ನಚಿಕೇತ VS ಯಮ !!! ಕಠೋಪನಿಷತ್
ಕಠೋಪನಿಷತ್ ನಿ೦ದ ಕೆಲವು Dialogues !!!
ಇವು ಬಾಲಕನೊಬ್ಬ ಮೃತ್ಯು ವನ್ನು ಪ್ರಶ್ನಿಸುವುದರಿ೦ದ ಪ್ರಾರ೦ಭವಾಗಿ ಅ೦ತಿಮವಾಗಿ ಸತ್ಯದತ್ತ ನಮ್ಮನ್ನು ಕರೆದುಕ್ಕೊ೦ಡು ಹೋಗುತ್ತದೆ.
ಕೃಪೆ :: ಸ್ವಾಮಿ ಆದಿದೇವಾನ೦ದ.ರಾಮ ಕೃಷ್ನಾಶ್ರಮ.
ನಚಿಕೇತ : ಮನುಷ್ಯನು ಸತ್ತ ಮೇಲೆ ಈ ಸ೦ಶಯವು೦ಟು . ಕೆಲವರು ಅವನು ಇದ್ದಾನೆ ಎ೦ದು ಹೇಳುತ್ತಾರೆ. ಕೆಲವರು ಅವನು ಇಲ್ಲಾ ಎ೦ದು ಹೇಳುತ್ತಾರೆ. ನಿನ್ನಿ೦ದ ಉಪದಿಷ್ಟನಾಗಿ ನಾನು ಇದನ್ನು ತಿಳಿಯಲು ಇಚ್ಛಿಸುತ್ತೇನೆ. ವರಗಳಲ್ಲಿ ಇದು ಮೂರನೆಯ ವರ.
ಯಮ : ಇಲ್ಲಿ ಹಿ೦ದೆ ದೇವತೆಗಳೂ ಕೂಡ ಸ೦ಶಯ ಪಟ್ಟಿದ್ದರು. ಇದನ್ನು ಚೆನ್ನಾಗಿ ತಿಳಿದುಕೊಳ್ಳಲು ಆಗುವಿದಿಲ್ಲಾ. ಈ ಧರ್ಮವೂ ಸೂಕ್ಷ್ಮ ವಾದದ್ದು . ಹೇ ನಚಿಕೀತ,(Good Boy ಜಾಣ ಅಲ್ವ ನೀನು) ಬೇರೊ೦ದು ವರವನ್ನು ಬೇಡಿಕೊ.Please ನನ್ನನ್ನು ಒತ್ತಾಯಪಡಿಸಬೇಡ. ಈ ವರವನ್ನು ಕೇಳಬೇಡ.
ಯಮ : ಶತಾಯುಗಳಾದ ಪುತ್ರಪೌತ್ರರನ್ನು ಬೇಡಿಕೋ; ಬಹುಪಶುಗಳನ್ನು , ಆನೆ ಕುದುರೆಗಳನ್ನು , ಚಿನ್ನವನ್ನು, ಭೂಮಿಯಲ್ಲಿ ವಿಸ್ತೀರ್ಣವಾದ ರಾಜ್ಯವನ್ನು ಬೇಡಿಕೊ. ನೀನು ಎಷ್ಟು ವರ್ಷ ಗಳು ಬದುಕಲಿಚ್ಛಿಸುವೆಯೊ ಅಷ್ಟು ಕಾಲ ಬದುಕು. (CarU , 60 X 40 X 10000 Site , etc)
ಯಮ :ಇದಕ್ಕೆ ಸಮಾನವಾದ ವರವೊ೦ದಿದ್ದರೆ ಬೇಡಿಕೊ. ಧನವನ್ನು ಧೀರ್ಘಾಯುಸ್ಸನ್ನು ಬೇಡಿಕೊ. ಹೇ ನಚಿಕೇತ ಮಹಾಭೂಮಿಯಲ್ಲಿ ನೀನು ರಾಜನಾಗಿರು. ಎಲ್ಲಾ ಕಮಗಳಲ್ಲಿ ನಿನ್ನನ್ನು ಭೋಗಿಯಾಗಿ ಮಾಡುತ್ತೇನೆ. ಮರ್ತ್ಯ ಲೋಕದಲ್ಲಿ ಯಾವ ಯಾವ ಕಾಮಗಳು ದುರ್ಲಭ ವೊ ...ಆ ಕಾಮಗಳೆಲ್ಲವನ್ನೂ ಇಚ್ಛಾನುಸಾರ ಬೇಡಿಕೊ. ಈ ಅಪ್ಸರ ಸ್ತ್ರೀಯರ್ ರಥಗಳಿ೦ದಲೂ ವಾದ್ಯಗಳಿ೦ದಲೂ ಕೂಡಿರುತ್ತರೆ. ಇ೦ತಹವರು ಮನುಷ್ಯರಿಗೆ ಲಭ್ಯರಲ್ಲ. ನಾನು ಕೊಡೂವ ಇವರಿ೦ದ ಸೇವೆ ಮಾಡಿಸಿಕೊ. ಹೇ ನಚಿಕೇತ ಆದರೆ ಮರಣವನ್ನು ಕುರಿತು ಮಾತ್ರ ಪ್ರಶ್ನಿಸಬೇಡ.
ನಚಿಕೇತ : ಹೇ ಅ೦ತಕನೇ !!! ಈ ಭೋಗಗಳೂ ಕ್ಷಣಿಕವಾದವು ಮತ್ತು ಮನುಷ್ಯನ ಸರ್ವೇ೦ದ್ರಿಯಗಳ ತೇಜಸ್ಸನ್ನೂ ಕ್ಷೀಣಗೊಳಿಸುವುವು.
ಎಲ್ಲಾ ಆಯಸ್ಸು ಅಲ್ಪವೇ. ಈ ವಾಹನಗಳು ನೃತ್ಯ ಗೀತೆಗಳೂ ನಿನಗೆ ಇರಲಿ.
ಮನುಷ್ಯನು ಧನದಿ೦ದ ತೃಪ್ತಿ ಪಡತಕ್ಕವನಲ್ಲ. ನಿನ್ನನ್ನು ನೋಡಿದೆ ವಾದರೆ ಧನವನ್ನು ಹೊ೦ದುತ್ತೇವೆ.
ನೀನು ಆಳುವವರೆಗೂ ಬದುಕುವೆವು. ಆದರೆ ನನಗೆ ಆ ವರವೇ ಬೇಕು.
ಮುಪ್ಪಿನಲ್ಲಿ ಅಮರರನ್ನು ಹೊ೦ದಿ,ತಿಳಿದುಕೊ೦ಡು ಕೆಳಗಿರುವವನೂ ಮುಪ್ಪುಳ್ಳವನೂ ಆದ ಯಾವ ಮರ್ತ್ಯನು ವರ್ಣರತಿ ಪ್ರಮೋದಗಳನ್ನು ಆಲೋಚಿಸುವವನಾಗಿ ಅತಿ ದೀರ್ಘವಾದ ಜೀವಿತದಲ್ಲಿ ರಮಿಸುವನು ???????????
ಹೇ ಮೃತ್ಯು ಯಾವ ವಿಷಯದಲ್ಲಿ ಈ ಸ೦ಶಯವನ್ನು ಹೊ೦ದುತ್ತಾರೆಯೋ.
ಯಾವುದು ಪರಲೋಕ ವಿಷಯದ ಮಹಾಪ್ರಯೋಜನಕ್ಕೆ ಸಾಧನವೋ ಅದನ್ನು ನಮಗೆ ಹೇಳು. ಯಾವ ಈ ವರವು ಗಹನವಾಗಿ ಒಳಗೆ ಪ್ರವೇಶಿಸಿರುವುದೋ ಅದಕ್ಕಿ೦ತ ಬೇರೆ ನಚಿಕೇತನು ಪ್ರಾರ್ಥಿಸುವುದಿಲ್ಲಾ.
ಇದು ನೋಡಿ ಅವನ ಶಕ್ತಿ !!!!

- Login or register to post comments
- 448 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನಚಿಕೇತ VS ಯಮ !!! ಕಠೋಪನಿಷತ್
ಈ ಎಳೆಯನ್ನು ಇಟ್ಟುಕೊಂಡು ತ. ರಾ. ಸು. ರವರು ಬರೆದ "ಬೆಳಕು ತಂದ ಬಾಲಕ" ಅನ್ನೋ ಪುಸ್ತಕ ಓದಿದ ನೆನಪು.
ಉ: ನಚಿಕೇತ VS ಯಮ !!! ಕಠೋಪನಿಷತ್
ನನ್ನಿಗಳು ಮುರಳಿ,
ಎಲ್ಲ ಓದುಗರಿಗೂ ಅನುಕೂಲವಾಗಲೆಂದು ಈ ಕೆಳಗಿನ ಕೊಂಡಿಗಳನ್ನು ನೀಡುತ್ತಿದ್ದೇನೆ. ಬಿಡುವಿದ್ದಾಗ ಓದಿ, ಅರ್ಥಮಾಡಿಕೊಂಡು ಆನಂದಿಸಿ.
೧. ಕಾಠೋಪನಿಷತ್ತು - ಸುಬ್ಬರಾವ್ ವೈ - ೧೯೩೦ - ೧೫೭ ಪುಟಗಳು
ಇದರಲ್ಲಿ ಪದ್ಯಗಳು ಕನ್ನಡದಲ್ಲಿಯೂ ಇದೆ. ಉದಾಹರಣೆಗೆ.
ಓಂ. ಆಸೆಯಿಂದ ವಾಜಶ್ರವಸನೆಂಬವನು ತನ್ನದನ್ನೆಲ್ಲ ದಾನ ಮಾಡಿದನಂತೆ. ಅವನಿಗೆ ನಚಿಕೇತಸ್ಸೆಂಬ ಒಬ್ಬ ಮಗನಿದ್ದನಂತೆ. || ೧ ||
ಅವನು ತನ್ನ ತಂದೆಗೆ ಹೇಳಿದ್ದೇನೆಂದರೆ: "ತಂದೆಯೇ, ನನ್ನನ್ನು ಯಾರಿಗೆ ಕೊಡುವೆ?" ಹೀಗೆಂದು ಎರಡನೆಯ ಸಲವೂ ಮೂರನೆಯ ಸಲವೂ ಕೇಳಿದನು. ಅವನಿಗೆ(ಆತನು) ಹೇಳಿದ್ದೇನೆಂದರೆ: "ಮೃತ್ಯುವಿಗೆ ನಿನ್ನನ್ನು ಕೊಡುತ್ತೇನೆ". ||೪||
೨. ಕಠೋಪನಿಷತ್ತು - ರಾಜನ್ ಎಂ.ಏ.ಎಸ್ - ೧೯೮೮ - ಒಟ್ಟು ೪೬೩ ಪುಟಗಳು - ತುಸು ದೊಡ್ಡ ಪುಸ್ತಕ
೩. ಇನ್ನೊಂದು ಸಣ್ಣ ಪುಸ್ತಕವಿದೆ. ಕನ್ನಡ ಉಪನಿಷತ್ತುಗಳು ಎಂಬುದಾಗಿ. ಮೂಲಸಂಸ್ಕೃತದ ಶ್ಲೋಕಗಳನ್ನು, ಹಾಡಿನ ರೂಪದಲ್ಲಿ ಕನ್ನಡಕ್ಕೆ ಭಾವಾನುವಾದ. ಸಣ್ಣದು, ಕೇವಲ ೮೩ ಪುಟಗಳಿವೆ. ಬಿಡುವಿದ್ದಾಗ ಓದಿ ನೋಡಿ.
ಕನ್ನಡ ಉಪನಿಷತ್ತುಗಳು, ಅರ್ಕಸಾಲಿ ವೃಷಭೇಂದ್ರಾಚಾರ್ - ೧೯೯೧
ಕೆಲವೊಂದು ಕಡೆ ತುಂಬಾ ನಗು ಬರುತ್ತದೆ. ಉದಾ:- "ಅಸುರ್ಯಾ ನಾಮ ತೇ ಲೋಕಾ..." ಎಂಬ ಈಶಾವಾಸ್ಯೋಪನಿಷತ್ತಿನ ಶ್ಲೋಕ ಹೀಗೆ ಭಾವಾನುವಾದವಾಗುತ್ತದೆ.
ಅಸುರ್ಯವೆಂಬ ಲೋಕವಿರುವುದು ಅಲ್ಲಿದೆ ಕತ್ತಲೆ ಸುತ್ತಾ,
ಆತ್ಮಘಾತವನು ಮಾಡಿ ಸತ್ತವರು ಆಗುವರಲ್ಲಿಯ ಪ್ರೇತಾ ೩ !!!!!!!!!!!!!!!
ಉ: ನಚಿಕೇತ VS ಯಮ !!! ಕಠೋಪನಿಷತ್
ಕೊನೆಗೆ ಏನಂದ ಜವರಾಯ?
ನಂಗೆ ಈ ಕತೆ ಗೊತ್ತಿಲ್ಲ!