22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅಲ್ಲಿಂದ ಇಲ್ಲಿಗೆ

September 12, 2007 - 8:37am
ವೈಭವ

                                                ಅಲ್ಲಿಂದ ಇಲ್ಲಿಗೆ ಬಂದೆ

                                                 ನಲಿವ ಹುಡುಕುತ್ತಾ

                                          ಮುಸುಕಾದ ನುಲಿದುಕೊಂಡಿರುವ

                                             ದಾರಿಗಳಲ್ಲಿ ಓಡುವುದಿರಲಿ

                                              ನಡೆಯುವುದೇ ಎಡರು.

                                           ಆದರೂ ಸುಳ್ಳು ನಲಿವ ನಂಬಿ

                                      ನಡೆಯಬೇಕು ಬಾಳ ಪಯಣ ಸಾಗಿಸಲು

                                       ಒಮ್ಮೊಮ್ಮೆ ಹಿಂತಿರುಗಿ ನೋಡಿದಾಗ

                                        "ಒಹ್ ಏಸು ನಲಿವಿತ್ತು" ಅನ್ನುತ್ತಿತ್ತು

                             ಆದರೂ ನಡೆಯುತಿದೆ ಉಸಿರು ಬಾಳಿನತ್ತ ಮೊಗವಿಟ್ಟು

                                            ಸಾವಿನಿಂದ ತಪ್ಪಿಸಿಕೊಳ್ಳಲು


 

ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Sunil Jayaprakash on
ವೈಭವ ತಲೆದೂಗಿದೆ ನಿಮ್ಮ ಪದಗಟ್ಟಿಗೆ. ಆದರೆ ನನಗೆ "ಈಗಿನ ಜೀವನ ಹಿಂದಿನದಕ್ಕಿಂತ ಚೆನ್ನಾಗಿಲ್ಲ ಎನ್ನುವ ಅರ್ಥ ಬರುವ ಮಾತಿನಲ್ಲಿ" ಅಷ್ಟು ನಂಬಿಕೆ ಇಲ್ಲ. ನಾವು ಜೀವನದಲ್ಲಿ ಆಶಾವಾದಿಯಾಗಿರಲೇ ಬೇಕಲ್ಲವೇ ? ನಾವು ಈಗ ಅನುಭವಿಸುತ್ತಿರುವ ನಲಿವು ಮತ್ತು ನಾವು ಕಾಣುವ ಕಣಸು/ಕನಸನ್ನು ಸುಳ್ಳು ನಲಿವು ಎಂದೇಕೆ ತಿಳಿದುಕೊಳ್ಳಬೇಕು ? ಅಥವಾ ನಾನು ಈ ಕವನ ಅರ್ಥಮಾಡಿಕೊಂಡ ರೀತಿ ತಪ್ಪಿರಬಹುದು.

Submitted by ವೈಭವ on
ಹೌದು ಬದುಕಲ್ಲಿ ಹುರುಪಿರಬೇಕು.. ಆದರೆ ಈ ಮೇಲಿನ ಸಾಲುಗಳಲ್ಲಿರುವ 'ಅನಿಸು/ಭಾವ' ನಿಮ್ಮ ಮನದಲ್ಲಿ ಒಮ್ಮೆಯಾದರೂ ಸುಳಿಯದೇ ಇರುವುದಿಲ್ಲ ಅಲ್ಲವೇ? ---- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

Submitted by betala on
ಈಗೆ ಎಲ್ಲೊ ಓದಿದ ನೆನಪು ... ಈ ನಲಿವು ಅನ್ನುವುದು ಸುಂದರವಾದ ಹೊದೋಟದಲ್ಲೆ ಇರುವ ಬಣ್ಣದ ಚಿಟ್ಟೆಯಂತೆ, ನಾವು ಅದನ್ನು ಹಿಡಿಯಲು ಹೋದಾಗ ಕೈಗೆ ಸಿಗದೆ ಹೋಗುವುದು... ಆದ್ರೆ ಅಲ್ಲೆ ಸೌಂದರ್ಯವನ್ನು ಸವಿಯುತ್ತ ಕುಳಿತರೆ, ಆ ಚಿಟ್ಟೆಬಂದು ಹೆಗಲ ಮೇಲೆ ಕುಳಿತುಕೊಳ್ಳುವುದಂತೆ ... -ನಿಮ್ಮ ಬೆಂಬಿಡದ ಬೇತಾಳ .....