ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ರಸ್ತೆ ಹೊಂಡ ಮುಚ್ಚಲು ಇರುವೆಗಳು ಬಳಸುವ ಕ್ರಮ ನಮಗೆ ಉಪಯುಕ್ತವೇ?

June 3, 2007 - 10:06pm — ASHOKKUMAR

 ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಇರುವೆಗಳನ್ನು ಅಧ್ಯಯನ ಮಾಡಿದ ಬ್ರಿಸ್ಟೊಲ್ ವಿಶ್ವವಿದ್ಯಾಲಯದ ಸಂಶೋಧಕರು ಅವುಗಳ ವಿಶಿಷ್ಟ ನಡವಳಿಕೆಯನ್ನು ಗಮನಿಸಿದ್ದಾರೆ. ಇರುವೆಗಳು ಗುಂಪಿನಲ್ಲಿ ಸಾಗುವಾಗ, ದಾರಿಯು ಹೊಂಡಗಳಿಂದ ಕೂಡಿದ್ದಾಗ, ಅವುಗಳ ಯಾತ್ರೆಯ ವೇಗ ಕುಸಿಯುವುದು ಸಹಜ ತಾನೇ? ಆಗ ಕೆಲಸಗಾರ ಇರುವೆಗಳು ಅಮೋಘ ಎನ್ನಬಹುದಾದ ನಡವಳಿಕೆ ಪ್ರದರ್ಶಿಸುತ್ತವೆ. ಅವುಗಳು ಈ ಹೊಂಡಗಳಿಗೆ ಇಳಿದು, ಅವನ್ನು ಮುಚ್ಚುವಂತೆ ತಮ್ಮ ಶರೀರವನ್ನು ಮುದ್ದೆ ಮಾಡಿ ಹೊಂಡವನ್ನು ಮುಚ್ಚಿ ಬಿಡುತ್ತವೆ. ಇದರಿಂದ ಅವುಗಳ ಪಟಾಲಂ ಅಡೆ ತಡೆಯಿಲ್ಲದೆ ಸಾಗಲು ಸಾಧ್ಯವಾಗುತ್ತದೆ. ಒಂದು ವೇಳೆ ಹೊಂಡ ದೊಡ್ಡದಿದ್ದರೆ? ಆಗ ಹಲವು ಕೆಲಸಗಾರ ಇರುವೆಗಳು ಸೇರಿ,ಹೊಂಡವನ್ನು ಆಕ್ರಮಿಸಲು ಪ್ರಯತ್ನಿಸುತ್ತವೆ. ಯಾತ್ರೆ ಸಾಗಿದ ಬಳಿಕ, ಈ ಇರುವೆಗಳು ಎದ್ದು ಸಾಲಿನ ಹಿಂದೆ ಸೇರುತ್ತವೆ. ಗುಂಪಿನ ಅನುಕೂಲತೆಗಾಗಿ ಎಂಥಾ ತ್ಯಾಗ!ಮನುಷ್ಯರೂ ಇಂತಹದೇ ತಂತ್ರ ಬಳಸಿ, ರಸ್ತೆ ಹೊಂಡಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬಹುದೇ ಎಂದು ಸಂಶೋಧಕರು ತಲೆಕೆಡಿಸಿ ಕೊಳ್ಳುತ್ತಿರುವ ಪ್ರಶ್ನೆ.

ಮೈಕ್ರೊಸಾಫ್ಟ್‍ನಿಂದ ಮೇಜೆಂಬ ಕಂಪ್ಯೂಟರ್

"ಸರ್ಫೇಸ್" ಎನ್ನುವ ಹೊಸ ಉತ್ಪನ್ನವನ್ನು ಕಂಪ್ಯೂಟರ್ ಪ್ರಪಂಚಕ್ಕೆ ಪರಿಚಯಿಸಲಾಗಿದೆ. ಇದನ್ನು ಮಾಡಿದ್ದು ಮತ್ತ್ಯಾರೋ ಅಲ್ಲ ದಿಗ್ಗಜ ಕಂಪೆನಿ ಮೈಕ್ರೊಸಾಫ್ಟ್. ನೋಡಲು ಮೇಜಿನಂತೆ ಕಾಣಿಸುವ ಸಾಧನ ನಿಜಕ್ಕಾದರೆ ಕಂಪ್ಯೂಟರ್. ಇದರ ಮೇಲ್ಮೈಯೇ ಕಂಪ್ಯೂಟರ್ ತೆರೆ. ಇದರ ಮೇಲೆ ಕೈಯಾಡಿಸಿ, ಕಂಪ್ಯೂಟರ್ ಕೀಲಿ ಮಣೆ ಅಥವಾ ಮೌಸ್ ಕೈಯಾಡಿಸಿ ಮಾಡುವುದನ್ನು ಮಾಡಬಹುದು.ಇದು ಸಾಧ್ಯವಾಗಲು ಕಾರಣ ಇದರ ಮೇಲ್ಮೈ ಸ್ಪರ್ಶ ಸಂವೇದಿಯಾಗಿರುವುದು. ಹತ್ತು ಸಾವಿರ ಡಾಲರು ಬೆಲೆ ಇದಕ್ಕೆ ತೆರಬೇಕಾಗಿ ಬರಬಹುದು. ಮೊದಲಾಗಿ ಇದನ್ನು ಕಾರ್ಪೋರೇಟ್ ಗ್ರಾಹಕರಿಗೆ ಒದಗಿಸುವ ಆಲೋಚನೆ ಕಂಪೆನಿಯದು. ಹೋಟೆಲ್, ಪೋನ್ ಅಂಗಡಿಗಳಿಗೆ ಮತ್ತು ಜೂಜಾಟದ ಅಡ್ಡೆಗಳಿಗೆ ಮಾರಾಟ ಮಾಡಲಾಗುವುದಂತೆ. ಇದರ ಮೇಲೆ ಸೆಲ್‍ಪೋನ್ ಇಟ್ಟರೆ, ಅದರ ನಿಯಂತ್ರಣವೂ ಬೆರಳುಗಳನ್ನು ತೆರೆಯ ಮೇಲೆ ಚಲಿಸುವ ಮೂಲಕ ಸಾಧ್ಯ.ಬಹುಬೆರಳಿನ ಸ್ಪರ್ಶಕ್ಕೂ ಇದು ತೊಂದರೆ ಕೊಡದೆ ಸ್ಪಂದಿಸುವ ಸಾಮರ್ಥ್ಯ ಹೊಂದಿದೆ.

ಬಯಸದ ರಾಶಿ ರಾಶಿ ಇ-ಮೇಲ್ ಕಳುಹಿಸಿ ಪೊಲೀಸ್ ಬಲೆಗೆ!

ಜನರು ಸ್ವೀಕರಿಸಲು ಬಯಸದ ಇ-ಮೇಲ್‍ಗಳನ್ನು ರಾಶಿ ರಾಶಿ ಕಳುಹಿಸಿ, ಕಿರಿಕಿರಿ ಮಾಡಿದ ಆರೋಪದಲ್ಲಿ ರಾಬರ್ಟ್ ಅನ್ನುವ ವ್ಯಕ್ತಿಯನ್ನು ವಾಶಿಂಗ್ಟನ್ ಬಳಿ ಬಂಧಿಸಲಾಗಿದೆ. ಅತ ಇತರರ ಗಮನಕ್ಕೆ ಬಾರದಂತೆ, ಅವರುಗಳ ಕಂಪ್ಯೂಟರುಗಳನ್ನು ತನ್ನ ನಿಯಂತ್ರಣಕ್ಕೆ ತಂತ್ರಾಂಶದ ಮೂಲಕ ತೆಗೆದುಕೊಂಡು, ಮಿಲಿಯಗಟ್ಟಲೆ ಇ-ಮೇಲ್‍ಗಳನ್ನು ಕಳುಹಿಸಿ, ತನ್ನ ವ್ಯವಹಾರ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.ಈ ಮೂಲಕ ಆತ ಹತ್ತಿರ ಹತ್ತಿರ ಒಂದು ಲಕ್ಷ ಪೌಂಡು ಹಣ ಗಳಿಸಿದ್ದಾನಂತೆ.ಶಿಕ್ಷೆಯಾದರೆ ಆತನ ಅಪರಾಧಕ್ಕೆ ಗರಿಷ್ಠ ಅರುವತ್ತೈದು ವರ್ಷ ಜೈಲುವಾಸ ಆಗಬಹುದಂತೆ.

 ಅಂತರ್ಜಾಲ ಇಲ್ಲದಾಗಲೂ ಆನ್‍ಲೈನ್ ಅನುಕೂಲ ಪಡೆಯಿರಿ!

 ಇ-ಮೇಲ್, ಕ್ಯಾಲೆಂಡರ್ ಮತ್ತು ಆನ್‍ಲೈನ್ ಪದಸಂಸ್ಕಾರಕ ತಂತ್ರಾಂಶವನ್ನು ಅಂತರ್ಜಾಲ ಸಂಪರ್ಕ ಹೊಂದಿದಾಗಲಷ್ಟೆ ಬಳಸಲು ಸಾಧ್ಯ. ಅದರೆ ಆಫ್‍ಲೈನ್(ಅಂತರ್ಜಾಲಕ್ಕೆ ಸಂಪರ್ಕ ಹೊಂದಿರದಿದ್ದರೆ) ಆ ಸೇವೆಗಳು ಅಲಭ್ಯವಷ್ಟೇ? ಗೂಗಲ್ ಕಂಪೆನಿಯು ಗೂಗಲ್ ಗೇರ್ಸ್ ಎನ್ನುವ ತನ್ನ ಹೊಸ ಸೇವೆಯ ಮೂಲಕ ಈ ಸೇವೆಯಲ್ಲಿನ ನ್ಯೂನ್ಯತೆಯನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಿದೆ. ಗೂಗಲ್ ಗೇರ್ಸ್ ಎನ್ನುವ ಪ್ಲಗ್-ಇನ್ ತಂತ್ರಾಂಶವನ್ನು ಬ್ರೌಸರ್ ತಂತ್ರಾಂಶದಲ್ಲಿ ಅನುಸ್ಥಾಪಿಸಿದಾಗ, ಅಂತರ್ಜಾಲದಲ್ಲಿ ಇಲ್ಲದ ವೇಳೆಯೂ ನಮ್ಮ ಕಡತಗಳನ್ನು ಪಡೆಯಲು ಸಾಧ್ಯ. ಮತ್ತೆ ಅಂತರ್ಜಾಲಕ್ಕೆ ಸಂಪರ್ಕ ಪಡೆದಾಗ, ಕಡತಗಳಿಗೆ ನಾವು ಮಾಡಿದ ಬದಲಾವಣೆಗಳು ಆನ್‍ಲೈನ್‍ನ ಬಳಕೆದಾರನ ಖಾತೆಯಲ್ಲೂ ಉಳಿದು, ಆನ್‍ಲೈನ್ ಮತ್ತು ಆಫ್‍ಲೈನ್ ನಡುವಿನ ಅಂತರವನ್ನು ಇಲ್ಲವಾಗಿಸುತ್ತದೆ.ಅಂತರ್ಜಾಲ ಪುಟ:http://gears.google.com/

ತೂಕ ಇಳಿಸಲು ಸೆಲ್‍ಪೋನ್ ಸಹಾಯ

ಜಪಾನಿನ ಯುವಕ-ಯುವತಿಯರು ದಢೂತಿಗಳಾಗುತ್ತಿದ್ದಾರಂತೆ. ಅವರ ಕೊಬ್ಬಿನಂಶ ಹೆಚ್ಚಿರುವ ಆಹಾರ ಮತ್ತು ಮಾಂಸಾಹಾರ ಸೇವನೆ ಜತೆಗೆ ಜೀವನ ಶೈಲಿ ಹೀಗಾಗಲು ಕಾರಣವೆನ್ನುವುದು ಸ್ಪಷ್ಟ.ಅಸಾಹಿ ಕಸೀ ಕೊರ್ಪೊರೇಷನ್ ಎನ್ನುವ ವೈದ್ಯಕೀಯ ಉಪಕರಣಗಳ ತಯಾರಿಕಾ ಕಂಪೆನಿ ಇದಕ್ಕೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ಇದರಂತೆ ಕಂಪೆನಿಯ ಜತೆ ನೋಂದಾಯಿಸಿಕೊಂಡ ಗ್ರಾಹಕರು ತಮ್ಮ ಊಟದ ಬಟ್ಟಲಿನ ಚಿತ್ರ ಹಿಡಿದು ಕಂಪೆನಿಗೆ ಬಹುಮಾಧ್ಯಮ ಸಂದೇಶ ಸೇವೆ ಮೂಲಕ ಕಳುಹಿಸುತ್ತಾರೆ. ಕಂಪೆನಿಯ ಆಹಾರ ವಿಶ್ಲೇಷಕ ಈ ಚಿತ್ರವನ್ನು ಪರಿಶೀಲಿಸಿ,ಸೂಕ್ತ ಸಲಹೆ ನೀಡಿ, ಅವರ ಆಹಾರ ಅವರ ದೇಹಕ್ಕೆ ಅಗತ್ಯವಾದಷ್ಟೇ ಇರುವಂತೆ ನೋಡಿಕೊಳ್ಳುತ್ತಾನೆ.ಡಿಜಿಟಲ್ ಕ್ಯಾಮರದ ಚಿತ್ರಗಳು ಇದ್ದರೆ ಅವನ್ನು ಅಂತರ್ಜಾಲ ತಾಣಕ್ಕೂ ಇ-ಮೇಲ್ ಮೂಲಕ ಕಳುಹಿಸಬಹುದು.ತಿಂದ ಆಹಾರದ ವಿವರವನ್ನು ಬಾಯ್ದರೆ ನೀಡಿದರೆ ಅಥವಾ ಬರೆದು ನೀಡಿದಾಗ ರೋಗಿಗಳು ಕೆಲವು ಐಟಮ್‍ಗಳನ್ನು ಮರೆಯುವ ಅಥವಾ ಪ್ರಮಾಣದ ಬಗ್ಗೆ ಹುಸಿ ಮಾಹಿತಿ ನೀಡುವ ಸಮಸ್ಯೆ ಇಲ್ಲಿ ಇರದು ಎನ್ನುವುದು ಈ ವಿಧಾನದ ಅನುಕೂಲ.

*ಅಶೋಕ್‍ಕುಮಾರ್ ಎ

  • ಪ್ರಚಲಿತ
~.~
  • Login or register to post comments
  • 450 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 3, 2007 - 10:11pm — ASHOKKUMAR

ಉ: ರಸ್ತೆ ಹೊಂಡ ಮುಚ್ಚಲು ಇರುವೆಗಳು ಬಳಸುವ ಕ್ರಮ ನಮಗೆ ಉಪಯುಕ್ತವೇ?

ASHOKKUMAR's picture

ಇ-ಲೋಕ-25

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವ್ಯಾಯಾಮ ಮಾಡುವಾಗಲೂ ಸಮಯ ವ್ಯಯವಾಗದು!
  • ಎಲ್ಲೆಲ್ಲೂ ಇ-ಮೇಲು, ಆ ಮೇಲು…!
  • ಹಿಮಾಲಯದಲ್ಲೂ ಸೆಲ್ ಕಾಟ!
  • ಅಂತರ್ಜಾಲದ ಮೂಲಕ ಆಫೀಸ್ ತಂತ್ರಾಂಶ
  • ವಿಡಿಯೋ ಆಟ ಆಡುವ ಮಾರುತಿ! ಇ-ಲೋಕ-18 (13/4/2007)
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator