Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಹಾರೋಬೆಲೆ

June 27, 2007 - 7:10pm — cmariejoseph

ಇಟಾಲಿಯನ್ ಜೆಸ್ವಿತರಾದ ಸ್ವಾಮಿ ಚಿಮಾವೊ ಮಾರ್ಟಿನ್ರವರು ೩೧-೧೦-೧೯೬೨ ರಲ್ಲಿ ರೋಮ್ಗೆ ಕಳಿಸಿದ ವರದಿಯ ಪ್ರಕಾರ ಅವರು ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿಯಲ್ಲಿ ಕ್ಷೇತ್ರಕಾರ್ಯ ಕೈಗೊಂಡಿರುವಾಗ ಕ್ರಿಸ್ತಶಕ ೧೬೬೦ರಲ್ಲಿ ಕಾನಕಾನಹಳ್ಳಿಯಲ್ಲಿ ಧರ್ಮಪ್ರಚಾರ ಮಾಡಲು ಸ್ಥಳೀಯ ಉಪದೇಶಕನೊಬ್ಬನನ್ನು ಕಳಿಸಿದರಂತೆ. ಆ ಉಪದೇಶಕ ಮತ್ತು ಆ ಸ್ಥಳಗಳ ಪರಿಚಯವಿದ್ದ ಮತ್ತೊಬ್ಬ ಕ್ರೈಸ್ತ ಎರಡು ದಿನಗಳ ಪ್ರಯಾಣ ಮಾಡಿ ಉಯ್ಯಂಬಳ್ಳಿ ಎಂಬ ಊರಿಗೆ ಬರುತ್ತಾರೆ. ಅಲ್ಲಿ ಪಟ್ಟಿ ಜನಾಂಗದ ಯುವಕ, ಅವನ ತಾಯಿ ಮತ್ತು ತಮ್ಮ ಮೊತ್ತಮೊದಲಿಗೆ ಕ್ರೈಸ್ತರಾಗುತ್ತಾರೆ. ಅವನ ಪ್ರೇರಣೆಯಿಂದ ಅವರ ಬಂಧು ಬಳಗದವರೆಲ್ಲ ಕ್ರೈಸ್ತ ಧರ್ಮದ ಕಡೆ ಬರುತ್ತಾರೆ. ಆ ಜನರು ಆ ಉಪದೇಶಕನನ್ನು ತಮ್ಮ ಸ್ವಂತ ಊರಾದ ಹಾರೋಬೆಲೆಗೆ ಕರೆದೊಯ್ಯುತ್ತಾರೆ. ಊರನ್ನು ಸೇರಿದಾಗ ದೇವದೂತನು ಸ್ವರ್ಗದಿಂದ ಇಳಿದು ಬಂದನೋ ಎಂಬಂತೆ ಅವನನ್ನು ಪಟ್ಟಿಗಳೆಲ್ಲರೂ ಹಿರಿಯ ಕಿರಿಯರೆನ್ನದೆ ಸಂತೋಷದಿಂದ ಬರಮಾಡಿಕೊಂಡು ಕ್ರಿಸ್ತೋಪದೇಶವನ್ನು ಆಸಕ್ತಿಯಿಂದ ಪಡೆಯುತ್ತಾರೆ. ಎರಡು ವರ್ಷಗಳ ನಂತರ ಅಂದರೆ ಕ್ರಿಸ್ತಶಕ ೧೬೬೨ ಆಗಸ್ಟ್ ೧೯ರಂದು ಪವಿತ್ರ ಪೂಜೆಯಲ್ಲಿ ಕ್ರೈಸ್ತ ದೀಕ್ಷೆ ಪಡೆದು ಹಾರೋಬೆಲೆ ಕ್ರೈಸ್ತರು ಪುನೀತರಾಗುತ್ತಾರೆ.
ಚಿಮಾವೊ ನಂತರ ೧೬೬೬ರಲ್ಲಿ ಸ್ವಾಮಿ ಎಮ್ಮಾನುವೆಲ್ ಕೊರೆಯಾ, ೧೬೭೬ರಲ್ಲಿ ಅಲ್ಫೋನ್ಸೋ ಮೆಂಡಿಸ್, ೧೬೭೯-೮೩ರಲ್ಲಿ ಮನುವೆಲ್ ರಾಯ್ಸ್, ೧೬೮೬ರಲ್ಲಿ ಮೈಕೆಲ್ ಕೊರೆಯ, ೧೬೯೧ರಲ್ಲಿ ವಿನ್ಚೆಂಸೊ ಪೌಲೊ ಹಾರೊಬೆಲೆಯನ್ನು ಸಂಧಿಸುತ್ತಿದ್ದ ಬಗ್ಗೆ ದಾಖಲೆಯಿದೆ. ೧೭೨೪-೨೯ರಲ್ಲಿ ದೊಡ್ಡ ಬರಗಾಲವಿತ್ತೆಂದೂ ಆ ಸಮಯದಲ್ಲಿ ಒಚಿgಡಿe(ಮಾಗಡಿ?) ಅರಸನು ಹಾರೋಬೆಲೆಗೆ ಮುತ್ತಿಗೆ ಹಾಕಿದ್ದನೆಂದು ಸ್ವಾಮಿ ಪೀಟರ್ ಅಲ್ಮೊನ್ ದಾಖಲಿಸಿದ್ದಾರೆ.
ಯೇಸುಸಭೆಯ ಬಹಿಷ್ಕಾರ, ಬರಗಾಲ, ಲೂಟಿ, ಹಿಂಸೆಗಳಿಂದ ತತ್ತರಿಸಿದ ಹಾರೋಬೆಲೆ ಎಂಇಪಿ ಪಾದ್ರಿಗಳ ಆಗಮನಾನಂತರ ಮತ್ತೆ ಪಲ್ಲವಿಸತೊಡಗಿತು. ಸ್ವಾಮಿ ಶರ್ಬಾನೊರವರು ಹಾರೊಬೆಲೆಯನ್ನು ಪುನರುಜ್ಜೀವಿಸಿದರು. ಜೆಸ್ವಿತರ ಕಾಲದಲ್ಲಿ ಮರಿಯಾ ಜಯಂತಿ ದೇವಾಲಯ ಎಂದು ಕರೆಸಿಕೊಂಡಿದ್ದ ಈ ಊರ ಚರ್ಚು ಫ್ರೆಂಚ್ ಪಾದ್ರಿಗಳ ಕಾಲದಲ್ಲಿ ಜಪಮಾಲೆ ರಾಣಿಯ ದೇವಾಲಯ ಎನಿಸಿಕೊಂಡಿತು. ೧೮೫೯ರಲ್ಲಿ ಸ್ವಾಮಿ ಮೋನ್ತದ್ರಾರವರಿಂದ ನಿರ್ಮಾಣಗೊಂಡ ಚರ್ಚು ಇತ್ತೀಚೆಗೆ ಪುನರ್ನಿರ್ಮಾಣವಾಗಿದೆ.
ಹಾರೋಬೆಲೆ ಊರಿನಲ್ಲಿ ಪ್ರದರ್ಶಿತವಾಗುವ ಯೇಸುಸ್ವಾಮಿಯ ಪೂಜ್ಯ ಪಾಡುಗಳ ನಾಟಕವು ತುಂಬಾ ಪ್ರಸಿದ್ಧವಾಗಿದ್ದು ೨೦೦೫ರ ಏಪ್ರಿಲ್ನಲ್ಲಿ ತನ್ನ ನೂರನೇ ಪ್ರದರ್ಶನ ಕಂಡಿತು.

  • ಸ್ಥಳ ಮಹಿಮೆ, ಪುರಾಣ
Ornamental seperator
  • Login or register to post comments
  • 270 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಾರೋಬೆಲೆ ಮಹಿಮೆ
  • ಚಿತ್ರಕಲ್ಲು ದುರ್ಗದ ಮಾತೆ Chitrakalludurga Lady
  • ಸಂತ ಮೇರಿ ಚರ್ಚ್
  • ಕನ್ನಡನಾಡಿಗೆ ಕ್ರಿಸ್ತನಾಗಮನ
  • ಕನ್ನಡ ಕ್ರೈಸ್ತ ಇತಿಹಾಸಕಾರ ಸ್ವಾಮಿ ಅಂತಪ್ಪ
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator