ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕಾಯಕ ಯೋಗಿಗೆ ನೂರು ವರ್ಷ

April 10, 2007 - 8:03am — uniquesupri

  ತುಮಕೂರಿನ ಸಿದ್ಧಗಂಗೆಯೆಂದೊಡನೆ ಗಂಗೆಯನ್ನು ಕಂಡಷ್ಟೇ ಪವಿತ್ರ ಭಾವನೆ, ಸಿದ್ಧೇಶ್ವರನ ಮೇಲಿನ ಭಕ್ತಿಭಾವ ಮನಸ್ಸನ್ನು ಆವರಿಸುತ್ತದೆ. ಶ್ರೀ ಗೋಸಲ ಸಿದ್ಧೇಶ್ವರರ ತಪೋನಿಷ್ಠೆಯ ಸಿದ್ಧಿರೂಪವಾಗಿ ಗಂಗೆಯು ಉದ್ಭವಿಸಿದಳು. ಬರಗಾಲದಲ್ಲೂ ಇಲ್ಲಿ ಗಂಗೆ ನಿರಾಂತಂಕವಾಗಿ ಹರಿಯುತ್ತಿರುತ್ತಾಳೆ. ಆದ್ದರಿಂದ ಈ ಸ್ಥಳಕ್ಕೆ ಸಿದ್ಧಗಂಗೆ ಎಂಬ ಹೆಸರು ಬಂತು. ಮುಂದೆ ತ್ರಿವಿಧ ದಾಸೋಹಿ, ಬ್ಸವತತ್ವದ ಸಾಕಾರಮೂರ್ತಿ, ಆಧುನಿಕ ಬಸವಣ್ಣ, ಶರಣ ಕಾಯಕಯೋಗಿ ಡಾ|| ಶಿವಕುಮಾರ ಸ್ವಾಮೀಜಿಗಳ ಶ್ರಮವೆತ್ತ ದುಡಿಮೆ, ತ್ಯಾಗಮಯ ಸೇವೆಗಳಿಂದ ಸಿದ್ಧಗಂಗೆ ಇಂದು ಜಗತ್ಪ್ರಸಿದ್ಧವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ವೀರಾಪುರ ಗ್ರಾಮದಲ್ಲಿ ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಗಳಿಗೆ ೧೯೦೮ರ ಏಪ್ರಿಲ್ ೧ ರಂದು ಜನಿಸಿದ ಶಿವಕುಮಾರರು ಬದುಕಿನಲ್ಲಿ ಗೆಲುವನ್ನೇ ಸೋಲಿಸಿದರು. ೧೯೩೦ರ ಮಾರ್ಚ್ ೩ರಂದು ಉದ್ಧಾನ ಶಿವಯೋಗಿಗಳಿಂದ ಪೀಠವನ್ನು ವಹಿಸಿಕೊಂಡ ಸ್ವಾಮೀಜಿಗಳು ಆರಂಭದಿಂದಲೇ ಸಮಾಜದ ಉದ್ಧಾರಕ್ಕಾಗಿ ಯೋಜನೆಗಳನ್ನು ರೂಪಿಸಿದರು. ೧೯೪೧ರಲ್ಲಿ ಮೊದಲನೆಯದಾಗಿ ಶಾಲೆಯೊಂದನ್ನು ಪ್ರಾರಂಭಿಸುವ ಮೂಲಕ ಅಕ್ಷರದಾಸೋಹಕ್ಕೆ ಅಡಿಯಿಟ್ಟರು. ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ. ಕೂಡಲ ಸಂಗಮನ ಪೂಜಿಸಿದ ಫಲ ನಿಮ್ಮದಯ್ಯಾ ಎಂಬ ವಚನವನ್ನು ಮನಸಾ ಪಾಲಿಸಿದ ಶ್ರೀಗಳು, ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಉದಾಸೀನ ತೋರಲೇ ಇಲ್ಲ. ಇದರ ಫಲವಾಗಿ ಇಂದು ೯,೦೦೦ಕ್ಕೂ ಹೆಚ್ಚು ಮಕ್ಕಳು ಮಠದ ಅಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಲ್ಲಿ ಶೇ.೩೦ರಷ್ಟು ಮಕ್ಕಳು ಅನಾಥರು. ಇಂತಹ ಅನಾಥ ಮಕ್ಕಳಿಗೆ ಊಟ, ವಸತಿ, ಎಲ್ಲವನ್ನೂ ಮಠವೇ ಒದಗಿಸುತ್ತದೆ. ಕೇವಲ ಪಠ್ಯಾಧಾರಿತ ವಿದ್ಯೆಯಲ್ಲದೆ, ಆಧ್ಯಾತ್ಮಿಕ ಶಿಕ್ಷಣ ಕೂಡ ಸೇರಿ ಮಕ್ಕಳನ್ನು ಬೌದ್ಧಿಕವಾಗಿ ಮೇಲಕ್ಕೆತ್ತಿವೆ. ಕೇವಲ ತಮ್ಮ ಜಾತಿ, ವರ್ಗ, ಜನಾಂಗಕ್ಕೆ ಮಾತ್ರ ತಮ್ಮ ಸೇವೆಯನ್ನು ಸೀಮಿತತೊಳಿಸುವ ಮಠ-ಪೀಠಗಳಿರುವ ಇಂದಿನ ದಿನಗಳಲ್ಲಿ ಸಿದ್ಧಗಂಗಾ ಮಠವು ಯಾವುದೇ ಲೌಕಿಕ ನಿರ್ಬಂಧನೆಗಳಿಲ್ಲದೆ ಎಲ್ಲರಿಗೂ ಸಮಾನ ಹಸ್ತ ಚಾಚಿ ಇವನಾರವ, ಇವನಾರವ ಎನಬೇಡ, ಇವ ನಮ್ಮವ ಇವ ನಮ್ಮವ ಎನ್ನುತಿರು ಎಂದು ಲೋಕಕ್ಕೆ ಸಾರಿ ಹೇಳುತ್ತಿದೆ. ದೇಶದ ದೀಪಗಳಾದ ಮಕ್ಕಳಿಗೆ ಅಗತ್ಯವಿರುವ ಅನ್ನ, ಅಕ್ಷರ ಮತ್ತು ಧರ್ಮಬೋಧೆಗಳನ್ನು ಕೊಟ್ಟು, ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹಿ ಎಂದು ಕರೆಸಿಕೊಂದಿದ್ದಾರೆ. ಆತ್ಮಕಲ್ಯಾಣ ಮತ್ತು ಲೋಕ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಶ್ರೀಗಳ ದೇಹ ದಿನಕ್ಕೆ ಕೇವಲ ಮೂರು ಗಂಟೆ ಮಾತ್ರ ನಿದ್ರಿಸುತ್ತದೆ. ವಯಸ್ಸು ನೂರಾದರೂ ದೇಹ ಶಕ್ತಿ ಕುಂದಿಲ್ಲ. ನಡೆಯಲು ನೆರವು ಬೇಕಿಲ್ಲ. ಕಣ್ಣು ಕನ್ನಡಕ ಕೇಲುವುದಿಲ್ಲ. ನಾಲ್ಕು ಪುಟದ ಭಾಷಣವಿದ್ದರೂ ನಾಲಿಗೆ ತೊಡರುವುದಿಲ್ಲ. ಮುಖಕಮಲ ಹೂವಿನಂತೆ ಕಂಗೊಳಿಸುತ್ತಿರುತ್ತದೆ. ಇದು ಯಾವುದೋ ಪವಾಡವಲ್ಲ. ಅದ್ಭುತ, ಅಪರಿಮಿತ ಆತ್ಮಶಕ್ತಿಯ ಪ್ರಭಾವ. ಗುರುವಿಗೆ ತನುವನು, ಲಿಂಗಕ್ಕೆ ಮನವನು, ಲೋಕಕ್ಕೆ ಬದುಕನು ಅರ್ಪಿಸಿ ಶಿವಸುತನು ತಾನಾದಾಗ ಉದ್ಭವಿಸುವ ಭಗವತ್‌ಶಕ್ತಿ. ಇಂತಹ ಶ್ರೀಗಳು ತಮ್ಮ ನಿಸ್ವಾರ್ಥ ಬದುಕಿನಿಂದ 'ಕರ್ನಾಟಕ ರತ್ನ'ಕ್ಕೇ ಗೌರವ ತಂದಿದ್ದಾರೆ. ರಾಷ್ಟ್ರಪತಿ ಕಲಾಂರವರಿಗೆ ೩೬,೦೦೦ ದಿನಗಳನ್ನು ಕಳೆದಿರುವ ಶ್ರೀಗಳು ೩೬ ಸಹಸ್ರ ರತ್ನಗಳ ಸಂಯೋಗದಂತೆ ಕಂಡಿದ್ದಾರೆ. -ಬಾಲು ಪ್ರಸಾದ್.ಆರ್.

~.~
  • Login or register to post comments
  • 284 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 10, 2007 - 1:28pm — Sunil Jayaprakash

ದನಿಗೂಡು: ಕಾಯಕ ಯೋಗಿಗೆ ನೂರು ವರ್ಷ

Sunil Jayaprakash's picture

ಇದಕ್ಕೆ ಪೂರಕವಾಗಿ ಈದಿನದ ಪ್ರಜಾವಾಣಿಯ ಒಂದು ವರದಿಯನ್ನು ಓದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿಶ್ವಗುರು,ಭಕ್ತಿಭಂಡಾರಿ,ಕಾಯಕಯೋಗಿ,ತ್ರಿವಿಧ ದಾಸೋಹಿ ಬಸವಣ್ಣನವರು||
  • ಬಂಜಗೆರೆ ಜಯಪ್ರಕಾಶ್ ಕೃತಿ ಬಗ್ಗೆ
  • ಮಾಧವ ನೆಲೆ...
  • ಇಂದು ರವಿವಾರ, ಜುಲೈ, ೨೯, ೨೦೦೭, ಗುರುಪೂರ್ಣಿಮೆ !
  • ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷ್‌ನ ‘ಪಿತ್ತ’
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

I am a simple life loving person with a sensitive heart.

ನಾನು ಇಂಜಿನಿಯರಿಂಗ್ ಓದುತ್ತಿದ್ದೇನೆ. ನಾನು ಹಾಗೂ ನನ್ನ ಗೆಳೆಯರು ಸೇರಿ ಒಂದು ಸಣ್ಣ ಪತ್ರಿಕೆಯೊಂದನ್ನು ಪ್ರತಿ ತಿಂಗಳು ಹೊರಡಿಸುತ್ತಿದ್ದೇವೆ. ಅದರ ಬ್ಲಾಗು ಇಲ್ಲಿದೆ:http://kalaravapatrike.wordpress.com/
ನನ್ನ ಬ್ಲಾಗು:
http://uniquesupri.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 10:17am
  • girish.rajanal
    ಉ: ಭಾವಾಭಿಷೇಕ
    July 5, 2008 - 10:17am
  • Sunil Jayaprakash
    ಉ: ಜಿಮೇಲ್ ಕನ್ನಡ
    July 5, 2008 - 10:16am
  • omshivaprakash
    ಉ: kannada kanda
    July 5, 2008 - 9:38am
  • hamsanandi
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 5, 2008 - 9:29am
  • Narayana
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:29am
  • omshivaprakash
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20am
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 7:09am
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 5:52am
  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 29 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator