Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಪತಂಜಲಿಯ ಯೋಗ ಅಂತಿಮ ಭಾಗ

September 23, 2005 - 6:30am — R M Rao

ಪತಂಜಲಿಯ ಯೋಗ ಅಂತಿಮ ಭಾಗ
ಕೊನೆಯ ಲೇಖನ
ಪತಂಜಲಿಯ ಯೋಗದ ಚತು‍ರ್ಥ ಕೈವಲ್ಯಪಾದ
ನಿರಂತರವಾಗಿ ವೃತ್ತಿಗಳು ಏಳುವ ಸ್ಥಿತಿಯಿಂದ, ಮನಸ್ಸಿನಲ್ಲಿ ನಿರಂತರವಾಗಿ ಏಕಪ್ರಕಾರದ ವೃತ್ತಿ/ವೃತ್ತಿಗಳಿಂದ ಬರುವ ಜ್ಞಾನದ ಸ್ಥಿತಿಯನ್ನು ತಲುಪುದು ಹೇಗೆ ಎಂಬುದನ್ನು ವಿವರಿಸಿದ್ದಾಯಿತು. ಮನಸ್ಸಿನ ಏಕಪ್ರಕಾರದ ಬದಲಾವಣೆಯಿಂದ ಬದಲಾವಣೆ ಇಲ್ಲದ ಸ್ಥಿತಿಯನ್ನು ಹೊಂದುವುದೇ ಕೈವಲ್ಯ.

ಜನ್ಮ, ಔಷಧಿ, ಮಂತ್ರ, ತಪಸ್ಸು ಮತ್ತು ಸಮಾಧಿಯಿಂದ ಸಿಧ್ಧಿಗಳು ಹುಟ್ಟುತ್ತವೆ.ಯೋ.ಸೂ.ಪಾದ ೪. ಸೂತ್ರ.೧
ಧ್ಯಾನದಿಂದ ಹುಟ್ಟಿದವು ಆಶಯರಹಿತವಾಗಿರುತ್ತದೆ. ಯೋ.ಸೂ.ಪಾದ ೪. ಸೂತ್ರ.೬
ಇವು ಸಂಸ್ಕಾರಗಳನ್ನು ಮನಸ್ಸಿನಲ್ಲಿ ಬಿಡುವುದಿಲ್ಲ. ಎಂದರೆ ಜನ್ಮ, ಔಷಧಿ, ಮಂತ್ರದಿಂದ ಬಂದ ಸಿಧ್ಧಿಗಳಿಗೆ ಕರ್ಮಲೇಪ ಇರುತ್ತದೆ.
ಯೋಗಿಗಳ ಕರ್ಮವು ಶುಕ್ಲವೂ ಅಲ್ಲ; ಕೃಷ್ಣವೂ ಅಲ್ಲ. ಬೇರೆಯವರಿಗೆ ಶುಕ್ಲ, ಕೃಷ್ಣ ಮತ್ತು ಶುಕ್ಲ-ಕೃಷ್ಣ(ಒಳ್ಳೆಯದು,ಕೆಟ್ಟದ್ದು,ಎರಡೂ ಬೆರೆತದ್ದು) ಎಂಬ ಪ್ರಭೇಧಗಳಿವೆ. ಯೋ.ಸೂ.ಪಾದ ೪. ಸೂತ್ರ.೭
ಎಂದರೆ ನಿಜವಾದ ಯೋಗಿಯ ಕೆಲಸಗಳು ಆಶಯರಹಿತ. ಹಾಗಾಗಿ ಇರುವ ಕ‍ರ್ಮದ ಬುತ್ತಿ ತೀರಿಸುವುದಷ್ಟೇ ಅವನ ಕೆಲಸ.
ಯಾವಾಗ ಕರ್ಮದ ಫಲಕ್ಕೆ ಮನಸ್ಸಿನಲ್ಲಿ ಎಡೆ ಇರುವುದಿಲ್ಲವೋ, ಆಗ ಇರುವ ಕ್ಲೇಷಗಳು ಧ್ಯಾನದಿಂದ ತನು ಸ್ಥಿತಿಯನ್ನು ಹೊಂದುತ್ತದೆ.
ಮನಸ್ಸಿನಲ್ಲಿ ವೃತ್ತಿಗಳು ಏಳುತ್ತವೆ. ವೃತ್ತಿಗಳಿಂದ ಬದಲಾವಣೆ ಹೊಂದುವುದರಿಂದ ಅದು ಪ್ರಕೃತಿ. ಪುರುಷನು ಅಪರಿಣಾಮಿ.ಯೋ.ಸೂ.ಪಾದ ೪. ಸೂತ್ರ.೧೮
ದೃಶ್ಯವು ಸ್ವಪ್ರಕಾಶಿತವಲ್ಲ.ಯೋ.ಸೂ.ಪಾದ ೪. ಸೂತ್ರ.೧೯
ಇಲ್ಲಿ ದೃಶ್ಯವೆಂದರೆ ಪ್ರಕೃತಿ(ವ್ಯಕ್ತ). ವಿಷೇಷ-ಪುರುಷ/ಪುರುಷರನ್ನು ಹೊರತುಪಡಿಸಿ ಉಳಿದಿದ್ದೆಲ್ಲವೂ ಪ್ರಕೃತಿ. ಬದಲಾವಣೆ ಆಗುವಂತಹುದು. ಅದು ತನ್ನನ್ನು ತಾನೇ ಗ್ರಹಿಸಲಾಗದು. ಮನಸ್ಸನ್ನು ನಾವು ಗ್ರಹಿಸುವುದರಿಂದ (ಗುರುತಿಸುವುದರಿಂದ) ಅದು ಚಿತಿಶಕ್ತಿಯಾಗಲಾರದು.
ಒಂದೇ ಸಮಯಕ್ಕೆ ದೃಶ್ಯ ಮತ್ತು ಚಿತಿಶಕ್ತಿಯನ್ನು ತಿಳಿಯಲಾಗುವುದಿಲ್ಲ.ಯೋ.ಸೂ.ಪಾದ ೪. ಸೂತ್ರ.೨೦
ಚಿತಿಶಕ್ತಿ/ಪುರುಷ ಯಾವಾಗಲೂ ಅಗ್ರಾಹ್ಯ.(ಗ್ರಹಿಸಲು ಆಗದಂತಹುದು/ಅವ್ಯಕ್ತ) ಇಲ್ಲದಿದ್ದರೆ (ಉದಾಹರಣೆಗೆ) ಮನಸ್ಸನು ಗ್ರಹಿಸಲು ಚಿತಿಶಕ್ತಿ. ಆ ಚಿತಿಶಕ್ತಿಯನ್ನು ಗ್ರಹಿಸಲು ಮತ್ತೊಂದು ಶಕ್ತಿ; ಅದನ್ನು ಗ್ರಹಿಸಲು ಮಗದೊಂದು... ಹೀಗಾದರೆ ಕೊನೆ ಎಲ್ಲಿ?(ಭಾವಾ‍ರ್ಥ)ಯೋ.ಸೂ.ಪಾದ ೪. ಸೂತ್ರ.೨೧
(ಮನಸ್ಸಿನೊಳಗಿನ ಬುಧ್ಧಿಯನ್ನು ಗ್ರಹಿಸಲು ಬುಧ್ಧಿಯಿಂದ ಸಾಧ್ಯ ಎನ್ನುವುದಾದರೆ ಆ ಬುಧ್ಧಿಯನ್ನು ಗ್ರಹಿಸಲು ಮತ್ತೊಂದು ಬುಧ್ಧಿ; ಸ್ಮೃತಿ ಕಲುಷಿತವಾಗುತ್ತದೆ :ವಾಕ್ಯಾ‍ರ್ಥ)
ಇದನ್ನು ಬರೀ ತಿಳಿದರೆ ಸಾಲದು;ಯೋಗಾಂಗಗಳ ಆಚರಣೆಯಿಂದ ವಿವೇಕಖ್ಯಾತಿಯ ಪ್ರಜ್ಞಾವಸ್ಥೆಯಿಂದ ಸಾಧಿಸಬೇಕು.
ಆಗ ಮನಸ್ಸು ಕೈವಲ್ಯದೆಡೆ ಬಗ್ಗುತ್ತದೆ.ಯೋ.ಸೂ.ಪಾದ ೪. ಸೂತ್ರ.೨೬
ಆಗಲೂ ಮನಸ್ಸಿನಲ್ಲಿ ಅಳಿದುಳಿದ (ತನು ಸ್ಥಿತಿಯ) ಸಂಸ್ಕಾರಗಳು ಅಡ್ಡಿಯಾಗುತ್ತವೆ.ಯೋ.ಸೂ.ಪಾದ ೪. ಸೂತ್ರ.೨೭
ಮನಸ್ಸಿನಲ್ಲಿ ವಿವೇಕಖ್ಯಾತಿಯೊಂದೇ ಉಳಿದಾಗ ಧರ್ಮಮೇಘಸಮಾಧಿಯಾಗುತ್ತದೆ.ಯೋ.ಸೂ.ಪಾದ ೪. ಸೂತ್ರ.೨೯
ಇದರಿಂದ ಕ್ಲೇಷ, ಕರ್ಮಗಳಿಂದ ಮುಕ್ತಿ.ಯೋ.ಸೂ.ಪಾದ ೪. ಸೂತ್ರ.೩೦
ಆಗ ಮನಸ್ಸನ್ನು ಕವಿದಿರುವ ಎಲ್ಲಾ ಆವರಣಗಳೂ ಕಳೆದು, ತಿಳಿದುಕೊಳ್ಳಬೇಕಾದುದು ಅಲ್ಪ; ತಿಳಿದ ಜ್ಞಾನ ಅನಂತ.ಯೋ.ಸೂ.ಪಾದ ೪. ಸೂತ್ರ.೩೧
ತಂತಾನೇ ಪ್ರಕೃತಿ(ಮನಸ್ಸು ಬುದ್ದಿ ಮತ್ತು ಅಹಂಕಾರವೂ ಸೇರಿದಂತೆ) ತನ್ನ ಮೊಲಗುಣಗಳಿಗೆ ಕರಗಿಹೋಗುತ್ತದೆ. ಇದೇ ಪ್ರತಿಪ್ರಸವ. ಇದರಿಂದ ಚಿತಿಶಕ್ತಿ ತನ್ನ ಸ್ವರೂಪದಲ್ಲಿರುತ್ತದೆ; ಇದೇ ಕೈವಲ್ಯ.ಯೋ.ಸೂ.ಪಾದ ೪. ಸೂತ್ರ.೩೪
ಯಾವಾಗ ದೃಷ್ಟ ಕ್ಲೇಷ, ಕರ್ಮ, ವಿಪಾಕ, ಆಶಯ ಇವುಗಳಿಂದ ಹೊರತಾಗುತ್ತಾನೆಯೋ ಅಲ್ಲಿಗೆ ಪ್ರಕೃತಿಯ ಕೆಲಸ ಮುಗಿಯಿತು. ಆಗ ಸಂಯೋಗ ಕೊನೆಗೊಳ್ಳುತ್ತದೆ. ಚಿತಿಶಕ್ತಿ ಅಥವಾ ಪುರುಷ ತನ್ನ ಸ್ವರೂಪದಲ್ಲಿರುತ್ತದೆ. ಜನ್ಮಾತೀತ, ಕಾಲಾತೀತ, ಬದಲಾವಣೆ ಇಲ್ಲದ, ಸತ್+ಚಿತ್+ಆನಂದದ ಸ್ಥಿತಿಯೇ ಕೈವಲ್ಯ.
ಪತಂಜಲಿಯ ಚತುರ್ಥ ಕೈವಲ್ಯಪಾದದ ಮುಖ್ಯಸೂತ್ರಗಳನ್ನು ಯೋಗದಲ್ಲಿ ಪ್ರಾರಂಭಿಕ ಆಸಕ್ತಿ ಇರುವವರಿಗೆಂದು ಬರೆದ ಲೇಖನ.

ಮನ ಏವ ಮನುಷ್ಯಾಣಾಮ್ ಕಾರಣಂ ಬಂಧ-ಮೋಕ್ಷಯಃ
ಉಪನಿಷತ್
ಮನುಷ್ಯನ ಬಂಧನಕ್ಕೂ ಮುಕ್ತಿಗೂ ಮನಸ್ಸೇ ಕಾರಣ.

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ
ಪ್ರಭಿನ್ನೇ ಪ್ರಸ್ಥಾನೇ ಪರಮಮಿದಮದಃ ಪಥ್ಯಮಿತಿ ಚ I
ರುಚೀನಾಂ ವೈಚಿತ್ರ್ಯಾದ್ರುಜುಕುಟಿಲನಾನಾಪಥಜುಷಾಂ
ನೃಣಾಮೇಕೋ ಗಮ್ಯಸ್ತ್ವಮಸಿಪಯಸಾಮ‍ರ್ಣವ ಇವ II
ಪುಷ್ಪದಂತನ ಮಹಿಮ್ನಸ್ತವ
ಉಪನಿಷತ್ತುಗಳು, ವೇದಾಂತ, ಭಗವದ್ಗೀತೆ, ಸಾಂಖ್ಯ, ಯೋಗ, ಪಾಶುಪತ, ವೈಷ್ಣವ ಮುಂತಾದ ಹಲವಾರು ಮಾ‍ರ್ಗಗಳಿವೆ.
ಜನರು ಋಜು(ನೇರ)ವೋ, ಕುಟಿಲ(ಸೊಟ್ಟ)ವೋ ಅಂತೂ ಬೇರೆ ಬೇರೆ ಮಾ‍ರ್ಗಗಳನ್ನು ಅನುಸರಿಸಿ, ತಮ್ಮ ತಮ್ಮ ಅಭಿರುಚಿಗನುಗುಣವಾಗಿ, ಇದೇ ಶ್ರೇಷ್ಠ, ಇದೇ ಯೋಗ್ಯವೆಂದು ತಿಳಿದು - ಎಲ್ಲಾ ನದಿಗಳೂ ಕಡಲನ್ನು ಸೇರುವಂತೆ(ಬೇಗ ಅಥವಾ ಅತಿ ನಿಧಾನವಾಗಿ ಕೊನೆಗೆ)- ನಿನ್ನೊಬ್ಬನನ್ನೇ ಸೇರುತ್ತಾರೆ.

ಮಾನವ ಜನುಮ ದೊಡ್ಡದು; ಅದನು ಹಾನಿಮಾಡಬೇಡಿರಿ ಹುಚ್ಚಪ್ಪಗಳಿರಾ........
ದಾಸರು.

ಮುಗಿಯಿತು
೨೩/೯/೦೫

  • ಅಧ್ಯಾತ್ಮ
Ornamental seperator
  • Login or register to post comments
  • 609 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪತಂಜಲಿಯ ಯೋಗ ಭಾಗ ೩
  • ಪತಂಜಲಿಯ ಯೋಗ ಭಾಗ ೮
  • ಪತಂಜಲಿಯ ಯೋಗ ಭಾಗ ೬
  • ಪತಂಜಲಿಯ ಯೋಗ : ಭಾಗ ೨
  • ಪತಂಜಲಿಯ ಯೋಗ ಭಾಗ ೪
Syndicate content

ಲೇಖಕರು

R M Rao's picture

ಪರಿಚಯ

ನನ್ನ ಬಗ್ಗೆ ನಾನೇ ಹುಡುಕಾಟ ಪ್ರಾರಂಭ ಮಾಡಿ
ಈಗ ಯೋಗದ ಹಾದಿಯಲ್ಲಿ ಹುಡುಕಾಟ ಮುಂದುವರಿಸಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator