ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಟ್ವೆಂಟಿ ಟ್ವೆಂಟಿ ವಿಶ್ವ ಕಪ್ ಗೆದ್ದ ನಂತರ ರವಿ ಶಾಸ್ತ್ರಿ - ಧೋಣಿ ಸಂದರ್ಶನದ ವಿವರ

October 3, 2007 - 11:20am — Ennares

( ಮೂಲ - ಇಂಗ್ಲೀಷ್‍ನಲ್ಲಿ ಶ್ರೀ ಎಸ್. ಆರ್.ಪಂಢರಿನಾಥ್ ರವರ ಲೇಖನದ ಭಾವಾನುವಾದ)
- ನವರತ್ನ ಸುಧೀರ್

ಪಂದ್ಯ ಮುಗಿದ ನಂತರ, ರವಿ ಶಾಸ್ತ್ರಿ ಪ್ರೆಸೆಂಟೇಷನ್ ಸಮಯದಲ್ಲಿ ಧೋಣಿಯನ್ನು ಸಂದರ್ಶನಕ್ಕಾಗಿ ಆಮಂತ್ರಿಸುತ್ತಾರೆ.

ರ: ಧೋಣಿ, ವಿಶ್ವ ಕಪ್ ಗೆದ್ದ ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು. ನೀವುಗಳು ನಿಜಕ್ಕೂ ಉಗುರುಕಚ್ಚುವಷ್ಟು
ರೋಚಕ ರೀತಿಯಲ್ಲಿ ಪಂದ್ಯ ಗೆದ್ದಿರಿ. ನಿಮ್ಮ ಸಂತೋಷವನ್ನು ನಮ್ಮೊಡನೆ ಹಂಚಿಕೊಳ್ಳಿ ಬನ್ನಿ!”
ಧೋ: ಧನ್ಯವಾದ ರವಿ, ಪಂದ್ಯದ ಕೊನೆ ನಿಜಕ್ಕೂ ರೋಮಾಂಚಕವಾಗಿತ್ತು. ನಮ್ಮ ಹುಡುಗರು ಕೊನೆಯವರೆಗೂ
ಧೈರ್ಯಗುಂದಲಿಲ್ಲ. ಅದೇ ಕಾರಣದಿಂದ ನಾವು ಕಪ್ ಗೆದ್ದದ್ದು.

ರ: ನಿಮ್ಮ ಅಭಿಪ್ರಾಯದಲ್ಲಿ ನಿಮ್ಮ ಈ ವಿಜಯಕ್ಕೆ ಮುಖ್ಯ ಕಾರಣ ಯಾರು?
ಧೋ: ನಾವೆಲ್ಲರೂ ಚೆನ್ನಾಗಿಯೇ ಆಡಿದ್ದೆವು. ಆದರೆ ನನ್ನ ಅಭಿಪ್ರಾಯದಲ್ಲಿ ಪಂದ್ಯ ಗೆಲ್ಲಲು ಮುಖ್ಯ ಕಾರಣರಾದವರು
ಅಜಿತ್ ಅಗರ್ಕರ್.

ರ: (ಕಕ್ಕಾಬಿಕ್ಕಿಯಾಗಿ) ಅಜಿತ್ ಅಗರ್ಕರ್!!! ಅವರು ಫೈನಲ್ನಲ್ಲಿ ಆಡಲೇ ಇಲ್ಲವಲ್ಲ!!!!
ಧೋ: ಅದಕ್ಕೇ ಹೇಳಿದ್ದು. ಅಷ್ಟು ಕಡಿಮೆ ಸ್ಕೋರಿನ ಮ್ಯಾಚ್ನಲ್ಲಿ ಅವರೇನಾದರೂ ಆಡಿದ್ದರೆ, ಅವರ ನಾಲ್ಕು ಓವರ್‍ಗಳಲ್ಲಿ
ಖಂಡಿತ ಭರ್ಜರಿ ರನ್ ಮಾಡಿ ಪಾಕಿಸ್ತಾನ ಗೆಲ್ಲೋದು ಖಚಿತವಾಗುತ್ತಿತ್ತು.
ರ: (ಉಗುಳು ನುಂಗಿ) ಸರಿ.. ಸರಿ..ಈ ವಿಜಯಕ್ಕಾಗಿ ನೀವು ಮತ್ತೆ ಯಾರಿಗೆ ಧನ್ಯವಾದ ಕೊಡಲಿಚ್ಚಿಸುತ್ತೀರಿ?
ಧೋ: ನಮ್ಮೆಲ್ಲರ ಧನ್ಯವಾದಗಳು ಮೊದಲು ನಮ್ಮ ಟೀಮ್ ಡಾಕ್ಟರ್‍ರವರಿಗೇ ಸಲ್ಲಬೇಕು. ನಮ್ಮ ಫೈನಲ್ ಮುನ್ನ ತಯಾರಿಗೆ
ಅವರು ಸಲ್ಲಿಸಿದ ಸೇವೆ ಅಮೋಘ!

ರ: (ತಬ್ಬಿಬ್ಬಾಗಿ) ನನಗಿದ್ಯಾಕೋ ಅರ್ಥವಾಗಿಲ್ಲ. ಕನ್‍ಫ್ಯೂಸ್ ಆಗ್ತಿದೆ. ನಿಮ್ಮ ಡಾಕ್ಟರ್ ಅದೇನು ಸಹಾಯ ಮಾಡಿದರು?
ನಿಮ್ಮ ಕೋಚ್ ಅಥವಾ ಫಿಷಿಯೋ ಸಹಾಯ ಅಂದರೆ ಒಪ್ಪಿಕೋಬಹುದು… ಆದರೇ….
ಧೋ: (ಅಡ್ಡ ಬಾಯಿ ಹಾಕುತ್ತ) ಇದರಲ್ಲಿ ಕನ್‍ಫ್ಯೂಸ್ ಆಗೋ ಮಾತೇನಿದೆ? ಅವರು ಸೆಹ್ವಾಗ್‍ನನ್ನು ಫಿಟ್‍ನೆಸ್ ಟೆಸ್ಟ್
ನಲ್ಲಿಫೇಲ್ ಮಾಡಿದ್ದೆ ನಮ್ಮ ಟೀಮ್‍ಗೆ ಕೊಟ್ಟ ಅಮೋಘ ಅನುದಾನ. ನಾವೆಲ್ಲರೂ ಮೈದಾನದಲ್ಲಿ ಮಾಡಿದ್ದಕ್ಕಿಂತಲೂ
ಹೆಚ್ಚಿನ ಶ್ರೇಯ ಅವರಿಗೇ ಹೋಗಬೇಕು. ಅವರು ನಮ್ಮ ಟೀಮ್‍ನ ಟ್ಯಾಕ್‍ಟಿಕ್ಸ್‍ನ ಮುಖ್ಯ ಭಾಗ.
ರ: (ತಲೆ ಕೊಡವುತ್ತ) ಹೂಂ! ಹೋಗಲಿ ಬಿಡಿ! ಈ ನಿಮ್ಮ ವಿಜಯದ ಸಂಕೇತವಾದ ಕಪ್ ಯಾರಿಗೆ ಡೆಡಿಕೇಟ್ ಮಾಡ್ತೀರಿ?
ಧೋ: ನಾನು ಮತ್ತು ನಮ್ಮ ತಂಡದ ಪ್ರತಿಯೊಬ್ಬ ಸದಸ್ಯನೂ ಕೂಡ ಒಮ್ಮತದಿಂದ ಈ ಕಪ್ ಅನ್ನು ಸಚಿನ್, ಗಂಗೂಲಿ ಮತ್ತು
ಡ್ರಾವಿಡ್‍ರವರಿಗೆ……..

ರ: (ಮಧ್ಯೆ ಬಾಯಿ ಹಾಕುತ್ತ) ನಿಜವಾಗಿಯೂ ನೀವುಗಳು ಬಹಳ ಪ್ರಶಂಸಾರ್ಹರು. ನಿಮಗೆಲ್ಲ ನಿಮ್ಮ ಹಿರಿಯರ ಬಗ್ಗೆ ಇಷ್ಟು
ಗೌರವ ಮತ್ತು ಅಭಿಮಾನವಿರುವುದು ಕಂಡು……..

ಧೋ: ಸ್ವಲ್ಪ ತಡೆಯಿರಿ ರವಿ! ನಾನು ಹೇಳುವುದನ್ನು ಪೂರ್ತಿ ಕೇಳಿಸಿಕೊಳ್ಳಿ! ಅವರೇನಾದರೂ ಈ ಪಂದ್ಯಾವಳಿಯಲ್ಲಿ
ಆಡಿದ್ದಿದ್ದರೆ ನಾವು ಮೊದಲನೇ ಸುತ್ತಿನಲ್ಲೇ ಮನೆಯ ಮುಖ ನೋಡುತ್ತಿದ್ದೆವು. ಅವರುಗಳು ತಾವಾಗಿಯೆ ಪಂದ್ಯಾವಳಿಯಲ್ಲಿ
ಆಡದಿರಲು ನಿರ್ಧಾರ ತೆಗೆದುಕೊಂಡದ್ದಕ್ಕೆ ನಾವೆಲ್ಲರೂ ಭಗವಂತನಿಗೆ ವಂದಿಸಬೇಕು. ಅವರ ರಾಜಕೀಯವಿಲ್ಲದ ಕಾರಣ
ನಮಗೆಲ್ಲರಿಗೂ ಕ್ರಿಕೆಟ್ ಉತ್ತಮವಾಗಿ ಆಡಿ ಕಪ್ ಗೆಲ್ಲಲು ಸಾಧ್ಯವಾಯಿತು.
ರ: ಹೋಗಲಿ ಬಿಡಿ. ಅಂತೂ ಪಂದ್ಯ ಕೊನೆಯ ಓವರ್‍ವರೆಗೂ ಬಹಳ ರೋಚಕವಾಗಿತ್ತು. ಕೊನೆಯಲ್ಲಿ ಪಾಕಿಸ್ತಾನದ ಮಿಸ್‍ಬಾಹ್
ಮಾಡಿದ ಸಣ್ಣದೊಂದು ತಪ್ಪಿನಿಂದಾಗಿ ಕಪ್ ನಮ್ಮ ವಶವಾಯಿತು.
ಧೋ: ಸಣ್ಣದೊಂದು ತಪ್ಪು? ಇದೇನು ಹೀಗೆ ಹೇಳುತ್ತೀರಿ ರವಿ! ಆ ಶಾಟ್ ಹೊಡೆದ ಕೂದಲೆ ಆ ಮಿಸ್‍ಬಾಹ್ ನನಗೆ ಹೇಳಿದ
ಮಾತು -ನೋಡೋ ಧೋಣಿ. ನಾನು ಯಾರೂ ಇಲ್ಲದ ಕಡೆ ಯಲ್ಲಿ ಶಾಟ್ ಹೊಡೆದಿದ್ದೇನೆ ! ಅಂತ. ಪಾಪ ಆ ಮುಂಡೇದರ
ಮಹಾ ತಪ್ಪು ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ಮಲೆಯಾಳಿಗಳಿರುತ್ತಾರೆ ಅನ್ನುವುದನ್ನು ಮರೆತದ್ದು!

ಈ ಎಕ್ಸ್ಪ್ಲನೇಷನ್ ಕೇಳುತ್ತಿದ್ದಂತೆಯೇ ಸಂದರ್ಶಕ ರವಿ ಶಾಸ್ತ್ರಿ ಜ್ನಾನ ತಪ್ಪಿ ಕೆಳಗುರುಳಿದ. ಧೋಣಿ ಕಪ್ ಎತ್ತಿಕೊಂಡು ಮುನ್ನಡೆದ ಜಂಬದ ಕೋಳಿಯ ರೀತಿಯಲಿ.

*************

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 485 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • speak to the people
  • ತಂದೆ ತಾಯಿ ಮತ್ತು ಮಕ್ಕಳು
  • ನಿಮ್ಮ ಊರಿನಲ್ಲಿ ನಡೆಯುವ ವಿಶೇಷ ಘಟನೆಗಳು, ವಿಶೇಷ ವ್ಯಕ್ತಿಗಳು, ಇದ್ದರೆ ನಮಗೆ ತಿಳಿಸಿ 0-98454 89452
  • ನಿಜವಾಗಿಯೂ ಆದೆನೆ ನಾನಿಂದು ಮುಕ್ತ ಮುಕ್ತ ಮುಕ್ತಾ.ಆಆಆ....
  • ಪ್ರೀತಿ ಇರಬೇಕು
Syndicate content

ಲೇಖಕರು

Ennares's picture

ಪೂರ್ಣ ಹೆಸರು
ನವರತ್ನ ಸುಧೀರ್

ಪರಿಚಯ

ನಿವೃತ್ತ ಲೋಹಶಾಸ್ತ್ರಜ್ನ. ಹಿಂದೂಸ್ತಾನಿ ಸಂಗೀತ ಕೇಳುವ, ಪುಸ್ತಕ ಓದುವ, ಬ್ಲಾಗಿಸುವ ಹವ್ಯಾಸ. ನಾಟಕದ ಗೀಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 6:08pm
  • Sunil Jayaprakash
    ಉ: ಬಾಲ್ಯದ ನೆನಪುಗಳು
    September 8, 2008 - 6:07pm
  • Sunil Jayaprakash
    ಉ: ದಿನಕ್ಕೊಂದು ಪದ
    September 8, 2008 - 6:05pm
  • Shivakumar.Revadi
    ಉ: ದಿನಕ್ಕೊಂದು ಪದ
    September 8, 2008 - 6:01pm
  • Shivakumar.Revadi
    ಉ: ಬಾಳ್, ಬಾೞ್
    September 8, 2008 - 5:57pm
  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 147 ಅತಿಥಿಗಳು ಆನ್ಲೈನ್ ಇರುವರು.


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator