ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಮುನಿಸು...

July 23, 2007 - 12:41pm — purna

ಇದಾವ ಮೋಹ ಹೀಗೆ ಕಾಡುತಿದೆ ನನ್ನನು

ಕಪ್ಪು ಛಾಯೆಗಳ ಮಧ್ಯ ತೋರುತಿದೆ ಬೆಳಕನು.

 

ಸಾಕಿನ್ನು ಮುನಿಸು ದಣಿದಿಹೆನು ನಾನು,

ಬರಬಾರದೆ ಒಮ್ಮೆಯಾದರು ಮನ ತಣಿಸುವ

ತುಂತುರು ಮಳೆಯಾಗಿ ನೀನು.

 

ಮನಸು ಮನಸುಗಳ ನಡುವೆ ಬೇಲಿಗಳು ಬೆಳೆಯುತಿವೆ

ಸುರಿವ ಹನಿ ಹನಿ ಮಳೆಗೆ ಅಲ್ಲಲ್ಲಿ ಬೆಳೆವ ಕಾಟು ಗಿಡ-ಬಳ್ಳಿಗಳಂತೆ

ಮೂಂದೊಂದು ದಿನ ಮರೆಯಾಗಬಹುದು ನಾವು ,

ಅಳಿಸಿ ಹೋಗಬಹುದು ನೆನಪು ಕಾಲದ ಕೈಚಳಕದಲಿ,

ಕಳೆದು ಹೋಗಬಹುದು ಮತ್ತೆ ಸಿಗದ ವಸ್ತುಗಳಾಗಿ

ಬಾಡಿ ಹೋಗಬಹುದು ಮುಡಿದ ಮಲ್ಲಿಗೆಯಂತೆ

ಕೀಳದಿದ್ದರೆ ಇಂದು ಈ ಕಾಟು ಬೇಲಿಗಳನು...

 

ಪೂರ್ಣಿಮಾ ಹೆಬ್ಬಾರ್ 

 

 

 

  • ಕಾವ್ಯ ಮತ್ತು ಕವನ
~.~
  • Login or register to post comments
  • 372 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 5, 2007 - 10:19pm — udaya86

ಉ: ಮುನಿಸು...

udaya86's picture

ನಿಮ್ಮ ಕವನ ಚೆನ್ನಾಗಿದೆ ಪೂರ್ಣಿಮಾ ಹೆಬ್ಬಾರ್... ಹೀಗೆಯೇ ನಿಮ್ಮ ಕವನ ಬರೆಯುವ ಹವ್ಯಾಸ ಚೆನ್ನಾಗಿ ಸಾಗಲಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 5, 2007 - 11:24pm — mananthprabhu

ಉ: ಮುನಿಸು...

mananthprabhu's picture

ಈ ಕವನವು "ಸ್ನೇಹ" ದ ಬಗ್ಗೆ ಬರೆದಿರುವಿರೆ೦ದು ನನ್ನ ಅನಿಸಿಕೆ. ಈ ಕವನ ಒದಿ ನನ್ನ ಅನೇಕ ಗೆಳೆಯರ, ಅವರೊಡನೆ ಕಳೆದ ಸಮಯದ ಸವಿನೆನಪುಗಳು ಮರುಕಳಿಸಿದವು.

ಹೀಗೆ ಬರೆಯುತ್ತಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2007 - 12:18am — benaka

ಉ: ಮುನಿಸು...

benaka's picture

ಕವನ ಚೆನ್ನಾಗಿದೆ!

ಪ್ರತಿಮೆಗಳು ಚೆನ್ನಾಗಿವೆ; ನಿರಾಶೆ ಹತಾಶೆಯಾಗುವ ಕೊನೆಯ ಚಣಗಳನ್ನು ಬಣ್ಣಿಸುವ ರೀತಿ - ಒಳ್ಳೆಯ ಪ್ರಯತ್ನ! ಹೀಗೆಯೇ ಮುಂದುವರೆಸಿ. ಆದರೆ ಪ್ರತಿಮೆಯಲ್ಲೊಂದು ಸಣ್ಣ ಬಿರುಕೆನಿಸುವ ಈ ಸಾಲು ಏಕೋ ಸಮಾಧಾನ ತರಲಿಲ್ಲ.

"ಬಾಡಿ ಹೋಗಬಹುದು ಮುಡಿದ ಮಲ್ಲಿಗೆಯಂತೆ"

=> ಬಾಡಿಹೋಗಬಹುದು ಸರಿ, ಹೂವಿನ ಹೆಸರಿಗೆ ಮಲ್ಲಿಗೆ - ಇರಲಿ ಒಪ್ಪಿದರೂ, "ಮುಡಿದ" ಎಂಬ ಪದ ಇಲ್ಲಿ ಸ್ವಲ್ಪ ದಿಕ್ಕುತಪ್ಪಿಸುತ್ತದೆ. ನಿಮ್ಮ ಉದ್ದೇಶ ಬೇಲಿಗಳನ್ನು ಕಿತ್ತೆಸೆಯಬೇಕೆಂದಿರುವುದರಿಂದ, ಮುಡಿದ ಹೂವಿಗೂ ಬೇಲಿಗೂ ಸಂಬಂಧ ಕಲ್ಪಿಸುವುದು ಅಸಾಧ್ಯ! ಬೇಲಿಯಿರುವುದು ಯಾವಾಗಲೂ "ಮುಡಿಯದ" ಹೂವಿಗೆ ಮಾತ್ರ!! ಆದರೂ ಕವನ ಒಂದು ಒಳ್ಳೆಯ ಪ್ರಯತ್ನ ಎಂಬುದರಲ್ಲಿ ಎರಡು ಮಾತಿಲ್ಲ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನುರಾಗ
  • ಪ್ರೀತಿ
  • ಕಾಟು ಎಂದರೇನು?
  • ತಾಳೆ ಮರಗಳ ಹಿಂದೆ ನಿಶೆಯ ಕಪ್ಪು ಛಾಯೆಗಳ ನಡುವೆ - ಚಂದ್ರ (!)- ಅಮೆರಿಕೆಯ ಲಾಸ್ ಎಂಜಲೀಸ್ ಬಳಿಯ ಒಂದು ದೃಷ್ಯ.
  • ಆಯ್ದ ಗಾದೆ ಮಾತುಗಳು (೧-೧೦) :-
Syndicate content

ಲೇಖಕರು

purna's picture

ಪರಿಚಯ

ನಮಸ್ಕಾರ.

ನನ್ನ ಹೆಸರು ಪೂರ್ಣಿಮಾ, ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದೆನೆ. ನನಗೆ ಕವನ ಬರೆಯುವದು, ಸಂಗೀತ ಕೇಳುವುದು, ಹಾಡುವುದು ಅಂದ್ರೆ ತುಂಬಾ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator