ನಾವು ಶಾಲೆಗೆ ಹೋಗುವ
ಬಾರೊ, ತಮ್ಮ
ನಾನು-ನೀನು ಶಾಲೆಗೋಗುವಾ
ಅಆಇಈ ಕಲಿತು
ನಾವು ಜಾಣರಾಗುವಾ
ನಾನು ನೀನು
ಎಲ್ಲರು ಸೇರಿ ಆಟವಾಡುವಾ
ಆಟದಲ್ಲೇ ಪಾಠವನ್ನು
ನಾವು ಕಲಿಯುವಾ
ಶಾಲೆಯಿಂದ ಬಂದು
ನಾವು ಹೊಲಕೆ ಹೋಗುವಾ
ಅಪ್ಪ-ಅವ್ವರ ಕೆಲಸದಲ್ಲಿ
ನಾವು ನೆರವು ಆಗುವಾ
ಹೊಲದ ದಾರಿಯಲ್ಲಿ
ಇಹವು ಕವಳಿಗಿಡಗಳು
ಗಿಡವ ಕೊಡವಿ
ಹಣ್ಣುಗಳನ್ನು ಆಯ್ದು ತಿನ್ನುವಾ
ಕಾರೆ ಹಣ್ಣು, ಬಾರೆ ಹಣ್ಣು
ತಿಂದು ಬಿಕ್ಕುವಾ
ನೀರಲಣ್ಣು ತಿಂದು ನಾವು
ನೀರು ಕುಡಿಯುವಾ
ಕಕ್ಕಿ ಹಣ್ಣು ಸಿಕ್ಕರೆ
ಗುಳುಮ್ಮನೆ ನುಂಗುವಾ
ಬುಕ್ಕಿ ಹಣ್ಣು ಸಿಕ್ಕಿದರೆ
ಗಬ-ಗಬ ತಿನ್ನುವಾ
ಹೊತ್ತು ಮುಳುಗೊ ಹೊತ್ತಿಗೇ
ಮನೆಗೆ ಹೋಗುವಾ
ದೀಪ ಮುಡಿಸಿ, ದೇವಿಗೆ ನಮಿಸಿ
ಪಾಠ ಓದುವಾ
ಕಲಿಯ ಬೇಕು ಕಲಿಸಬೇಕು
ನಾವು ವಿದ್ಯೆಯ
ವಿದ್ಯೆ-ಬುದ್ಧಿ ಪಡೆದು
ವಿನಯವಂತರಾಗುವಾ
ಬಾರೊ, ತಮ್ಮ
ನಾನು-ನೀನು ಶಾಲೆಗೋಗುವಾ
ಅಆಇಈ ಕಲಿತು
ನಾವು ಜಾಣರಾಗುವಾ
ಜಯಪ್ರಕಾಶ ನೇ ಶಿವಕವಿ.

- Login or register to post comments
- 234 hits
- Email this page





RSS:
ಪ್ರತಿಕ್ರಿಯೆಗಳು
ಉ: ನಾವು ಶಾಲೆಗೆ ಹೋಗುವ
ಆಯ್ತು ಆಯ್ತು, ಒಪ್ಪೋಣ, ಜಯಪ್ರಕಾಶನೇ ಶಿವಕವಿ ಅಂತ

ತುಂಬಾ ಸರಳ ಸುಂದರವಾಗಿತ್ತು ನಿಮ್ಮ ಬರಹ. ಸರಿ ಎಂದಿನಿಂದ ಹೋಗೋಣವಾಗಲಿ, ನಾನು ಬರುವೆ ಶಾಲೆಗೆ ನಿನ್ನೊಡನೆ ಅಣ್ಣಾ!!!!
ಅದು ಸರಿ ಅಣ್ಣಾ, ಆದರೆ
ಹಣ್ಣು ತಿಂದು ಬಿಕ್ಕೋದು ಏಕೆ ?
"ದೀಪ ಮುಡಿಸುವುದು" ಎಂಬುದು ಅರ್ಥವಾಗಲಿಲ್ಲ.
ಉ: ನಾವು ಶಾಲೆಗೆ ಹೋಗುವ
ಜಯಪ್ರಕಾಶ ನೇ.ಶಿ.
ಕಾರೆ ಹಣ್ಣು (ಕೆಂಗಾಗಿದ್ದಾಗ) ಇನ್ನೂ ಪೂರ್ತಿ ಮಾಗದೆ ಇದ್ದಾಗ ತಿಂದರೆ ಗಂಟಲು ಹಿಡಿದುಕೊಂಡ ಹಾಗೆ ಹಾಗುತ್ತೆ, ಮತ್ತು ಅವುಗಳನ್ನು ಹೆಚ್ಚು ದರೆ ಬಿಕ್ಕಿನ ಅನುಭವ ಉಂಟಾಗುತ್ತೆ.
ದೀಪ ಮುಡಿಸೋದು ಅಂದ್ರೆ, ದೇವರ ಮುಂದೆ ದೀಪ ಹಚ್ಚೋದು ಅಂತ ಅರ್ಥ. (ಸಂಜೆ ಮುಂದೆ ನಮ್ಮಕಡೆ ಕೈಕಾಲು ಮುಖ ತೊಳೆದುಕೊಂಡು, ದೇವರಿಗೆ ನಮಿಸಿ, ಸಂಜೆಯ ತಮ್ಮ ಕೆಲಸ ಕಾರ್ಯಗಳಲ್ಲಿ ಜನ ನಿರತರಾಗುತ್ತಾರೆ).
ಧನ್ಯವಾದಗಳು,
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ