ಕಾಡುತ್ತಿರುವ ಒ೦ದು ವಚನ
ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ-
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ-
ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ-
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ.
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.
ಈ ಸು೦ದರವಾದ ವಚನದ ಕವಿ ನೀಲಾಂಬಿಕೆ. ನೀಲಾಂಬಿಕೆ ಸಾವಿರಾರು ವಚನಗಳನ್ನು ಬರೆದಂತೆ ಕಾಣುವುದಿಲ್ಲ. ಅಥವಾ ಬರೆದಿರುವುದೂ ತು೦ಬಾ ಜನಪ್ರಿಯವಾದ೦ತೆ ಕಾಣುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ನನಗೆ ತು೦ಬಾ ಕುತೂಹಲ ಕೆರಳಿಸಿದ್ದು ಈ ಪದ್ಯದೊಳಗೆ ನೇತ್ಯಾತ್ಮಕ ಅಂದರೆ ನೆಗೆಟಿವ್ ಅನ್ನಿಸಬಹುದಾದ ಭಾವಗಳ ಮೂಲಕ ಮತ್ತೊ೦ದು ನೆಲೆಗೆ ಜಿಗಿಯುವ ಶಕ್ತಿ ಕಾಣುವುದರಿ೦ದ. ಹೊಸ ನೆಲೆಗೆ ಜಿಗಿದಾಗಿಯೂ ಬಿಟ್ಟ ನೇತ್ಯಾತ್ಮಕ ನೆಲೆ ತನ್ನ ಅರ್ಥವನ್ನು ಬಿಟ್ಟುಕೊಡದೆ ನಮ್ಮ ಜತೆ ಆಟವಾಡುತ್ತಲೇ ಇರುವ ಗುಣವಿರುವುದರಿ೦ದ.
ಕಲ್ಯಾಣದಲ್ಲಿ ಕ್ರಾ೦ತಿ ಘಟಿಸಿದ ನ೦ತರ ವಚನಕಾರರೆಲ್ಲಾ ಚೆಲ್ಲಾಪಿಲ್ಲಿಯಾಗಿ ಮೂರಾಬಟ್ಟೆ ಹಿಡಿದುಹೋದ ಮೇಲೆ ಅವರುಗಳು ಬರೆದಿರಬಹುದಾದ ವಚನಗಳಿಗಾಗಿ ತಡಕಾಡುತ್ತಿದ್ದೆ. ಕ್ರಾ೦ತಿಯ ಸಮಯದ ಹಿಂಸಾಚಾರ, ದ್ರೋಹ, ಕೊಲೆ ಇವುಗಳ ಅನುಭವ ಸಾ೦ದ್ರತೆ, ನಿರಾಶೆ ಅವರ ವಚನಗಳಲ್ಲಿ ಯಾವ ಧ್ವನಿ ಪಡೆಯುತ್ತದೆ ಎ೦ದು ನನ್ನ ಕುತೂಹಲ. ಆಗ ಕಣ್ಣಿಗೆ ಬಿದ್ದ ವಚನವಿದು. ನನ್ನ ಹುಡುಕಾಟಕ್ಕೆ ಇದು ಪೂರಕವಾಗಿಲ್ಲವಾದರೂ, ನನ್ನನ್ನು ಈ ವಚನ ಬೇರೆಯೇ ಕಾರಣಕ್ಕೆ ಹಿಡಿದು ನಿಲ್ಲಿಸಿತು. ಇದನ್ನು ಮತ್ತೆ ಮತ್ತೆ ಓದಿದ ಹಾಗೆ ಹೊಸ ಹೊಸ ಅರ್ಥಗಳು, ನಿಗೂಢ ವಿಚಾರಗಳು ಸ್ಪುರಿಸುತ್ತಾ ಹೋಯಿತು.
ಈ ವಚನದ ಕವಿಯ ಮತ್ತೊ೦ದು ಮುಖ್ಯ ಹಿನ್ನೆಲೆ ಆಕೆ ಬಸವಣ್ಣನ ಹೆ೦ಡತಿಯೆನ್ನುವುದು. ಕಲ್ಯಾಣದ ಅನುಭವ ಮಂಟಪದಲ್ಲಿ ಬಸವಣ್ಣನಿಗೆ ಅಗ್ರಮಾನ್ಯ ಸ್ಥಾನ ಅನ್ನುವುದು ಎಲ್ಲರಿಗೂ ಗೊತ್ತಿರುವ ಮಾತು. ಆದರೆ ಆತನ ಹೆ೦ಡತಿ ಇಷ್ಟೊಂದು ಪರಿಣಾಮಕಾರಿ ಕವಿಯೆನ್ನುವುದು ಗೊತ್ತಿರಲಿಲ್ಲ. ಅವಳ ಕವಿತ್ವವನ್ನು ವಚನದ ಮೂಲಕ ಹೀಗೆ ಎದುರುಗೊ೦ಡಿರಲಿಲ್ಲ. ಮೊದಲ ಮೂರು ಸಾಲುಗಳು ಒ೦ದೇ ರೀತಿಯ ಭಾವವನ್ನು ತೆರೆದಿಡುವ ಮೂರು ಚಿತ್ರಗಳು.
ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ-
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ-
ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ-
ಕಾಮನ್ ಸೆನ್ಸ್ ಅನ್ನಿಸಬಹುದಾದ೦ಥ ವಿಚಾರಗಳು. ಆದರೆ ಕವಿ ಅದರತ್ತ ನಮ್ಮ ಗಮನವನ್ನು ಸೆಳೆಯುವುದೇಕೆ? ಆ ಚಿತ್ರಗಳು ಒ೦ದು ಸಾಮಾನ್ಯ ನೆಲೆಯಿ೦ದ ಮತ್ತೊ೦ದು ಗಹನವಾದ ನೆಲೆಗೆ ಜಿಗಿಯಲು ಮಾಡುತ್ತಿರುವ ತಯಾರಿ ಅನಿಸುತ್ತದೆ. ಇಲ್ಲಿ ಆ ತಯಾರಿ ಕಾಣುವುದು ಅರಸದೇ ಇರುವ ಸ್ಥಿತಿಯಲ್ಲಿ. ಎಲೆ ಉದುರಿಹೋದ ಮರದಿ೦ದ ನೆರಳನ್ನು ಯಾರು ತಾನೆ ಅಪೇಕ್ಷಿಸುತ್ತಾರೆ? ಹಾಗೆ ಕುಗ್ಗಿದ ದೀಪಕ್ಕೆ ಬೆಳಕು ನೀಡುವ ಶಕ್ತಿಯಿರುವುದಿಲ್ಲ ಅದನ್ನು ತಾನು ಅರಸಲೂ ಇಲ್ಲ, ಸವೆದು ಹೋದ ವಿಗ್ರಹದಲ್ಲಿ ರೂಪ ಅರಸುವುದು ಕಷ್ಟ ತಾನು ಅರಸಲೂ ಇಲ್ಲ ಎ೦ದು ಕವಿ ಮೊದಲಿಗೆ ಹೇಳಿಬಿಡುತ್ತಾರೆ. ಈ ಮೂರೂ ಚಿತ್ರಗಳನ್ನು ನಮ್ಮ ಮು೦ದಿಡುವಾಗ ನೆರಳು, ಬೆಳಕು ಹಾಗು ರೂಪದ ಆಕಾಂಕ್ಷೆಯತ್ತ ಕವಿ ನಮ್ಮ ಗಮನ ಸೆಳೆಯುತ್ತಲೇ ಅದು ನಿಷ್ಪಲವಾದುದು ಎ೦ದೂ ಸೂಚಿಸುತ್ತಿರುವುದು ಗಮನಿಸಬೇಕಾದ ಅ೦ಶ.
ಈ ಮೂರೂ ಚಿತ್ರಗಳೂ ನನ್ನ ಗಮನ ಸೆಳೆದಿದ್ದಕ್ಕೆ ಮತ್ತೊ೦ದು ಕಾರಣವೂ ಇದೆ. ಅದು ಈ ಚಿತ್ರಗಳ ಜತೆ ಮಾನವನಿಗಿರುವ ಸಂಬಂಧವನ್ನು ಕುರಿತಾದದ್ದು. ಮೊದಲನೆಯ ಚಿತ್ರ-ಎಲೆಗಳೆದ ಮರ-ನೈಜವಾದುದು. ಮಾನವನ ಯಾವುದೇ ಕೈವಾಡವಿಲ್ಲದೆಯೇ ನಿಲ್ಲುವ ನೈಸರ್ಗಿಕ ಚಿತ್ರ.
ಎರಡನೆಯದು-ಕಳೆಯರೆತ ದೀಪ- ಸೀಮಿತವಾದ ಮಾನವನ ಪಾತ್ರವಿರುವ ಸಂದರ್ಭ. ಅಂದರೆ ದೀಪ ಹಚ್ಚುವಷ್ಟಕ್ಕೇ ಸೀಮಿತವಾದ ಪಾತ್ರವನ್ನು ಮನುಷ್ಯ ವಹಿಸಿದರೂ, ಉರಿಯುವ ದೀಪ ತನ್ನಷ್ಟಕ್ಕೇ ನಿಸರ್ಗದ ನೈಜ ಚಿತ್ರ. ಈ ಸಂದರ್ಭದಲ್ಲಿ ಮಾನವ ಹಾಗು ಪ್ರಕೃತಿಯ ಸಮ್ಮೇಳದ ಭಾವವೂ ಇದೆ ಎ೦ಬುದು ವಿಶೇಷ. ಮೂರನೆಯದು ಮತ್ತೂ ವಿಶೇಷವಾದುದು-ಕುರುಹಳಿದ ಮೂರ್ತಿ-ನೈಸರ್ಗಿಕ ಬಂಡೆಗಲ್ಲಿನಲಿ ಮಾನವ ಕ್ರಿಯೆಯ ಫಲ. ಮಾನವನ ಕೈವಾಡದ ಮೂಲಕ ರೂಪಪಡೆಯುವ ಸ್ವತಂತ್ರ ಆಕೃತಿ. ಇದು ಮಾನವ-ಪ್ರಕೃತಿಯ ಸಂಬಂಧದ ಮತ್ತೊ೦ದು ಘಟ್ಟವನ್ನು ಸೂಚಿಸುವುದಷ್ಟೇ ಅಲ್ಲ, ವೀರಶೈವ ಸಿದ್ಧಾ೦ತದ ಒ೦ದು ಮೂಲ ಹೊಳಹನ್ನು ನಮಗೆ ನೀಡುತ್ತದೆ. ಯಾಕೆ೦ದರೆ ವೈದಿಕ ಸಂಪ್ರದಾಯದ ವಿಗ್ರಹಾರಾಧನೆಯನ್ನು ಟೀಕಿಸುತ್ತಾ ಬ೦ದ ವಚನಕಾರರ ಧ್ವನಿಯೂ ಇಲ್ಲಿದೆ. ಸ್ಥಾವರ-ಜಂಗಮ ಸಿದ್ಧಾ೦ತ ಹೇಳುವ- ಸ್ಥಾವರಕ್ಕೆ ಅಳಿವು೦ಟು, ಜ೦ಗಮಕ್ಕಳಿವಿಲ್ಲ ಎ೦ಬ ಮಾತು ನೆನಪಿಗೆ ತರುವ ತಾತ್ವಿಕ ಹಿನ್ನೆಲೆಯೂ ಈ ಮಾತಿನಲ್ಲಿ ಕ೦ಡಾಗ ವಚನದ ವಿಸ್ತಾರ ಒಮ್ಮೆಲೆ ಹಿಗ್ಗಿಬಿಡುತ್ತದೆ. ಕವಿಯ ಭಾವಕ್ಕೆ ವಿಸ್ತಾರವನ್ನು ಕೊಡುವುದರಲ್ಲೂ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಶಬ್ದವಡಗಿ-ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ. ಈ ಸಾಲು ಇಡೀ ಪದ್ಯದ ನೋಟವನ್ನು ಬದಲಿಸಿಬಿಡುತ್ತದೆಯಲ್ಲವೆ? ಈ ಹಿ೦ದೆ ನೇತ್ಯಾತ್ಮಕವಾಗಿ ಕ೦ಡ ಅಂಶಗಳು ಇದ್ದಕ್ಕಿದ್ದ ಹಾಗೆ ಹೊಸ ಬೆಳಕಿನಲ್ಲಿ ಕಾಣುತ್ತದೆ.
ಶಬ್ದವಡಗಿ-ನಿಶ್ಶಬ್ದನಾದ ಎ೦ಬ ಸಾಲು ತು೦ಬಾ ಖುಶಿಕೊಟ್ಟ ಸಾಲು.ನಿಶ್ಶಬ್ದನಾದ-ಎ೦ಬುದು ಸೌಂಡ್ ಆಫ್ ಸೈಲನ್ಸ್ ಎ೦ಬ ಭಾವ ತರುವುದು. ಬಸವನಲ್ಲಿ ಶಬ್ದವರಸದೇ ಇರುವುದು ಬಸವಣ್ಣ ಹಾಗು ನೀಲಾಂಬಿಕೆಯರ ಸಂಬಂಧವನ್ನು ಸು೦ದರವಾಗಿ ಈ ಎಲ್ಲ ಚಿತ್ರಗಳ ಹಿನ್ನೆಲೆಯಲ್ಲಿ ತು೦ಬಾ ಸಹಜ ಹಾಗು ನೈಜ ಸ್ಥಿತಿಯೆ೦ದನಿಸುವ೦ತೆ ಬರುವುದು ಈ ವಚನದ ಹಿರಿಮೆಯೇ ಇರಬೇಕು. ಇನ್ನು ಕಡೆಯ ಸಾಲಿನಲ್ಲಿ- ಸ೦ಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು-ಎ೦ಬಲ್ಲಿ- ಸ೦ಗಯ್ಯ ಪದ ಹೊಮ್ಮಿಸುವ ಆತ್ಮೀಯತೆ ಮು೦ದೆ ಕಾಯವಿಲ್ಲದ ಕರುಣೆಯಲ್ಲಿ ಕರಗುತ್ತದೆ. ಈ ಸಾಲು ನನ್ನನ್ನು ಇನ್ನೂ ಕಾಡುತ್ತಲೇ ಇದೆ. ವೀರಶೈವ ಅರ್ಥಕೋಶದಲ್ಲಿ `ಕಾಯವಿಲ್ಲದ ಕರುಣಿ` ಎ೦ಬುದಕ್ಕೆ ವಿಶಿಷ್ಟಾರ್ಥ ಇದ್ದೀತು ಎಂಬ ಅರಿವಿದ್ದೂ, ನನ್ನದೆ ಅರ್ಥವನ್ನು ಅದರಲ್ಲಿ ಹುಡುಕ್ಕುತ್ತಾ ಹೋಗುವ ದಾರಿಗಿಳಿಯುತ್ತೇನೆ. ಇದೇ ನನ್ನನ್ನು ಪದ್ಯಗಳಿಗೆ, ಕಾವ್ಯಕ್ಕೆ ಆಕರ್ಷಿಸುವ ಅ೦ಶ. ಕಾಯವಿಲ್ಲದ ಕರುಣಿಯಾದೆ ನಾನು ಎ೦ದರೆ ಏನು ಅರ್ಥ? ಸ೦ಗಯ್ಯನ ಮೂಲಕ ಹೊಮ್ಮುವ ಕರುಣೆಯ ಮೂಲ ತಾನಾದೆ ಎ೦ತಲೇ? ಅಥವಾ ಮೂರ್ತರೂಪವಿಲ್ಲದ ಕರುಣೆಗೆ ನಾನೇ ರೂಪವಾದೆ ಎ೦ತಲೆ? ಅಥವಾ ಇನ್ನೂ ದೂರ ಹೋಗಿ ನೋಡಿದರೆ, ನೆರಳಾಗದ, ಬೆಳಕುನೀಡದ, ರೂಪಕೊಡದ ಬಸವಣ್ಣನಿಗೆ ಕರುಣೆ ತೋರಿದೆ ಎ೦ತಲೇ? ಯೋಚಿಸಿದಷ್ಟೂ ಗಾಢವಾಗುವ
ಸಾಲುಗಳು ಇವು.
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.
ತಲೆಯಲ್ಲಿ ಹೊತ್ತುಕೊ೦ಡು ತಿರುಗಬಹುದಾದ೦ಥ ಸಾಲುಗಳು ಅಲ್ಲವೆ?
೨೮-೦೭-೨೦೦೩
- Login or register to post comments
- 1407 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
"ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು."
ಇಲ್ಲಿ ನಾನು ಅರ್ಥ ಮಾಡಿಕೊಂಡದ್ದು ಹೀಗೆ:-
ಸಂಗಯ್ಯ -> ಇಷ್ಟ ದೇವ
ಕಾಯವಿಲ್ಲದ -> ನಶ್ವರವಾದ ದೇಹವಿಲ್ಲದೆ
ಕರುಣಿಯಾದೆ -> ಕೃಪೆಗೆ ಪಾತ್ರವಾದೆ
ಒಟ್ಟಿನಲ್ಲಿ ದೇವರ ಕೃಪೆಗೆ ಪಾತ್ರವಾಗಲು ನಶ್ವರವಾದ ದೇಹ ಬೇಕಾಗಿಲ್ಲ. ಮನಸ್ಸಿನಲ್ಲಿ ದೃಢ ಭಕ್ತಿಯಿದ್ದರೆ ಸಾಕು.
ಎಲೆಗಳಿಲ್ಲದ ಮರ, ಕಾಂತಿಯಿರದ ದೀಪ, ಮಾಸಿ ಹೋಗಿರುವ ಮೂರ್ತಿ ಇವುಗಳು ದೃಢ ಭಕ್ತಿಯಿಲ್ಲದ ನಶ್ವರ ದೇಹದ ಹಾಗೆ.
"ಎನ್ನ ಕಾಲೇ ಕಂಬ ದೇಹವೇ ದೇಗುಲ", "ಕಾಯಕವೇ ಕೈಲಾಸ" ಎಂದು ಹೇಳಿದ ವಚನಕಾರರು ದೇಹವನ್ನು ನಶ್ವರ ಎಂದು ಬಗೆದಿರಲಿಲ್ಲ ಎಂದು ನನ್ನ ತಿಳವಳಿಕೆ. ಅವರು ವಿರೋಧಿಸಿದ ವೈದಿಕರು ದೇಹವನ್ನು ನಶ್ವರ ಅನ್ನುತ್ತಾರಲ್ಲವೆ?
"ಕರುಣಿಯಾದೆ ನಾನು" ಅನ್ನುವಾಗ ಮತ್ತೊಬ್ಬರ ಕರುಣೆ/ಕೃಪೆಗೆ ಪಾತ್ರವಾದೆ ಅನ್ನಬಹುದ?
ಎಲ್ಲ ವಚನಕಾರರು ಒಂದು common ತತ್ವವನ್ನು ಒಪ್ಪುವುದಿಲ್ಲ. ಆದ್ದರಿಂದಲೆ ಇವುಗಳ ಚರ್ಚೆಗೆ ಆಸ್ಪದ ಕೊಡಲು 'ಅನುಭವ ಮಂಟಪ' ವನ್ನು ಮಾಡಿದ್ದು. ನಾವು ಅಲ್ಲಮನ ವಚನದಲ್ಲಿ ದೇವರನ್ನೆ question ಮಾಡುವ ಸನ್ನಿವೇಶಗಳನ್ನು ನೋಡಬಹುದು. ಆದರೆ ಬಸವಣ್ಣ ಇಷ್ಟು ಧೈರ್ಯ ತೋರಿಲ್ಲ. ಆದ್ದರಿಂದ ಎಲ್ಲ ವಚನಕಾರರು ಒಂದು ತತ್ವಕ್ಕೆ(ವೈದಿಕತ್ವದ ವಿರೋಧ ಅಥವ ಆಸ್ತಿಕತ್ವದ ವಿರೋಧ) ಸೀಮಿತವಾಗಿಲ್ಲ.
ನಿಮ್ಮ ತಿಳವಳಿಕೆ ಒಂದು ತರದಲ್ಲಿ ಸರಿಯೆನಿಸಿದರೂ ಬಸವಣ್ಣನವರ ಈ ಕೆಳಗಿನ ವಚನ ನೋಡಿ:-
ಉಳ್ಳವರು ಶಿವಾಲಯ ಮಾಡುವರಯ್ಯ
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೆ ಕಂಬವು
ದೇಹವೆ ದೇಗುಲ
ಶಿರವೆ ಹೊನ್ನ ಕಳಸವಯ್ಯ
ಸ್ಥಾವರಕ್ಕಳಿವಂಟು
ಜಂಗಮಕ್ಕಳಿವಿಲ್ಲ
ಅಯ್ಯ ಕೇಳಯ್ಯ ಕೂಡಲಸಂಗಯ್ಯ
ಇದು ಬಹುಶಃ ಆಗಿನ ಕಾಲದ ಅಸ್ಪೃಷ್ಯತೆ, ಜಾತೀಯತೆಯಂತಹ ಕಂದಾಚಾರಗಳ ವಿಡಂಬಣೆಯಾಗಿ ಕೂಡ ಅರ್ಥೈಸಬಹುದು. ತಮ್ಮ ತಮ್ಮ ದೇಹದಲ್ಲಿ ದೇಗುಲವನ್ನು ಕಟ್ಟಿ ಶಿರದಲ್ಲಿ ಕಳಸವನ್ನು ಪ್ರತಿಷ್ಠಾಪಿಸಿ. ದೇಹದಲ್ಲಿ ದೇಗುಲವಿಲ್ಲದೆ ಪ್ರಾಪಂಚಿಕ ದೇಗುಲಗಳನ್ನು ಸಂದರ್ಶಿಸಿದರೆ ಯಾವ ದೇವನು ಒಲಿಯುವುದಿಲ್ಲ ಎಂಬುದು ನಿಲುವು. ಹಾಗೆಯೆ ಚಲನಶೀಲವಾದ ದೇಹವೆಂಬ[ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ] ದೇಗುಲಕ್ಕೆ ಅಳಿವಿಲ್ಲ ಆದರೆ ಜಡವಾಗಿರುವ ಪ್ರಾಪಂಚಿಕ ದೇಗುಲಗಳು ನಾಶವಾಗುವ ಸಾಧ್ಯತೆಗಳಿವೆ. ಆದರೆ ದೇಹವು ಒಂದು ದಿನ ತನ್ನ ಚಲನಶೀಲತೆಯನ್ನು(ಜಂಗಮತ್ವವನ್ನು) ಕಳೆದುಕೊಳ್ಳುತ್ತದೆ. ಆದ್ದರಿಂದ ಮನಸ್ಸು ಮಾತ್ರ ಜಂಗಮ, ದೇಹವು ಕೊನೆಗೆ ಸ್ಥಾವರವಾಗುವುದು ಅಂತ ಅರ್ಥೈಸಬಹುದು
ಯಾವುದೇ ಬಾಹ್ಯ ವಸ್ತು-ಆಚರಣೆಗಳಿಗಿಂತ ಮನುಷ್ಯನ ದೇಹ ಅದಕ್ಕಿಂತ ಹೆಚ್ಚಾಗಿ ಮನಸ್ಸ ಭಕ್ತಿಪಥಕ್ಕೆ ಬಹು ಮುಖ್ಯ ಎಂದು ಅರ್ಥೈಸಬಹುದಾಗಿದೆ.
ಆಗಿನ ಕಾಲದಲ್ಲಿ ಬಡವರಿಗೆ, ಹಿಂದುಳಿದವರಿಗೆ ತಮ್ಮ ತಮ್ಮ ದೇಹ -ಮನಸ್ಸು ಬಿಟ್ಟರೆ ಬೇರೆ ಯಾವ ಸವಲತ್ತುಗಳು ಇರಲಿಲ್ಲ.. ಆದ್ದರಿಂದ ಎಲ್ಲರನ್ನೂ ಭಕ್ತಿಯ ಕಡೆಗೆ ಸೆಳೆಯಲು ಈ ವಚನಗಳನ್ನು ಬರೆದಿರಬಹುದಷ್ಟೆ.
"ದೇವರ ಮೇಲಿನ ಭಕ್ತಿ", "ದೇಹ-ಮನಸ್ಸು" ಎಂಬ ಆಧ್ಯಾತ್ಮಿಕ ಸರಳ ನಿರೂಪಣೆಗಳಿಗಿಂತ ವಚನಗಳು ಸಂಕೀರ್ಣ ಎಂದು ಬಗೆಯುತ್ತೇನೆ. ವಚನಗಳು ಒಮ್ಮೆಲೇ ವಯ್ಯುಕ್ತಿಕ, ಸಾಮುದಾಯಿಕ ಮತ್ತು ಆಧ್ಯಾತ್ಮಿಕ ನೆಲೆಗಳಲ್ಲಿ ಸಂಚರಿಸುವದೇ ಅವುಗಳ ಚೆಲುವಿಗೆ ಮತ್ತು ಗಾಢತೆಗೆ ಕಾರಣ. ಏ.ಕೆ.ರಾಮಾನುಜನ್ "ಸ್ಪೀಕಿಂಗ್ ಆಫ್ ಶಿವ" ಪುಸ್ತಕದಲ್ಲಿ ದೇಹ-ದೇವಾಲಯ-ದೇಹ ಪ್ರತೀಕಗಳ ಬಗ್ಗೆ ಹೊಳಹುಗಳನ್ನು ಕೊಡುವಂತೆ ಮುನ್ನುಡಿಯಲ್ಲಿ ಸೊಗಸಾಗಿ ಬರೆದಿದ್ದಾರೆ.
ಇರಲಿ, ನಿಮಗೆ ಕಂಡಿದ್ದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
"ವೈದಿಕರು ದೇಹವನ್ನು ನಶ್ವರ ಅನ್ನುತ್ತಾರಲ್ಲವೆ?"
ಅನಿವಾಸಿಗಳೇ
-ನಿಮಗೇಕೆ ಹೀಗೆ ಅನ್ನಿಸಿತು? ಓಸುಗರ ಇದ್ದರೇ ಹೇಳಿ..
ನಶ್ವರವಾದದು ಏನು ಇಲ್ಲ! :), ಎಲ್ಲವೂ ಶಾಶ್ವತ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
"ವೈದಿಕರು ದೇಹವನ್ನು ನಶ್ವರ ಅನ್ನುತ್ತಾರಲ್ಲವೆ?"
ಅನಿವಾಸಿಗಳೇ
-ನಿಮಗೇಕೆ ಹೀಗೆ ಅನ್ನಿಸಿತು? ಓಸುಗರ ಇದ್ದರೇ ಹೇಳಿ..
ನಶ್ವರವಾದದು ಏನು ಇಲ್ಲ! :), ಎಲ್ಲವೂ ಶಾಶ್ವತ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
"ವೈದಿಕರು ದೇಹವನ್ನು ನಶ್ವರ ಅನ್ನುತ್ತಾರಲ್ಲವೆ?"
ಅನಿವಾಸಿಗಳೇ
-ನಿಮಗೇಕೆ ಹೀಗೆ ಅನ್ನಿಸಿತು? ಓಸುಗರ ಇದ್ದರೇ ಹೇಳಿ..
ನಶ್ವರವಾದದು ಏನು ಇಲ್ಲ! :), ಎಲ್ಲವೂ ಶಾಶ್ವತ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಮೂರು ಸಲ ಕೇಳಿದ ಮೇಲೆ ಹೇಳಲೇಬೇಕು! :)
ವೈಭವರು "ಒಟ್ಟಿನಲ್ಲಿ ದೇವರ ಕೃಪೆಗೆ ಪಾತ್ರವಾಗಲು ನಶ್ವರವಾದ ದೇಹ ಬೇಕಾಗಿಲ್ಲ. ಮನಸ್ಸಿನಲ್ಲಿ ದೃಢ ಭಕ್ತಿಯಿದ್ದರೆ ಸಾಕು. " ಎಂಬುದು ವಚನಕಾರರ ಆಶಯವಿದ್ದೀತು ಎಂದಿದ್ದರು. ಅದಕ್ಕೆ ನಾನು ವಚನಕಾರರು ಒಪ್ಪದ ವೈದಿಕರ ನಿಲುವು ಅದು ಅಲ್ಲವೆ ಎಂಬ ಪ್ರಶ್ನೆ ಕೇಳಿದ್ದೆ. ಅದು ಪ್ರಶ್ನೆಯೆ!
ಆ ಪ್ರಶ್ನೆ ನನ್ನಲ್ಲಿ ಮೂಡಲು ಕಾರಣಗಳೇನಂದರೆ, ಚಾರ್ವಾಕರನ್ನು ಹಳಿಯುವ ವೈದಿಕರು (ವೇದಾಂತಿಗಳು ಅನ್ನಬೇಕೇನೋ) ಚಾರ್ವಾಕರ ದೇಹ-ವಾದವನ್ನು ತಿರಸ್ಕರಿಸಿದ್ದು ಅವರ ನಿಲುವನ್ನು ತೋರಿಸುತ್ತದೆ. ನನ್ನ ಸ್ಥೂಲ ತಿಳವಳಿಕೆಯ ಪ್ರಕಾರ, ಆತ್ಮವನ್ನು ದೇವರಿಗೆ ತಲುಪಿಸಿ, ಅದರಲ್ಲಿ ಒಂದಾಗಿಸಲು, ಈ ದೇಹ ಒಂದು ಅಡಚಣೆ ಎಂಬುದನ್ನೂ ಆಧ್ಯಾತ್ಮಿಗಳು ಹೇಳುತ್ತಾರಲ್ಲವೆ? ಈ ಲೋಕ ಮಾಯೆ, ಸ್ಥಿರವಲ್ಲ, ಅದನ್ನು ಆಶ್ರಯಿಸುವ ಈ ದೇಹ ಕೂಡ ಅಷ್ಟೆ.
ಇದು ನಾನು ಬೇರೆ ಬೇರೆ ಕಡೆಯಿಂದ ಪಡೆದ ತಿಳವಳಿಕೆ. ಹಾಗಾಗಿ ಶ್ಲೋಕವನ್ನೋ, ಪುರಾಣವನ್ನೋ ಉದ್ಧರಿಸಲಾರೆ.
ಇದರ ಬಗ್ಗೆ ಇನ್ನು ಹೆಚ್ಚಿನ ಮಾತುಕತೆ ಬೇಕೆಂದರೆ ಬೇರೆ ಎಳೆ ಶುರು ಮಾಡುವುದು ಒಳಿತು.
:) ಇದಿಲ್ಲದೇ ವೈದಿಕರ ಬಗ್ಗೆ ಮಾತಾಡುವುದು, ಅವರ ನಂಬಿಕೆ ಬಗ್ಗೆ ಮಾತಾಡುವುದು ತಕ್ಕುದ್ದೇ.? ವೇದೋಕ್ತಕ್ಕೆ ಪುರಾವೆ, ವೇದವನ್ನು ಉದ್ಧರಿಸುವುದೇ.
ನಿಮಗೆ ಶ್ಲೋಕಗಳ ಬಗ್ಗೆ, ಪುರಾಣದ ಬಗ್ಗೆ ಅಸಡ್ಡೆ/ಅಶ್ರದ್ಧೆ ಇರುವಂತೆ ಕಾಣುತ್ತಿದೆ(ನನಗೆ). ಅಸಡ್ಡೆಯಿಂದ ಕಲಿತದ್ದು ದಕ್ಕುವುದಿಲ್ಲ. ಇದಕ್ಕೆ ಮತ್ತೊಂದು ಓಸುಗರ ನೀವು ಹಲವು ಕಡೆ ಸಂಸ್ಕೃತದ ಶ್ಲೋಕಗಳನ್ನ ಹೇಳುವದನ್ನ ಕುಹುಕ ಮಾಡಿದ್ದೀರಿ. ಅಂದರೆ, ನಿಮಗೆ ಸಂಸ್ಕೃತ ಶ್ಲೋಕಗಳನ್ನು ಹೇಳುವುದಕ್ಕೂ ಹೊಂದಿಕೆ ಇಲ್ಲ. ಹೀಗೆ ನನಗೆ ಅನಿಸಿದ್ದು. ಮಹೇಶನಿಗೆ ಅನಿಸಿದ್ದೆಲ್ಲ ದಿಟವಲ್ಲ, ತಪ್ಪರಿವೂ ಇರಬಹುದು )
ಹಾ!! ಇಲ್ಲಿದೆ ನೋಡಿರಿ. ನೀವು ಪುರಾಣಗಳು, ಮತ್ತು ಷಡ್ದರ್ಶನಗಳ ಬಗ್ಗೆ ಮಾತಾಡ್ತಾ ಇದ್ದೀರಿ, ಅಲ್ವಾ? ಚಾರ್ವಾಕ vs ಇನ್ನೊಂದು ದರ್ಶನ.
ಭಗವದ್ಗೀತೆ, ಷಡ್ದರ್ಶನಗಳು, ಮನುಸ್ಮೃತಿ, ಪುರಾಣಗಳು ಮುಂತಾದವು ವೇದದ ಹಲವು interpretationಗಳು ಎಂದು ನಾನು ಓದಿದ್ದು. ಅಂದರೆ ಮೂಲವೇದದಲ್ಲಿ ಇರದ ಹಲವು ಸಂಗತಿ ಇವಲ್ಲಿವೆ.
ಮಾದರಿಯಾಗಿ "ಆತ್ಮವು ಬಟ್ಟೆಯಂತೆ ದೇಹವನ್ನು ಬದಲಿಸುವುದು" ಎಂಬುದು ಬರಿ ಭಗವದ್ಗೀತೆಯಲ್ಲಿದೆಯಂತೆ. ಅದು ಮೂಲವೇದದಲ್ಲಿ ಇಲ್ಲವಂತೆ. ( ಇದರ ಸರಿತಪ್ಪು ಒರೆಹಚ್ಚಿಲ್ಲ )
ಹಾಗೇ ನೀವು ಕೂಡ "ವೇದ"ದ ಅನುವಾದ ಎಂಬ ಯಾವುದೋ ಒಂದು interpretationಅನ್ನು ಓದಿಕೊಂಡು ಹೀಗೆ ತೀರ್ಪಿಗೆ ಬಂದಿದ್ದೀರಿ, ಎಂದು ಅನ್ನಿಸಿಹತ್ತಿದೆ.
ನನಗೊಂದು ಶ್ಲೋಕ ಗೊತ್ತು
ಅದು
"ದೇಹೋ ದೇವಾಲಯಪ್ರೋಕ್ತೋ, ಜೀವೋ ದೇವಃ ಸನಾತನಃ
ತಜ್ಯತೇದ್ ಅಜ್ಞಾನ-ನಿರ್ಮಾಲಿನ್ಯಂ ಸೋsಹಂ ಭಾವೇನ ಪೂಜಯೇತ್"
"ಮೈಯ್ಯೇ ಗುಡಿ, ಅದು ಜೀವವೆಂಬ ಸನಾತನವಾದ ದೇವರ ಗುಡಿ. ಅರೆಯಮಿಕೆ/ಅಜ್ಞಾನವೆಂಬ ಕೊಳಕು/ನಿರ್ಮಾಲಿನ್ಯವನ್ನು ಬಿಟ್ಟು, ಅವನೇ ನಾನು ಎಂಬ ಅನಿಸು/ಭಾವದಿಂದ ಪೂಜೆ ಮಾಡಬೇಕು."
ಇಲ್ಲಿ ವಚನಕ್ಕೂ ಈ ಶ್ಲೋಕಕ್ಕೂ "ಸೋsಹಂ ಭಾವ"ದ ಅಂತರ, ಅಲ್ವಾ?! ಇದನ್ನು ದೇವರ ಪೂಜೆಯಲ್ಲಿ ಕೊನೆ ಮಂತ್ರಪುಷ್ಪದ ಕೂಟೆ ಹೇಳುವುದುಂಟಲ್ಲ!!
ನನಗೆ ಶ್ಲೋಕದ ಮಾದರಿ ಹೇಳದೇ ವೈದಿಕ ಧರ್ಮದ ಬಗ್ಗೆ ಮಾತಾಡುವುದು, Quran ಓದದೇ, ಇಸ್ಲಾಂ ತತ್ವಗಳನ್ನು ತಾರಾಮಾರಾ ಬೈಯುವ ನೀಚತನದಂತೆ ಎಂದು ಅನ್ನಿಸುವುದು. ಅದಕ್ಕೆ ಹೀಗೆ ಶ್ಲೋಕ ಹೇಳುವೆನು.
( ನಿಮಗೂ ಗೊತ್ತಿದೆ, ನಾನೆಂದು ಬೈಬಲ್ಲು, quran, ತತ್ವದ ಬಗ್ಗೆ ಮಾತಾಡುವುದೇ ಇಲ್ಲ, ನನಗೆ ಅದರ ಚೂರು ಅರಿವೂ ಇಲ್ಲ. )
ನಿಮಗೆ ಈ ಶ್ಲೋಕಗಳಿಂದ ಇರುಸುಮುರುಸಾದರೆ ಮನ್ನಿಸಿರಿ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಮಹೇಶರೆ,
ಇದೀಗ ಅತಿರೇಕ ಅನಿಸುತ್ತಿದೆ. ವೈದಿಕರ ಬಗ್ಗೆ ಆಳವಾದ ಅಧ್ಯಯನ ಮಾಡಿ, ಗಂಭೀರವಾದ ಲೇಖನ ನಾನು ಬರೆದಿದ್ದರೆ ನೀವು ಹೇಳುವಂತೆ ಉರು ಹೊಡೆದು ನಾಲಿಗೆ ತುದಿಯಲ್ಲಿ ಹಿಡಿದಿರುವ ಶ್ಲೋಕಗಳನ್ನು ಪಟಪಟನೆ ಉದುರಿಸಬೇಕು. ವೈಭವರ "ನಶ್ವರ ದೇಹದ" ಮಾತಿಗೆ, ನಾನು ಎತ್ತಿದ **ಪ್ರಶ್ನೆ**ಗೆ, ನೀವು ಕಾರಣ ಕೇಳಿದ್ದಕ್ಕೆ ನನ್ನ ಪ್ರತಿಕ್ರಿಯೆ ಅಷ್ಟೆ. ಆ ಪ್ರತಿಕ್ರಿಯೆಯಲ್ಲೇ ಹೇಳಿರುವ ಹಾಗೆ, ಅದು ನಾನು ಕಲೆ ಹಾಕಿಕೊಂಡ ತಿಳವಳಿಕೆ ಅಷ್ಟೆ.
ಇನ್ನು ಶ್ಲೋಕಗಳ ಬಗ್ಗೆ ನಾನು (ಹಲವು ಕಡೆ?!) ಕುಹಕವಾಡಿದ್ದೇನೆ ಅಂದಿದ್ದೀರ. ಮತ್ತೊಂದು ಎಳೆಯಲ್ಲಿ ನಾನು "ಕುಂಟುಗಾಲಿನ" ಎಂದು ಹೇಳಿದ್ದಕ್ಕೆ ನಾನು ಅಸಡ್ಡೆ/ಅಶ್ರದ್ಧೆ ತೋರಿದ್ದೀನಿ ಅನ್ನುತ್ತಿದ್ದೀರ. ನನಗೆ ಹೊಸ ಅರ್ಥಗಳನ್ನು ಹೊಳೆಸುವ ಯಾವ ಮಾತಿನ ಬಗ್ಗೆಯೂ ಅಸಡ್ಡೆಯಿಲ್ಲ (ಇರಕೂಡದೆಂದು ನನಗೆ ನಾನೇ ಹೇಳಿಕೊಂಡಿದ್ದೇನೆ, ಇರಲಿ ಅದು ವಯ್ಯಕ್ತಿಕವಾಯಿತು). ಓದುವವರು ಶ್ಲೋಕವಾಗಲಿ, ಬೇರೆ ನುಡಿಗಳಾಗಲಿ ಬೇರೆ ಬೇರೆ ರೀತಿಯಲ್ಲಿ ಸ್ವೀಕರಿಸುತ್ತಾರೆ. ನೀವು ಪುರಾವೆಗಾಗಿ ಸ್ವೀಕರಿಸುತ್ತೀರ, ಬಳಸುತ್ತೀರ ಎಂದು ನಿಮ್ಮ ಮಾತಿನಿಂದ ಅನಿಸುತ್ತದೆ. ಆದರೆ ಅದೊಂದೆ ಆಗಬೇಕಾಗಿಲ್ಲ. ಯಾವುದೋ ಶ್ಲೋಕದಲ್ಲಿ ಬರುವ "ಕೊಂಬೆ ಮೇಲೆ ಕೂತ ಎರಡು ಹಕ್ಕಿಗಳು, ಒಂದು ತಿನ್ನುತ್ತಿದೆ, ಇನ್ನೊಂದು ನೋಡುತ್ತಿದೆ" ಎಂಬ ಚಿತ್ರ, ಅದು ಕೊಡುವ ಅನುಭವ, ಮತ್ತು ಹೇಳುವ ಭೋಗ ಮತ್ತು ಸಾಕ್ಷಿಯ ಬಗ್ಗೆಗಿನ ವಿಚಾರವನ್ನು ತಲೆಯಲ್ಲಿ ಹೊತ್ತು ತಿರುಗುತ್ತೇನೆ. ಆದರೆ ಅದನ್ನು ಪುರಾವೆಗಾಗಿ ಬಳಸುವುದಿಲ್ಲ. ಇಂಥವು ಹಲವಿದೆ.
ಇನ್ನು ನನಗೆ ಶ್ಲೋಕಗಳ ಬಗ್ಗೆ ಅಸಡ್ಡೆ ಅನ್ನುವುದಕ್ಕಿಂತ ಅನುಮಾನ ಎಂದರೆ ಹೆಚ್ಚು ಸೂಕ್ತವಾಗಬಹುದು. ಇದು ಬರೇ ಶ್ಲೋಕಗಳ ಬಗ್ಗೆ ಅಷ್ಟೇ ಅಲ್ಲ, ಎಲ್ಲ ನುಡಿಗಳ ಬಗೆಗೂ ಕೂಡ. "ಕುಂಟುಗಾಲು" ಎಂದು ಹೇಳಿದ್ದು ಯಾಕೆಂದರೆ, ಶ್ಲೋಕಗಳನ್ನು ಪುರಾವೆಗೆ ಬಳಸುವಾಗ ನನಗೆ ಇರುಸುಮುರುಸಾಗುವುದು, ಅದರ ಇಸವಿ, ಬರೆದವನು, ಬರೆದ ಪರಿಸ್ಥಿತಿ ಇದಾವುದನ್ನು ಖಂಡಿತವಾಗಿ ಹೇಳಲಾಗದಕ್ಕೆ. ತರ್ಕ, ಪುರಾವೆಗಳು ಅಂದಾಗ ಆ ಮಾತು ಬೇಕಾಗುತ್ತದೆ. ನಿಮಗೇ ಗೊತ್ತಿರುವ ಹಾಗೆ ಶ್ಲೋಕಗಳಲ್ಲಿ ಬರುವ ಪದಗಳು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಅರ್ಥಗಳನ್ನು ಹೊಂದಿದ್ದವು. "ಮಾಯೆ" ಎಂಬ ಪದ, ವೇದಗಳಲ್ಲಿ ಬಳಸುವ ಅರ್ಥಕ್ಕೂ, ಶಂಕರರು ಬಳಸುವ ಅರ್ಥಕ್ಕೂ ಸಂಬಂಧವೇ ಇಲ್ಲದಷ್ಟು ದೂರ ಎಂಬುದು ನಿಮಗೂ ತಿಳಿದಿದ್ದೀತು. ಮೇಲೆ ನೀವು ಹಾಕಿರುವ ಶ್ಲೋಕಕ್ಕೂ ಯಾವಾಗ, ಯಾರು ಬರೆದದ್ದು ಎಂಬುದು ಮುಖ್ಯವಾಗುತ್ತದೆ. (ಪುರಾವೆಗೆ ಬಳಸುವಾಗ)
ಈ ಮುಂಚೆ ಹೇಳಿದ್ದನ್ನೇ ಮರುನುಡಿಯುತ್ತೇನೆ- ಈ ವೈದಿಕತನ/ಸಂಸ್ಕೃತ/ಶ್ಲೋಕಗಳ ಬಗ್ಗೆ ಚರ್ಚಿಸುವುದಕ್ಕೆ ಬೇರೆ ಎಳೆಯನ್ನು ಎತ್ತುವುದು ಸೂಕ್ತ. ಅಲ್ಲಿ ವೇದಪಾರಂಗತರ ಪಾಂಡಿತ್ಯ ಪ್ರದರ್ಶನ ನಡೆಯಲಿ, ನಾನೂ ಓದಿ ತಿಳಿದುಕೊಳ್ಳುತ್ತೇನೆ, ಆದರೆ ಮಾತಾಡುವುದಿಲ್ಲ! :)
೧) ವೈದಿಕ ತತ್ವದ ಬಗ್ಗೆ ಏನು ಹೇಳಿದರು ಅದಕ್ಕೆ ವೇದವೇ ಪುರಾವೆ. ಅದನ್ನೊ ಒದಗಿಸದೇ.. ಸುಮ್ಮನೆ ಗಾಳಿಯಲ್ಲಿ "ವೈದಿಕರು ದೇಹ ನಶ್ವರ" ಎಂದಿದ್ದಾರೆ ಎಂಬುದು ಸರಿಯಿಲ್ಲ, ತಕ್ಕದ್ದಲ್ಲ.
"ವೈದಿಕರ ಬಗ್ಗೆ ಆಳವಾದ ಅಧ್ಯಯನ ಮಾಡಿ, ಗಂಭೀರವಾದ ಲೇಖನ ನಾನು ಬರೆದಿದ್ದರೆ ನೀವು ಹೇಳುವಂತೆ ಉರು ಹೊಡೆದು ನಾಲಿಗೆ ತುದಿಯಲ್ಲಿ ಹಿಡಿದಿರುವ ಶ್ಲೋಕಗಳನ್ನು ಪಟಪಟನೆ ಉದುರಿಸಬೇಕು."
ಅದೇ ನಿಮಗೆ ವೈದಿಕ/ವೇದ ಬಗ್ಗೆ ಗಂಭೀರವಿಲ್ಲ. ಅವು ಪೊಳ್ಳೆಂದು ಆಗಲೇ ಮನಸ್ಸಲ್ಲಿ ಕೂತಿದೆ ಎಂದರೆ ತಪ್ಪನಿಸದು.
ಉರುಹೊಡೆದು ತಲೆಗಿಳಿಸಿಕೊಳ್ಳಬೇಕು. ಉರು ಹೊಡೆಯುವುದಕ್ಕೂ ಓಸುಗರವಿದೆ, ಅದು ನಿಮಗೆ ಬೇಕಿಲ್ಲ ಬಿಡಿ!. ನೀವು ಕ್ರಮವಾಗಿ ವೇದ ಕಲಿತವರೇ? ಕಲಿಯದಿದ್ದರೆ ಈ ಸಂಗತಿ ಅರಿಯಲು ತೊಡಕೇ.
ವೈದಿಕರ ಬಗ್ಗೆ ಬರೀ ಏನೇನೋ ಯಾರ್ಯಾರೋ ಬರೆದುದನ್ನು ಒದರುವುದು ತಕ್ಕುದಲ್ಲ. ನಾನು ಮುನ್ನವೇ ಹೇಳಿದ್ದೀನಿ, ವೇದ ಒಂದಾದರೂ ಅದರ interpretationಗಳು ಸಾವಿರಾರು.!!
"ನಾನೂ ಓದಿ ತಿಳಿದುಕೊಳ್ಳುತ್ತೇನೆ, ಆದರೆ ಮಾತಾಡುವುದಿಲ್ಲ! "
-ಒಳಿತೇ, ದಯವಿಟ್ಟು ನೀವು ಹೀಗೇ ಮಾಡಿರಿ. ಇಲ್ಲ ನಿಮ್ಮ ಮಾತಿಗೆ ಉದ್ಧೃತ ನೀಡಿ.! ಅಷ್ಟೇ.
==========================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಲೆಖಕರ ವಿಮರ್ಶೆ ಚನ್ನಾಗಿದೆ, ಆದರೆ ಮಹಾನ್ ಕ್ರಾಂತಿ ಮಾಡಿದ ಶರಣರನ್ನು "ಮೂರಾಬಟ್ಟೆ ಹಿಡಿದು ಹೋದರು" ಎಂದು ಬರೆಯುವದರ ಮೂಲಕ ಶರಣರು ಮಾಡಿದ ತ್ಯಾಗ, ಬಲಿದಾನಗಳನ್ನು ಲೇಖಕರು ಅವಮಾನಿಸಿದ್ದಾರೆ. ಜಗತ್ತಿನ ಯಾವ ಮೂಲೆಯಲ್ಲಿಯೂ ನಡೆಯದಂತಹ ಕ್ರಾಂತಿ ಕನ್ನಡದ ನೆಲದಲ್ಲಿ ನಡೆದರೊ ಸಹ ಅದನ್ನು ಗೌರವಿಸದ ಅಭಿಮಾನ ಶೂನ್ಯರು ನಾವು ಕನ್ನಡಿಗರು. ಇನ್ನು ಮುಂದಾದರೂ ಶರಣರ ಕ್ರಾಂತಿಯನ್ನು ಎಲ್ಲರೂ ಗೌರವಿಸಲಿ.
ಶಿವ ಶರಣರು ಮತ್ತು ಕಲ್ಯಾಣದ ಕ್ರಾಂತಿಯ ಬಗ್ಗೆ ಗೌರವ ಮತ್ತು ಕಾಳಜಿ ಅಷ್ಟೇ ಅಲ್ಲ ಅತೀವ ಹೆಮ್ಮೆ ನನಗೆ.
ವೈದಿಕರ ಹಿಂಸೆ ಮತ್ತು ಅತ್ಯಾಚಾರದ ವಿರುದ್ಧ ಅತಿ ಪ್ರಬಲವಾಗಿ ಹೋರಾಡಿದವರಲ್ಲಿ ಶರಣರು ಪ್ರಮುಖರು ಎಂದು ಬಗೆಯುತ್ತೇನೆ.
"ಮೂರಾಬಟ್ಟೆಯಾಗಿ ಹೋದರು" ಎಂದು ಇದ್ದದ್ದನ್ನು "ಮೂರಾಬಟ್ಟೆ ಹಿಡಿದು ಹೋದರು" ಎಂದು ನಾನು ಬದಲಿಸಿದ್ದು ಶರಣರ ಮೇಲಿನ ಗೌರವದಿಂದಲೇ.
ನನ್ನ ಮನಸ್ಸಿನಲ್ಲಿ ಅವಮಾನಮಾಡುವ ಯಾವುದೇ ವಿಚಾರವೂ ಇರಲಿಲ್ಲ , ಇಲ್ಲ . ಅಷ್ಟನ್ನು ಖಂಡಿತವಾಗಿ ಹೇಳಬಲ್ಲೆ. ಹಾಗೆ ಧ್ವನಿಸಿದ್ದರೆ ಅಲ್ಲ ಅನ್ನುವುದಕ್ಕೆ ಇದೆ ನನ್ನ ವಿವರಣೆ.
ಉಳಿದವರು ಗೌರವಿಸಲಿ ಎಂದು ನನ್ನ ಆಶಯ ಕೂಡ. ಹೇರಲಾರೆ.
ಪ್ರತಿಕ್ರಿಯೆಗೆ ಧನ್ಯವಾದಗಳು
ಅನಿವಾಸಿಗಳೆ
ನನ್ನಂತ ಚಿಕ್ಕವನಿಂದ ತಗ್ಗಿ, ಒಂದು ಕೋರಿಕೆ.
ಇಂತವನ್ನು
"ವೈದಿಕ ಮತಾಂಧರ/fanaticಗಳ ಹಿಂಸೆ ಮತ್ತು ಅತ್ಯಾಚಾರದ ವಿರುದ್ಧ ಅತಿ ಪ್ರಬಲವಾಗಿ ಹೋರಾಡಿದವರಲ್ಲಿ ಶರಣರು ಪ್ರಮುಖರು ಎಂದು ಬಗೆಯುತ್ತೇನೆ." ಎಂದು ಹೇಳಿದರೆ ಒಳಿತು.
ವೈದಿಕರಲ್ಲಿ ಹಿಂಸೆ, ಅತ್ಯಾಚಾರಗಳು ಸಂಪ್ರದಾಯವೂ ಅಲ್ಲ, ಅವರ ತತ್ವವೂ ಅಲ್ಲ. ಎಲ್ಲ ಧರ್ಮದಲ್ಲೂ ಇರುವ "fanatic"ಗಳಂತೆ ವೈದಿಕದಲ್ಲೂ ಇದ್ದರು, ಇದ್ದಾರೆ.
ಆದುದರಿಂದ "ಮುಸ್ಲಿಂ ದೊರೆಗಳ ಅತ್ಯಾಚಾರ" ಅನ್ನುವ ಬದಲು "ಮುಸ್ಲಿಂ ಮತಾಂಧದೊರೆಗಳ ಅತ್ಯಾಚಾರ" ಅನ್ನೋದು ಒಳಿತು, ಮತ್ತು ನ್ಯಾಯ!
ನಾನು ಇದರಂತೇ ನಡೆಯುತ್ತಿರುವೆನು, ತಪ್ಪಿದ್ದರೆ ಹಾಗೆ ನಡೆಯಲು ಮೊಗಸುವೆನು! ಇದೊಂದು ನಲ್ಮೆಯ ಸಲಹೆ, ಮೂದಲಿಕೆ ಇಲ್ವೇ ಹಳಿತವಲ್ಲ.!
==================================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಮಹೇಶರೆ,
ಸರಿ. "ಎಲ್ಲ ವೈದಿಕರನ್ನೂ" ಎಂದು ಹೇಳುವುದು ಸರಿಯಲ್ಲ. ಒಪ್ಪುತ್ತೇನೆ.
ಆದರೆ ಈ ಸರಿ-ತಪ್ಪುಗಳ ಆಚೆಗೆ ಒಂದು ಪ್ರಶ್ನೆ ಉಳಿಯುತ್ತದೆ. ಅದು ಸಮಕಾಲೀನಕ್ಕೂ ಅನ್ವಯವಾಗುಂಥದು. ಕಲ್ಯಾಣದ ಕ್ರಾಂತಿಯ ಹೊತ್ತಿನಲ್ಲಿ, ಆಗುತ್ತಿರುವ ಪ್ರಮಾದಕ್ಕೆ ಎದುರು ಮಾತಾಡಿದ ವೈದಿಕರು ನನ್ನ ಗಮನಕ್ಕೆ ಬಂದಿಲ್ಲ. ನಿಮಗೆ ಗಮನಕ್ಕೆ ಬಂದಿದ್ದರೆ ತಿಳಿಸಿ. ಆಗ ಅಂದಿನ ಎಲ್ಲ ವೈದಿಕರೂ ಹಾಗಿರಲಿಲ್ಲ ಎಂಬ ವಾದಕ್ಕೆ ಪುಷ್ಟಿ ಸಿಗುತ್ತದೆ ಅಲ್ಲವೆ?
ಅನಿವಾಸಿನ್
ಕಲ್ಯಾಣ ಕ್ರಾಂತಿ ಎಂದು ನೀವು ಏನನ್ನು ಬೆರಳು ಮಾಡುತ್ತಿರುವಿರಿ?
ಇವನ್ನು ಗಮನಿಸಿರಿ
೧) ಹಲವು ಬ್ರಾಮ್ರೂ ಲಿಂಗಾಯತ ಮತವನ್ನು ಒಪ್ಪಿಕೊಂಡರು( ಇಲ್ಲಿ ಒತ್ತಾಯವಾಗಿ, ಅವರನ್ನು ಆ ಮತಕ್ಕೆ ಸೆಳೆದಲ್ಲ ಎಂಬುದು ದಿಟ ಅಲ್ವಾ? )
೨) ಚಾಮರಸ, ಭೀಮ ಕವಿ ಇವರೆಲ್ಲ ಬ್ರಾಮ್ರಂತೆ
೩) ನೀವೇ ಹೇಳಿದಂತೆ ಬಸವಣ್ಣನವರನ್ನು ಎದುರಿಸಿದ ಬ್ರಾಮ್ರರ ಹೆಸರೇ ಸಿಗುವುದಿಲ್ಲ. ಅಂದರೆ ಅವರೂ ಬಸವ ಮತವನ್ನು ಹರಡುವುದನ್ನು ಹೆಚ್ಚು ತಡೆದಿಲ್ಲ. ಏಕೆಂದರೆ ವೈದಿಕರಲ್ಲಿ ಹಲವರೇ ಆ ಮತಕ್ಕೆ ಹೋಗತೊಡಗಿದ್ದರು.
೪) ವಚನ ಕಬ್ಬಕ್ಕೂ, ವೈದಿಕರಿಗೂ ಯಾವ ನಂಟೂ ಇಲ್ಲ. ವಚನಗಳು ವೇದಗಳನ್ನು ಮೂದಲಿಸಿವೆ. ಆದರೂ ಹಲವು ಸ್ಮಾರ್ತ( ಸ್ಮೃತಿಯನ್ನು ನಂಬಿದವರು )ರೇ ಲಿಂಗಾಯತರಾದರು.
ಇದು ಎಲ್ಲಾ ಹೊತ್ತಿನಲ್ಲೂ ಆಗಿದೆ, ಬ್ರಾಮ್ರು ಬಂದ ಹೊಸ ಹೊಸ ತತ್ವಗಳನ್ನು ಒಪ್ಪಿಕೊಂಡು ಆ ಮತಕ್ಕೆ ಹೋಗಿದ್ದಾರೆ.
ಇಲ್ಲಿ ನೋಡಿರಿ.http://en.wikipedia.org/wiki/Brahmin
ಆದರೆ ವಚನ movementಅನ್ನು ವೈದಿಕರು ತುಂಬಾ ಹೆಚ್ಚು ವಿರೋಧಿಸಿದಂತಿಲ್ಲ.!!
ನಾನು ಹೆಚ್ಚು ವಚನಗಳನ್ನು ಓದಿಲ್ಲ. ಆದರೆ ಈ ಮೇಲಿನವು ತಿಳಿದಿವೆ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಮಹೇಶರೆ,
ತಪ್ಪು ತಪ್ಪು....ವೈದಿಕರೇ ಬಸವಣ್ಣನ ಕ್ರಾಂತಿಗೆ ಅಡ್ಡಗಾಲು ಹಾಕಿದ್ದು. ಒಂದು ಕಡೆ ಬಸವ ಶರಣದರ್ಮವನ್ನ ಮುನ್ನಡೆಸುತ್ತಿರುವಾಗ, ಇನ್ನೊಂದೆಡೆ ವೈದಿಕರು ಬಿಜ್ಜಳನನ್ನ ಬೇರೆಡೆ ಸೆಳೆದರು. ಹಾಗೆಯೆ ಅವನನ್ನು ವೀರಶೈವ ಮತಕ್ಕೆ ಹೋಗದಂತೆ ತಡೆದರು. ಬಿಜ್ಜಳನೇ ವೀರಶೈವನಾಗಿದ್ದರೆ ಕಲ್ಯಾಣದಲ್ಲಿ ನೆತ್ತರು ಹರಿಯುತ್ತಿರಲಿಲ್ಲ.
ಬಸವಣ್ಣ ಮುಂದಾಳುತನದಲ್ಲಿ ಜರುಗಿದ ದಲಿತ ಹುಡುಗ ಮತ್ತು ಹಾರುವ ಹುಡುಗಿ ನಡುವೆ ಮದುವೆ ವೈದಿಕರನ್ನು ಕೆರೆಳಿಸಿತ್ತು. ಅಲ್ಲಿಯವರೆಗೆ ಒಳಗೊಳಗೆ ಕತ್ತಿ ಮಸೆಯುತ್ತಿದ್ದ ವೈದಿಕರು ಈ ಮದುವೆಯನ್ನು ಬಳಸಿ ನೆತ್ತರು ಹರಿಸುವುದಕ್ಕೆ/ರಕ್ತಪಾತಕ್ಕೆ ಮುಂದಾದರು.
ಹೆಚ್ಚಿನ ಓದಿಗೆ ಪಿ.ವಿ.ನಾರಾಯಣ ಅವರ 'ಸಮಗ್ರ ವಚನ' ಹೊತ್ತಿಗೆ ಓದಿರಿ.
ಎಲ್ಲ ಹಾರುವರು ಬಸವಣ್ಣನ ಎದುರಿಸಲಿಲ್ಲ/ವಿರೋದಿಸಲಿಲ್ಲ ದಿಟ. ಆದರೆ ಬಸವಣ್ಣನ ವಿರೋದಿಗಳು ಹಾರುವರೇ/ವೈದಿಕರೇ ಆಗಿದ್ದರು ಅನ್ನುವುದರಲ್ಲಿ ಎಳ್ಳಶ್ತು ಐಬಿಲ್ಲ/ಅನುಮಾನವಿಲ್ಲ.
ಅಮೃತವ ಕುಡಿಯಲು ಪಾತ್ರೆ ತ೦ದರೆ ! ಪಾತ್ರೆ ಕ೦ಚೇ ತಾಮ್ರವೇ ಎನ್ನುವರು೦ಟೇ - ಶಿವಾ ..
ಮುರಳಿಯವರೆ,
ಒಗಟಾಗಿದೆ....ವಸಿ ಬಿಡಿಸಿ ಹೇಳಿ.
ಒಗಟಾಗಿದೆ...ಒಗಟಾಗಿರಬೇಕು ಅ೦ತಾ ಬರೆದದ್ದು .
ಬಿಡಿಸಿ ..ಇಲ್ಲಾ ಅ೦ದರೆ ಸಕತ್ತ್ ತರಲೆ ಮಾಡೋ ಆ ಮಹೇಶನ್ನ ಕೇಳಿ - ನೋಡೋಣ ??
ಅಲ್ರೀ ಮುರುಳಿ ದ್ಯಾವ್ರು...
ನಿಂಮದು ಬಲಾಯ್ತು. ನೀವೇನೋ ಬರೆದು ನನ್ನ ಕೇಳ್ಕೊಳ್ಳಿ ಅನ್ನೋದಾ? ಹಾಂ!
ಆದ್ರೆ ನಿಮ್ಮ "ಅಮ್ರುತ"ದ ಮಾತು ಸಕ್ಕತ್.. :)
ನಂಗೇನಾರ "ಅಮ್ರುತ" ಕೊಟ್ರೆ, ಅದು ಪಿಲಾಸ್ಟಿಕ್ ಚೊಂಚಲ್ಲಿದ್ರೂ ಕುಡೀತೀನಿ :)
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಬ್ಯಾಡ ರಾಜ ನೀನು ಅಮೃತ ಕುಡಿ ಬೇಡಾ, ನಿನ್ನ ಕೈಯಲ್ಲಿ ಆ ಟೇಸ್ಟ್ ತಡ್ ಕೊಳ್ಳೋಕ್ಕೆ ಆಗೋದಿಲ್ಲಾ..
ಅದೂ ಅಲ್ಲದೇ ನಮ್ಮ೦ತಹ ಮರ್ತ್ಯರ ಮೇಲೆ ಕರುಣೆಯಿರಲಿ.
ನೀನು ಚಿರ೦ಜೀವಿ ಯಾಗು ಆದರೆ ಅಮೃತ ಕುಡಿದು ಅಲ್ಲಾ.
ಕನ್ನಡದ ಅಮೃತವ೦ ಕುಡಿಸಿ.
ಮುರಳೀ,
"ನೀನು ಚಿರ೦ಜೀವಿ ಯಾಗು ಆದರೆ ಅಮೃತ ಕುಡಿದು ಅಲ್ಲಾ."
ಇನ್ನೇನ್ ಕುಡೀಲಿ? :)
ಅಯ್ಯೋ ದೇವ್ರು ಸಾಕಪ್ಪ, ಸಾಕು!! ಏನ್ ಹೇಳ್ತಿದ್ದರೋ!! ಪುಲ್ ಕಣ್ಪ್ಯೂಜನ್
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ನಿಮ್ಮ ಅಮ್ರುತ ನೀವೆ ಇಟ್ಕೊಳ್ಳಿ :) ನಮಗೆ ಕನ್ನಡವೆಂಬ ಜೇನಿದೆ :)
ಈ "ಹಾರುವ ಹುಡುಗಿ" ಅಂದರೆ ವೈದಿಕ ಮನೆತನದವಳು ಎಂದು ಅಲ್ವಾ?
ವಯಬವ,
ಮುನ್ನವೇ ಹೇಳಿದಂತೆ "ಎಲ್ಲ ವೈದಿಕರು ಅಲ್ಲ ಒಂದು ವೈದಿಕ ಪಂಗಡ".
ಬಸವಣ್ಣನವರ ಹೊತ್ತಿನಲ್ಲಿ, ವೈದಿಕರೇ ಎರಡು ಪಂಗಡವಾಗಿದ್ದರು ಅಲ್ವಾ? ಬಸವಣ್ಣನವರ ಕಡೆಯೊಂದು, ಬಸವಣ್ಣನವರ ಇದಿರೊಂದು. ಈ ಯೆರಡೂ ಕಡೆಯೂ ವೈದಿಕರಿದ್ದರು.
ಆದುದರಿಂದ "ಒಂದು ಪಂಗಡ ವೈದಿಕರೇ ಬಸವಣ್ಣನ ಕ್ರಾಂತಿಗೆ ಅಡ್ಡಗಾಲು ಹಾಕಿದ್ದು." ಇದು ಸರಿ, ಎಲ್ಲ ವೈದಿಕರಲ್ಲ. ನಿಮ್ಮ ಮಾತು ಇದೇ ಇದೆ.
ಇನ್ನು "ಬಿಜ್ಜಳನೇ ವೀರಶೈವನಾಗಿದ್ದರೆ ಕಲ್ಯಾಣದಲ್ಲಿ ನೆತ್ತರು ಹರಿಯುತ್ತಿರಲಿಲ್ಲ." ಲಿಂಗಾಯತನಾಗುವುದು ಬಿಡುವುದು, ಇದು ಬಿಜ್ಜಳನಿಗೆ ಬಿಟ್ಟಿದ್ದು. ಬಿಜ್ಜಳ ವೈದಿಕ ಬ್ರಾಹ್ಮಣನೇ?
ಒಂದು ವಿಸಯ ತಿಳಿಸಣ್ಣ.
ಒಂದು ಪಂಗಡದ ವೈದಿಕರು ಅಂದರೆ ವೈದಿಕ ಬ್ರಾಹ್ಮಣರು , ವೈದಿಕ ಕ್ಷತ್ರಿಯ, ವೈದಿಕ ವೈಶ್ಯರು, ಇವರೆಲ್ಲರೂ ಸೇರಿ, ಬಸವಣ್ಣನನ್ನು ಇದುರಿಸಿದ್ದು ಅಲ್ವಾ? ಬರೀ ವೈದಿಕ ಹಾರುವರೊಬ್ಬರೇ ಎಂದು ನೀವು ಹೇಳುವುದಾ?
====================================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಮಹೇಶ,
ನಾನು ಹೇಳಿದ್ದು
"ಎಲ್ಲ ಹಾರುವರು ಬಸವಣ್ಣನ ಎದುರಿಸಲಿಲ್ಲ/ವಿರೋದಿಸಲಿಲ್ಲ ದಿಟ. ಆದರೆ ಬಸವಣ್ಣನ ವಿರೋದಿಗಳು ಹಾರುವರೇ/ವೈದಿಕರೇ ಆಗಿದ್ದರು ಅನ್ನುವುದರಲ್ಲಿ ಎಳ್ಳಶ್ತು ಐಬಿಲ್ಲ/ಅನುಮಾನವಿಲ್ಲ"
ನೀವು ವಸಿ ಹೆಚ್ಚು ಓದಿದರೆ ಬಿಜ್ಜಳನು ಬಸವಣ್ಣನ ನಡತೆ ಮೆಚ್ಚಿದವನು ಅಂತ ತಿಳಿಯುತ್ತದೆ . ಅಂದ ಮೇಲೆ ಬಿಜ್ಜಳನು ಬಸವನನ್ನು ರಾಜಕೀಯ ಓಸುಗರಗಳಿಂದ ಮಾತ್ರ ಇದುರಿಸಿದ್ದಾನೆ ಅಂತಾಗುವುದಿಲ್ಲವೆ. ರಾಜಕೀಯ ಓಸುಗರಗಳು ಹುಟ್ಟಿಸಿದವರಾರು ? ಏಕೆ? ಬಸವಣ್ಣನು ಹಾರುವ ಸಂಪ್ರದಾಯಕ್ಕೆ ವಿರೋದವಾಗಿ ಏಟೋ ಕೆಲಸಗಳನ್ನು ಮಾಡಿದ್ದ( ಉದಾ: ಮುಂಜಿ ಮಾಡಿಸಿಕೊಳ್ಳದೇ ಇರುವುದು, ಸ್ತಾವರದಲ್ಲಿ ನಂಬಿಕೆ ಇಲ್ಲದಿರುವುದು). ಹಾಗಾಗಿ ಹಾರುವರು ಬಸವಣ್ಣನು ಇದಿರುಸಿರ್ವುದರಲ್ಲಿ ಯಾವ ಅಚ್ಚರಿಯು ಇಲ್ಲ ಅಲ್ಲವೆ?
ಅಂದಿನ ಕಾಲದಲ್ಲಿ ಕ್ಶತ್ರಿಯ, ವೈಸ್ಯ ಇವರೆಲ್ಲರೂ ಹಾರುವರ ಮಾತನ್ನು ಮೀರಿ ನಡೆಯಲು ಸಾದ್ಯವಿತ್ತೆ? ವಸಿ ಉಂಕಿಸಿ ನಿಮಗೆ ತಿಳಿಯಾಗುವುದು.
ಲೇಖನದ ಒಟ್ಟು ಆಶಯ ಗಮನಿಸಿ ;
ಅಲ್ಲಿ ಅವಮಾನದ ಉದ್ದೇಶ ಕಾಣುವದಿಲ್ಲ ;
ಬರಹಗಾರರ ಬರಹದ ಉದ್ದೇಶ , ಅವರು ನಮಗೆ ತಲುಪಿಸಬೇಕೆಂದಿರುವ ವಿಷಯಕ್ಕೆ ಗಮನ ಕೊಡದೆ ಪ್ರಾಸಂಗಿಕವಾಗಿ ಬಳಸಿದ ಯಾವುದೋ ಒಂದು ಪದವನ್ನು ಹಿಡಿದು ಹೀಗೆಲ್ಲ ಪ್ರತಿಕ್ರಿಯಿಸತೊದಗಿದರೆ ,
ಚರ್ಚೆ ಹಾದಿ ತಪ್ಪುವದಿಲ್ಲವೆ ? ನಮ್ಮ ಬರಹಗಾರರು ನಿರುತ್ಸಾಹ ಹೊಂದುವದಿಲ್ಲವೆ ? ಎಲ್ಲವೂ ವಿವಾದಕ್ಕೆ ಎಡೆ ಕೊದತೊಡಗಿದರೆ ಯಾರಾದರೂ ಏಕೆ ಬರೆದಾರು ? ಇದು ಯಾರಿಗೆ ನಷ್ಟ ?
ನಮ್ಮ ಜನಕ್ಕೆ ನಷ್ಟ ಅಲ್ಲವೋ ?
ದಯವಿಟ್ಟು ವಿಚಾರ ಮಾಡಿ .
ಇದು ನನ್ನ ಅನಿಸಿಕೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನಮಸ್ಕಾರ ಅನಿವಾಸಿಯವರಿಗೆ , ಹಿ೦ದಿನ ನಮ್ಮ ನಿಮ್ಮಲ್ಲಾದ ಬಿಸಿ ಬಿಸಿ ವಾದವನ್ನು ಮರೆತು ಈ ವಚನವನ್ನು ನೋಡುವ
"ಶ್ರಮ"ವನ್ನು ಪಡುತ್ತಿದ್ದೇನೆ :), ಕಾರಣ ನೀವು ಬದಲಾಗಿರಬಹುದು ಅಥವಾ ನಾನು ಬದಲಾಗಿರಬುಹುದು.
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.
ನಾವು ಮತ್ತೊಬ್ಬರಲ್ಲಿ ಶಬ್ದವನ್ನು ಅರೆಸುವುದಾದರೂ ಏಕೆ ??
ಒ೦ದು ನಮ್ಗೇ ಏನೋ ತಿಳಿದಿರಲ್ಲಾ ಅಥ್ವಾ ತಿಳಿದು ವಾದ ಮಾಡುವಾಗ, ಅವನು ಏನು ಹೇಳ್ತಾನೋ ಅ೦ತಾ ಅಲ್ವೇ ??
ಆದರೆ ಬಸವನ ಸ್ಥಿತಿ "ಶಬ್ದವಡಗಿ ನಿಶ್ಶಬ್ದನಾದ" ಅ೦ದರೆ ಬಸವ ಜ್ಞಾನದ ನಿಜಾವಸ್ಥೆಯಲ್ಲಿದ್ದ, ಅಷ್ಟೇ ಅಲ್ಲಾ.. ತನ್ನ ಬಳಿ ಬ೦ದವರಿಗೆ
ಶಬ್ದದ ಇತಿ ಮಿತಿಗಳನ್ನು ಮತ್ತು ಶಬ್ದ ಸಾಗರವನ್ನು ದಾಟುವ ಕಲೆಯ ಮೌನದಿ೦ದಲೇ ತಿಳಿಸುತ್ತಿದ್ದ.
ವಚನಕಾರರಲ್ಲಿ ಪ್ರಥಮ ನಾದ ಅವನಿಗೆ ಶಬ್ದ ಮತ್ತು ವಚನದ ಮಿತಿ ತಿಳಿದು ಬಹುಶ: ಕೊನೆಯಲ್ಲಿ
ಆತ ಮೌನವನ್ನ್ ಆವರಿಸಿದ್ದನೆ೦ದು ನನ್ನ ನ೦ಬಿಕೆ. ಯಾಕ೦ದರೆ ಬಸವಣ್ಣನವರನ್ನು ಸಮಾಧಿ ಮಾಡುವಾಗ ಆ ಕೆಲ್ಸವನ್ನು ಮಾಡುವವನಿಗೆ ಒ೦ದು ವಿಚಿತ್ರ ದರ್ಶನವಾಯ್ತ೦ತೆ. ಶಬ್ದ ಬೆಳಕನ್ನು ಮೀರಿದ ಅತೀ೦ದ್ರಿಯ ಅನುಭವ - ಪರಮಾನುಭವ.
ಆಗ ಅವನು ೦ದು ಹಾಡು ಹೇಳ್ತಾನೆ. ಬೇ೦ದ್ರೆಯವರು ಅದರ ಮೇಲೆ ಒ೦ದು ಕಾವ್ಯವನ್ನು ಬರೆದಿದ್ದಾರೆ.
(ತು೦ಬಿ ಬ೦ದಿತ್ತಾ ತ೦ಗೀ ತು೦ಬಿ ಬ೦ದಿತ್ತಾ
ಬೆಳಕಿಗಿನ್ನಾ ಬೆಳ್ಳಗಿತ್ತಾ.. ಕತ್ತಲೆಗಿನ್ನಾ ಕಪ್ಪಗಿತ್ತಾ)
ಅದನ್ನು ಕೇಳಿದಾಗಲೂ ಇದೇ ಭಾವ ಮತ್ತು ಇದೇ ರೀತಿ ಆನ೦ದವಾಗುತ್ತೆ.
ಅದೂ ಕೂಡ ಶಬ ಮತ್ತು ಅಶಬ್ದದ ಮೇಲೆ ಕುರಿತಾದ ಪದ್ಯ.
ಅ೦ತಹವರ ಬಳಿ ಹೋದಾಗ ನಮ್ಮ ಮನಸ್ಸಿನ ಅನುಮಾನ ಮತ್ತು ಆಸ್ಥಿತ್ತ್ವದ ಬಗ್ಗೆ ಯಿರುವ ಅನುಮಾನ ಮಾಯಾವಾಗುತ್ತದೆ.
"ಕಾಯವಿಲ್ಲದ ಕರುಣಿಯಾದೆ ನಾನು."
ಕಾಯ - > ದೇಹ
ಕರುಣಿ - > ದಯಾ..
ಇಲ್ಲಿ ಬುದ್ದನ ನೆನಪು ಬರುತ್ತದೆ. ಆತ ತನ್ನ ದೇಹವನ್ನು ಮೀರುವ ಬಗ್ಗೆ ಹೇಳೀ ..ಕರುಣೇ ..ಯಿ೦ದ
ಅಹ೦ಕಾರವನ್ನು ಮೀರಿ.. ಸ೦ಸಾರವನ್ನು ಮೀರಬಹುದೆ೦ದ.
ಸದಾ ದು:ಖದಿ೦ದ ಇರುವ ಈ ಲೋಕದಲ್ಲಿ ಕರುಣೆಯಷ್ಟೂ ಒಳ್ಳೆಯ ಭಾವವಿಲ್ಲವೆ೦ದ.
ಸದಾ ಕರುಣಾಶಾಲಿಯಾಗಿರುವ ಕೆಲವರನ್ನು ನೀವು ಅವರ ದೇಹವಿಲ್ಲದಿದ್ದರೂ (ಅಳಿದರೂ) ಜ್ಞಾಪಕ ಇಟ್ಟುಕೊಳ್ಳುವುದಿಲ್ಲವೇನು ??
ಇಲ್ಲಿ ಬಸವನ ಸ೦ಗದಲ್ಲಿ ಈಕೆ ತನ್ನ ಪೂರ್ಣ ಸ್ವರುಪವನ್ನು ಕ೦ಡುಕೊ೦ಡಳೂ ಎನ್ನ ಬಹುದು.
ಮತ್ತೆ ಕರುಣೆಯ ಬಗ್ಗೆ ಕೆಲವು ಜಿಡ್ಡೂರವರ ಪುಸ್ತಕ ಓದಿದ್ದೇ ..ಮತ್ತೆ ಕಟ್ ಪೇಸ್ಟ್ :) ಮಾಡ್ತಾಯಿದ್ದೇನೆ.
ಅನುವಾದ ಮಾಡೂವಾಗ ತಪ್ಪಾದರೆ ಭಾವ ಮರೆ ಆಗಬಹುದು ಎ೦ಬ ಕಾರಣಕ್ಕಾಗಿ.
*****************************************
The Nature of New mind ಪುಸ್ತಕ ಅನ್ಸತ್ತೆ - Jiddu Krishnamurthy
Q: Do you know what it means to love somebody?
Do you understand what compassion is?
Compassion is not hard to come by when the heart is not filled with the cunning things of the mind. It is the mind with its demands and fears, its attachments and denials, its determinations and urges, that destroys love.
Do you have the sense of astonishing energy which is compassion, the end of sorrow?
Without compassion human beings are destroying themselves.
Have an insight into sorrow, not the sorrow of thought, but the universal sorrow of mankind, and out of that insight is compassion.
Is compassion the end of all life end of all death?
Is there something sacred, untouched by man which is beyond compassion?
That may be the origin of everything. A real, penetrating meditation which brings insight.
*************************************************
ಅ೦ದರೆ ದಯೆಯೇ ಧರ್ಮದ ಮೂಲವಯ್ಯಾ .. ಅ೦ದ ಬಸವಣ್ಣನವರಿಗೆ ಕರುಣಿಯ ಮೂಲಕ ನಮ್ಮ ಅಧ್ಯಾತ್ಮದ ಪ್ರಶ್ನೆಗಳಿಗೂ ಮತ್ತು
ನಿತ್ಯ ಜೀವನದ ಪ್ರಶ್ನೆಗಳಿಗೂ ಉತ್ತರ ದೊರಕುವುದೆ೦ಬ ನ೦ಬಿಕೆಯಿತ್ತು. ಆಗ ನಮ್ಗೇ ಉತ್ತರ ಹುಡುಕುವ ಗೋಜಿರುವುದಿಲ್ಲಾ.
ಜೀವನ ಪ್ರಶ್ನೆಯಾಗಿ ಕಾಡುವುದಿಲ್ಲಾ. ಆಗ ದೇಹ ಅನಿತ್ಯಾನಿತ್ಯತೆ /ಲೋಕದ ಸತ್ಯಾಸತ್ಯತೆ ಯ ಬಗ್ಗೆ ಚರ್ಚೆ ನಡೆಯುವುದಿಲ್ಲಾ.
ಯಾಕ೦ದರೆ ನಾವು Transform ಆಗಿರ್ತೀವಿ. ಬರೀ ಜಡ ದೇಹವಾಗೋಲ್ಲಾ.
ಆ ಸ್ಥಿತಿಯಲ್ಲಿ Total Action ಇರುತ್ತೆ. ಆಗ "ನಾನು" ದೇಹವಾಗಿರೋಲ್ಲಾ.
ಪೂರ್ಣ ಜೀವ೦ತ ಸ್ವರೋಪವದು. ಲೋಕಕ್ಕೆ ಮ೦ಗಳವನ್ನು ತರುವ೦ತಹ ಸಾಧನೆ.
ಈಕೆ ನಿಜವಾಗಲೂ ಸುಮ೦ಗಲಿ.
ಈ ವಚನವನ್ನೂ ಹ೦ಚಿಕೊ೦ಡಿದ್ದಕೆ ಧನ್ಯವಾದ. ಇದನ್ನು ಓದಿದ ಮೇಲೆ ಮು೦ದೇನಿದ್ದರೂ ಧ್ಯಾನ .
ಜಾಸ್ತಿ ಚರ್ಚೆ ಮಾಡಿದರೆ ಅದರ ನಿಜವಾದ ಅರ್ಥ ಮರೆಯಬಹುದು.
ಅ೦ದರೆ ದಯೆಯೇ ಧರ್ಮದ ಮೂಲವಯ್ಯಾ .. ಅ೦ದ ಬಸವಣ್ಣನವರಿಗೆ ಕರುಣಿಯ ಮೂಲಕ ನಮ್ಮ ಅಧ್ಯಾತ್ಮದ ಪ್ರಶ್ನೆಗಳಿಗೂ ಮತ್ತು
ನಿತ್ಯ ಜೀವನದ ಪ್ರಶ್ನೆಗಳಿಗೂ ಉತ್ತರ ದೊರಕುವುದೆ೦ಬ ನ೦ಬಿಕೆಯಿತ್ತು.
---------ಒ೦ದು ಬದಲಾವಣೆ-------> ಅ೦ದರೆ ದಯೆಯೇ ಧರ್ಮದ ಮೂಲವಯ್ಯಾ .. ಅ೦ದ ಬಸವಣ್ಣನವರಿಗೆ ಕರುಣಿಯ ಮೂಲಕ ನಮ್ಮ ಅಧ್ಯಾತ್ಮದ ಪ್ರಶ್ನೆಗಳಿಗೂ ಮತ್ತು ನಿತ್ಯ ಜೀವನದ ಪ್ರಶ್ನೆಗಳಿಗೂ ಉತ್ತರ ದೊರಕುವುದೆ೦ಬ "ಅನುಭವವಿತ್ತು".
ಮುರುಳಿಯವರೆ,
ಬದಲಾವಣೆ ಅನ್ನುವುದಕ್ಕಿಂತೆ - "ಅಂದು-ಅಲ್ಲಿ-ಅದು, ಇಂದು-ಇಲ್ಲಿ-ಇದು ಸ್ಥಿರವೊಂದೆಯಾದರೂ, ಚರ ಬೇರೆ" (ಇದು ಯಾವುದೋ ಶ್ಲೋಕದ ಭಾಷ್ಯದಲ್ಲಿ ಓದಿದ್ದು "ಉದ್ಧರಿಸಲಾರೆ" :) )ಎಂಬುದರಿಂದ ನನಗೆ ನಿಮ್ಮ ಮಾತಿನಿಂದ ತೊಂದರೆಯಿಲ್ಲ.
ವಚನ ನಿಮ್ಮಲ್ಲಿ ಮೂಡಿಸಿದ ವಿಸ್ಮಯಕಾರಿ ವಿಚಾರಲಹರಿಯನ್ನು ಅರಗಿಸಿಕೊಂಡು ನಂತರ ಮರುನುಡಿಯಬಲ್ಲೆ. ಸದ್ಯಕ್ಕಂತೂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.