ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬಿಸಿಯೇರುತ್ತಿರುವ ಭೂಮಿಯ ತಾಪಮಾನ ಮತ್ತು ಅಮೇರಿಕಾದ ಪರಿಸರ-ವಿರೋಧಿ ನೀತಿ:

May 28, 2007 - 4:44pm — jaykumarhs

ವಿಶ್ವದಾದ್ಯಂತ ತನ್ನ ಹಿತಾಸಕ್ತಿಗಾಗಿ ಬಂಡುಕೋರರಿಗೆ, ಭಯೋತ್ಪಾದಕರಿಗೆ ಒಂದಿಲ್ಲೊಂದು ಹಂತದಲ್ಲಿ ಬೆಂಬಲ ನೀಡುತ್ತಿರುವ ಹಾಗೂ ಜಾಗತಿಕ ಬಂಡವಾಳಶಾಹಿಗಳಿಗೆ ವಿಶ್ವ ನಾಯಕತ್ವ ನೀಡುತ್ತಿರುವ ಅಮೇರಿಕಾವು ಮಾಲಿನ್ಯಕೋರ ಖಾಸಗಿ ಕಂಪನಿಗಳಿಗೂ ಅಂತಹುದೇ ಪರಿಸರ-ವಿರೋಧಿ ನಾಯಕತ್ವವನ್ನು ನೀಡುತ್ತಿದೆ.

ಏರುತ್ತಿರುವ ಜಾಗತಿಕ ತಾಪಮಾನ:
ಭೂಮಿಯ ತಾಪಮಾನವು ಜಾಗತಿಕ ಮಟ್ಟದಲ್ಲಿ ಸತತವಾಗಿ ಏರುತ್ತಲೇ ಇದೆ. ಕೈಗಾರಿಕಾ ಚಟುವಟಿಕೆಗಳಿಂದ ಬಿಡುಗಡೆಯಾಗುವ ಮಲಿನಕಾರಕ ಅನಿಲಗಳು ವಾತಾವರಣದೊಳಗೆ ಸೇರಿ ಭೂಮಿಯ ವಾತಾವರಣವನ್ನು ರಕ್ಷಿಸುತ್ತಿರುವ ಓಜೋನ್ ಪದರವನ್ನು ನಾಶಪಡಿಸುತ್ತಿವೆ. ಇದರಿಂದಾಗಿ ಸೂರ್ಯನಿಂದ ಬಿಡುಗಡೆಯಾಗುವ ಅತಿನೇರಳೆ ಕಿರಣಗಳು ಭೂಮಿಯನ್ನು ತಲುಪಿ ಭೂಮಿಯ ಮೇಲ್ಮೈನ ವಾತಾವರಣದಲ್ಲೇ ಉಳಿದು ಭೂಮಿಯ ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಕಳೆದ ಶತಮಾನವೊಂದರಲ್ಲಿಯೇ 1 ಡಿಗ್ರಿ ಫ್ಯಾರನ್ಹೀಟ್ನಷ್ಟು ಹೆಚ್ಚಿರುವ ಉಷ್ಣಾಂಶವು ಮುಂಬರುವ ವರ್ಷಗಳಲ್ಲಿ ಕ್ಷಿಪ್ರಗತಿಯಲ್ಲಿ ಏರುತ್ತದೆ. ಕೆಲವು ಭೂಭಾಗಗಳಲ್ಲಿ 3ರಿಂದ 4 ಡಿಗ್ರಿ ಫ್ಯಾರನ್ಹೀಟ್ನಷ್ಟು ಉಷ್ಣಾಂಶ ದಾಖಲಾಗಿದೆ. ಹೆಚ್ಚುತ್ತಿರುವ ಉಷ್ಣಾಂಶದಿಂದಾಗಿ ಮಂಜುಗಡ್ಡೆಗಳು ಕರಗಿ ನೀರಾಗಿ ಹರಿಯುತ್ತಿವೆ. ಕೆಲವೇ ವರ್ಷಗಳಲ್ಲಿ ಹಿಮಪರ್ವತಗಳು ನೀರಾಗಿ ಹರಿಯತೊಡಗುತ್ತವೆ. ಕಡಲ ತೀರಗಳಲ್ಲಿ ಭೂಭಾಗವನ್ನು ಹೆಚ್ಚುತ್ತಿರುವ ಸಮುದ್ರ ನೀರಿನ ಮಟ್ಟವು ಆಕ್ರಮಿಸಿಕೊಳ್ಳತೊಡಗುತ್ತಿದೆ. 1999-2002 ದಲ್ಲಿ ದಾಖಲಾಗಿರುವ ಬರವು ಇಡೀ 40 ವರ್ಷಗಳಲ್ಲೇ ತೀವ್ರತರಹದ್ದಾಗಿದೆ. 2002 ರಲ್ಲಿ ಪಶ್ಚಿಮ ಅಮೇರಿಕಾದಲ್ಲಿ ಜರುಗಿದ ಕಾಳ್ಗಿಚ್ಚು 70 ಲಕ್ಷ ಎಕರೆಯನ್ನು ಭಸ್ಮಗೊಳಿಸಿದ್ದು ಕಳೆದ 50 ವರ್ಷಗಳಲ್ಲೇ ಎರಡನೇ ಅತಿದೊಡ್ಡ ನೈಸಗರ್ಿಕ ವಿಕೋಪವೆನಿಸಿದೆ. ಆಗಾಗ್ಗೆ ಮಾರಣಾಂತಿಕವಾಗಿ ಬೀಸುವ ಬಿಸಿಗಾಳಿಯಿಂದಾಗಿ 2003ನೇ ವರ್ಷವೊಂದರಲ್ಲಿ, ಯೂರೋಪ್ನಲ್ಲಿ 20,000 ಮಂದಿ ಸಾವನ್ನಪ್ಪಿದ್ದರೆ, ಭಾರತದಲ್ಲಿ 1,500 ಮಂದಿ ಸಾವನ್ನಪ್ಪಿದ್ದಾರೆ. ಡೆಂಗೆ ಮತ್ತು ಮಲೇರಿಯಾದಂಥಹ ಕಾಯಿಲೆ ಹರಡುವ ಸೊಳ್ಳೆಗಳು ಈ ಮೊದಲು ಸಮುದ್ರ ಮಟ್ಟದಿಂದ 3,200 ಅಡಿ ಎತ್ತರದ ಪ್ರದೇಶಗಳಿಗಷ್ಟೇ ಸೀಮಿತವಿದ್ದವು. ಆದರೀಗ ಉಷ್ಣಾಂಶದ ಹೆಚ್ಚಳದಿಂದಾಗಿ ಇಂಡೋನೇಷ್ಯಾ ಮತ್ತು ಕೊಲಂಬಿಯಾದ ಆಂಡೀಸ್ ಪರ್ವತಗಳಂಥಹ 7,200 ಅಡಿ ಎತ್ತರದ ಪ್ರದೇಶಗಳಿಗೂ ಪ್ರವೇಶಿಸಿ ಸೊಳ್ಳೆಗಳು ಬದುಕುವ ಶಕ್ತಿಹೊಂದಿವೆ. ಬದಲಾಗುವ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳಲಾಗದೆ ಅಪಾರ ಜೀವ ವೈವಿಧ್ಯವು ವಿನಾಶದ ಅಂಚನ್ನು ತಲುಪುತ್ತವೆ.

ಕ್ಯೋಟೋ ಒಪ್ಪಂದ:
ಕ್ಯೋಟೋ ಒಪ್ಪಂದದ ಪ್ರಕಾರ 2010ರ ವೇಳೆಗೆ ಕೈಗಾರಿಕಾ ರಾಷ್ಟ್ರಗಳು 1990ರ ಮಟ್ಟದಲ್ಲಿ ಶೇ. 8ರಷ್ಟು ಅನಿಲ ವಿಸರ್ಜನೆಯನ್ನು ಕಡಿತಗೊಳಿಸುವಂತೆ ನಿಬಂಧನೆಗೆ ಒಳಪಡಬೇಕಾಗುತ್ತದೆ. ಇಂಥಹ ವಿಷಪೂರಿತ ಅನಿಲಗಳ ವಿಸರ್ಜನೆಯನ್ನು ಕಡಿತಗೊಳಿಸುವಂತೆ ಕ್ಯೋಟೋ ಒಪ್ಪಂದಕ್ಕೆ ಯೂರೋಪ್ ರಾಷ್ಟ್ರಗಳಾದಿಯಾಗಿ ವಿಶ್ವದ ಬಹುತೇಕ ಎಲ್ಲ ಕೈಗಾರಿಕೀಕೃತ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು (ಅಂದಾಜು 160 ರಾಷ್ಟ್ರಗಳು) ಮುಂದಾಗಿ ಸಹಿ ಹಾಕಿವೆ. ಆದರೆ ಅಮೇರಿಕಾದ ಬಂಡವಾಳಿಗರ ದೊರೆಯೂ ವಿಶ್ವದ ನಂ.1 ಮಲಿನಕೋರ ರಾಷ್ಟ್ರದ ಅಧ್ಯಕ್ಷರೂ ಆದ ಬುಶ್ ಮಾತ್ರ ಇಡೀ ವಿಶ್ವದ ಪ್ರಶ್ನಾತೀತ ನಾಯಕನಾದ ತಾನು ಇಂಥಹ ನಿಬಂಧನೆ ವಿಧಿಸುವ ಒಪ್ಪಂದಗಳಿಗೆಲ್ಲ ಸಹಿ ಹಾಕಿ ತನ್ನ ದೇಶೀಯ ಎಕ್ಸಾನ್, ಮೊಬಿಲ್ ನಂಥಹ ತೈಲ ಉತ್ಪಾದಿಸುವ ಮಲಿನಕೋರ ದೈತ್ಯ ಕಂಪನಿಗಳಿಗೆ ಕಡಿವಾಣ ಹಾಕುವುದಿಲ್ಲವೆಂದು ಬಾಲಿಶವಾಗಿ ವತರ್ಿಸುತ್ತಿದ್ದಾರೆೆ.

ಅಮೇರಿಕಾವೊಂದು ಅತಿದೊಡ್ಡ ಬಹುರಾಷ್ಟ್ರೀಯ ಕಂಪನಿ?:
ಪರಿಸರ ಸಂರಕ್ಷಣೆಗೆ ಅವಶ್ಯವಾದ ಬಂಡವಾಳ ಹೂಡಿಕೆ ಮಾಡಬೇಕಾಗಿರುವುದರಿಂದ, ತಾವೇ ಉಗುಳುವ ಮಲಿಕಾರಕ ಅನಿಲಗಳನ್ನು ಶುದ್ದಿಗೊಳಿಸಲು ತಗಲುವ ವೆಚ್ಚವನ್ನು ಭರಿಸಲು ಲಾಭದಾಸೆಗಾಗಿ ಈ ದೈತ್ಯ ಕಂಪನಿಗಳು ಇಚ್ಚಿಸುವುದಿಲ್ಲ. ಹಾಗೆಯೇ ಕೊಳ್ಳುಬಾಕ ಪ್ರವೃತ್ತಿಯಿಂದಾಗಿ ಕೈಗಾರೀಕಾ ರಾಷ್ಟ್ರಗಳಲ್ಲಿರುವ ಶೇ. 20ರಷ್ಟು ವಿಶ್ವದ ಜನತೆಯು ಶೇ. 80ರಷ್ಟು ಸಂಪನ್ಮೂಲಗಳನ್ನು ಬಳಸಿ ಬಿಸಾಡುತ್ತಿದ್ದು ಅತೀವ ಮಾಲಿನ್ಯಕ್ಕೆ ಕಾರಣರಾಗಿದ್ದರೆ, ಹಿಂದುಳಿದ ರಾಷ್ಟ್ರಳಲ್ಲಿರುವ ಶೇ. 80ರಷ್ಟು ವಿಶ್ವದ ಜನತೆಯು ಬರೇ ಶೇ. 20ರಷ್ಟು ಸಂಪನ್ಮೂಲಗಳನ್ನಷ್ಟೆ ಬಳಸುತ್ತಿದ್ದಾರೆ. ಜೊತೆಗೆ ಅಮೇರಿಕಾದ ಯುದ್ದ-ಸಂಬಂಧಿತ ಶಸ್ತ್ರಾಸ್ತ್ರ, ತೈಲ ಮತ್ತು ವಿಮಾನ ತಯಾರಿಕಾ ಕಾಖರ್ಾನೆಗಳಿಂದ ಹೆಚ್ಚಿನ ಮಾಲಿನ್ಯವುಂಟಾಗುತ್ತಿದೆ ಮತ್ತು ಈ ಕೈಗಾರಿಕಾ ಲಾಬಿಗೆ ಬುಷ್ ಸಹಜವಾಗಿಯೇ ಮಣಿದಿದ್ದಾರೆ. ಆಟೋಮೊಬೈಲ್, ತೈಲ, ಅನಿಲ, ಕಲ್ಲಿದ್ದಲು ಮತ್ತು ನ್ಯೂಕ್ಲಿಯರ್ ಕಂಪನಿಗಳು ಬುಷ್ ರವರ ಬೆನ್ನೆಲುಬಾಗಿದ್ದು ಚುನಾವಣಾ ಸಮಯದಲ್ಲಿ 5 ಕೋಟಿ ಡಾಲರ್ಗೂ ಹೆಚ್ಚಿನ ನಿಧಿಯನ್ನು ಅವರಿಗೆ ನೀಡಿವೆ. ಚುನಾವಣೆಯಲ್ಲಿ ಗೆದ್ದು ಬಂದಾಕ್ಷಣವೇ ಕ್ಯೋಟೋ ಒಪ್ಪಂದಕ್ಕೆ ತಾವು ಸಹಿ ಹಾಕುವುದಿಲ್ಲವೆಂದು ಘೋಷಿಸಿದ ಬುಷ್, ನಮಗೆ ನಮ್ಮ ಆಥರ್ಿಕತೆ ಮುಖ್ಯವೇ ಹೊರತು, ಅಮೇರಿಕಾದಲ್ಲಿ ವಾಸಿಸುವ ಜನ ಮುಖ್ಯವೇ ಹೊರತು ಮತ್ತಿನ್ನೇನಲ್ಲ ಎಂದಿದ್ದರು. ಅಮೇರಿಕಾವೊಂದು ರಾಷ್ಟ್ರವೇ ಅಥವಾ ಅದೊಂದು ಬಹುರಾಷ್ಟ್ರೀಯ ಕಂಪನಿಯೇ ಎಂದು ಸಂಶಯಪಡುವಂತಾಗಿದೆ.

ವಿಶ್ವದ ಅನಿಲ ವಿಸರ್ಜನೆಯ ಪಾಲುದಾರರು:
ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ವಿಸಜರ್ಿಸುವ ವಿಶ್ವದ ಮೂರು ದೊಡ್ಡ ರಾಷ್ಟ್ರಗಳು/ಒಕ್ಕೂಟಗಳು (ಶೇಕಡಾವಾರು)
ಯು.ಎಸ್.ಎ ಯೂರೋಪ್ ರಾಷ್ಟ್ರಗಳು ಚೀನಾ ಒಟ್ಟು
ವಿಶ್ವದ ಜನಸಂಖ್ಯೆಯಲ್ಲಿನ ಪಾಲು 4.6 6.3 21 31.9
ವಿಶ್ವದ ಆಥರ್ಿಕತೆಯಲ್ಲಿನ ಪಾಲು 30 23 3.2 56.2
ಇಂಗಾಲದ ಡೈ ಆಕ್ಸೈಡ್ ವಿಸರ್ಜನೆ 24 14 13 51

ಮೇಲಿನ ಕೋಷ್ಟಕದಲ್ಲಿ ಕಾಣುವಂತೆ ಯೂರೋಪ್ ರಾಷ್ಟ್ರಗಳು ಮತ್ತು ಚೀನಾ ದೇಶವು ಅಮೇರಿಕಾಗಿಂತ ಕಡಿಮೆ ಅನಿಲ ವಿಸರ್ಜನೆ ಮಾಡುತ್ತಿರುವುದಲ್ಲದೆ, ಚೀನಾವು 1990ರ ದಶಕದಿಂದೀಚೆಗೆ ಶೇ. 17 ರಷ್ಟು ಅನಿಲ ವಿಸರ್ಜನೆಯನ್ನು ಕಡಿತಗೊಳಿಸಿದೆ. ಇವೆರಡೂ ಉಪಖಂಡಗಳಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಅಮೇರಿಕಾ ಮಾತ್ರ ಹೆಚ್ಚೆಚ್ಚು ವಿಷಾನಿಲಗಳನ್ನು ರಾಸಾಯನಿಕಗಳನ್ನು ವಾತಾವರಣಕ್ಕೆ ಸೇರಿಸುತ್ತಾ ಪರಿಸರ ಸಂರಕ್ಷಣೆಗೆ ಮಾತ್ರ ಕಿಂಚಿತ್ತೂ ಗಮನಹರಿಸಿಲ್ಲ. ವಿಶ್ವದ ಜನಸಂಖ್ಯೆಯಲ್ಲಿ ಕೇವಲ ಶೇ.4ರಷ್ಟು ಜನಸಂಖ್ಯೆಯನ್ನು ಹೊಂದಿರುವ ಅಮೇರಿಕಾ ಶೇ. 25ರಷ್ಟು ಮಲಿನಕಾರಕ ಅನಿಲಗಳನ್ನು ವಿಸಜರ್ಿಸುತ್ತಿದೆ. ಇಂಗ್ಲೆಂಡ್ ಶೇ.3 ರಷ್ಟು ಅನಿಲ ವಿಸಜರ್ಿಸಿದರೆ, ಇಂಗ್ಲೆಂಡ್ಗಿಂತ 15 ಪಟ್ಟು ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತ ಸರಿಸುಮಾರು ಇಂಗ್ಲೆಂಡ್ನಷ್ಟೆ ಅನಿಲ ವಿಸಜರ್ಿಸುತ್ತಿದೆ.

ಪರಿಸರ ಸಂರಕ್ಷಣೆಯಾಧಾರಿತ ಕೈಗಾರಿಕಾಭಿವೃದ್ಧಿ ನೀತಿಯನ್ನು ಅಳವಡಿಸಕೊಳ್ಳದಿದ್ದಲ್ಲಿ ಮುಂಬರುವ ದಿನಗಳು ಇನ್ನಷ್ಟು ಬರ, ಕ್ಷಾಮ, ಕಾಳ್ಗಿಚ್ಚು, ಚಂಡಮಾರುತಗಳಂಥಹ ನೈಸಗರ್ಿಕ ವಿಕೋಪಗಳು ನಿಯಂತ್ರಣಕ್ಕೆ ಸಿಗದ ಪೆಡಂಭೂತಗಳಾಗುತ್ತವಷ್ಟೆ.

  • ಜ್ಞಾನವಾಹಿನಿ
~.~
  • Login or register to post comments
  • 289 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಸಿರು ಬೆಳೆಸಿ, ಉಸಿರು ಉಳಿಸೋಣ!
  • ಧರೆಯೆ ಹತ್ತಿ ಉರಿಯುವಾಗ ಎಲ್ಲಿ ಓಡಿ ಹೋಗುವೆ?
  • ಪ್ರಪಾತದ ಅಂಚಿನಲ್ಲಿ ಪರಿವರ್ತನೆಯ ಸಂಕಲ್ಪ
  • ವೈವಿಧ್ಯಮಯ ಯಾಹೂ!
  • ಹತ್ತಿ ಬೀಜವನ್ನು ಬಿತ್ತಿದ ಮೇಲೆ ವಾರಗಳಲ್ಲಿ ಹತ್ತಿ ಹೂವು ಕಾಟಿಸಿಕೊಳ್ಳುತ್ತದೆ ನಂತರ ಕಾಯಿ ; ಮತ್ತೆ ಅದು ಒಣಗಿ ಬಿರಿದು ಶುಭ್ರ ಹತ್ತಿ, ತಯಾರು !
Syndicate content

ಲೇಖಕರು

jaykumarhs's picture

ಪರಿಚಯ

Iam a post graduate in Environmental Engg. Reading Kannada literature and writing is my hobby.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator