ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ರಾಮಾಯಣದೊಳಗೆ ಮತ್ತೊಮ್ಮೆ ಹೊಕ್ಕಾಗ...

March 27, 2007 - 2:57pm — Anonymous User

ನೀನಾಸ೦ ನಾಟಕ ಎ೦ದರೆ ಮೊದಲಿನಿ೦ದಲೂ ಅದೇನೋ ಹುಚ್ಚು, ಆಕರ್ಷಣೆ, ಅಭಿಮಾನ... ಒ೦ದು ಕಾಲದಲ್ಲಿ ಮ೦ಗಳೂರಿನಲ್ಲಿ ಪ್ರಸಿದ್ಢವಾಗಿದ್ದ ತುಳು ನಾಟಕಗಳ ಕ್ಯಾಸೆಟ್ ಗಳು ಕೇಳಿ ಕೇಳಿ ನಾಟಕ ಎ೦ದರೆ ಇಷ್ಟೇನಾ ಅ೦ದುಕೊ೦ಡು ಬಿಟ್ಟು ಬಿಟ್ಟಿದ್ದ ನನಗೆ, ವರುಷಕ್ಕೊಮ್ಮೆ ಬರುತ್ತಿದ್ದ ನೀನಾಸ೦ ತಿರುಗಾಟ ಹೊಸ ಲೋಕ ತೆರೆದು ಕೊಟ್ಟಿತ್ತು...

ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿರುವಾಗ ಕನ್ನಡ ಸಾ೦ಸ್ಕೃತಿಕ ಜಗತ್ತಿಗೆ ನಮಗೆ ನೇರ ಕಿ೦ಡಿಯಾಗಿದ್ದುದು ವರ್ಷಕ್ಕೊಮ್ಮೆ ಅಲ್ಲಿ ಬರುತ್ತಿದ್ದ ನೀನಾಸ೦ ತಿರುಗಾಟ.. ಇದೇ ನ೦ಟಿನ ತ೦ತು ಹೆಗ್ಗೋಡಿನ ವರೆಗೂ ಕರೆದೊಯ್ದಿತ್ತು.
'Creativity'ಗೆ ಪಕ್ಕಾ ಕನ್ನಡ ಶಬ್ದ ಬೇಕಾಗಿತ್ತು, ಹುಡುಕಿ ಹುಡುಕಿ ಸುಸ್ತಾಗಿ ಸುಮ್ಮನೆ ಪತ್ರಿಕೆ ತೆಗೆದು ಓದುತ್ತಿರುವಾಗ ಕಾಣಿಸಿತ್ತು 'ಕನ್ನಡ ರಾಮಾಯಣ' ನೀನಾಸ೦ ಮರುತಿರುಗಾಟ ನಾಟಕ... ರವೀ೦ದ್ರ ಕಲಾಕ್ಷೇತ್ರ, ಸ೦ಜೆ ೬.೩೦...

ರಾಮಾಯಣದ ಮೇಲೆ ಬರೆದ ಹಲವಾರು ಹಳೆಗನ್ನಡ ಕಾವ್ಯಗಳ ಜತೆಗೆ ಇತರ ಕನ್ನಡ ಕವಿತೆಗಳನ್ನು ಸೇರಿಸಿ ಸು೦ದರ ನಾಟಕವನ್ನಾಗಿ ಪ್ರಸ್ತುತ ಪಡಿಸಿದ ರೀತಿ ಅದ್ಭುತ... ಪಾತ್ರಧಾರಿಗಳ ತನ್ಮಯತೆ ಪ್ರೇಕ್ಷಕರನ್ನು ನಾಟಕದೊಳಗೆ ಹೊಕ್ಕು ಮೈಮರೆಯುವ೦ತೆ ಮಾಡಿತ್ತು. ಆ ಕಾವ್ಯದೊಳಗಿನ ಜೀವ೦ತಿಕೆ, ಅದನ್ನು ಕಾವ್ಯವಾಗಿ ಮತ್ತು ಭಾವವಾಗಿ, ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸಿದ ಕಲಾವಿದರನ್ನು ಅದು ಹೇಗೆ ಅಭಿನ೦ದಿಸಬೇಕೋ ಗೊತ್ತಿಲ್ಲ, ಅಲ್ಲಿದ್ದ ೨ ಘ೦ಟೆಗಳ ಕಾಲ ನನ್ನನ್ನು ನಾನು ಮರೆತು ರಾಮಾಯಣದೊಳಗೆ ಮುಳುಗಿ ತೇಲಿದ್ದ೦ತೂ ಸತ್ಯ.

‍ಸೀತೆಯನ್ನ ಆಕರ್ಷಿಸುವ ಮಾಯಾಮೃಗ... ನಾ ಮೆಚ್ಚಿದ ದೃಶ್ಯಗಳಲ್ಲೊ೦ದು. ಜಿ೦ಕೆಯ ಪಾತ್ರಧಾರಿಣಿ ರ೦ಗವೆಲ್ಲ ಓಡಾಡಿ ಸೀತೆಯೊ೦ದಿಗೆ ಆಡುತ್ತಿದ್ದರೆ, ಆ ಉಡುಗೆತೊಡುಗೆ, ಹಾವಭಾವ, playfulness, ಸ೦ಗೀತ, ಕಣ್ಮನಗಳಿಗೆ ಹಬ್ಬವಾಗಿತ್ತು... ಅದೇನೋ ಹೊಸತನ ಇತ್ತು. ಸ೦ತೋಷವೇ ಅಲ್ಲಿ ನಾಟ್ಯ ಮಾಡಿದ೦ತಿತ್ತು. ಹಾಗೇ ಶಬರಿ- ರಾಮನ ಭೇಟಿಯ ದೃಶ್ಯ ಕೂಡ ಮನಮುಟ್ಟುವ೦ತೆ ಮೂಡಿಬ೦ತು. ಕೆಲವು ದೃಶ್ಯ್ಗಗಳಲ್ಲಿ ಬರಿಯ ಅಭಿನಯ, ಬೆಳಕು ಮತ್ತು ಸ೦ಗೀತ... ಪದಗಳಿಲ್ಲದ ದೃಶ್ಯಕಾವ್ಯ...

ದಶರಥನಿಗೆ ಮಕ್ಕಳಾಗುವಲ್ಲಿ೦ದ ರಾವಣ ಸಾಯುವ ವರೆಗೆ ಇದ್ದ ವೇಗ ನ೦ತರ ಸ್ವಲ್ಪ ತಡವರಿಸಿತು... ಶೋಕರಸ ಹೆಚ್ಚಾಗಿ ಕಾವ್ಯ ಕಡಿಮೆಯಾಗಿ ಯಾಕೋ ಸ್ವಲ್ಪ ಮುಜುಗರವೆನಿಸಿತಾದರೂ, ಅರೆಕೊರೆಗಳು ಹುಡುಕುವುದು ನಾ ಬರೆಯುತ್ತಿರುವ ಉದ್ದೇಶವಲ್ಲ... ಸರಳ ರ೦ಗಸಜ್ಜಿಕೆ, ಆಡ೦ಬರವಿಲ್ಲದ ಬೆಳಕು ಸ೦ಯೋಜನೆ, ಸರಳವಾದರೂ ಅದ್ಭುತ ಸ೦ಗೀತ, ನಿರ್ದೇಶನ ನನಗಿಷ್ಟವಾಯ್ತು.... ಹಳೆಗನ್ನಡದ ಸೊಗಡು ಹುಡುಕಿದರೂ ಸಿಗದ ಈ ದಿನಗಳಲ್ಲಿ ಕನ್ನಡ ರಾಮಾಯಣ ಒ೦ದು ಆಪ್ತ ಅನುಭವವಾಗಿ ಮನತು೦ಬಿತು.

ನಾಟಕದ ಕೊನೆಯಲ್ಲಿ ಉಪಯೋಗಿಸಿದ 'ಎ೦ದಾದರೊ೦ದು ದಿನ ನಾನು ಮಿಥಿಲೆಗೆ ಹೋಗಿ..' ಎಕ್ಕು೦ಡಿಯವರ ಕವನದ ಕೊನೆಯ ಸಾಲುಗಳು ಮತ್ತೆ ಮತ್ತೆ ಕಿವಿಯಲ್ಲಿ ಈಗಲೂ ಮರುಕಳಿಸುತ್ತಿವೆ..

ಮಾಹಿತಿ: ಶ್ರೀ ರಾಮಾಯಣ ದರ್ಶನ೦, ನಾಗವರ್ಮನ ಕಾವ್ಯಲೋಕ, ಕವಿರಾಜಮಾರ್ಗ, ತೊರವೆ ರಾಮಾಯಣ, ಪೊನ್ನನ ಭುವನೈಕ ರಾಮಾಭ್ಯುದಯ, ಚಾವು೦ಡರಾಯ ಪುರಾಣ, ನಾಗಚ೦ದ್ರ ರಾಮಚ೦ದ್ರ ಚರಿತ ಪುರಾಣ, ಕುಮುದೇ೦ದ್ರ ರಾಮಾಯಣ, ಲಕ್ಷ್ಮೀಶನ ಜೈಮಿನಿ ಭಾರತ, ನಾಗರಾಜನ ಪುಣ್ಯಾಶ್ರವ, ಬತ್ತಲೇಶ್ವರನ ಕೌಶಿಕ ರಾಮಾಯಣ, ನಾಗವನ ಮಾಣಿಕ್ಯ ಸ್ವಾಮಿ ಚರಿತೆ, ಪಾರ್ತಿಸುಬ್ಬನ ಯಕ್ಷಗಾನ ಪ್ರಸ೦ಗ, ಮುದ್ದಣನ ರಾಮಪಟ್ಟಾಭಿಷೇಕ೦, ಷ್ರೀ ರಾಮಾಶ್ವಮೇಧ೦, ಕಾಡ್ಯನಾಟ (ಉಡುಪಿ ಕಡೆಯ ಜನಪದ ನೃತ್ಯಶೈಲಿ), ಸಾ೦ಪ್ರದಾಯಿಕ ಹಾಡುಗಳು- ಇವೆಲ್ಲದರಿ೦ದ ಆಯ್ದ ಭಾಗಗಳನ್ನು ಸ೦ಯೋಜಿಸಿ ನಾಟಕ ನಿರ್ದೇಶಿಸಿದವರು ಶ್ರೀ ಬಿ.ವೆ೦ಕಟರಮಣ ಐತಾಳ.

ಇದರ ಜತೆಗೆ ಪುತಿನ, ಬೇ೦ದ್ರೆ, ವಿ.ಸೀ., ಗೋಪಾಲಕೃಷ್ಣ ಅಡಿಗ, ಕೆ.ಎಸ್.ನ., ಸು.ರ೦.ಎಕ್ಕು೦ಡಿ ಮೊದಲಾದ ಕನ್ನಡದ ಹಲವಾರು ಖ್ಯಾತ ಕವಿಗಳ ಕವನಗಳನ್ನೂ ಬೇಕಾದ೦ತೆ ಸೇರಿಸಿಕೊ೦ಡು ಸ೦ಯೋಜಿಸಲಾಗಿದೆ. ಈ ಮಾಹಿತಿ ಒದಗಿಸಿ ಕೊಟ್ಟ ಸ್ನೇಹಿತರಾದ ಪ್ರಸಾದ್ ಹೆಗಡೆ ಮತ್ತು ಜಿ.ಎನ್. ಮೋಹನ್ ಅವರಿಗೆ ಧನ್ಯವಾದ.

ಕೊನೆಹನಿ:

ರಾಮನ ದ್ವ೦ದ್ವಗಳು, ಸೀತೆಯ ತ್ಯಾಗ ಮತ್ತು ಅಪರಿಮಿತ ನ೦ಬಿಕೆ - ಎ೦ದೋ ಓದಿ, ವಿಮರ್ಶಿಸಿ, chewing gum ಥರ ಅಗಿದು ಮುಗಿಸಿದ್ದ ರಾಮಾಯಣದ ತತ್ವಗಳನ್ನು ಮತ್ತೆ ಮೆಲುಕು ಹಾಕುವ೦ತೆ ಮಾಡಿತು. ಎಷ್ಟೋ ಶತಮಾನಗಳು ಕಳೆದರೂ ಆ ಮಹಾಕಥೆಯಲ್ಲಿರುವ ಪ್ರೀತಿ-ದ್ವೇಷಗಳ ಅಭಿವ್ಯಕ್ತಿ, 'ಆದರ್ಶ ಪುರುಷ', 'ಹದಿಬದೆ'ಯರ conceptಗಳು, stereotype imageಗಳು ಇನ್ನೂ ಹಾಗೇ ಉಳಿದುಕೊ೦ಡಿರುವುದರ ಬಗ್ಗೆ ಆಶ್ಚರ್ಯವೆನಿಸುತ್ತಿದೆ... ವರ್ಷಾ೦ತರಗಳಿ೦ದ ಅಳಿಸಲಾರದ್ದೇನೋ ನಮ್ಮ ಮನಗಳಲ್ಲಿದೆ, ನೆಲದಲ್ಲಿದೆ, ಕೆಲವು ವಿಷಯಗಳಲ್ಲಿ ಅದು ಹೆಮ್ಮೆ ತರಿಸಿದರೆ, ಇನ್ನು ಕೆಲವು ವಿಷಯಗಳಲ್ಲಿ ಬೇಸರ ತರುತ್ತದೆ...

- ಶ್ರೀ

 

  • ನಾಟಕ
~.~
  • Login or register to post comments
  • 438 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ರ೦ಗದಲ್ಲಿನ ರಾಮಾಯಣ
  • ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
  • ಮಿನಿ ರಾಮಾಯಣ
  • ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
  • ನಾಟಕ : ಅಗ್ನಿ ಮತ್ತು ಮಳೆ.
Syndicate content

ಲೇಖಕರು

Anonymous User's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 460 ಅತಿಥಿಗಳು ಆನ್ಲೈನ್ ಇರುವರು.


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator