ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

September 17, 2007 - 8:46pm — ASHOKKUMAR
sukinda.jpg

(ಇ-ಲೋಕ-40)(17/9/2007)

ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ.ವಿಶ್ವದ ಅತಿಮಲಿನ ಸ್ಥಳಗಳ ಪಟ್ಟಿ ಪ್ರಕಟವಾಗಿದೆ.ದುರಂತವೆಂದರೆ,ಈ ಪಟ್ಟಿಯಲ್ಲಿ ಭಾರತದ ಎರಡು ಸ್ಥಳಗಳು ಸ್ಥಾನ ಪಡೆದಿವೆ.ಸುಕಿಂದ ಕ್ರೊಮಿಯಮ್ ಗಣಿಗಾರಿಕೆಯಿಂದ ನೀರು ಮಲಿನವಾಗಿದೆಯಂತೆ.ಇಲ್ಲಿನ ಕೆಲಸಗಾರರು ಅದೇ ನೀರನ್ನು ಕುಡಿಯಲು,ದೈನಂದಿನ ಕೆಲಸಗಳಿಗೆ ಬಳಸುವುದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಾರೆ.ಜತೆಗೆ ಬಂಜೆತನ,ವಿಕಲಾಂಗ ಮಕ್ಕಳ ಜನನ ಸಾಮಾನ್ಯ.ಪ್ರಸಿದ್ಧ ಟಾಟಾ ಸ್ಟೀಲ್ ಕಂಪೆನಿ ಈ ಗಣಿಯನ್ನು ನಡೆಸುತ್ತಿದೆ.ಜಂಶದ್‍ಪುರದ ಬಳಿ ಈ ಗಣಿಗಳಿವೆ.ಗುಜರಾತಿನ ವಪಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಂದು ಪಟ್ಟಣ.ಇದಕ್ಕೆ ಕಾರಣವಾಗಿರುವುದು ನೀರಿನ ಮಾಲಿನ್ಯವೇ ಆಗಿದೆ.ಈ ನಗರದಲ್ಲಿರುವ ಅಪಾರ ಸಂಖ್ಯೆಯ ಕೈಗಾರಿಕೆಗಳು ರಾಸಾಯಿನಿಕ,ಕ್ರಿಮಿನಾಶಕಗಳು,ಬಣ್ಣಗಳ ತಯಾರಿಯಲ್ಲಿ ತೊಡಗಿದ್ದು,ಇಲ್ಲಿನ ನೀರಿನ ಮೂಲಗಳು ಮಲಿನವಾಗಲು ಕಾರಣವಾಗಿವೆ.ಇಲ್ಲಿ ಲಭ್ಯ ನೀರಿನಲ್ಲಿ ಪಾದರಸದ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ತೊಂಭತ್ತಾರು ಪಟ್ಟು ಹೆಚ್ಚು! ಈ ಪಟ್ಟಿಯಲ್ಲಿ ರಷ್ಯಾದ ನಾಲ್ಕು ಸ್ಥಳಗಳು ಇವೆ.ಬ್ಲಾಕ್‍ಸ್ಮಿತ್ ಇನ್ಸ್‍ಸ್ಟಿಟ್ಯೂಟ್ ಎನ್ನುವ ಸ್ವತಂತ್ರ ಪರಿಸರ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ಈ ಪಟ್ಟಿಯನ್ನು ತಯಾರಿಸಲಾಗಿದೆ.ಕಲ್ಲಿದ್ದಲು ಗಣಿಗಳ ಕಾರಣ ಮಲಿನವಾಗಿರುವ ಎರಡು ಚೀನಾದ ಪಟ್ಟಣಗಳೂ ಪಟ್ಟಿಯಲ್ಲಿ ಸೇರಿವೆ.

ಗುಂಡು ನಿರೋಧಕ ಶಾಲಾ ಚೀಲ

ಭಾರತದಲ್ಲಿ ಶಾಲಾ ಮಕ್ಕಳು ಶಿಕ್ಷಕರ ದೌರ್ಜನ್ಯಕ್ಕೆ ತುತ್ತಾಗುವುದು ಹೆಚ್ಚಾಗುತ್ತಿದೆ.ಅಮೆರಿಕದಲ್ಲಿ ಹಾಗಿಲ್ಲ.ಬದಲಾಗಿ ಅಲ್ಲಿ ಶಾಲೆಗಳಲ್ಲಿ ಹಿಂಸಾ ಪ್ರಕರಣಗಳು ನಡೆಯುತ್ತವೆ.ಮಕ್ಕಳು ಬೇಕಾಬಿಟ್ಟಿ ಗುಂಡೆಸೆಯುವುದು,ಇರಿಯುವಂತಹ ಘಟನೆಗಳು ನಡೆಯುವುದಿದೆ.ಕೊಲಂಬಿಯಾದಲ್ಲಿ 1999ದಲ್ಲಿ ನಡೆದ ಗುಂಡೆಸೆತ ಪ್ರಕರಣದಿಂದ ಚಿಂತಿತರಾದ ಈರ್ವರು ಹೆತ್ತವರು ಮಕ್ಕಳನ್ನು ಇಂತಹ ಘಟನೆಗಳಿಂದ ರಕ್ಷಿಸಲು ಉಪಯುಕ್ತವಾದ ಗುಂಡು ನಿರೋಧಕ ಚೀಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.ಈ ಬ್ಯಾಗನ್ನು ಶರೀರದ ಅಡ್ಡ ಹಿಡಿದು ಗುಂಡೆಸೆತದಿಂದ ಬಚಾವಾಗಬಹುದಂತೆ.ಹಾಗೆಯೇ ಇದನ್ನು ಬೆನ್ನಿಗೆ ನೇತು ಹಾಕಿಕೊಂಡರೆ,ಹಿಂದಿನಿಂದ ಬಂದು ಇರಿಯುವ ಪ್ರಕರಣ ನಡೆದರೆ ರಕ್ಷಣೆ ಸಿಗುತ್ತದೆ.ಚೀಲವನ್ನು ಶಾಲೆಯಲ್ಲೂ ತೆಗೆದಿರಿಸುವುದರಿಂದ ಗುಂಡು ನಿರೋಧಕ ಚೀಲಗಳಿಂದ ಪ್ರಯೋಜನ ಸಿಗದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.ಈ ಚೀಲ ನೂರೆಪ್ಪತ್ತೈದು ಡಾಲರಿಗೆ ಮಾರಾಟವಾಗುತ್ತಿದೆ.ಮಕ್ಕಳು ಬಂದೂಕ,ಚೂರಿಯನ್ನು ಶಾಲೆಗೆ ತರುವುದನ್ನು ತಡೆಯಲು ಪಾರದರ್ಶಕ ಶಾಲಾ ಚೀಲಗಳನ್ನು ಕಡ್ಡಾಯಗೊಳಿಸಿದ ಶಾಲೆಗಳೂ ಅಲ್ಲಿವೆ!

ಸೆಲ್‍ಪೋನ್ ಸ್ಥಳೀಯ ಕರೆಗಳನ್ನು ಉಚಿತವಾಗಿಸುವ ತಾಂತ್ರಿಕತೆ

ನೆಟ್‍ವರ್ಕ್ ಲಭ್ಯವಿಲ್ಲದ ಕಡೆ ಸಮೀಪದಲ್ಲೇ ಇರುವ ಇನ್ನೊಂದು ಮೊಬೈಲಿಗೆ ಕರೆ ಮಾಡಬೇಕೇ? ಇಂತಹ ಒಂದು ಪೋನಿನಿಂದ ಇನ್ನೊಂದಕ್ಕೆ ನೇರ ಕರೆ ಮಾಡುವ ಸಮಾನಸ್ಕಂಧರ ನಡುವಣ ಕರೆ ಮಾಡುವ ತಾಂತ್ರಿಕತೆಯನ್ನು ಟೆರಾನೆಟ್ ಎನ್ನುವ ಸ್ವೀಡಿಶ್ ಕಂಪೆನಿ ಅಭಿವೃದ್ಧಿ ಪಡಿಸಿದೆ.ಈ ತಾಂತ್ರಿಕತೆಯು ಕಂಪ್ಯೂಟರ್ ಜಾಲಗಳಲ್ಲಿ ವಿಡಿಯೊ,ಸಂಗೀತ ಮತ್ತಿತರ ಕಡತಗಳ ವಿತರಣೆಗೆ ಬಳಕೆಯಾಗುತ್ತಿದೆ.ಸೆಲ್‍ಪೋನಿನಿಂದ ಈ ತೆರನ ಕರೆ ಮಾಡಿದಾಗ,ಅದು ತನ್ನ ಸುತ್ತ ಬೇಕಾದ ನಂಬರಿನ ಮೊಬೈಲ್‍ನ ಸಂಕೇತ ಬರುತ್ತಿದೆಯೇ ಎಂದು ಪರೀಕ್ಷಿಸುತ್ತದೆ.ಬರುತ್ತಿದ್ದರೆ,ಆ ಪೋನಿಗೆ ಸಂಕೇತ ರವಾನಿಸಿ,ಕರೆಯೇರ್ಪಡುತ್ತದೆ.ಒಂದು ವೇಳೆ ಆ ನಂಬರಿನ ಫೋನ್ ಇಲ್ಲವಾದರೆ,ಲಭ್ಯವಿರುವ ಇತರ ಪೋನುಗಳ ಮೂಲಕ ಸಂಕೇತಗಳನ್ನು ದೂರಕ್ಕೆ ರವಾನಿಸಿ,ಕರೆಯೇರ್ಪಡಿಸುವ ಪ್ರಯತ್ನ ನಡೆಯುತ್ತದೆ.ಪ್ರತಿ ಮೊಬೈಲ್ ಕೂಡಾ ತನ್ನ ಸುತ್ತಲಿನ ಒಂದು ಕಿಲೋಮೀಟರ್ ತ್ರಿಜ್ಯದ ಪ್ರದೇಶಕ್ಕೆ ಸಂಕೇತಗಳನ್ನು ರವಾನಿಸಬಲ್ಲುದು.ಇತರ ಮೊಬೈಲುಗಳ ಸಹಾಯ ಪಡೆದು,ಜಾಲವೇರ್ಪಡಿಸಿಕೊಂದು ಕರೆಗಳನ್ನು ದೂರದಲ್ಲಿರುವ ಮೊಬೈಲುಗಳಿಗೆ ಮಾಡುವ ಪ್ರಯತ್ನ ಇಲ್ಲಿ ನಡೆಯುತ್ತದೆ.ಕಂಪೆನಿಯ ನೆಟ್‍ವರ್ಕ್‍ನ ಸಹಾಯ ಪಡೆಯದೆ ಈ ಕರೆ ಮಾಡಲಾಗುವ ಕಾರಣ,ಕರೆಗೆ ಶುಲ್ಕವಿರದು.ಹಳ್ಳಿಗಾಡಿನ ಪ್ರದೇಶಗಳಲ್ಲಿ ಈ ತಾಂತ್ರಿಕತೆ ಹೆಚ್ಚು ಉಪಯುಕ್ತವಾಗಲಿದೆ. ಮೊಬೈಲ್ ವ್ಯಾಪ್ತಿಯಿಲ್ಲದೆ,ಜನರಲ್ಲಿ ಮೊಬೈಲ್ ಸಾಧನ ಇದ್ದಾಗಲಷ್ಟೇ ತಂತ್ರಜ್ಞಾನ ಪ್ರಯೋಜನಕಾರಿ.ಕರೆಗಳ ಒತ್ತಡ ಹೆಚ್ಚಿದ್ದರೆ ವ್ಯವಸ್ಥೆ ವಿಫಲವಾಗಬಹುದು.ಆದರೆ ಹಳ್ಳಿಗಾಡಿನ ಸ್ಥಳಗಳಲ್ಲಿ ಅಧಿಕ ಕರೆಗಳ ಒತ್ತಡ ಏರ್ಪಡುವ ಸಾಧ್ಯತೆ ಕಡಿಮೆ ತಾನೇ?ಇಂತಹ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಸೆಲ್‍ಕಂಪೆನಿಗಳಿಗೆ ಉತ್ಸಾಹ ಇಲ್ಲ.ಆದಾಯಕ್ಕೆ ಕೊರೆಯೊಡ್ಡುವ ತಾಂತ್ರಿಕತೆಯನ್ನು ಅವೇಕೆ ಬಯಸುತ್ತವೆ?

ಖಾಸಗಿ ಚಂದ್ರಾಯಾನದ ಸ್ಪರ್ಧೆ

ಗೂಗಲ್ ಮತ್ತು ಎಕ್ಸ್-ಸ್ಪೇಸ್ ಫೌಂಡೇಶನ್ ಎಂಬ ಸಂಸ್ಥೆಗಳು ಜಂಟಿಯಾಗಿ ಖಾಸಗಿ ಚಂದ್ರಾಯಾನ ಕೈಗೊಳ್ಳಲು ಪ್ರೋತ್ಸಾಹಿಸಲೋಸುಗ ಸ್ಪರ್ಧೆ ಏರ್ಪಡಿಸಿವೆ.2012ರ ವರೆಗೆ ತೆರೆದಿರುವ ಸ್ಪರ್ಧೆಯ ಪ್ರಥಮ ಬಹುಮಾನ ಇಪ್ಪತ್ತು ದಶಲಕ್ಷ ಡಾಲರುಗಳು.ಐದು ದಶಲಕ್ಷ ಡಾಲರಿನ ದ್ವಿತೀಯ ಬಹುಮಾನವೂ ಇದೆ.ಬಹುಮಾನ ಪಡೆಯಲು ಚಂದ್ರನಲ್ಲಿಗೆ ಬಾಹ್ಯಾಕಾಶ ವಾಹನವನ್ನು ಉಡ್ಡಯಿಸಿ,ಅಲ್ಲಿ ಯಶಸ್ವಿಯಾಗಿ ಇಳಿಯಬೇಕು.ಚಂದ್ರನ ನೆಲದ ಮೇಲೆ ಐನೂರು ಅಥವ ಹೆಚ್ಚು ದೂರ ಸಾಗಿ,ನಿಗದಿತ ದತ್ತಾಂಶ,ವಿಡಿಯೋ ಚಿತ್ರೀಕರಣ ಮತ್ತು ಪರೀಕ್ಷಾ ಕಾರ್ಯಗಳನ್ನು ಕೈಗೊಳ್ಳಬೇಕು.ದ್ವಿತೀಯ ಬಹುಮಾನ ಗೆಲ್ಲಲು ಬಾಹ್ಯಾಕಾಶ ವಾಹನ ಚಂದ್ರನಲ್ಲಿಳಿದು,ಕೆಲವು ಚಿತ್ರಗಳನ್ನು ತೆಗೆಯಬೇಕು.ವಾಹನದಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೋ ಕ್ಯಾಮರಾವನ್ನು ಅಳವಡಿಸಿರಬೇಕೆಂಬ ನಿಯಮವೂ ಇದೆ.ಒಂದು ವೇಳೆ 2012ರ ವರೆಗೂ ಬಹುಮಾನ ವಿಜೇತರು ಹೊರಹೊಮ್ಮದಿದ್ದರೆ,ಮತ್ತೆರಡು ವರ್ಷ ಕಾಲ ಸ್ಪರ್ಧೆಯ ಅವಧಿಯನ್ನು ವಿಸ್ತರಿಸಲಾಗುತ್ತದೆ.

*ಅಶೋಕ್‍ಕುಮಾರ್ ಎ

  • ಪ್ರಚಲಿತ
~.~
  • Login or register to post comments
  • 384 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 19, 2007 - 6:00am — venkatesh

ಉ: ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

venkatesh's picture

ಅಶೋಕರೆ,

ನಾವು ನಮ್ಮ ಮಹಾನ್ ಭಾರತಕ್ಕೆ ವಿಶ್ವಮಾಲಿನ್ಯ ದುರಂಧರದೇಶ, ಅತ್ಯಂತ ಹಿಂದುಳಿದ ಜನಾಂಗವೆಂದು ಹೋರಾಡುವದೇಶ, ಅತ್ಯಂತ ಲಂಚ-ರಿಶುವತ್ತುಗಳನ್ನು ಲಪಟಾಯಿಸುವ ದೇಶ, ಇನ್ನೂ ಅನೇಕ ಬಿರುದುಬಾಲಿಗಳನ್ನು ಪ್ರಶಸ್ತಿಗಳನ್ನೂ ಕೊಟ್ಟು, ಸನ್ಮಾನಿಸೋಣ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 19, 2007 - 9:29am — muralihr

ಉ: ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

muralihr's picture

ಏನ್ರೀ ಇದು ! ಸುಕಿ೦ದಾನಲ್ಲಿ ಕೆಲ್ಸಾ ಮಾಡಿದ್ದಕೆ ಟಾಟಾದವರಿಗೆ ಅದೆಷ್ಟೋ ಬಿರುದು ಸನ್ಮಾನ ಸಿಕ್ಕಿದೆ...http://www.tata.com/tata_steel/releases/20030307.htm
www.livelihoods.org/post/Docs/CDSBus2.rtf -
ಅವರ ಕ೦ಪನಿ ಸೈಟ್ ನಲ್ಲಿ ಬೇರೆ ತರಹ ಬರೆದಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 19, 2007 - 8:08pm — ASHOKKUMAR

ಉ: ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

ASHOKKUMAR's picture

ಬಿರುದಾವಳಿಗಳನ್ನು ನಂಬಬಾರದೇನೋ!
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 20, 2007 - 4:40am — venkatesh

ಉ: ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!

venkatesh's picture

ನಾನು ಸಾಮಾನ್ಯವಾಗ್\ಇ ಹೇಳುತ್ತಿದ್ದೇನೆ ಅಷ್ಟೆ. ಪರಸಿರಮಾಲೀನ್ಯ, ಮತ್ತು ನಮ್ಮ ಮೆಟ್ರೋಗಳನ್ನು ಕುರಿತು-ನಮ್ಮ ಮುಂಬೈಯಂತಹ ಮಹಾಕೊಳಲು ನಗರಗಳನ್ನುದ್ದೇಶಿಸಿ ಆಡಿದ ಮಾತದು ! ಖಂಡಿತಾ ಸುಕಿಂದಾ ಬಗ್ಗೆ ಅಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೂಕಂಪದ 3ಡಿ ಸಿನೇಮಾ
  • 2007:ಸಿಂಹಾವಲೋಕನ
  • ಗೂಗಲ್‍ಗೆ ಪೆಂಟಾಗನ್ ನಿಷೇಧ
  • ಅಗ್ಗದ ದರದಲ್ಲಿ ಸಿ ಎಫ್ ಲ್ಯಾಂಪ್
  • ಹಿಮಾಲಯದಲ್ಲೂ ಸೆಲ್ ಕಾಟ!
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • harsha.st
    ಉ: ತೋಡು ಮತ್ತು ಮೊಗೆ
    October 7, 2008 - 2:48pm
  • girish.rajanal
    ಉ: ಹೀಗೆ ಒಂದು ಮಾತುಕತೆ(ಹೆಂಗಳೆಯರ)
    October 7, 2008 - 2:45pm
  • createam
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:42pm
  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 2:22pm
  • createam
    ಉ: ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
    October 7, 2008 - 2:21pm
  • mahesha
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:16pm
  • savithasr
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:15pm
  • anivaasi
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:08pm
  • mahesha
    ಉ: ಕಡೇಹುಟ್ಟು
    October 7, 2008 - 1:51pm
  • mahesha
    ಉ: ಕಡೇಹುಟ್ಟು
    October 7, 2008 - 1:48pm
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 151 ಅತಿಥಿಗಳು ಆನ್ಲೈನ್ ಇರುವರು.


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator