ಯಾವನ್ಯಾಯ
ಕಲಿಯುಗದ ಕುಬೇರ(ವೆಂಕಟೇಶ್ವರ) ಹಿಂದುವಾಗಿದ್ದು
ಅಲಮೇಲುಮಂಗಿ ಮುಸ್ಲೀಂಹುಡುಗಿಯನ್ನು ವಿವಾಹವಾಗಿದ್ದರೂ
ಅವನಿಗೆ ತಪ್ಪದ ತುಪ್ಪದ ದೀವಿಗೆ ಪೂಜೆ
ಅಲಮೇಲಮ್ಮನ ಮಗಳು ಅನಿತಾಳನ್ನು ಮದುವೆಯಾಗಲು
ಎಲ್ಲಿಲ್ಲದ ಗೊಡವೆ ಕಲಿಯುಗ ಇದುವೆ
ನಮ್ಮ ಪೂರ್ವಿಕರಾದ ಸಂತನು(ಮಹಾಭಾರತದ ಮೊಲಪುರುಷ)
ಕ್ಷತ್ರಿಯನಾಗಿದ್ದೂ ಮತ್ಸಗಂಧಿಯನ್ನು ವರಿಸಿದ
ಕೃಷ್ಣ ಯಾದವನಾದರೂ ಕ್ಷತ್ರಿಯ ಕನ್ಯೆ ರುಕ್ಮಿಣಿಯನ್ನ ವರಿಸಿದ
ಭೀಮ ಕ್ಷತ್ರಿಯನಾಗಿದ್ದೂ ರಾಕ್ಷಸ ಕನ್ಯೆ ಹಿಡಂಬಿಯನ್ನು ವರಿಸಿದ
ಅರ್ಜುನಕೂಡ ಯಾದವ ಕನ್ಯೆ ಸುಬದ್ರೆಯನ್ನು ವರಿಸಿದ
ಶಿವ ಶೈವನಾದರೂ ಕ್ಷತ್ರಿಯಕನ್ಯೆ ದಾಕ್ಷಾಯಣಿಯನ್ನು ವರಿಸಿದ
ಎಂದಮೇಲೆ ದೇವಾನು ದೇವತೆಗಳಿಗಿಲ್ಲದ ನ್ಯಾಯ-ನೀತಿ
ಸಾಮಾನ್ಯರಾದ ನಮಗೇಕೆ ಎನಿಸುವುದಿಲ್ಲವೆ ?
-ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ

- Login or register to post comments
- 499 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಯಾವನ್ಯಾಯ
ಕೃಷ್ಣಮೂರ್ತಿಗಳೇ,
ಕವನಗಳಲ್ಲಿ ತಮ್ಮ ಆಸಕ್ತಿ ಪ್ರಶಂಸನೀಯ; ತಮ್ಮ ಈ ಕವನ ಉತ್ತಮ ಪ್ರಯತ್ನ.
ಆದರೆ, ಕೆಲವು ತಪ್ಪು/ಸಂದೇಹಗಳು ನುಸುಳಿಕೊಂಡು ಬಿಟ್ಟಿವೆ:
೧.ಅಲಮೇಲುಮಂಗೀ ಯಾರು? ನಾನು ತಿಳಿದಂತೆ ಈ ಹೆಸರು ತಮಿಳಿನ 'ಅಲರ್ಮೇಲ್ ಮಂಗೈ'[ಕಮಲದಮೇಲಿನ ದೇವಿ = ಪದ್ಮಾವತಿ] ಎಂಬುದರ ಅಪಭ್ರಂಶ. ಇವರಲ್ಲಿ ಮುಸ್ಲಿಂ ಯಾರು? ಆಧಾರವಿದೆಯೇ?
೨.ಮಹಾಭಾರತದ ಮೂಲಪುರುಷ ಭರತ. ಅವನ ಉತ್ತರಾಧಿಕಾರಿ ಪ್ರತೀಪ; ಅವನ ಮಗ ಶಂತನು(ಸಂತನೂ, ಸಂತನುವೂ ಅಲ್ಲ!)
೩.ಶ್ರೀಕೃಷ್ಣ ಯಾದವನಾದರೂ ಕ್ಷತ್ರಿಯನೇ. ವೃಷ್ಣಿವಂಶದ ಪೂರ್ವಿಕನಾದ ಯದು ಮಹಾರಾಜನ ತಂದೆ ಯಯಾತಿ ಕ್ಷತ್ರಿಯ. ಆದ್ದರಿಂದ ಸುಭದ್ರೆಯೂ ಕ್ಷತ್ರಿಯಳೇ.
೪.ದಕ್ಷಬ್ರಹ್ಮ ಬ್ರಾಹ್ಮಣನಾದ್ದರಿಂದ, ದಾಕ್ಷಾಯಿಣೀದೇವಿ ಬ್ರಾಹ್ಮಣಳೇ.
ಏನೆನ್ನುವಿರಿ?
ದೇವಾನುದೇವತೆಗಳಿಗೆ ಕಟ್ಟಳೆ ವಿಧಿಸಿದವರು ನಾವೇ - ಮಾನವರು. ದೈವಕಥೆಗಳ ಹಿಂದಿನ ಅರ್ಥ ತಿಳಿಯದೆ, ಅವರನ್ನೂ ನಮ್ಮಂತೆ ಹೆಂಡತಿ-ಮಕ್ಕಳು-ಅತ್ತೆ-ಸೊಸೆ-ಸಾಲ-ಶೂಲಗಳ ಜಂಜಾಟಕ್ಕೆ ಸಿಕ್ಕಿಸಿದವರೂ ನಾವೇ - ಮನುಜರು! ಆದ್ದರಿಂದ ದೇವರು-ಪುರಾಣದ ಉದಾಹರಣೆಗಳನ್ನು ಯುಗಧರ್ಮಕ್ಕೆ ಬಿಟ್ಟುಬಿಡಿ ಸ್ವಾಮೀ! ಕಲಿಯುಗಧರ್ಮವೇ ಬೇರೆ! ಬೇಗ ಅಲಮೇಲಮ್ಮನ ಮಗಳು ಅನಿತಾ ಕವಿಗೆ ಸಿಗಲೆಂದು ಹಾರೈಸುವ
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
Re: ಯಾವನ್ಯಾಯ
ಬೆನಕರೆ ನಾನು ಓದಿರುವ ರಂ ಶಿ ಮುಗಳಿಯವರ "ಯಾರೂಕಾಯಲಿಲ್ಲ " ಹೃದಯಸಂವಾದ" ಕನ್ನಡವಿಮರ್ಶಾ ಪುಸ್ತಕಗಳ ಆಧಾರ ಈ ಗ್ರಂಥಗಳು ೧೯೯೨-೯೩ರ ಪದವಿ ತರಗತಿಯ ಕನ್ನಡ ಐಚ್ಚಿಕ್ಕ ಪಠ್ಯ ವಾಗಿತ್ತು ಅದನ್ನೇ ನಾನು ಇಲ್ಲಿ ಬರೆದಿರುವೆ ತಪ್ಪಿದ್ದರೆ ಕ್ಷಮಿಸಿ.ನಾನು ವಿದ್ಯಾರ್ಥಿಯಾಗಿದ್ದಾಗ ಈ ವಿಷಯ ಓದಿದ್ದೆ.ನಿಮ್ಮ ವಿಷಯ ಸರಿ ಇರಬಹುದು ಮುಂದೆ ಬರೆಯುವಾಗ ಆಧಾರಗ್ರಂಥ ಸೂಚಿಸುತ್ತೇನೆ.