Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು.

August 5, 2007 - 10:46pm — arunhegde

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತದ ಆಸ್ಕರ್‍ಗೆ ಹೋಲಿಸುತ್ತಾರೆ. 1953 ರಿಂದ ಕೊಡಮಾಡುತ್ತಿರುವ ಈ ಪ್ರಶಸ್ತಿ ಇಂದಿಗೂ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ರಾಷ್ಟ್ರಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಕಲಾವಿದ, ತಂತ್ರಜ್ಞನ ಕನಸುಗಳಲ್ಲೊಂದು ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗೋಸ್ಕರ ರಾಜಕೀಯ ಲಾಬಿಗಳೂ ಹೆಚ್ಚುತ್ತಿವೆ. ಇದು ಈ ಪ್ರತಿಷ್ಠಿತ ಪ್ರಶಸ್ತಿಯ ಪಾವಿತ್ರ್ಯತೆಯನ್ನು ಹಾಳುಮಾಡುತ್ತಿರುವುದು ನಿಜಕ್ಕೂ ಖೇದಕರ.

ಆದರೂ ಇಲ್ಲಿಯವರೆಗೆ ಕನ್ನಡ ಚಿತ್ರರಂಗಕ್ಕೆ ಸಂದಿರುವ ರಾಷ್ಟ್ರೀಯ ಪ್ರಶಸ್ತಿಗಳ ಮೇಲೊಂದು ಪಕ್ಷಿನೋಟ ಬೀರುವ ಕಿರು ಪ್ರಯತ್ನ ಇಲ್ಲಿದೆ.

ಅತ್ಯುತ್ತಮ ಚಿತ್ರ - ಸ್ವರ್ಣ ಕಮಲ ಪ್ರಶಸ್ತಿ

೧. 1970 - ಸಂಸ್ಕಾರ. ನಿರ್ದೇಶನ - ಪಟ್ಟಾಭಿ ರಾಮ ರೆಡ್ಡಿ. ಜ್ಞಾನಪೀಠ ಪ್ರಶಸ್ತಿ ವಿಜೇತ ಯು.ಆರ್. ಅನಂತ ಮೂರ್ತಿಯವರ ಕಾದಂಬರಿ ಆಧಾರಿತ ಈ ಚಿತ್ರ ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಸ್ವರ್ಣ ಕಮಲ ಪ್ರಶಸ್ತಿಯನ್ನು ತಂದು ಕೊಟ್ಟಿತು.

೨. 1975 - ಚೋಮನ ದುಡಿ. ನಿರ್ದೇಶನ - ಬಿ.ವಿ.ಕಾರಂತ್. ಜ್ಞಾನಪೀಠ ಪ್ರಶಸ್ತಿ ವಿಜೇತ, ಕಡಲ ತೀರದ ಭಾರ್ಗವನೆಂದೇ ಖ್ಯಾತರಾದ ಡಾ.ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯನ್ನು ಅಮೋಘವಾಗಿ ದೃಶ್ಯ ಮಾಧ್ಯಮಕ್ಕೆ ಅಳವಡಿಸಿದರು ಬಿ.ವಿ.ಕಾರಂತರು. ಇದೇ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ವಾಸುದೇವರಾವ್ ಅವರು ಶ್ರೇಷ್ಠ ನಟ ಪ್ರಶಸ್ತಿಯನ್ನೂ ಪಡೆದರು.

೩. 1977 - ಘಟಶ್ರಾದ್ದ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ಇದು ಕನ್ನಡ ಚಿತ್ರರಂಗದ ಖ್ಯಾತಿಯನ್ನು ಇಡೀ ವಿಶ್ವಕ್ಕೇ ಪಸರಿಸಿದ ಮಹಾನ್ ಚಿತ್ರ. ಕೆ.ವಿ.ಸುಬ್ಬಣ್ಣ, ಗಿರೀಶ್ ಕಾಸರವಳ್ಳಿಯವರ ಕಥೆಗೆ ಕಾಸರವಳ್ಳಿಯವರೇ ಚಿತ್ರಕಥೆ ಬರೆದು ನಿರ್ದೇಶಿಸಿದರು. ಈ ಚಿತ್ರ ಹಿಂದಿಗೂ ಭಾಷಾಂತರಗೊಂಡಿತಲ್ಲದೇ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನವಾಯಿತು.

೪. 1983 - ಆದಿ ಶಂಕರಾಚಾರ್ಯ (ಸಂಸ್ಕೃತ). ನಿರ್ದೇಶನ - ಜಿ.ವಿ.ಅಯ್ಯರ್. ಇದು ಸಂಸ್ಕೃತ ಚಿತ್ರವಾದರೂ ಇದನ್ನು ನಿರ್ದೇಶಿಸಿದವರು ಕನ್ನಡ ಚಿತ್ರರಂಗದ ಭೀಷ್ಮರೆಂದೇ ಖ್ಯಾತರಾದ ಜಿ.ವಿ.ಅಯ್ಯರ್‍ರವರು. ಹಾಗಾಗಿ ಇದರ ಕೀರ್ತಿಯೂ ಕನ್ನಡ ಚಿತ್ರರಂಗಕ್ಕೇ ಸೇರಿತ್ತದೆ.

೫. 1986 - ತಬರನ ಕಥೆ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ನಿವೃತ್ತ ಬಡ ಉದ್ಯೋಗಿಯೊಬ್ಬ ತನ್ನ ನಿವ್ರೂತ್ತಿವೇತನಕ್ಕೋಸ್ಕರ ಸರಕಾರೀ ಕಛೇರಿಗಳಿಗೆ ಅಲೆಯುವ, ಸಕ್ರಾರೀ ವ್ಯವಸ್ಥೆಯ ಕರಾಳ ಮುಖವನ್ನು ಪರಿಚಯಿಸುವ ಈ ಚಿತ್ರದಲ್ಲಿ ಚಾರು ಹಾಸನ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇದೇ ಚಿತ್ರಕ್ಕಾಗಿ ಅವರು ಶ್ರೇಷ್ಠ ನಟ ಪ್ರಶಸ್ತಿಯನ್ನೂ ಪಡೆದರು.

೬. 1992 - ಭಗವದ್ಗೀತಾ (ಸಂಸ್ಕೃತ). ನಿರ್ದೇಶನ - ಜಿ.ವಿ.ಅಯ್ಯರ್.

೭. 1997 - ತಾಯಿ ಸಾಹೇಬ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ನಟಿ ಜಯಮಾಲಾ ನಿರ್ಮಿಸಿ ನಟಿಸಿರುವ ತಾಯಿ ಸಾಹೇಬ ಸಂಕೀರ್ಣ ಕಥೆಯೊಂದನ್ನು ಅತ್ಯಂತ ಉತ್ಕೃಷ್ಠ ಮಟ್ಟದಲ್ಲಿ ತೆರೆಯ ಮೇಲೆ ತೋರಿಸಿದ ಚಿತ್ರ. ಜಯಮಾಲಾರ ಅಭಿನಯಕ್ಕೆ ಸಾರ್ವತ್ರಿಕವಾಗಿ ಶ್ಲಾಘನೆ ದೊರೆಯಿತು.

೮. 2001 - ದ್ವೀಪ. ನಿರ್ದೇಶನ - ಗಿರೀಶ್ ಕಾಸರವಳ್ಳಿ. ನಾ.ಡಿಸೋಜಾರವರ ಕಾದಂಬರಿಯನ್ನು ನಟಿ ದಿ.ಸೌಂದರ್ಯಾರವರು ನಿರ್ಮಿಸಿದರು. ಅವರೇ ನಾಯಕಿಯಾಗಿಮೋಘವಾಗಿ ನಟಿಸಿದರು ಕೂಡಾ.

ಎರಡನೇ ಅತ್ಯುತ್ತಮ ಚಿತ್ರ - ರಜತ ಕಮಲ

1973 - ಕಾಡು. ನಿರ್ದೇಶನ - ಗಿರೀಶ್ ಕಾರ್ನಾಡ್.

ಅತ್ಯುತ್ತಮ ನಿರ್ದೇಶಕ - ಸ್ವರ್ಣ ಪದಕ

೧. 1971 - ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ್. ಚಿತ್ರ - ವಂಶವೃಕ್ಷ. ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ಚಿತ್ರ.

೨. 1976 - ಪಿ.ಲಂಕೇಶ್. ಚಿತ್ರ - ಪಲ್ಲವಿ.

ಅತ್ಯುತ್ತಮ ನಟ

೧. 1975 - ಎಮ್.ವಿ.ವಾಸುದೇವರಾವ್. ಚಿತ್ರ - ಚೋಮನ ದುಡಿ.

೨. 1985 - ಚಾರುಹಾಸನ್. ಚಿತ್ರ - ತಬರನ ಕಥೆ.

ಅತ್ಯುತ್ತಮ ನಟಿ

೧. 1973 - ನಂದಿನಿ ಭಕ್ತವತ್ಸಲ. ಚಿತ್ರ - ಕಾಡು.

೨. 2004 - ತಾರಾ. ಚಿತ್ರ - ಹಸೀನಾ.

ಅತ್ಯುತ್ತಮ ಪೋಷಕ ನಟ

೧. 2000 - ಹೆಚ್.ಜಿ.ದತ್ತಾತ್ರೇಯ. ಚಿತ್ರ - ಮುನ್ನುಡಿ.

ಅತ್ಯುತ್ತಮ ಪೋಷಕ ನಟಿ

ಇನ್ನೂ ಕನ್ನಡಕ್ಕೆ ಬಂದಿಲ್ಲ.

ಅತ್ಯುತ್ತಮ ಬಾಲ ನಟ/ನಟಿ

೧. 1973 - ಮಾಸ್ಟರ್ ಜಿ.ಎಸ್.ನಟರಾಜ್. ಚಿತ್ರ - ಕಾಡು.

೨. 1977 - ಮಾಸ್ಟರ್ ಅಜಿತ್ ಕುಮಾರ್. ಚಿತ್ರ - ಘಟಶ್ರಾದ್ದ.

೩. 1985 - ಮಾಸ್ಟರ್ ಪುನೀತ್. ಚಿತ್ರ - ಬೆಟ್ಟದ ಹೂವು.

೪. 1994 - ಮಾಸ್ಟರ್ ವಿಜಯ ರಾಘವೇಂದ್ರ. ಚಿತ್ರ - ಕೊಟ್ರೇಶಿ ಕನಸು.

೫. 1995 - ಮಾಸ್ಟರ್ ವಿಶ್ವಾಸ್. ಚಿತ್ರ - ಕ್ರೌರ್ಯ.

ಅತ್ಯುತ್ತಮ ಚಿತ್ರಕಥೆ

೧. 1969- ಪುಟ್ಟಣ್ಣ ಕಣಗಾಲ್. ಚಿತ್ರ - ಗೆಜ್ಜೆ ಪೂಜೆ.

೨. 1978 - ಟಿ.ಎಸ್.ರಂಗ, ಟಿ.ಎಸ್.ನಾಗಾಭರಣ. ಚಿತ್ರ - ಗ್ರಹಣ.

೩. 1983 - ಜಿ.ವಿ.ಅಯ್ಯರ್. ಚಿತ್ರ -ಆದಿ ಶಂಕರಾಚಾರ್ಯ.

ಅತ್ಯುತ್ತಮ ಗೀತ ರಚನೆ (ಸಾಹಿತ್ಯ)

೧. 1991 - ಕೆ.ಎಸ್.ನರಸಿಂಹಸ್ವಾಮಿ. ಚಿತ್ರ - ಮೈಸೂರ ಮಲ್ಲಿಗೆ.

ಅತ್ಯುತ್ತಮ ಸಂಗೀತ ನಿರ್ದೇಶಕ

೧. 1976 - ಬಿ.ವಿ.ಕಾರಂತ್. ಚಿತ್ರ - ಋಷ್ಯಶೃಂಗ.

೨. 1977 - ಬಿ.ವಿ.ಕಾರಂತ್. ಚಿತ್ರ - ಘಟಶ್ರಾದ್ಧ.

೩. 1986 - ಎಮ್.ಬಾಲಮುರಳಿ ಕೃಷ್ಣ. ಚಿತ್ರ - ಮಧ್ವಾಚಾರ್ಯ.

೪. 1995 - ಹಂಸಲೇಖ. ಚಿತ್ರ - ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ.

 

ಅತ್ಯುತ್ತಮ ಹಿನ್ನೆಲೆ ಗಾಯಕ

೧. 1995 - ಎಮ್.ಬಾಲಮುರಳಿ ಕೃಷ್ಣ. ಚಿತ್ರ - ಹಂಸಗೀತೆ.

೨. 1978 - ಶಿವಮೊಗ್ಗ ಸುಬ್ಬಣ್ಣ. ಚಿತ್ರ - ಕಾಡು ಕುದುರೆ.

೩. 1992 - ಡಾ.ರಾಜ್ ಕುಮಾರ್. ಚಿತ್ರ - ಜೀವನ ಚೈತ್ರ.

೪. 1995 - ಎಸ್.ಪಿ.ಬಾಲಸುಬ್ರಹ್ಮಣ್ಯಂ. ಚಿತ್ರ - ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ.

<<To be continued...ಇನ್ನೂ ಇದೆ..>>

  • ಜ್ಞಾನವಾಹಿನಿ
Ornamental seperator
  • Login or register to post comments
  • 441 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 7, 2007 - 2:32am — honnalichandras...

ಉ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು.

honnalichandrashekhar's picture

ಅತ್ಯುತ್ತಮ ನಟ ಪ್ರಶಸ್ತಿ ಒಂದಾನೊಂದು ಕಾಲದಲ್ಲಿ ಚಿತ್ರದ ನಟನೆಗಾಗಿ ಶಂಕರ್ ನಾಗ್ ಅವರಿಗೂ ಬಂದಂತೆ ನೆನಪು. ತಿಳಿದವರು ಸ್ಪಷ್ಟಪಡಿಸಲಿ

  • Login or register to post comments
  • link
  • Email this ಪ್ರತಿಕ್ರಿಯೆ
August 7, 2007 - 3:27pm — Khavi

ಉ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು.

Khavi's picture

ಸುಮಾರು ಐವತ್ತು ದಶಕಗಳಕಾಲ ಕನ್ನಡ ಚಿತ್ರರಂಗವನ್ನು ಆಳಿದ ಡಾ|| ರಾಜಕುಮಾರರಿಗೆ ಸಿಕ್ಕಿದ್ದು ಒಂದೆ ರಾಷ್ಟೀಯ ಪ್ರಶಸ್ತಿ ಅದು ಕೇವಲ ಹಿನ್ನೆಲೆ ಗಾಯನಕ್ಕೆ ಮಾತ್ರ ಎಂದು ತಿಳಿದು ಆಶ್ಚರ್ಯವಾಯಿತು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!
  • ಪ್ರೇಮದ ಓಲೆ
  • ನನ್ನ ಕಾವ್ಯ
  • ಮೈಸೂರು ಫಿಲ್ಮ್ ಸೊಸೈಟಿ ಸ್ಕ್ರೀನಿಂಗ್
  • ನಾನು ಯಾವ ಆತ್ಮ
Syndicate content

ಲೇಖಕರು

arunhegde's picture

ಪೂರ್ಣ ಹೆಸರು
ಅರುಣ್ ಹೆಗಡೆ

ಪರಿಚಯ

ನಾನು ಅರುಣ್ ಕುಮಾರ್ ಡಿ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಮೂಲತಃ ಉತ್ತರ ಕನ್ನಡ ಜಿಲ್ಲೆಗೆ ಸೇರಿದವನು. ಕನ್ನಡದ ಬಗ್ಗೆ ಗೌರವ ಅಭಿಮಾನವಿದ್ದು ಕನ್ನಡ ಅಂತರ್ಜಾಲ ತಾಣಗಳಿಗೆ ಭೇಟಿ ಕೊಡುವುದು, ಸಾಧ್ಯವಾದರೆ ನಾನೂ ಒಂದಿಷ್ಟು ಬರೆಯುವುದು ನನ್ನ ಹವ್ಯಾಸಗಳಲ್ಲೊಂದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator