ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು
ಸಂಪದಿಗರಿಗೆ ಕೊಳಂಬೆ ಪುಟ್ಟಣ್ಣಗೌಡರ ಬಗ್ಗೆ ಸಣ್ಣ ಮಾಹಿತಿ ಈಗಾಗಲೇ ತಿಳಿದಿರಬೇಕಷ್ಟೇ. ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು. Digital Library Of India ದ ಹೈದರಾಬಾದ್ ಸೆಂಟರಿನಲ್ಲಿ ಇವರ ಮೂರು ಪುಸ್ತಕಗಳು ಸಿಕ್ಕಿದವು.
೧. ಅಚ್ಚಗನ್ನಡ ನುಡಿಕೋಶ ಮೊದಲ ಅಚ್ಚು ೧೯೯೩
೨. ತಿಳಿಗನ್ನಡ ನುಡಿವಣಿಗಳು ಮೊದಲ ಅಚ್ಚು ೧೯೭೬
೩. ಅಂಧಕಾಸುರ ಕಾಳಗ (ಯಕ್ಷಗಾನ)- ಮೊದಲ ಅಚ್ಚು ಶ್ರೀಮನ್ಮಧ್ವಸಿದ್ಧಾಂತಗ್ರಂಥಾಲಯ, ಉಡುಪಿ, ೧೯೨೮
ಇದಲ್ಲದೆ ಇವರು, "ಕಾಲೂರ ಚೆಲುವೆ" ಎಂಬ ರೋಚಕ ಕಾವ್ಯವನ್ನೂ, ನಲ್ಲೂರಗೆಲ್ಲ ಎಂಬ ಯಕ್ಷಗಾನದ ರೂಪಕವನ್ನೂ ರಚಿಸಿರುವರಂತೆ. ಅವುಗಳು ಸಿಗಲಿಲ್ಲ.

- Login or register to post comments
- 551 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು
ಎಂತಹ ವಿಪರ್ಯಾಸ, ನುಡಿಕೋಶದ ಬಗ್ಗೆ ಬರೆದ ಲೇಖನದ ಹೆಸರನ್ನೇ ತಪ್ಪಾಗಿ ಬರೆದುಬಿಟ್ಟಿದ್ದೇನೆ. ದಯವಿಟ್ಟು ಅದನ್ನು "ಪುಸ್ತಕ ನಿಧಿ" ಎಂದು ತಿಳಿದುಕೊಳ್ಳಿರಿ.
ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು
ನೀನಿತ್ತ ಕೊಂಡಿಯಿಂದ ನಾನಾಗಲೇ "ತಿಳಿಗನ್ನಡದ ನುಡಿವಣಿಗಳು" ಓದ-ತೊಡಗಿರುವೆನು..
ನೀನು ಅದರ ಓದು ಪೂರಯಿಸು.
ಇಬ್ಬರು ಇಲ್ಲಿ ಅದರ ಕುರಿತು ಬಿಸಿ ಮಾತಾಡೋಣ !!
ಇಂತಹ ಒಳ್ಳೇ ಕೆಲಸಕ್ಕೆ ನನ್ನಿ ಮತ್ತು ಕೈಮುಗಿತದೊಡ ಕುಂಬು!
ನಿಂಗೆ ತಲೆ ಹಿಂಗೇ ಓಡೊಡಲಿ!
- ಮಾಯ್ಸ !!
ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು
ಅಡ್ಡಬಿದ್ದೆ ಸುನಿಲರೆ,....ತುಂಬಾ ನನ್ನಿ...ಮನೆಗೆ ಹೋಗಿ ಇಳಿಸಿ ಓದುವೆ...
ಹೀಗೆ ನಿಮ್ಮ ಮೊಗಸು ಮುಂದುವರೆಯಲಿ
ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು
ಆವ ಪಾಲ್ಗಡಲ ಪಾಲ್ ಮೊಲೆಗಳೆಲ್ಲವ ತುಂಬಿ
ಹೂ ಜೇನು ಹಣ್ಗಳ ಸೀಯಾಗಿ ಮುಂತೆ
ಬಗೆ ಬಗೆ ಸವಿಯಾಗಿ ಹೊನಲಾಗಿ ಕಾವುದೊ
ಪಾಲ್ಗಡಲದಕೆ ಮಣಿವೆ ಮೊದಲಂತೆ
ಎಷ್ಟು ಚನ್ನಾಗಿದೆ!
ಯಾವ ಹಾಲ ಕಡಲು, ಹಾಲ ಮೊಗೆಗಳಂತೆ ಎಲ್ಲವನ್ನು ತುಂಬಿ( ಬೆಳೆಸಿ ), ಹೂ, ಜೇನು, ಹಣ್ಣುಗಳನ್ನು ಸಿಹಿಯಾಗಿಸಿದೆ. ಮುಂದೆ ಈ ಹಾಲ್ಗಡಲ ಹಾಲೇ ಬಗೆಬಗೆಯ ಸವಿಯಾದ ಹೊನಲಾಗಿ/ಹೊಳೆ/ನದಿಯಾಗಿ ಜೀವಿಗಳನ್ನು ಕಾಯುತ್ತಿದೆ/ಪೊರೆಯುತ್ತಿದೆ. ಅಂತಹ ಹಾಲ್ಗಡಲಿಗೆ ಮೊದಲ ನಮಸ್ಕಾರ/ಕುಂಬು/ಮಣೆ/ತುೞಿಲ್ ಮಾಡುವೆನು!
ವಿಶೇಶ: ಎಲ್ಲರು ಹರಿಯ ಕುಂಬಿಂದ ಶುರುಮಾಡಿದರೇ, ಇವರು ಹರಿಗೇ ಇಂಬಾದ ಹಾಲ್ಗಡಲಿಗೆ ಮಣಿದು ಮೊದಲು ಮಾಡಿಹರು!!
- ಮಾಯ್ಸ !!
ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು
"ಕಾಲೂರ ಚೆಲುವೆ" ಪುಸ್ತಕ ಊರಿನಲ್ಲಿ ನಮ್ಮ ಹಳೆಯ ಮನೆಯಲ್ಲಿ ಇತ್ತು. ಕೊಳಂಬೆ ಪುಟ್ಟಣ್ಣ ಗೌಡ ನನ್ನ (ದಿವಂಗತ) ತೀರ್ಥರೂಪರಿಗೆ ಪರಿಚಯದವರಾಗಿದ್ದರು. ನಮ್ಮ ಮನೆಗೂ ಬಂದಿದ್ದರು. [ನನ್ನ ತಂದೆಯವರು ಯಕ್ಷಗಾನ ಅರ್ಥಧಾರಿಯಾಗಿದ್ದರು. ಹಲವು ಯಕ್ಷಗಾನ ಪ್ರಸಂಗಗಳ ಕರ್ತೃ. ಭಗವದ್ಗೀತೆಯನ್ನು ಕನ್ನಡ ಭಾಷೆಯಲ್ಲಿ ವಾರ್ಧಿಕ್ಯ ಷಟ್ಪದಿಯಲ್ಲಿ ಅನುವಾದಿಸಿದ್ದರು.]
ಕುವೆಂಪು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ (ಕುವೆಂಪು ಅಳಿಯ) ಅವರು ಕೊಳಂಬೆ ಪುಟ್ಟಣ್ಣ ಗೌಡರ ಮಗ ಎಂಬ ವಿಷಯ ಎಷ್ಟಯ ಜನರಿಗೆ ಗೊತ್ತು?
ಸಿಗೋಣ,
ಪವನಜ
-----------
Vishva Kannada
Think globally, Act locally