ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
ಈಗ ಕೆಲವು ದಿನಗಳಿಂದ ಸುದ್ದಿಮಾಡಿರುವ ಬಸವಣ್ಣನವರ ಬಗ್ಗೆಯ ಜಯಪ್ರಕಾಶರ ಪುಸ್ತಕದ ಬಗ್ಗೆ ನಾವೆಲ್ಲಾ ಸಂಪದದಲ್ಲಿ ಬಹಳಷ್ಟು ಓದಿದ್ದೇವೆ. ಆದರೆ, ಬಸವಣ್ಣ ನಮಗೆ ಬೇಕಾಗಿರುವುದು ನಮಗೆ ಅವರು ಏನು ಹೇಳಿದರು ಎನ್ನುವುದರಿಂದಲೇ ಹೊರತು, ಅವರ ಹಿನ್ನಲೆ ಏನು ಎನ್ನುವ ಕಾರಣಕ್ಕೆ ಅಲ್ಲ. ಇದನ್ನು ನಾವು ಮರೆಯದಿದ್ದರೆ, ಎಷ್ಟೋ ಗೊಂದಲಗಳಿಂದ, ಗದ್ದಲಗಳಿಂದ ದೂರಾಗಬಹುದು. ಇದು ಬಸವಣ್ಣ ಒಬ್ಬರೇ ಅಲ್ಲ, ಇನ್ನ್ಯಾವ ಮಹಾಪುರುಷರಿಗೂ, ಕವಿ-ಕಲಾವಿದರಿಗೂ ಹೊಂದುವ ಮಾತೇ.
ನೆನ್ನೆ ಸುಮಾರು ಎರಡು ವರ್ಷಗಳ ಹಿಂದೆ ಇಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋ ನೋಡುತ್ತಿದ್ದೆ. ಅದರಲ್ಲಿ, ಮೈಸೂರಿನ ಹೆಸರಾಂತ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಅವರು ಬಸವಣ್ಣನವರ ವಚನವೊಂದಕ್ಕೆ ಮಾಡಿದ ನೃತ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿತು. ತಮಿಳುನಾಡಿನ ತಂಜಾವೂರಿನ ಬಳಿಯ ಪಂದನಲ್ಲೂರು ಶೈಲಿಯ ಭರತನಾಟ್ಯ ಕಲಾವಿದೆ, ಮೈಸೂರಿನಲ್ಲಿರುವ ಡಾ. ವಸುಂಧರಾ ಅವರು, ಕರ್ನಾಟಕದ ಉತ್ತರ ತುದಿಯ ಕಲ್ಯಾಣದ ಕ್ರಾಂತಿಯ ಕಾರಣಕರ್ತ ಬಸವಣ್ಣನವರ ವಚನಕ್ಕೆ ನೃತ್ಯ ಮಾಡಿದ್ದು ದೂರದ ಕ್ಯಾಲಿಫೋರ್ನಿಯಾದಲ್ಲಿ. ವಸುಧೈವ ಕುಟುಂಬಕಂ ಎನ್ನುವುದೀಗ ಸರಿಯಾದ ಮಾತು ![]()
ನೀವೂ ನೋಡಿ, ಕೇಳಿ ಆನಂದಿಸಿ
http://www.youtube.com/watch?v=KUlw3vXaK1s
ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ಎನ್ನ ಕೂಡಲಸಂಗಮದೇವನ ನೆನೆವುದೆ ಚಿಂತೆ!
ಸಾಮಾನ್ಯರ ಭಾಷೆಯಲ್ಲೇ ತಮ್ಮ ವಚನಗಳನ್ನೊರೆದು ಎಲ್ಲರಿಗೂ ಹತ್ತಿರವಾದ ಭಕ್ತಿಭಾಂಡಾರಿ ಬಸವಣ್ಣನವರು, ಸಾವಿರವರ್ಷಗಳ ಹಿಂದೆ ಈ ವಚನವನ್ನು ಹೇಳುವಾಗ ಚಕೋರ, ಭ್ರಮರ, ಅಂಬುಜ ಪರಿಮಳ, ಭಾನು,ಉದಯ ಇಂತಹ ಪದಗಳೆಲ್ಲ ಪರಭಾಷೆಯ ಪದಗಳೆಂದು ಚಿಂತಿಸಿದರೆ? ಸಾವಿರಾರು ವರ್ಷಗಳಿಂದ ನಮ್ಮವಾಗಿಸಿರುವ ಈ ಮಾತುಗಳನ್ನುಇ ಇಂದು ದ್ರಾವಿಡ ಮೂಲವಲ್ಲ ಎಂಬ ಕಾರಣಕ್ಕೆ ಹೊರಗೆಸೆಯಬೇಕೇ? ಹಾಗೆ ಮಾಡಿದರೆ, ಈ ವಚನಗಳು ನಮ್ಮವಾಗದ ಚಿಂತೆ ನಮ್ಮದಾಗದೇ?!
http://www.youtube.com/watch?v=KUlw3vXaK1s
ಈ ವಚನವನ್ನು ಹಾಡಿರುವವರಾರೋ ನನಗೆ ತಿಳಿಯದು. ಆದರೆ ಅವರು ಉಪಯೋಗಿಸಿರುವ ರಾಗ -ಚಕ್ರವಾಕ (ಅಥವ ಅಹಿರ್ ಭೈರವ್ - ಉತ್ತರಾದಿ ಪದ್ಧತಿಯಲ್ಲಿ) ಈ ವಚನದ ಒಳಗಿನ ಧ್ವನಿಗೆ ಬಹಳ ಒಪ್ಪುತ್ತದೆ ಎಂದು ಮಾತ್ರ ಹೇಳಬಲ್ಲೆ. ಚಕೋರನಂತಹ ಒಂದು ಕಾಲ್ಪನಿಕ ಪಕ್ಷಿಯ ಬಗ್ಗೆಯ ವಚನಕ್ಕೆ ಇನ್ನೊಂದು ಕಾಲ್ಪನಿಕ(?) ಹಕ್ಕಿಯಾದ ಚಕ್ರವಾಕದ ಹೆಸರಿರುವ ರಾಗ ಉಪಯೋಗಿಸಿರುವುದು ಮಾತ್ರ ಕಾಕತಾಳೀಯ ! (ಇಲ್ಲಿ ಇನ್ನೊಂದು ಹಕ್ಕಿಯನ್ನು ನೀವು ಕಂಡಿರಬೇಕಲ್ಲ
?)
-ಹಂಸಾನಂದಿ

- Login or register to post comments
- 698 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
-ಹಂಸಾನಂದಿ
ಉ: ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
ನಿಮ್ಮೀ ಬರಹ ಚನ್ನಾಗಿದೆ.
ಆದರೆ ಈ ಬರಹದಲ್ಲಿ
ಇದು ಬೇಕಿರಲಿಲ್ಲ.
ಬಸವಣ್ಣನವರ ಕಾಲದಲ್ಲೇ ಸಂಸ್ಕ್ರುತ ಬೇಡ, ವೇದ ಬೇಡ, ಅನ್ನೋ ಕೂಗು ಜೋರಾಗಿದ್ದು ಅಲ್ವಾ? ವಚನಗಳ ಗುಣಗಳನ್ನು ಹೇಳುತ್ತಾ ಆಡುನುಡಿಗೆ ಹತ್ತಿರವಾದ, ಕ್ಲಿಷ್ಟ ಸಂಸ್ಕೃತದ ಹೊರೆಯಿಲ್ಲದ, ಸಲೀಸಾಗರಿಯಬಹುದಾದ, ಹೀಗೆಲ್ಲ ಬಣ್ಣನೆಯುಂಟಲ್ಲ.
ಈ ಸಾಲನ್ನೇ ಹೀಗೆ ಬರೆದರೆ.
ಸಾವಿರಾರು ಏಡುಗಳಿಂದ ನಮ್ಮ ಕನ್ನಡವು ಸಕ್ಕದದಿಂದ ಹುಟ್ಟಿದೆಯಂಬ ತಪ್ಪುತಿಳಿವಳಿಕೆ ಮುರಿದು ಬಿದ್ದಿದೆ, ಇನ್ನೂ ಕೆಲವರಿಗೆ ಈ ಸರಿ ತಿಳಿವಳಿಗೆ ಬರಬೇಕು. ಕನ್ನಡಕ್ಕೆ ತನ್ನದೇ ಆದ ಸೊಗಡು, ಒರೆಸಿರಿ, ಬೇಗರಣಗಳಿವೆ, ಇದು ಸಕ್ಕದದಿಂದ ಬೇರೆಯಾಗಿದೆ. ಹೀಗಿರುವಾಗ, ಕನ್ನಡದ ದಿಟಮೂಲವನ್ನು, ಭಾಷಾವಿಜ್ಞಾನಿಗಳಿಂದ ಪುರಾವೆಗಳ ಮೇಲೆ ಪುರಾವೆಯಿತ್ತು ತೋರಿದ ದಿಟವನ್ನು ಅರಿತು, ನಮ್ಮ ಮೂಲವನ್ನು ಅರಿಯುವುದರಲ್ಲಿ ಏನು ತಪ್ಪು? ಇದು ಅವರವರ ಒಳಹುರುಪಿನ( ಸ್ವಾಸಕ್ತಿ ) ಸಂಗತಿ ಅಲ್ವಾ? ಬೇಡವಾದವರಿಗೆ ಬೇಡವು. ಬೇಕಾದವರಿಗೆ ಬೇಕು.
ಉವರಿಗೂ(ಯಾರೊಬ್ಬರಿಗೂ) ಎಲ್ಲರಿಗೂ ಇದು ಬೇಕೇ ಬೇಕು, ಎಲ್ಲರಿಗೂ ಇದು ಬೇಡವೇ ಬೇಡ ಎನ್ನುವ ಹಕ್ಕಿಲ್ಲವೇ ಇಲ್ಲ. ಇದು ಅವರವರ ಒಳವು!!
ಮತ್ತೆ ಇಲ್ಲೊಂದು ಮರುಳಿಂದ(ಭ್ರಾಂತಿಯಿಂದ)-ಅಂಜಿಕೆ ಇದೆ. ಕೆಲವರು ಹಳೆಯ ಕಬ್ಬಗಳನ್ನೂ 'ತಿದ್ದಿ' ಅನ್ನಬಹುದೆಂದು.
ಆದರೆ ಇಲ್ಲಿ ಯಾರೂ ಹಾಗೆ ಹಳೆಯ ಕಬ್ಬಗಳಲ್ಲಿರುವ ಹೊರನುಡಿ ಒರೆಗಳನ್ನು ಕಿತ್ತಾಕಿ, ಹೊರಗೆಸೆಯಿರಿ ಎಂದು ಒಮ್ಮೆಯೂ ಅಂದಿಲ್ಲ. ಹಳೆಯದು ಹೇಗಿದೆಯೋ ಹಾಗೇ ಇರಲಿ ಎಂದೇ ಎಲ್ಲರ ಹಂಬಲ.
ಹಂಸಾನಂದಿಯವರಿಗೆ ತಮಗಿರುವ ಕೊಂಚ ತಮಿಳು ಹಿನ್ನಲೆಯಿಂದ, ನಾವೆಲ್ಲ ತಮಿಳರಂತೆ "ಇನ್ನೊಂದು ಪೆರಿಯಾರ್ ಚಳುವಳಿ" ನಡೆಸಿ, "ಕವಿರಾಜಮಾರ್ಗ" ಅನ್ನೋದನ್ನು "ಕಬ್ಬಿಗರಸದಾರಿ"
ಅಂತ ಮಾಡಿ ಬಿಟ್ಟೇವು ಎಂಬ ಹೆದರಿಕೆ ಇರಬಹುದು. ಸ್ವಾಮಿ ಅಂತಹ ಐಲಾಟ ನಮ್ಮ ಕನ್ನಡಿಗರಿಗೆ ಒಗ್ಗಲ್ಲ, ಅದಕ್ಕೆ ನನ್ನ/ನಮ್ಮ ಬೆಂಬಲ ಯಾವತ್ತೂ ಇರಲ್ಲ.
ಆದರೆ ಈಗೀಗ ಬರಹಗಳು "ಸಜೀವ ಪ್ರಕ್ಷೇಪಣೆ" ಆಗುತ್ತಿರುವುದನ್ನು ನಾವೆಲ್ಲ ಗಮನಿಸಿಯೇ ಇದ್ದೀವಿ!!( ಇದನ್ನು ನೀವು ಒಪ್ಪಿ ಹಿಂದೆ ಹೇಳಿದ್ದುಂಟು )
ಇದೊಂದನ್ನು ಬಿಟ್ಟರೆ, ನಿಮ್ಮ ಬರಹದಲ್ಲಿ ಎಲ್ಲವು ಸಬದ್ಧ!!
ಎಲ್ಲಡೆ ಆರ್ಯ/ದ್ರಾವಿಡ ಅಂತ ನೀವು ಯೋಚಿಸುವಂತೆ ಕಾಣುವುದು!!( ನಿಮ್ಮ ಚಿಕ್ಕಗೆಳೆಯನ ಸಲಿಗೆಯ ಮಾತು
)
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !