ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬ್ರೆಕ್ಟ್ ನ ವಿಶಿಷ್ಟ ನಾಟಕ 'ಚಾಕ್ ಸರ್ಕಲ್'ಪ್ರದರ್ಶನ ಕುರಿತ ವಿಮಶರ್ೆ

May 25, 2007 - 5:27pm — jaykumarhs

ಪ್ರಸಿದ್ದ ನಾಟಕಕಾರ ಬಟರ್ಾಲ್ ಬ್ರೆಕ್ಟ್ ರವರ 'ಚಾಕ್ ಸರ್ಕಲ್' ನಾಟಕ ಪ್ರದರ್ಶನ

ರಾಷ್ಟ್ರೀಯ ನಾಟಕ ಶಾಲೆಯ ಪ್ರಾಯೋಜನೆಯಲ್ಲಿ ಕುಂದಾಪುರದ ರಂಗಕಲಾ ತಂಡದವರಿಂದ ಪ್ರಸಿದ್ದ ನಾಟಕಕಾರ ಬಟರ್ಾಲ್ ಬ್ರೆಕ್ಟ್ ರವರ 'ಚಾಕ್ ಸರ್ಕಲ್' ನಾಟಕದ ಕನ್ನಡ ರೂಪಾಂತರವನ್ನು ಎ.ಡಿ.ಎ ರಂಗಮಂದಿರದಲ್ಲಿ ದಿ: 09.12.2006 ರಂದು ಪ್ರದಶರ್ಿಸಲಾಯಿತು. ಪಾತ್ರಗಳ ಲಯಸಾಧನೆ, ನಾಟಕದುದ್ದಕ್ಕೂ ಕೇಳಿಬರುವ ಸಂಗೀತ ಮತ್ತು ದೃಶ್ಯಗಳ ಸಮ್ಮಿಲನ ಸಾಧಿಸುವಲ್ಲಿ ಕೆಲಮಟ್ಟಿಗೆ ಕೊರತೆ ಕಂಡರೂ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆರೆಹಿಡಿಯುವಲ್ಲಿ ಈ ಕನ್ನಡ ರೂಪಾಂತರ ಅವತರಣಿಕೆಯು ಒಂದು ಉತ್ತಮ ಪ್ರಯತ್ನವೆನ್ನಬಹುದು.

ಬಟರ್ಾಲ್ಟ್ ಬ್ರೆಕ್ಟ್ (1898-1956) ಜರ್ಮನಿ ಕಂಡ ವಿಶ್ವದ ಅತಿ ಶ್ರೇಷ್ಟ ನಾಟಕಕಾರ. ಬ್ರೆಕ್ಟ್ ರಂಥಹ ನಾಟಕೀಯ ಪರಿಣಾಮವನ್ನು ಪ್ರಪಂಚದ ಕೆಲವೇ ಕೆಲವು ನಾಟಕಕಾರರು ಹೊಂದಿದ್ದಾರೆ. ಅವರ ನಾಟಕಗಳು ಹಲವಾರು ನಾಟಕಕಾರರು, ಬರಹಗಾರರು, ವಿಚಾರವಾದಿಗಳು ಸೇರಿದಂತೆ ನವ ಪ್ರೇಕ್ಷಕರ ಪೀಳಿಗೆಯನ್ನೇ ರೂಪಿಸಿವೆ ಹಾಗೂ ನಾಟಕರಂಗದ ಆಯಾಮವನ್ನೇ ಬದಲಾಯಿಸಿದ ಅವರ ಬರಹಗಳನ್ನು ವಿಶ್ವದಾದ್ಯಂತ ಗಂಭೀರವಾಗಿ ಅಭ್ಯಸಿಸಲಾಗುತ್ತದೆ.

ಬಟರ್ಾಲ್ಟ್ ಬ್ರೆಕ್ಟ್ ದ್ವಿತೀಯ ಮಹಾಯುದ್ದ ಸಮಯದಲ್ಲಿ ಆರು ವರ್ಷಗಳ ಕಾಲ ಅಮೇರಿಕಾದಲ್ಲಿ ಭೂಗತರಾಗಿದ್ದಾಗ 'ಚಾಕ್ ಸರ್ಕಲ್' ನಾಟಕವನ್ನು ಜಾಜರ್ಿಯಾದ ಕಕೇಷಿಯ ಪರ್ವತದ ತಪ್ಪಲಿನ ಪರಿಸರದಲ್ಲಿ ರೂಪಿಸಿದ್ದು ಪುರಾತನ ಚೀನಾದ ದಂತಕಥೆ & ದೊರೆ ಸಾಲೋಮನ್ ಜನಪದ ಕಥೆಯ ಆಧಾರದ ಮೇಲೆ ರಚಿಸಿದ್ದಾರೆ.

ಪೂತರ್ಿ ಹಾಡಿನಿಂದ ತುಂಬಿರುವ ಹಾಸ್ಯ ಮತ್ತು ನಾಟಕೀಯ ಕ್ಷಣಗಳಿಂದ ರಂಜಿಸುತ್ತಲೇ ಸಾಮಾನ್ಯ ವ್ಯಕ್ತಿಗಳ ಮೇಲೆ ರಕ್ಕಸ ಯುದ್ದ ತರುವ ಸಂಚಕಾರಗಳನ್ನು, ವೈಯುಕ್ತಿಕ ಜವಾಬ್ದಾರಿ, ಹಿಂಸೆ, ನೋವು ನರಳಾಟ, ಸಂಕಷ್ಟ ಕಾಲದಲ್ಲಿ ಮತ್ತು ಜೀವನದ ವಿರೋಧಾಭಾಸದ ಮಜಲುಗಳಲ್ಲಿ ಮಾನವ ಮಾಡುವ ಆಯ್ಕೆ, ಇವೆಲ್ಲವುಗಳನ್ನು ಕಲಾವಿದ ಬ್ರೆಕ್ಟ್ ಅದ್ಭುತ ರೀತಿಯಲ್ಲಿ ಭಾವನಾತ್ಮಕವಾಗಿ ಸೆರೆಹಿಡಿದಿದ್ದಾರೆ. ಇದು ಬಹುತೇಕ ಇಂದಿನ ಇಸ್ತ್ರೇಲ್-ಪ್ಯಾಲೇಸ್ಟೀನ್ ಚಿತ್ರಣವನ್ನು, ಯುದ್ದ ಭೂಮಿಯಲ್ಲಿ ನರಕಸದೃಶವಾಗಿರುವ ಇರಾಕ್ನ ಯಾತನೆಗಳನ್ನು ಪ್ರೇಕ್ಷಕನ ಕಣ್ಣಿಗೆ ಕಟ್ಟಿಕೊಡಲೆತ್ನಿಸುತ್ತದೆ.

ಕಕೇಷಿಯಾ ರಾಜ್ಯದ ದುರ್ಬಲ ರಾಜ ಆಂತರಿಕ ಯುದ್ದದಲ್ಲಿ ಶತ್ರುಗಳಿಂದ ಕೊಲ್ಲಲ್ಪಡುತ್ತಾನೆ. ಶತ್ರುಸೇನೆ ರಾಜ್ಯವನ್ನು ಮುತ್ತಿಗೆ ಹಾಕಿ ವಶಪಡಿಸಿಕೊಳ್ಳಲು ಆಕ್ರಮಿಸಿದಾಗ ರಾಣಿ ನಟೆಲ್ಲಾ ವಜ್ರ, ವೈಡೂರ್ಯ, ವಸ್ತ್ರಗಳನ್ನು ಕೊಂಡೊಯ್ಯುವ ಭರದಲ್ಲಿ ತನ್ನ ಮಗು ಮೈಕೆಲ್ನ್ನೇ ಮರೆತು ಸೇವಕಿಯರೊಂದಿಗೆ ಅರಮನೆ ಬಿಟ್ಟು ಶತ್ರುಸೇನೆಯಿಂದ ತಪ್ಪಿಸಿಕೊಂಡು ಓಡಿಹೋಗುತ್ತಾಳೆ. ಆದರೆ ರಾಣಿಯ ಮತ್ತೊಬ್ಬ ಸೇವಕಿ ಗ್ರೂಷಾ ಅನಾಥವಾಗಿ ಬಿದ್ದಿರುವ ಮಗುವನ್ನೆತ್ತಿಕೊಂಡು ಅದನ್ನು ಕೊಲ್ಲಲು ಬೆಂಬತ್ತಿ ಬರುತ್ತಿರುವ ಶತ್ರುಸೇನೆಯ ಕಣ್ಣುತಪ್ಪಿಸಿ ಹಗಲಿರುಳೆನ್ನದೆ ನಿದ್ರಾಹಾರಗಳಿಲ್ಲದೆ ಪವಾಡ ಸದೃಶ ರೀತಿಯಲ್ಲಿ ಪಕ್ಕದ ರಾಜ್ಯದಲ್ಲಿರುವ ತನ್ನ ಅಣ್ಣನ ಮನೆಗೆ ಓಡಿಹೋಗಿ ತಪ್ಪಿಸಿಕೊಳ್ಳುತ್ತಾಳೆ.

ಇವಳ ಪ್ರಿಯಕರ ಸೈಮನ್ ಯುದ್ದ ಮುಗಿಸಿ ಬರುತ್ತೇನೆಂದು ಹೋದವನು ಯುದ್ದ ಮುಗಿಯುತ್ತಾ ಬಂದರೂ ಪತ್ತೆಯೇ ಇರುವುದಿಲ್ಲ. ಗ್ರೂಷಾಳ ಅಂಜುಬುರುಕ ಅಣ್ಣ ತನ್ನ ಹೆಂಡತಿಗೆ ಹೆದರಿ ಮಹಾನ್ ಸಾಹಸವನ್ನೇ ಮಾಡಿ ಮಗುವನ್ನು ಹೊತ್ತು ಬಳಲಿ ಬೆಂಡಾಗಿ ಬರುವ ಗ್ರೂಷಾಳಿಗೆ ಆಶ್ರಯ ನೀಡಲೂ ಹೆಣಗುತ್ತಾನೆ. ಯುದ್ದಕರೆಗೆ ಬೆದರಿ ಮರಣಶಯ್ಯೆಯಲ್ಲಿ ಈಗಲೋ ಆಗಲೋ ಸಾಯುವವನಂತೆ ಬಿದ್ದಿರುವವನೊಂದಿಗೆ ಅಣ್ಣನ ಬಲವಂತಕ್ಕೂ ಮಗುವಿಗೊಬ್ಬ ತಂದೆಯಿರಬೇಕೆಂಬ ಸಮಾಜದ ಒತ್ತಡಕ್ಕೂ ಸಿಲುಕಿ ಗ್ರೂಷಾಳ ಮದುವೆಯಾಗುತ್ತದೆ. ಯುದ್ದ ಮುಗ್ಧ ಜೀವಗಳನ್ನು ಬಲಿತೆಗೆದುಕೊಂಡು ರಕ್ತದ ಕೋಡಿ ಹರಿಸುತ್ತದೆ, ಬದುಕುಳಿದವರಿಗೆ ವಾಸಿಯಾಗದ ಗಾಯವನ್ನುಂಟುಮಾಡುತ್ತದೆ.

ಯುದ್ದ ಮುಗಿದ ಸುದ್ದಿ ಕೇಳಿ ಅತ್ಯಾಶ್ಚರ್ಯಕರವಾಗಿ ಆರೋಗ್ಯಗೊಂಡು ಸೆಟೆದೆದ್ದು ನಿಲ್ಲುವ ಗ್ರೂಷಾಳ ಗಂಡ, ಮತ್ತು ಅವಳ ಪ್ರಿಯಕರ ಸೈಮನ್ ಯುದ್ದ ಮುಗಿಸಿ ಗ್ರೂಷಾಳನ್ನು ಹುಡುಕಿಕೊಂಡು ಬರುವ ಚಿತ್ರಣಗಳು ಗ್ರೂಷಾಳನ್ನು ಸಾಯಲೂ ಬಿಡದೆ ಬದುಕಲೂ ಬಿಡದೆ ತ್ರಿಶಂಕು ಸ್ಥಿತಿಯಲ್ಲಿ ತೂಗೂಯ್ಯಾಲೆಯಾಡಿಸುತ್ತವೆ.

ಏಳೆಂಟು ವರ್ಷಕಾಲ ಅರಮನೆ ಮಗುವನ್ನು ತಾನೇ ಹೊತ್ತು ಬೆಳೆಸುವ ಗ್ರೂಷಾಳಿಗೆ ಮತ್ತೊಂದು ಆಘಾತ ಕಾದಿರುತ್ತದೆ. ಇವಳ ಬಳಿಯೇ ಮಗುವಿದೆಯೆಂದು ಹೇಗೋ ಪತ್ತೆ ಹಚ್ಚಿದ ರಾಣಿ ನಟೆಲ್ಲಾ ತನ್ನ ಮೈಕೆಲ್ನ್ನು ತನಗೇ ಕೊಡಬೇಕೆಂದು ದುಂಬಾಲು ಬೀಳುತ್ತಲೇ ಇಬ್ಬರೂ ನ್ಯಾಯಾಲಯದ ಕಟಕಟೆ ಹತ್ತುತ್ತಾರೆ. ಭ್ರಷ್ಟಗೊಂಡಿರುವ ನ್ಯಾಯಾಲಯದಲ್ಲಿ ತನಗೆ ನ್ಯಾಯ ಸಿಗುವ ಸಾಧ್ಯತೆಯೇ ಇಲ್ಲವೆಂದು ಗ್ರೂಷಾ ಆತಂಕ ಪಡುತ್ತಿರುವಾಗಲೇ ಅಸಂಬದ್ಧತೆ ಮತ್ತು ಸಿನಿಕತನದಿಂದ ಕೂಡಿರುವ ಜಾಣ-ಮೂರ್ಖ ನ್ಯಾಯಾಧಿಪತಿ ಅಸ್ದಾಕ್ 'ಚಾಕ್ (ಸೀಮೆ ಸುಣ್ಣದ) ಸರ್ಕಲ್' ಬರೆದು ಮಗು ಮೈಕೆಲ್ ನ 'ನೈಜ ತಾಯಿ' ಯನ್ನು ಪತ್ತೆಹಚ್ಚುವ ಮೂಲಕ ನಾಟಕ ಅಂತ್ಯ ಕಾಣುತ್ತದೆ. ಪರರಿಗೆ ಒಳಿತು ಬಯಸುವ ಸ್ವಾರ್ಥರಹಿತ ಬದ್ದತೆಯ ವ್ಯಕ್ತಿಯಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು ಅಂತಿಮವಾಗಿ ವಿಜಯಸಾಧಿಸುತ್ತಾ ಹೊರಹೊಮ್ಮುವುದು ಗ್ರೂಷಾಳ ಪಾತ್ರ.

ದುಲರ್ಾಭ ಪಡೆಯಲೆತ್ನಿಸುವ ಧರ್ಮ, ಅನ್ಯಾಯ ಮತ್ತು ಸಾಮಾಜಿಕ ಅಸಮಾನತೆಗಳ ಮೇಲೆ ಬ್ರೆಕ್ಟ್ ರವರ ನಾಟಕ ತನ್ನ ಪ್ರತಿಯೊಂದು ಪಾತ್ರಗಳ ಮೂಲಕ ನಿದರ್ಾಕ್ಷಿಣ್ಯವಾಗಿ ದಾಳಿ ಮಾಡುತ್ತದೆ. ಅಂತಃಕರುಣವಿಲ್ಲದ ಅಧಿಕಾರದ ಅಸ್ಥಿತ್ವವನ್ನು ವ್ಯಂಗ್ಯ ಮಾತುಗಳಿಂದ, ಬ್ರೆಕ್ಟ್ ಇಕ್ಕೆಲಗಳಿಂದ ತೀಕ್ಷ್ಣವಾಗಿ ಇರಿದು ಘಾಸಿಗೊಳಿಸುತ್ತಾರೆ. ಹಾಗೆಯೇ ಪ್ರೇಕ್ಷಕರು ಪಾತ್ರಗಳಲ್ಲಿ ವಿಲೀನವಾಗಿ ಮೈಮರೆಯುವಂತೆ ಮಾಡುವ ಬದಲು ಅವರು ಮತ್ತಷ್ಟು ಆಲೋಚಿಸುವಂತೆ ಮಾಡುವುದು ಬ್ರೆಕ್ಟ್ ರವರ ಕಲೆ.

  • ವಿಮರ್ಶೆ
~.~
  • Login or register to post comments
  • 324 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 25, 2007 - 9:36pm — ASHOKKUMAR

ಉ: ಬ್ರೆಕ್ಟ್ ನ ವಿಶಿಷ್ಟ ನಾಟಕ 'ಚಾಕ್ ಸರ್ಕಲ್'ಪ್ರದರ್ಶನ ಕುರಿತ ವಿಮಶರ್ೆ

ASHOKKUMAR's picture

ಬ್ರಹ್ಮಲಿಪಿಯಲ್ಲಿ ಪ್ರಕಟವಾದ ಲೇಖನ ಇದೇ ಇರಬಹುದು ಅಂದುಕೊಳ್ಳುತ್ತೇನೆ. Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಹುರೂಪಿ, ಅನಂತಮೂರ್ತಿ ಹಾಗೂ ಗೆಲಿಲಿಯೊ
  • ಶ್ರದ್ಧಾ
  • ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'
  • ವಿವೇಕರ ಕಥಾಲೋಕ-4
  • ಶಿವಮೊಗ್ಗದಲ್ಲಿ ನಾಟಕ ಪ್ರದರ್ಶನ
Syndicate content

ಲೇಖಕರು

jaykumarhs's picture

ಪರಿಚಯ

Iam a post graduate in Environmental Engg. Reading Kannada literature and writing is my hobby.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator