇಲ್ಲಿದೆ ನಿನಗೆ ;  ಈ ಕಲ್ಯಾಣದಲ್ಲಿ  . ನಿನ್ನನ್ನು ಚನ್ನಬಸವಣ್ಣ ಕೈ ಹಿಡಿದು ನಡೆಸುತ್ತಾರೆ , ನಿನ್ನ ಶ್ರೀಶೈಲದ ಗುರು ಕಪಿಲ ಸಿದ್ದ ಮಲ್ಲಿಕಾರ್ಜುನರ ಮುಂದಿನ ಅವತಾರವೇ ಜ್ಞಾನಸಿದ್ದನಾದ ಚನ್ನಬಸವಣ್ಣನ ರೂಪದಲ್ಲಿ ಮೈದಳೆದು ನಿಂತಿದೆ . ನಿನಗೆ ನೆನಪಿದೆಯೇ ? ನಿನಗೆ ಅನುಗ್ರಹಿಸಬೇಕಾದುದನ್ನೆಲ್ಲ ಅನುಗ್ರಹಿಸಲಾಗುತ್ತಿಲ್ಲ  ಸಿದ್ದರಾಮ !  ಈಗ ಅದು ನನ್ನಿಂದ ಸಾಧ್ಯವೂ ಇಲ್ಲ , ಆದರೆ ಖಂಡಿತ ಈ ಜನ್ಮದಲ್ಲಿಯೇ ನನ್ನನ್ನೇ ಧಾರೆ ಎರೆದು ನಿನ್ನೊಳಗೆ ಜ್ಯೋತಿಯಾಗಿ ಉರಿದು ಹೋಗುತ್ತೇನೆ  . ಎಂದು ನಿನ್ನ ಗುರು ನಿನಗೆ  ವಚನವಿತ್ತಿರಲಿಲ್ಲವೆ ? ಅದನ್ನು ಪೂರೈಸಲೆಂದೇ ನಾನು ನಿನ್ನನ್ನು ಇಲ್ಲಿಗೆ ಕರೆ ತಂದುದು , ಕಾರಣ ಜನ್ಮನಾದ ಚನ್ನಬಸವಣ್ಣನ ಮರ್ತ್ಯದ ಇರವು ಹೆಚ್ಚುದಿನ ಇಲ್ಲ ಸಿದ್ದರಾಮಯ್ಯ , ಕಲ್ಯಾಣದ ಪ್ರಣತಿಯನ್ನು ಮುಂದೆ ಹಿಡಿದು ನಡೆಸುವ ಧೀರ ಬೇಕು  ; ಅದಕ್ಕಾಗಿ ಹಾತೊರೆಯುತ್ತಿದೆ ಚನ್ನ ಬಸವಣ್ಣನ ಆತ್ಮ ಜ್ಯೋತಿ , ಆ ಧೀರ ನೀನೆಂದು  ನನ್ನ ಬಗೆಗೆ ಗೋಚರಿಸಿದುದರಿಂದ ನಿನ್ನನ್ನು ನಿನ್ನ ಕಾರ್ಯಕ್ಷೇತ್ರದಿಂದ ವಿಮುಖನನ್ನಾಗಿ ಮಾಡಿ ಇಲ್ಲಿಯವರೆಗೆ ಕರೆತರಬೇಕಾಯಿತು ,, 

 

ಆಗ ಆರ್ತರಾದ ಸಿದ್ದರಾಮರು , " ಪ್ರಭುವೇ ನೀವು ಕಾರಣ ಜನ್ಮರು , ನಿಮ್ಮನ್ನು ಅರಿಯಲು ನಾನೆಷ್ಟರವನು ? ಕೈ ಹಿಡಿದು ಕರೆ ತಂದಿದ್ದೀರಿ , ಮುನ್ನಡೆಸುವ ಹೊಣೆ ನಿಮ್ಮದೇ , ನಿಮ್ಮ ಆಜ್ಞಾಧಾರಕ ಶಿಶು ಮಾತ್ರ  ನಾನು ,, ಎಂದು ಅಂತಃಕರಣದುಂಬಿ ನುಡಿದರು , 

 

" ಹಾಗಲ್ಲ ಸಿದ್ದರಾಮಯ್ಯ , ಇಲ್ಲಿ ನಾನೂ ನೀನೂ ಎಷ್ಟರವರು ಎನ್ನುವುದು ಪ್ರಶ್ನೆಯಲ್ಲ , ತುಂಬಿಸಿಕೊಳ್ಳುವ ಯೋಗ್ಯತೆ ಇರುವ ಪಾತ್ರಕ್ಕೆ ಮಾತ್ರ ಧಾರೆ ಎರೆಯಲು ಸಾಧ್ಯ? ಅಪಾತ್ರಕ್ಕೆ ನಾನೆಲ್ಲಿಂದ ತಂದು ಸುರಿಯಲಿ ? ನನ್ನ ಪಾತ್ರವೂ ನಿನ್ನಹಾಗೆಯೇ  ; ಸದ್ಯಕ್ಕೆ ಸುರಿಯುವ ಪಾತ್ರದಲ್ಲಿದ್ದೇನೆ ಸುರಿಯುತ್ತೇನೆ . ಪಾತ್ರ ಬದಲಾದರೆ ನೀನೇ ಸುರಿಯಬೇಕಾಗಿ ಬರಬಹುದು ಯಾರು ಬಲ್ಲ ,,ಎಂದು ನಕ್ಕುಬಿಟ್ಟರು . 

 

ಕಾಲು, ಕರ , ಕಾಯ , ಜೀವದೊಳಗಾಡುವ ಭಾವವೇ ದೈವವೇ ?

ತಾನೆಂಬುದ ತಾನಳಿದಲ್ಲಿ ಗುಹೇಶ್ವರ ಲಿಂಗವು ತಾನೆ
ಕರ ಚರಣಾದಿಗಳು ಬೇರಾದವಲ್ಲದೆ

ಅರಿದು ಮುಟ್ಟುವುದೊಂದೆ

ಆತ್ಮಬಿಂದುವಿನೊಂದು ಸಾಗರದಲ್ಲಿ

ಸಸಿ ಹಲವು ನಾಮ ಬೆಳೆವಂತೆ !

ಗುಹೇಶ್ವರ ಲಿಂಗದಲ್ಲಿ ನಾನೀನೆಂಬ ಭಾವವಿಲ್ಲ ಸಿದ್ದರಾಮಯ್ಯ

 

ಸಿದ್ದರಾಮರು ಪ್ರಭುವಿನ ಮಾತುಗಳಿಂದ ಮಂಕುವಡೆದು ಹೋಗಿದ್ದರು , ಅಯ್ಯೋ ಈ ಪುಣ್ಯಾತ್ಮ ನನಗೆ  ಅರ್ಥವೇ ಆಗುತ್ತಿಲ್ಲವೇ ? ಎಂದುಕೊಳ್ಳುತ್ತಾ . 

 

ಕಲ್ಯಾಣದ ಹೆಬ್ಬಾಗಿಲನ್ನು ಪ್ರವೇಶಿಸುತ್ತಿದ್ದಂತೆಯೇ ಎಲ್ಲ ಒಳ ಪ್ರವೇಶಿಸುವವರ ತನಿಖೆ ನಡೆಯುತ್ತಿತ್ತು ,  ಅವರು ಯಾವ ದೇಶದವರು ? ಬಂದ ಕಾರಣ ಏನು ? ಉಳಿದುಕೊಳ್ಳುವುದೆಲ್ಲಿ ? ಪಟ್ಟಣದಲ್ಲಿ ಅವರ ಪರಿಚಿತರು ಯಾರು  ಯಾರು ? ಎಲ್ಲ ವಿವರಗಳನ್ನು ನಮೂದಿಸಿ ಒಳ ಪ್ರವೆಶಿಸಬೇಕಾಗಿತ್ತು 

 

ಆದರೆ ಸನ್ಯಾಸಿಯ ವೇಷದಲ್ಲಿದ್ದವರಿಗೆ ಯಾವ ಪರೀಕ್ಷೆಯೂ , ಪ್ರಶ್ನೆಗಳೂ ಏನೊಂದೂ ಇರಲಿಲ್ಲ . ನಮಸ್ಕರಿಸಿ ಒಳಗೆ ಬಿಡುತ್ತಿದ್ದ್ದರು . ಒಳ ಪ್ರವೇಶಿಸಿದ ಸಿದ್ದರಾಮರಿಗೆ ಇದು ತುಂಬಾ ವಿಚಿತ್ರವೆನಿಸಿತು " ಅಲ್ಲಮ ತಂದೆ , ಅದೇಕೆ ಇಲ್ಲಿ ಸನ್ಯಾಸಿಗಳಿಂದ ಯಾವ ಮಾಹಿತಿಗಳನ್ನೂ ಕೇಳುತ್ತಿಲ್ಲ ; ಸನ್ಯಾಸಿಗಳ ವೇಷದಲ್ಲಿ ಕಳ್ಳರು  , ಸುಳ್ಳರು ಪುರಪ್ರವೇಶ ಮಾಡಬಾರದೆಂದಿದೆಯೇ ?,,ಎಂದು ಪ್ರಶ್ನಿಸಿದರು 

 

" ಕಳ್ಳರೇನು ಪೆದ್ದರೆ , ಸನ್ಯಾಸಿಗಳ ವೇಷದಲ್ಲಿ ಪುರ ಪ್ರವೇಶ ಮಾಡಲು ? ಅವರಿಗೆ ಚನ್ನಾಗಿ ಗೊತ್ತು , ಇಲ್ಲಿ ಪ್ರಶ್ನೆಗಳಿಲ್ಲದೆ ಸಗೌರವಗಳಿಂದ ಒಳ ಕರೆದುಕೊಳ್ಳುವುದು ಕೇವಲ ತೋರಿಕೆಯ ಉಪಚಾರ ಮಾತ್ರ ಎಂಬುದು . ಸಾಮಾನ್ಯರಿಗೆ ಒಮ್ಮೆ ಮುಖ್ಯ ದ್ವಾರದಲ್ಲಿಯೇ ಎಲ್ಲ ಪರೀಕ್ಷೆಗಳೂ ನಡೆದು ಹೋಗುತ್ತವೆ , ನಂತರ ಪುರದಲ್ಲಿ ಅವರನ್ನು ಸಾಮಾನ್ಯವಾಗಿ ಯಾರೂ ಕೇಳುವವರಿರುವುದಿಲ್ಲ . ಆದರೆ ಸನ್ಯಾಸಿಯ ಪಾಡು ಹಾಗಲ್ಲ , ಹೆಜ್ಜೆ ಹೆಜ್ಜೆಗೆ ಅವನ ಮೇಲೆ ಹದ್ದಿನ ಕಣ್ಣಿರುತ್ತದೆ , ಅವನು ಪಟ್ಟಣದಲ್ಲಿ ಎಲ್ಲಿಗೆ ತೆರಳುತ್ತಾನೆ ? ಯಾರನ್ನೆಲ್ಲ ಭೇಟಿ ಮಾಡುತ್ತಾನೆ? ಅವರ ವಿವರಗಳೆಂತಹವು ಅವನು ಗೂಢಚಾರನೆ ? ಕಳ್ಳನೆ ? ಕೊಲೆಗಡುಕನೆ ? ಪಾತಕಿಯೆ ? ಎಲ್ಲ ವಿವರಗಳು ತಲುಪುವ ಜಾಗಕ್ಕೆ ತಲುಪುತ್ತಿರುತ್ತವೆ  ,ಅನುಮಾನ ಬಲವಾದರೆ ಸೆರೆವಾಸ ತಪ್ಪಿದ್ದಲ್ಲ , ಯಾರು ಬಲ್ಲರು ? ನಮ್ಮನ್ನೂ ಬಂಧಿಸಿ ಸೆರೆಗೆ ದೂಡಬಹುದು ! ,, 

 

ಪ್ರಭುವಿನ ಮಾತು ಕೇಳಿ ಸಿದ್ದರಾಮರಿಗೆ ನಗು ಬಂದಿತು . " ನಿಮ್ಮನ್ನು ಕೂಡಿ ಹಾಕುವಂತಹ ಸೆರೆಮನೆಯನ್ನು ಯಾರು ಕಟ್ಟಿದ್ದಾರೆ ದೊರೆಯೇ ? , ನಿಮ್ಮನ್ನು ಕೂಡಿಹಾಕಬಲ್ಲ ಶಕ್ತಿ ಇರುವುದು ಕಲ್ಯಾಣದ ಶರಣರ ಸಂದಣಿಗೆ ಮಾತ್ರ , ಪಾಪ ಅವರೂ ಸಹ ಎಷ್ಟೊಂದು ವರ್ಷಗಳು ನಿಮಗಾಗಿ ಕಾದು ಕುಳಿತರು  ? , ಅವರಿಗೇ ನೀವು ದೊರಕಲು ಇಷ್ಟು ಕಷ್ಟವಾಗಿರುವಾಗ , ಇನ್ನು ಯಾವ ಅರಸ ತಾನೆ ನಿಮ್ಮ ತಂಟೆಗೆ ಬಂದಾನು , ಈಗ ನಾವು ತಮ್ಮ ಆಣತಿಯಂತೆ ಯಾವುದೇ ಮುನ್ಸೂಚನೆ ನೀಡದೆ ಕಲ್ಯಾಣಕ್ಕೆ ಬಂದಾಗಿದೆ , ತಾವು ಇಲ್ಲಿಯೇ ಇರುವ ಮಂಟಪಗಳಲ್ಲೊಂದರಲ್ಲಿ  ವಿಶ್ರಮಿಸುತ್ತಿದ್ದರೆ , ನಾನು ಬೇಗನೆ ಮಹಾಮನೆಗೆ ತೆರಳಿ ಅಲ್ಲಮಪ್ರಭುದೇವರು ಬಂದಿರುವರೆಂಬ ಸಂತಸದ ಸುದ್ದಿಯನ್ನು ಅಲ್ಲಿ ಬಿತ್ತರಿಸುತ್ತೇನೆ , ಆಗ ಶರಣರು ಕಲಶ ಕನ್ನಡಿಗಳೊಡನೆ ಸಂಭ್ರಮದಿಂದ ನಿಮ್ಮನ್ನು ಸ್ವಾಗತಿಸಲು ಬರುವರು. ಕಲ್ಯಾಣಕ್ಕೆ ಅಲ್ಲಮಪ್ರಭುಗಳು ಬಂದಿರುವ ವಾರ್ತೆ ಮನೆ ಮನೆಗೆ ಪಸರಿಸಿ ನಗರಕ್ಕೆ  ನಗರವೇ ಸಂಭ್ರಮಪಡುವುದು ,, 

ಲೇಖನ ವರ್ಗ (Category): 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gopinatha on

ಸೋಮಶೇಖರಯ್ಯನವರೇ
ಕುತೂಹಲಕಾರಿಯಾದದ್ದಷ್ಟೇ ಅಲ್ಲ ಈ ಸಾರಿಯ ನಿಮ್ಮ ಈ ಲೇಖನ
ಇನ್ನೂ ನಿಧಾನವಾಗಿ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸಬಲ್ಲಂತಹದ್ದಾಗಿದೆ.
ಅಧ್ಯಾತ್ಮದ ಕಡೆಗಿನ ನಿಮ್ಮ ಒಲವೂ ಇರಬಹುದೇನೋ ಅದಕ್ಕೆ ಕಾರಣ
ಇದಲ್ಲದೇ ಬೇರೆ ಯಾವುದಾದರೂ ಕಥೆ ನೀವು ಬರೆದದ್ದಿದೆಯೇ ಹೇಗೆ?

Submitted by csomsekraiah on

ಆತ್ಮೀಯ ಗೋಪಿನಾಥ್ ಅವರೆ
ಸಣ್ಣ ಕಥೆ ನನಗೆ ಒಗ್ಗುವ ಪ್ರಾಕಾರವಲ್ಲ , ಪ್ರಯತ್ನಿಸಿ ವಿಫಲನಾಗಿದ್ದೇನೆ , ಬರೆಯುವಾಗಿನ ಉತ್ಸಾಹ ನಂತರ ಇರುವುದಿಲ್ಲವಾದ್ದರಿಂದ ಬರೆದುದು ಹಾಳಾದುದೇ ಹೆಚ್ಚು. ಸಂಪದದಲ್ಲಿ ಬರೆದ ಕೂಡಲೇ ಪ್ರಕಟಿಸುವ ಸೌಲಭ್ಯವಿರುವುದರಿಂದ ಇಷ್ಟಾದರೂ ಉಳಿದು ಹೊರ ಬರುತ್ತಿದೆ . ಅಲ್ಲಮನನ್ನು ಸಂಶೊಧನಾತ್ಮಕವಾಗಿ ಕೆಲವೇ ಲೇಖನಗಳಲ್ಲಿ ಪರಿಚಯಿಸಲು ತೊಡಗಿದ ಪ್ರಯತ್ನ ಇದು . ಸಂಶೊಧನೆಗೆ ಅಲ್ಲಮನ ವ್ಯಕ್ತಿತ್ವ ಒಗ್ಗುವುದಿಲ್ಲವೆಂಬುದನ್ನು ಕಂಡುಕೊಂಡ ನಂತರ ಅದನ್ನೇ ಕಾದಂಬರಿಯಾಗಿ ವಿಸ್ತರಿಸುತ್ತಿದ್ದೇನೆ ತಮ್ಮ ಕಾಳಜಿ ಮತ್ತು ಆಸಕ್ತಿಗಳಿಗೆ ಧನ್ಯವಾದಗಳು .

Submitted by gopinatha on

ಸೋಮಶೇಖರಯ್ಯನವರೇ
ಮಹತ್ವದ ಪ್ರಯತ್ನ ನಿಮ್ಮದು
ಅದರಲ್ಲಿ ನೀವು ಸಂಪೂರ್ಣ ಸಫಲರಾಗಿದ್ದೀರಾ
ಸಂಪದ ನನಗೆ ನಿಮ್ಮಂತಹ ತುಂಬಾ ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಸ್ನೇಹ ಒದಗಿಸಿಕೊಟ್ಟಿದೆ
ಹರಿಪ್ರಸಾದ ನಾಡಿಗರಿಗೆ ನಾವೆಲ್ಲಾ ಚಿರ ಋಣಿಗಳಾಗಿರಬೇಕು.

Submitted by csomsekraiah on

ಅನನ್ಯ ಅಲ್ಲಮ ಲೇಖನಮಾಲೆ ಕಾದಂಬರಿ ಪ್ರಾಕಾರಕ್ಕೂ ಹೊಂದುತ್ತದೋ ಅಥವಾ ಇದು ಬೇರೊಂದೇ ಮಾದರಿಯೋ ಎನ್ನುವುದೂ ಸಹ ಸರಿಯಾಗಿ ಹೊಳೆದಿಲ್ಲ !
ಪ್ರತಿಕ್ರಿಯೆಯಲ್ಲಿ ಸಂಶೋಧನೆ ಪ್ರಯೋಗ ತಪ್ಪಾಗಿದೆ ತಿದ್ದಿಕೊಳ್ಳಬೇಕು , ಹರಿಪ್ರಸಾದ್ ತರಹದ ಯುವಕರು ಕನ್ನಡಕ್ಕೆ ತುಂಬಾ ಬೇಕು

Submitted by kavinagaraj on

ಸೋಮಶೇಖರಯ್ಯನವರೇ, ಶರಣು. ಸೊಗಸಾದ ಆ ಕಾಲದ ವ್ಯವಸ್ಥೆ ಮೇಲೆ ಒಳ್ಳೆಯ ಬೆಳಕು ಮೂಡಿಸುತ್ತಿದ್ದೀರಿ.

Submitted by ksraghavendranavada on

ಸೋಮಶೇಖರಯ್ಯನವರೇ,
ಒ೦ದು ಕ೦ತಿನಿ೦ದ ಮತ್ತೊ೦ದು ಕ೦ತಿಗೆ ಕಾದ೦ಬರಿ ಕುತೂಹಲ ಮೂಡಿಸುತ್ತಾ ಹೋಗುತ್ತಿದೆ. ಈ ಭಾಗವ೦ತೂ ಅಧ್ಬುತ! ಸಿಧ್ಧರಾಮ ಹಾಗೂ ಅಲ್ಲಮ ಪ್ರಭುಗಳ ನಡುವಿನ ಸ೦ಭಾಷಣೆಯ ಬಗ್ಗೆ ಏನೂ ಬರೆಯಲು ತೋಚುತ್ತಿಲ್ಲ. ವರ್ಣಿಸಿದರೆ ಸ್ತುತಿಯಾಗಬಹುದೆ೦ಬ ಹೆದರಿಕೆ. ಆದರೂ
" ಹಾಗಲ್ಲ ಸಿದ್ದರಾಮಯ್ಯ , ಇಲ್ಲಿ ನಾನೂ ನೀನೂ ಎಷ್ಟರವರು ಎನ್ನುವುದು ಪ್ರಶ್ನೆಯಲ್ಲ , ತುಂಬಿಸಿಕೊಳ್ಳುವ ಯೋಗ್ಯತೆ ಇರುವ ಪಾತ್ರಕ್ಕೆ ಮಾತ್ರ ಧಾರೆ ಎರೆಯಲು ಸಾಧ್ಯ? ಅಪಾತ್ರಕ್ಕೆ ನಾನೆಲ್ಲಿಂದ ತಂದು ಸುರಿಯಲಿ ? ನನ್ನ ಪಾತ್ರವೂ ನಿನ್ನಹಾಗೆಯೇ ; ಸದ್ಯಕ್ಕೆ ಸುರಿಯುವ ಪಾತ್ರದಲ್ಲಿದ್ದೇನೆ ಸುರಿಯುತ್ತೇನೆ . ಪಾತ್ರ ಬದಲಾದರೆ ನೀನೇ ಸುರಿಯಬೇಕಾಗಿ ಬರಬಹುದು ಯಾರು ಬಲ್ಲ ,,ಎಂದು ನಕ್ಕುಬಿಟ್ಟರು .<<
ಈ ಮೇಲಿನ ಸಾಲುಗಳು ಅದೆಷ್ಟು ಆಧ್ಯಾತ್ಮಿಕ ಚಿ೦ತನೆಯನ್ನು ಮೂಡಿಸುತ್ತವೆಯೆ೦ದರೆ, ದಿನವಿಡೀ ಕುಳಿತು ಚಿ೦ತೆ ಮಾಡಿಸಿದರೂ ಮುಗಿದು ಹೋಗದಷ್ಟು!
ಕಾದ೦ಬರಿ ಪ್ರಾಕಾರಕ್ಕೆ ಇದು ಒಗ್ಗುತ್ತದೆ. ತ.ರಾ.ಸು.ರವರು ಚಿತ್ರದುರ್ಗದ ಇತಿಹಾಸವನ್ನು ಬರೆಯಲಿಲ್ಲವೇ? ಐತಿಹಾಸಿಕ ಕಾದ೦ಬರಿ ಗಳು ವಿರಳವಾಗುತ್ತಿರುವ ಈ ಸ೦ದರ್ಭದಲ್ಲಿ ನಿಮ್ಮ “ಅನನ್ಯ ಅಲ್ಲಮ“ ವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ, ಒ೦ದು ಅನನ್ಯ ಸ೦ಗ್ರಾಹ್ಯ ಗ್ರ೦ಥವಾಗಿ ಹೊರಹೊಮ್ಮುವುದರಲ್ಲಿ ನನಗ೦ತೂ ಯಾವುದೇ ಸ೦ಶಯಗಳು ಕ೦ಡು ಬರುತ್ತಿಲ್ಲ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by csomsekraiah on

ಅತ್ಮೀಯರಾದ ರಾಘವೇಂದ್ರನಾವಡರು , ಕವಿನಾಗರಾಜರು ನಿಮ್ಮ ಪ್ರತಿಕ್ರಿಯೆಗಳನ್ನು ನೋಡಿದೆ , ನಿಮಗೆ ಈ ಲೇಖನಮಾಲೆ ಸಂತೋಷ ಕೊಟ್ಟಿದ್ದರೆ ಅದಕ್ಕೆ ಕಾರಣ ಇದರಲ್ಲಿರುವ ವಿಷಯಗಳ ಮೇಲಿನ ನಿಮ್ಮ ಅತೀವ ಆಸಕ್ತಿ ಮತ್ತು ಸಹೃದಯತೆ ಕಾರಣ . ಸಮಾನ ಮನಸ್ಕತೆ ಇಲ್ಲದೆ ಯಾವುದೂ ಇಷ್ಟವಾಗುವುದಿಲ್ಲ , ಸಂಪದದ ಮೂಲಕ ಈ ರೀತಿಯ ಸ್ನೇಹ ನನಗೆ ದೊರಕಿದುದಕ್ಕೆ ನನಗೆ ತುಂಬಾ ಸಂತೋಷವೆನಿಸಿದೆ . ಈಗ ನೀವು ನನಗೆ ಧನ್ಯವಾದಗಳನ್ನು ಹೇಳುವುದಕ್ಕಿಂತ ಹೆಚ್ಚಿನ ಆತ್ಮೀಯರು ಎಂದು ಮಾತ್ರ ಹೇಳಬಲ್ಲೆ