ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕಲ್ಲು ಹೇಳಿದ ಕತೆ

September 15, 2005 - 11:01pm — gvmt

[ ಹೊಸ ದಿಲ್ಲಿಯಲ್ಲಿಯಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕರ್ನಾಟಕದಿಂದ ತಂದ ವೀರಗಲ್ಲೊಂದನ್ನು ನಿಲ್ಲಿಸಿದ್ದಾರೆ. ಅದನ್ನು ಆಧರಿಸಿ ಬರೆದದ್ದು ಈ (ಅರೆಕಾಲ್ಪನಿಕ) ಕಥೆ. - ವೆಂ. ]

ನಮ್ಮದೊಂದು ಹಳ್ಳಿ. ಹೇಳಿಕೊಳ್ಳುವಂತಹದು ಏನೂ ಇಲ್ಲದ ಸಾಮಾನ್ಯ ಹಳ್ಳಿ. ಬೇಸಾಯದ ಬದುಕು. ಆಗಾಗ ದಂಡಿಗೆ ಕರೆಬರುವುದು. ಊರಿಗಿಷ್ಟು ಮಂದಿ ಗಂಡಾಳುಗಳು ದಂಡಿಗೆ ಹೊರಡಬೇಕು. ದಂಡಿಗೆ ಹೋದವರಲ್ಲಿ ಎಲ್ಲರೂ ಮರಳಿ ಬಾರರು. ಕಾಳಗದಲ್ಲಿ ಬಿದ್ದವರಿಗೆ ದೊರೆಗಳು ನೆಲ ಕಾಣಿ ಬಿಟ್ಟರೆಂದು ಕೇಳುವುದುಂಟು. ನಮ್ಮ ಹಳ್ಳಿಯವರೂ ಬಿದ್ದರು. ಇದ್ದವರು ಇದ್ದಹಾಗೆಯೇ ಇದ್ದಾರೆ, ನೆಲವಿಲ್ಲ ಕಾಣಿಯಿಲ್ಲ. ಮರಳಿದವರಿಗೂ ಕಾಳಗ ಮುಗಿಯಿತೆಂದಿಲ್ಲ. ಇದ್ದಾರಲ್ಲ, ಪಕ್ಕದೂರಿನವರು. ಜನಮೇಜಯರಾಯನ ಕಾಲದಿಂದಲೂ ನಮಗೂ ಅವರಿಗೂ ಆಗದು. ನಾವು ಅವರ ಮೇಲೆ ಕೈಮಾಡುವುದೂ ಅವರು ನಮ್ಮ ಮೇಲೆ ಕೈಮಾಡುವುದೂ ನಡೆಯುತ್ತಲೆ ಇರುತ್ತದೆ. ಇದು ಸರ್ವೇಸಾಮಾನ್ಯ. ಯಾರಿಗೆ ಯಾರು ಹೇಳುವುದು? ದೊರೆಗಳೂ ಏನು ಮಾಡಿಯಾರು? ಅವರಿಗೆ ದಂಡಿನ ಚಿಂತೆ. ನಮ್ಮ ಮನೆ ಮಾರು ದನ ಕಾಯ್ದುಕೊಳ್ಳುವುದು ನಮ್ಮ ನಮ್ಮ ಚಿಂತೆ.

ಮೊನ್ನೆ ಹೀಗಾಯಿತು. ನಮ್ಮೂರಿನವರೂ ಆವೂರಿನವರೂ ದಂಡಿನಿಂದ ಮರಳುತ್ತಿದ್ದರು. ದಾರಿಯಲ್ಲಿ ಏನೋ ಜಗಳ. ಕಿಡಿ ಹಾರುತ್ತಲೆ ಇತ್ತು. ಊರ ಬಳಿ ಬಂದಾಗ ಹೊತ್ತಿಕೊಂಡಿತು. ಅವರು ನಮ್ಮ ಆಕಳು ಮೇಯುತ್ತಿದ್ದ ಮಾಳಕ್ಕೆ ನುಗ್ಗಿ ದನಗಳನ್ನು ಸುತ್ತುಗಟ್ಟಿ ಹೊಡೆದುಕೊಂಡು ಹೊರಟರು. ಆಕಳು ನಮ್ಮ ಜೀವಾಳ. ನಾವು ಸುಮ್ಮನೆ ಬಿಟ್ಟೇವೆ? ಅವರನ್ನು ಅಟ್ಟಿಕೊಂಡು ಹೋದೆವು.

ವೀರಗಲ್ಲು

ಅವರಲ್ಲಿ ಕೆಲವರು ನಮ್ಮ ಮೇಲೆ ಎರಗಿದರು. ಕಾಳಗಕ್ಕೆ ಒಯ್ದಿದ್ದ ಈಟಿ ಭಲ್ಲೆಗಳು ಜೊತೆಗೆ ಇದ್ದವು. ನಾವೇನು ಬರಿಗೈ ಬಂಟರಲ್ಲ; ನಮ್ಮಲ್ಲಿಯೂ ಬಿಲ್ಲು, ಕಣೆಗಳು ಇದ್ದವು. ಕಾದಾಟ ಬಿರುಸಾಗಿಯೆ ಜರುಗಿತಂತೆ, ಕಂಡವರು ಹೇಳುತ್ತಾರೆ. ನಮಗಿಂತಲೂ ಅವರು ಮಂದಿ ಹೆಚ್ಚು. ಆದರೂ ಅವರನ್ನು ಚೆನ್ನಾಗಿಯೇ ಬಡಿದೆವು. ಆಕಳನ್ನು ಬಿಡಿಸಿಕೊಂಡೆವು. ಅವರನ್ನು ಕುಯ್ಯೋ ಮರ್ರೋ ಎನ್ನಿಸುತ್ತ ಓಡಿಸಿದೆವು. ನಮಗೆ ಏಟು ಬೀಳದೆ ಇಲ್ಲ. ನಮ್ಮೂರಿನ ಬಂಟ ಒಬ್ಬ ಬಿದ್ದ.

ಮಕ್ಕಳೊಂದಿಗ, ಎಷ್ಟೋಬಾರಿ ದಂಡಿಗೆ ಹೋಗಿ ಹೆಸರು ಮಾಡಿ ಮನೆಗೆ ನಡೆದು ಬಂದವ, ಇಲ್ಲಿ ಬಿದ್ದ. ದೊರೆಗಳ ಕಾಳಗದಲ್ಲಾದರೂ ಬಿದ್ದಿದ್ದರೆ ನೆಲ ಕಾಣಿ ಸಿಗುತ್ತಿತ್ತೇನೊ, ಆ ಹಾಳು ತುರುಗಳ್ಳರನ್ನು ಬಡೆಯುತ್ತ ಊರಮುಂದೆ ಬಿದ್ದ. ಅವನೇನು ಸಾವಿಗೆ ಹೆದರುವನಲ್ಲ. ಗೆದ್ದರೆ ಸಂಪತ್ತು, ಸತ್ತರೆ ಸ್ವರ್ಗ ಎಂದು ನಂಬಿದ ಎದೆಗಾರ. ಅವನಿಗೆ ಸ್ವರ್ಗವೆ ಸಿಕ್ಕಿರಬೇಕು. ಅಚ್ಚರಸಿಯರು ಬಂದು ಅವನ ನೆಚ್ಚಿನ ಶಿವನೆಡೆಗೆ ಕರೆದೊಯ್ದಿರಬೇಕು. ನಮಗೆ ನಮ್ಮ ಆಕಳು ಸಿಕ್ಕಿದವು. ಅವನು ಬಿಟ್ಟು ಹೋದ ಮನೆಮಂದಿಯ ಬಗ್ಗೆ ಚಿಂತೆ ಬೇಡ. ಊರವರು ನಾವು ಒಂದಾಗಿ ಅವರನ್ನು ನಡೆಸಿಕೊಳ್ಳುತ್ತೇವೆ. ಊರಿಗಾಗಿ ಪ್ರಾಣಕೊಟ್ಟವನಿಗೆ ಅಷ್ಟಾದರೂ ಸಲ್ಲಬೇಡವೆ? ಹಾಗೆಯೆ ನಮ್ಮ ಬಂಟನ ಕುರುಹಾಗಿ ಒಂದು ಕಲ್ಲನ್ನೂ ನಿಲ್ಲಿಸುತ್ತೇವೆ. ಆದರೆ ನಮ್ಮವನನ್ನು ಕೊಂದ ಸೇಡು ತೀರಲೆ ಬೇಕು. ನಮ್ಮ ಆಕಳನ್ನು ಹಿಡಿದರೆ ಅವರ ಹೆಂಗಳನ್ನು ಹಿಡಿಯುತ್ತೇವೆ. ನಮ್ಮ ಮೇಲೆ ಕೈಮಾಡಿದ ಅವರ ಮೇಲೆ ಕೈಮಾಡದೆ ಬಿಡೆವು. ನಮಗೂ ಅವರಿಗೂ ನಡೆಯುತ್ತಲೆ ಇರುತ್ತದೆ. ಇದು ಸರ್ವೇಸಾಮಾನ್ಯ.

  • ಸಣ್ಣ ಕಥೆ
~.~
  • Login or register to post comments
  • 708 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು
  • ಕಾವೇರಿ ಶಾಪವೋ, ವರವೋ!
  • ಈ ಭೂಮಿ ತಾಯಿಯನು ಉಳಿಸೋಣ..
  • ನಾವು ಮಾಡಿದವರು ನಮಗೆ (ಎಡರೊತ್ತಿನಲ್ಲಿ) ಆಗಲ್ಲ - ತಿಳಿವು/ನೀತಿ
  • ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
Syndicate content

ಲೇಖಕರು

gvmt's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 58 ಅತಿಥಿಗಳು ಆನ್ಲೈನ್ ಇರುವರು.


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator