ಕೆಲವು ವಚನಗಳು
೧) ಬಲ್ಲಿದನು ಬೆಲ್ಲವನು
ಹೊಂದಿಹನು
ಇಲ್ಲದವನ ಮನೆಗೆ
ಇರುವೆಯೂ ಹತ್ತದೂ ಕಾಣಾ ಭರತೇಶ
೨) ಹಣದ ಕುಪ್ಪರಿಗೆ ಏರಿದವನಿಗೆ
ಮಣ್ಣ ಗಂಧ ತಿಳಿಯದು
ಹೆಣದ ಪಕ್ಕದಲಿ ಎನಿತು
ಕೂತರೂ ಹೊರಡದು ಮಾತು ಕಾಣಾ ಭರತೇಶ
- Login or register to post comments
- 705 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಒಂದನೇ ವಚನ ಚನ್ನೈತೆ.
ಆದರೆ ಎರಡನೇದು :(
ಮಣ್ಣ ಗಂಧ = ಮಣ್ಣ ಕಂಪು?
ಮೊದಲೆರಡು ಸಾಲುಗಳಿಗೂ, ಮಿಕ್ಕರಡು ಸಾಲುಗಳಿಗೂ ನಂಟು ತಿಳೀಲಿಲ್ಲ!
ಸಿರಿವಂತನಿಗೆ ಬುದ್ದಿ ಹೇಳಕಾಗಕಿಲ್ಲ ( ಬುದ್ದಿ ನೆಟ್ಟಗಿರಕಿಲ್ಲ)
ಹೆಣದ ಜೊತೆ ಮಾತಾಡಕ್ಕಾಗಲ್ಲ.....ಇಂತ ಬಳಕೆಯಿಲ್ಲದ ಮೊಗಸು ಮಾಡಬೇಕಿಲ್ಲ ಎಂಬುದು ಅದರ ತಿಳುವಳಿಕೆ
ನನ್ನಿ..!!
ಇಲ್ಲಿ ದುಡ್ಡಿರುವವರನ್ನು ಹೆಣಕ್ಕೆ ಹೋಲಿಸಲಾಗಿದೆ. ಸರಿ.
ಚೆನ್ನಾಗಿವೆ ವಚನಗಳು ವೈಭವರೆ,
ದುಡ್ಡೇ ದೊಡ್ಡಪ್ಪ ಅನ್ನೋದನ್ನ ಚೆನ್ನಾಗಿ ಹೇಳಿದ್ದೀರ!
ಈ ಸಂದರ್ಭದಲ್ಲಿ ಸಂಸ್ಕೃತ ಸುಬ್ಗಾಷಿತವೊಂದು ನೆನಪಾಯಿತು:
ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ
ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತಿ!
(ಭರ್ತಹರಿಯ ಸುಭಾಶಿತವೊಂದು)
ಹಣವಿದ್ದರವನೆ ತಾ ಸೊಗಸುಗಾರ
ಅವ ಪಂಡಿತ, ಅರಿತವ, ಮಾತುಗಾರ
ಗುಣಗ್ರಾಹಿಯವ, ನೋಡಿರೋ ಅವನನೆಲ್ಲ
ದುಡ್ಡು ಎಲ್ಲಿರಲಲ್ಲಿ ಹೋದವೋ ಗುಣಗಳೆಲ್ಲ!
(ಅನುವಾದ: ಹಂಸಾನಂದಿ)
-ಹಂಸಾನಂದಿ