ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಝೆನ್ ಕಥೆ: ಝೆನ್ ಅಂದರೆ ಎಲ್ಲದಕ್ಕೂ ಅರ್ಥ ಹುಡುಕೋದಲ್ಲ!

January 14, 2007 - 5:15am — Shyam Kishore

     ಜಪಾನ್ ದೇಶದ ಪ್ರಸಿದ್ಧ ಝೆನ್ ಗುರುವೊಬ್ಬ ತನ್ನ ಆಶ್ರಮದಲ್ಲಿ ಆರಾಮವಾಗಿ ಕಾಲು ಚಾಚಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಅವನ ಪಕ್ಕದಲ್ಲಿಯೇ ಶಿಷ್ಯನೊಬ್ಬ ಝೆನ್ ಗ್ರಂಥವೊಂದನ್ನು ಓದುತ್ತ ಕುಳಿತಿದ್ದ. ಮಧ್ಯಾಹ್ನ ಬಿಸಿಲಿನ ಸಮಯ. ಗುರುವಿಗೆ ಏನಾದರೂ ಹಣ್ಣನ್ನು ತಿನ್ನಬೇಕೆಂದು ಅನ್ನಿಸಿ ತನ್ನ ಕೈಚೀಲದಿಂದ ಮೂಸಂಬಿಯೊಂದನ್ನು ಹೊರತೆಗೆದ. ಒಬ್ಬನೇ ತಿನ್ನುವುದು ಸರಿಯಲ್ಲವೆನಿಸಿ, ಪಕ್ಕದಲ್ಲಿಯೇ ಇದ್ದ ಶಿಷ್ಯನಿಗೂ ಕೊಡುವುದಕ್ಕೆಂದು ಹಣ್ಣನ್ನು ಎರಡು ಭಾಗ ಮಾಡಿ, ಶಿಷ್ಯನಿಗೆ ಒಂದನ್ನು ಕೊಟ್ಟು ತನ್ನ ಭಾಗದ ಮೂಸಂಬಿಯನ್ನು ತಿನ್ನಲು ಪ್ರಾರಂಭಿಸಿದ.

     "ಗುರುಗಳೇ, ನೀವು ಮಾಡುವ ಪ್ರತಿ ಕ್ರಿಯೆಗೂ ಅರ್ಥವಿದ್ದೇ ಇರುತ್ತದೆ. ಹಾಗಿದ್ದ ಮೇಲೆ, ಈ ಮೂಸಂಬಿಯನ್ನು ಇಬ್ಭಾಗ ಮಾಡಿ ಹಂಚಿಕೊಳ್ಳುವುದರ ಮೂಲಕ ನನಗೇನಾದರೂ ಹೊಸ ಸಂದೇಶ ಕೊಡುತ್ತಿದ್ದೀರಾ?" ಕೇಳಿದ ಶಿಷ್ಯ. ಗುರು ಏನೂ ಉತ್ತರ ಹೇಳದೆ ಸುಮ್ಮನೆ ತನ್ನ ಪಾಡಿಗೆ ತಾನು ಮೂಸಂಬಿ ತಿನ್ನುವುದರಲ್ಲಿ ತಲ್ಲೀನನಾಗಿದ್ದ.
     "ನೀವು ಮೌನವಾಗಿದ್ದೀರಿ ಅಂದರೆ ಏನನ್ನೋ ಆಳವಾಗಿ ಚಿಂತಿಸುತ್ತಿದ್ದೀರಿ ಅಂತನ್ನಿಸುತ್ತೆ" ಮುಂದುವರೆದ ಶಿಷ್ಯ ಹೇಳಿದ "ಓಹೋ, ಹೀಗಿರಬೇಕು: ಮೂಸಂಬಿ ತಿಂದಾಗ ಸಿಗುವ ಆನಂದ ಹಣ್ಣಿನಲ್ಲಿದೆಯೋ ಅಥವಾ ಅದನ್ನು ಅನುಭವಿಸುವ ನಾಲಗೆಯಲ್ಲಿದೆಯೋ ಎಂಬ ವಿಷಯದ ಬಗ್ಗೆ ನೀವು ಗಾಢವಾಗಿ ಆಲೋಚಿಸುತ್ತಿರಬೇಕು, ಅಲ್ಲವ್?". ಗುರು ಈಗಲೂ ಏನೂ ಮಾತಾಡಲಿಲ್ಲ.
     ಇದರಿಂದ ಉತ್ತೇಜಿತನಾದ ಶಿಷ್ಯ ಮುಂದುವರೆದ; "ನಿಜ ಗುರುಗಳೆ, ಜೀವನದಲ್ಲಿ ಪ್ರತಿ ಕ್ರಿಯೆಗೂ ಅರ್ಥವಿದ್ದೇ ಇರುತ್ತದೆ. ನನಗೆ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ! ತಪ್ಪಿದ್ದಲ್ಲಿ ತಿದ್ದಿ. ಹಣ್ಣನ್ನು ತಿಂದಾಗ ಸಿಗುವ ಆನಂದ ಬರಿಯ ಹಣ್ಣಿನಲ್ಲೂ ಇಲ್ಲ ಅಥವ ಬರಿಯ ನಾಲಗೆಯಲ್ಲೂ ಇಲ್ಲ. ಅದು ತಿನ್ನಲ್ಪಡುವ ವಸ್ತು ಮತ್ತು ಅದನ್ನು ಅನುಭ....". ಶಿಷ್ಯನ ಮಾತನ್ನು ಅರ್ಧಕ್ಕೇ ತಡೆದ ಗುರು ಹೇಳಿದ "ಸಾಕು ಮಾಡು ನಿನ್ನ ಹುಚ್ಚು ವಿಚಾರಗಳನ್ನು! ನಾನು ಬಿಸಿಲಿನಲ್ಲಿ ತಂಪಾಗಿರುತ್ತೆ ಅಂತ ಮೂಸಂಬಿಯೊಂದನ್ನು ತಿನ್ನಲು ಹೊರಟೆ. ಪಕ್ಕದಲ್ಲೇ ಇದ್ದೆಯಲ್ಲ ಅಂತ ನಿನಗೂ ಅರ್ಧ ಕೊಟ್ಟೆ, ಅಷ್ಟೆ. ನಿನಗೆ ಬೇಕಿದ್ದಲ್ಲಿ ಮೂಸಂಬಿಯನ್ನು ತಿಂದು ಆನಂದ ಅನುಭವಿಸು. ಮೂಸಂಬಿ ತಿನ್ನುವಾಗ ಸಿಗುವ ಆನಂದದ ಬಗ್ಗೆ ಕೂಡ ಯೋಚಿಸುತ್ತ ಆ ಆನಂದವನ್ನು ಕಳೆದುಕೊಳ್ಳಬೇಡ. ಝೆನ್ ಎಂದರೆ ಬದುಕಿನಲ್ಲಿ ಎಲ್ಲದಕ್ಕೂ ಅರ್ಥ ಹುಡುಕುವುದಲ್ಲ; ಬದಲಾಗಿ ಬದುಕಿನಲ್ಲಿ ಪ್ರತಿ ಕ್ರಿಯೆಯಲ್ಲೂ ಆನಂದವನ್ನು ಅನುಭವಿಸುವುದು".

  • ಝೆನ್ ಕಥೆಗಳು (ಕಥಾ ಮಾಲಿಕೆ)
~.~
  • Login or register to post comments
  • 766 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 14, 2007 - 11:31am — Sunil Jayaprakash

ಪಂಚಕೋಶ ವಿದ್ಯಾ

Sunil Jayaprakash's picture

Shyam Kishore wrote:
ಝೆನ್ ಎಂದರೆ ಬದುಕಿನಲ್ಲಿ ಎಲ್ಲದಕ್ಕೂ ಅರ್ಥ ಹುಡುಕುವುದಲ್ಲ; ಬದಲಾಗಿ ಬದುಕಿನಲ್ಲಿ ಪ್ರತಿ ಕ್ರಿಯೆಯಲ್ಲೂ ಆನಂದವನ್ನು ಅನುಭವಿಸುವುದು".

ಶ್ಯಾಮ್ ಕಿಶೋರ್‌(ಅವರೇಕಾಳು ಬೇಯಿಸುವುದು ಬೇಡ ಅಂತ ಈ ಸಂಬೋಧನೆ Eye-wink ),
ಈ ಕಥೆಯು ಚಿಕ್ಕದೂ ಸರಳವೂ, ಹಾಗೆಯೇ ಹಿತವೂ ಆಗಿದೆ. ಈ ಮೇಲಿನ ನುಡಿ, ಚರ್ಚಿಸಲು ಅನೇಕ ವಿಷಯಗಳು ದೊರಕಿಸಿಕೊಟ್ಟವು.

"ಪಂಚಕೋಶ ವಿದ್ಯಾ" - ಇದು ನಮಗೆ First PUC ಸಂಸ್ಕೃತದಲ್ಲಿದ್ದ ಮೊದಲ ಪಾಠ. ನಮಗೆ ಕಲಿಯಲು ಸಿಕ್ಕ ಎಷ್ಟೋ ಒಳ್ಳೆಯ ಪಾಠಗಳಲ್ಲಿ ಇದು ಅತ್ಯಂತ ಪ್ರಮುಖವಾದುದು ಎಂದು ನನಗೆ ಅನಿಸುವುದು. ಯಾವುದೋ ಉಪನಿಷತ್ತಿನ ಕುರಿತಾದ ಮಾತುಗಳಿದ್ದವು.

"ಭೃಗುರ್ವೈ ವಾರುಣಿಃ | ವರುಣಂ ಪಿತರಂ ಉಪಸಸಾರ | ಅಧೀಹಿ ಭಗವೋ ಬ್ರಹ್ಮೇತಿ | ತಸ್ಮಾ ಏತತ್ ಪ್ರೋವಾಗ | ತಪಸಾ ಬ್ರಹ್ಮ ವಿಜಿಜ್ಞಾಸಸ್ವ | ತಪೋ ಬ್ರಹ್ಮೇತಿ ||

ಸತಪೋತಪ್ಯತ | ಸತಪಸ್‌ತಪ್ತ್ವಾ...ಅನ್ನಂ ಬ್ರಹ್ಮ.............| ಪ್ರಾಣಂ ಬ್ರಹ್ಮ.........| ಮನೋಬ್ರಹ್ಮ..............| ವಿಜ್ಞಾನಂ ಬ್ರಹ್ಮ........| "

ಇದಾವುದೂ ಸರಿಹೊಂದದೆ, ಕೊನೆಯಲ್ಲಿ

ಆನಂದಂ ಬ್ರಹ್ಮೇತಿ ವ್ಯಜಾನಾತ್ | ಆನಂದಾದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೆ | ಆನಂದಾದ್ಯೇವ ಜಾತಾನಿ ಜೀವಂತಿ | ಆನಂದಂ ಪ್ರಯಂತ್ಯಭಿಸಂವಿಷಂತೀತಿ |.......

ಇಲ್ಲಿ, ಬರುವ ಪ್ರಮುಖ ಅಂಶವೆಂದರೆ, ಬ್ರಹ್ಮ ಎಂದರೇನು ತಿಳಿಯಬೇಕು ಎಂಬುದಾಗಿ ತೀವ್ರ ಕುತೂಹಲದಲ್ಲಿದ್ದ ಒಬ್ಬ ಶಿಷ್ಯನಿಗೆ ಆನಂದವೇ ಬ್ರಹ್ಮನೆಂಬ ಉತ್ತರ ಸಿಗುತ್ತದೆ.

ಅಂದರೆ ಉಪನಿಷತ್ತಿನ ಪ್ರಕಾರ, "ಆನಂದದಿಂದಲೇ ನಾವೆಲ್ಲರೂ ಹುಟ್ಟುವುದು, ಆನಂದದಿಂದಾಗಿಯೇ(ಆನಂದಕ್ಕೋಸ್ಕರವೇ) ಬದುಕುವುದು, ಕೊನೆಯಲ್ಲಿ ಆನಂದದಲ್ಲಿಯೇ ಲೀನವಾಗುವೆವು. ಇದುವೇ ಬ್ರಹ್ಮ". ಇದರ ಅರ್ಥ ಇನ್ನೂ ಸಂಕೀರ್ಣವಾಗಿರಬಹುದು, ಆದರೆ ಇದನ್ನು ಸರಳವಾಗಿ ಈ ರೀತಿ ನನ್ನ ಮನಸ್ಸಿಗೆ ತಿಳಿಸಿಕೊಟ್ಟಿದ್ದೇನೆ.

ಇಷ್ಟು ಸರಳವಾಗಿರುವ ವಾಕ್ಯವನ್ನು ಪುರಾಣ ಪುಣ್ಯ ಕಥೆಗಳು ರಬ್ಬರ್ ನಂತೆ ಎಳೆಯುತ್ತವೆ ಎಂಬುದು ನನ್ನ ಅನುಮಾನ . ಈ ಆನಂದವೇ ಬ್ರಹ್ಮ ಎಂಬುದರಲ್ಲಿ ಬರುವ ಬ್ರಹ್ಮನನ್ನು ಪುರಾಣ ಪುಣ್ಯಕಥೆಗಳು ಪೂಜೆಯನ್ನು ಬೇಡುವ ದೇವರಾಗಿ ಸಮೀಕರಿಸುತ್ತವೆ. ಆದರೆ ಈ ದೇವರು ಎಂಬುದು ಮುಖ್ಯವಾಗಿ ಭಕ್ತಿಮಾರ್ಗದಲ್ಲಿ ಮುನ್ನಡೆಸುವ ಸಾಧನಗಳು. ಆದರೆ ದೇವೆರೆಂಬುದು Eternal Truth ಆಗಲು ಸಾಧ್ಯವೇ?. ಉದಾ - ರಾವಣನಿಗೆ ಹತ್ತುತಲೆಗಳಿದ್ದವು, ದೇವತೆಗಳಿಗೆ ನಾಲ್ಕು ಕೈಗಳಿರುತ್ತವೆ, ವಿಷ್ಣುವಿನ ದಶಾವತಾರಗಳು ಹೀಗೆ.

ದೇವರೆಂಬ ಕಲ್ಪನೆಯು ಕಾಲಕಾಲಕ್ಕೆ ಬದಲಾಗುತ್ತದೆ ? ಉದಾ -
೧. ಬೌದ್ಧ ವಿಗ್ರಹವು ವೆಂಕಟೇಶನಾಗಿ ಪೂಜೆಗೈಯಲ್ಪಡುವುದು.
೨. ಶಿವನನ್ನು ಪೂಜಿಸುತ್ತಿದ್ದ ಒಂದು ಸಮುದಾಯ ಬಸವಣ್ಣನವರಿಗೇ ತಲೆಬಾಗಬಹುದು. ಬಸವಣ್ಣರಿಗೇ ದೇವರ ಸ್ಥಾನ ನೀಡಿ, ಬಸವಣ್ಣನವರನ್ನು ಪೂಜೆಗೈದರೆ ಶಿವನನ್ನು ಪೂಜಿಸದಂತೆಯೇ ಎಂಬಂತಹ ಮಾತುಗಳೂ ಕೆಲವೆಡೆ ಕೇಳಿಬರುತ್ತವೆ.

ದೇವರು, ಪೂಜೆ ಇವುಗಳು ಮುಖ್ಯವಾಗಿ ಜನರಲ್ಲಿ ಭಕ್ತಿಯನ್ನು ಸ್ಫುರಿಸುವ Economical means ?. Eternal Truth ಅಥವಾ ಸರ್ವಕಾಲಿಕ ಸತ್ಯಗಳೆಂದರೆ ಆನಂದವೇ ಬ್ರಹ್ಮ ಎನ್ನುವಂತಹ conceptsಗಳು ?

ಈ ಆನಂದವೇ ಬ್ರಹ್ಮ ಎನ್ನುವಂತಹ conceptsಗಳು ಅನೇಕ ಒಳ್ಳೆಯ ಚರ್ಚೆಯೆಡೆಗೆ ಕರೆದೊಯ್ಯುತ್ತವೆ.

೧. ಬ್ರಹ್ಮ ಎಂಬುದನ್ನು ದೇವರಾಗಿ ಸಮೀಕರಿಸು ಸಾಧ್ಯವೇ ? ಇದರ ಕುರಿತು ಬೇರೆ ಎಳೆಯಲ್ಲಿ ಹಾಕಲಿದ್ದೇನೆ.
೨. ದೇವರು ಎಂಬುವುದು ಸರ್ವಕಾಲಿಕ ಸತ್ಯವಾಗುತ್ತದೆಯೇ ?
೩. ಪೂಜೆಗಳಲ್ಲಿ (ಎಲ್ಲ ರೀತಿಯ ಪೂಜೆ, ಕೇವಲ ಒಂದು ಧರ್ಮದ ಅಥವಾ ಆಗಮ ಪದ್ಧತಿಯ ಪೂಜೆಯಷ್ಟೇ ಅಲ್ಲ), ನಾವು ಹೆಚ್ಚು ಪ್ರಾಮುಖ್ಯವನ್ನು ದೇವರಿಗೆ ನೀಡುತ್ತೇವೆಯೋ ಅಥವಾ ಭಕ್ತಿಗೆ(Materialistic ತನ್ಮಯತೆ) ನೀಡುತ್ತೇವೆಯೋ?
೪. ಭಕ್ತಿ ಮತ್ತು ದೇವರಲ್ಲಿ ಸರ್ವಕಾಲಿಕವಾದುದು ಯಾವುದು ?
೫. ಈಗ ಹಿಂದುವೊಬ್ಬ, ಕ್ರಿಶ್ಚಿಯನ್ ಅಥವಾ ಬೌದ್ಧ ಮತಕ್ಕೆ ಮತಾಂತರ ಹೊಂದಿದನೆನ್ನಿ. ಆಗ ಅವನು(ಅವನು ಎಂಬುದನ್ನು ಪುಲ್ಲಿಂಗವೆಂದು ತಿಳಿಯಬೇಡಿ Eye-wink ) ನಂಬುವ ದೇವರು ಬದಲಾಗುತ್ತದೆ, ಆದರೆ ಭಕ್ತಿಯ ಸ್ವರೂಪ ಬದಲಾಗುತ್ತದೆಯೇ ?
೬. ಯಾರು ಯಾವ ಪೂಜೆಗೈದರೂ, ಅಥವಾ ನಾಸ್ತಿಕರಾಗಿಯೇ ಉಳಿದರೂ ಉಪನಿಷತ್ತಿನಲ್ಲಿ ಬರುವ ಆನಂದವೇ ಬ್ರಹ್ಮ ಎಂಬಂತಹ ವಾಕ್ಯಗಳು ಸುಳ್ಳಾಗುತ್ತದೆಯೇ ?

ನೀವುಗಳೇನೆನ್ನುತ್ತೀರಿ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 3:54am — Shyam Kishore

ಉ: ಪಂಚಕೋಶ ವಿದ್ಯಾ

Shyam Kishore's picture

ಸುನಿಲ್,

     ನಿಮ್ಮ ಪ್ರತಿಕ್ರಿಯೆ ಮತ್ತು ಅದರಲ್ಲಿನ ವಿಚಾರಗಳು ಸರಳವಾಗಿ ಮತ್ತು ಸೊಗಸಾಗಿ ಮೂಡಿಬಂದಿವೆ. "ಪಂಚಕೋಶ ವಿದ್ಯಾ"ವನ್ನು ನೆನಪಿಸಿದ್ದಕ್ಕೆ ನಿಮಗೊಂದು ಸವಿಯೊದಗು. ಅಂದಹಾಗೆ ನಾನೂ "ಅವರೇಕಾಳು ಹಿಚುಕೋದನ್ನು" ಬಿಟ್ಟಿದ್ದೀನಿ! ಸ್ವಲ್ಪ "ಬಿಜಿ" ಇದ್ದಿದ್ದರಿಂದ ಉತ್ತರಿಸಲು ತಡವಾಯಿತು. ನಿಮ್ಮ ಪ್ರತಿಕ್ರಿಯೆಯಲ್ಲಿರುವ ವಿಚಾರಗಳ ಬಗ್ಗೆ ನನಗೆ ಹೊಳೆದಂತೆ, ತಿಳಿದಂತೆ, ಯಾವಾಗಲಾದರೂ ಲಹರಿ ಬಂದಂತೆಲ್ಲ ಬರೆಯೋಣ ಅಂದುಕೊಂಡಿದ್ದೀನಿ.

     ಪ್ರತಿಕ್ರಿಯೆಯನ್ನು ಓದಿದಾಗ ಈ ವಿಷಯಗಳ - ಜೀವನದಲ್ಲಿ ಆಧ್ಯಾತ್ಮಿಕತೆ, ದೇವರು, ಅನುಭಾವ, ಪೂಜೆ-ಪುನಸ್ಕಾರ, ನಂಬಿಕೆ, ಆನಂದ ಇತ್ಯಾದಿ ವಿಷಯಗಳ - ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸುವ, ಒಂದು ಸಂವಾದ ಪ್ರಾರಂಭವಾದರೆ ಎಷ್ಟು ಚೆನ್ನ ಅಂತನ್ನಿಸಿತು. ನಮಗಿರುವ ಅಲ್ಪ ಸ್ವಲ್ಪ ತಿಳಿವನ್ನು ಹಂಚಿಕೊಂಡು, ಹೆಚ್ಚಿಸಿಕೊಂಡು ಸಂತಸಪಡಬಹುದು ಅಲ್ಲವೇ? ನೀವುಗಳೇನನ್ನುತ್ತೀರಿ?

     ಅಂದಹಾಗೆ ಈ ರೀತಿಯ (ಅಧ್ಯಾತ್ಮಿಕ) ವಿಚಾರಗಳ ಬಗ್ಗೆ ಸುಮಾರು ಒಂದೂವರೆ ವರ್ಷಗಳಿಂದ (ಅಥವಾ ಇನ್ನೂ ಮುಂಚಿನಿಂದ?) "ತರಂಗ"ದಲ್ಲಿ "ಸಂಧ್ಯಾ.ಎಸ್.ಪೈ"ರವರು ತಮ್ಮ ಸಂಪಾದಕೀಯದಲ್ಲಿ ಬಹಳ ಸೊಗಸಾಗಿ, ಸರಳವಾಗಿ (ಕೆಲವೊಮ್ಮೆ ಸುಂದರ ಕತೆಗಳ ಮೂಲಕ) ಬರೆಯುತ್ತಿದ್ದಾರೆ. ಕೆಲವೊಂದು ಲೇಖನಗಳಂತೂ ಮನಸ್ಸನ್ನು ಸ್ವಲ್ಪ ಕಾಲ ಕಟ್ಟಿ ನಿಲ್ಲಿಸಿಬಿಡುತ್ತೆ ಅಲ್ಲವೇ?

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೋಧನೆಯ ವರಸೆ - ಮತ್ತು ಇತರ ಕಥೆಗಳು
  • ಝೆನ್ ಕಥೆ ೩೩: ಸಾವಧಾನ!
  • ಝೆನ್: ೩: ಒಂದು ಹನಿ
  • ಝೆನ್ ಕಥೆ ೩೪: ಜ್ಞಾನೋದಯ
  • ಝೆನ್ ಕಥೆ ೩೫: ನಾನು ಯಾರೋ!
Syndicate content

ಲೇಖಕರು

Shyam Kishore's picture

ಪರಿಚಯ

ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಿಡುಗಡೆಯ ನಂತರದ ಬೇಡಿಗಳು (೩)
  • ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!
  • ಬಿಡುಗಡೆಯ ನಂತರದ ಬೇಡಿಗಳು (೨)
  • ‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!
  • ಫೈರ್ಫಾಕ್ಸಿನಲ್ಲಿ ಉದಯವಾಣಿಯನ್ನು ಓದುವ ಬಗ್ಗೆ
  • (Liberty Bell) ಸ್ವಾತಂತ್ರ್ಯದ ಕುರುಹಾದ ಘಂಟೆ !
  • ಬಿಡುಗಡೆಯ ನಂತರದ ಬೇಡಿಗಳು (೧)

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 52 ಅತಿಥಿಗಳು ಆನ್ಲೈನ್ ಇರುವರು.


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator