ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

'ನಮಸ್ಕಾರ'- ಡಾ. ಎಚ್. ಎಸ್. ರಾಘವೆಂದ್ರರಾವ್, ರವರ ಸಾಹಿತ್ಯ ವಿಮರ್ಶೆ.

October 19, 2007 - 3:41pm — venkatesh

ಈ ಪುಸ್ತಕದಲ್ಲಿನ ಶ್ರೀ. ಯಶವಂತ ಚಿತ್ತಾಲರ ಲೇಖನದಲ್ಲಿನ ಒಂದು ಕೃತಿಯ ಬಗ್ಗೆ, "ನಮಸ್ಕಾರ" ದಲ್ಲಿ ರಾಯರು ಹೇಗೆಬರೆದಿದ್ದಾರೆಯೋ ಹಾಗೆಯೇ ಟೈಪಿಸಿ ಓದುಗರಿಗಾಗಿ ಇಲ್ಲಿ ಕೊಟ್ಟಿದ್ದೇನೆ. ಅದರ ರಸ ಸ್ವಾದಿಸಬೇಕಾಗಿ ಕಳಕಳಿಯ ಪ್ರಾರ್ಥನೆ.

ಎಚ್. ಎಸ್. ಆರ್ ರವರ , ಸಾಹಿತ್ಯ-ಪ್ರೀತಿ ಮತ್ತು ಜೀವನ-ಪ್ರೀತಿ, ಒಂದೇ ಮೂಲದಿಂದ ಬಂದವುಗಳು. ವಿದ್ವಾಂಸರ ಸಾಧನೆಯ ಸತ್ಯಗಳನ್ನು ಅರಸುವ ಸಾಹಿತ್ಯದ ಹಲವು ಪ್ರಾಕಾರಗಳ ವಶಿಷ್ಟ್ಯತೆ ಹಾಗೂ ಕಾಣ್ಗೆಗಳನ್ನು ಗುರುತಿಸುವ ಹಲವು ಲೇಖಕರ ಕೃತಿಗಳನ್ನು ತಮ್ಮ "ನಮಸ್ಕಾರ," ದಲ್ಲಿ ದಾಖಲಿಸಿದ್ದಾರೆ. ಅದರಲ್ಲಿ ಶ್ರೀ ಯಶವಂತ ಚಿತ್ತಾಲರ ಸಮಗ್ರ ಕೃತಿಗಳ ಒಳನೋಟದ ಒಂದು ವಿಮರ್ಶಾ-ಲೇಖನವಿದೆ. ಅದರ ಒಂದು ತುಣುಕನ್ನು ಮಾತ್ರ ಇಲ್ಲಿ ಕೊಟ್ಟಿದೆ.

ನನ್ನ ಆತ್ಮೀಯ ಸುಪ್ರಸಿದ್ಧ ಕಾದಂಬರಿಕಾರ ಗೆಳೆಯರಲ್ಲಿ, ರಾಘವೆಂದ್ರರಾಯರು ಒಬ್ಬರು. ನಾನೂ ಅವರು ಒಂದೇ ವಯಸ್ಸಿನವರೆಂದು ಹೇಳುವುದನ್ನು ಬಿಟ್ಟರೆ, ನನಗೂ ಅವರಿಗೂ ಇರುವ ಬೌದ್ಧಿಕ ಅಂತರ- ಇರುವೆಯಿಂದ ಆನೆಗಿರುವಷ್ಟು. ಇಷ್ಟು ವಿಶಯ ; ನಮ್ಮಿಬ್ಬರ ಬಗ್ಗೆ, ಸಾಕಲ್ಲವೇ.

ಯಶವಂತ ಚಿತ್ತಾಲ : ಬದುಕು ಬರಹ. ಪುಟ. ೨೨೪.

"ಸಾಹಿತ್ಯದ ಸಪ್ತಧಾತುಗಳು" :

ಶ್ರೀ. ಯಶವಂತ ಚಿತ್ತಾಲರು, ತಮ್ಮ ೨೦ ವರ್ಷಗಳ ಅವಧಿಯಲ್ಲಿ ಬರೆದಿರುವ ಪ್ರಬಂಧ, ಲೇಖನ, ಸಾರ, ವಿಮರ್ಶೆಗಳಿಂದ ಆಯ್ದಿರುವ, ೯ ಬರಹಗಳ ಸಂಕಲನ. ಇಲ್ಲಿ ಕೊಟ್ಟಿರುವ ಪ್ರಮುಖ ಲೇಖನಗಳು ಮೂರು. "ಸಾಹಿತ್ಯದ ಕಾರ್ಯ", "ಹೃದಯವುಳ್ಳಹಾದಿಯಲ್ಲಿ", [ನಾನು ಲೇಖಕನಾಗಿ ಬೆಳೆದುಬಂದರೀತಿ] ಮತ್ತು "ಸೃಜನ ಪ್ರಕ್ರಿಯೆ". ಮೂರು ಸಮಕಾಲೀನ ಕಾದಂಬರಿಗಳಲ್ಲಿ ಇವು ಪರಸ್ಪರ ಪೂರಕವಾದ ಮೂರು ನೆಲೆಗಳನ್ನು ಒಳಗೊಳ್ಳುತ್ತವೆ.

ಮೊದಲನೆಯದು ಸಾಹಿತ್ಯದ ಅನನ್ಯತೆ ಮತ್ತು ಈ ಮೂಲಕವೇ ಅದು ಬೀರಬಹುದಾದ ಪರಿಣಾಮಗಳನ್ನೂ ಬಹಳ ಆರ್ತವಾಗಿ ಪ್ರತಿಭೆ ಪಾಂಡಿತ್ಯಗಳ ಸಮತೋಲನದಲ್ಲಿ ಚರ್ಚಿಸುವ ಬರಹ. ಇದು ದೇಶಕಾಲ ಬದ್ಧವೆನಿಸದ ತಾತ್ವಿಕ ಚರ್ಚೆ.

ಎರಡನೆಯದು, ಸಂವೇದನಶೀಲವಾದ ಲೇಖಕನೊಬ್ಬ ತನ್ನ ಬರವಣಿಗೆಯ ಇತಿಹಾಸವನ್ನು ತನ್ನ ಭಾಷೆಯಲ್ಲಿ ಅದೇಕಾಲದ ಸಾಹಿತ್ಯವು ಕ್ರಮಿಸಿದ ಹಾದಿಯ ಸಂಗಡ ಇಟ್ಟುನೊಡುವ ಅಂತರಂಗ ಪರಿವೀಕ್ಷಣೆ. ಇಲ್ಲಿ ದಾಖಲೆ ಮಾಡುತ್ತಿರುವ ಮನಸ್ಸು ದಾಖಲೆಯಾಗುತ್ತಿರುವ ಜಗತ್ತನ್ನು ಮಾರ್ಪಾಡುಮಾಡುತ್ತಿರುವ ಬಗೆ ಹೇಗೆ ಎನ್ನುವ ಪ್ರಶ್ನೆಯು ಕೇವಲ ತುಂಟ ಕುತೂಹಲವಲ್ಲ. ಆದರೆ, ಈ ಕೃತಿ ಕನ್ನಡದಮಟ್ಟಿಗೆ ನಿಜವಾಗಿಯೂ ಅಪೂರ್ವವಾದುದು.

ಮೂರನೆಯ ಲೇಖನದಲ್ಲಿ "ಮುಸ್ಸಂಜೆ"ಯ ಕಥಾಪ್ರಸಂಗವು [ಲಂಕೇಶ್], "ಅವಸ್ಥೆ," [ಅನಂತಮೂರ್ತಿ], ಮತ್ತು "ಸೃಷ್ಟಿ" [ಶಾಂತಿನಾಥ ದೇಸಾಯಿ] ಕಾದಂಬರಿಗಳನ್ನು ತನ್ನ ಸಾಹಿತ್ಯದ ತಿಳುವಳಿಕೆಯ ಬೆಳಕಿನಲ್ಲಿ ನೋಡುವ ವಿಮರ್ಶಕ ಪ್ರಯತ್ನ. ಕಾರಣಗಳನು ನೀಡುತ್ತಾ ೩ ಕೃತಿಗಳನ್ನು ಕುರಿತ ಅಸಮಾಧಾನಗಳನ್ನು ಮಂಡಿಸಲಾಗಿದೆ. ಚಿತ್ತಾಲರು ವಿಜ್ಞಾನದ ಹಾಗೂ ಸಮಾಜಶಾಸ್ತ್ರಗಳ ಗಂಭೀರ ವಿದ್ಯಾರ್ಥಿಯಾಗಿರುವುದರಿಂದ ಅವರ ಬರವಣಿಗೆಗೆ ವಿಶಿಷ್ಟ ಆಯಾಮಗಳು ಒದಗಿ ಬರುತ್ತವೆ.

ಚಿತ್ತಾಲರ ಈ ಬಗೆಯ ವಿಚಾರಗಳು ಹಾಗೂ, "ಶಿಕಾರಿ", "ಕಥೆಯಾದಳು ಹುಡುಗಿ," ಮುಂತಾದ ಕೃತಿಗಳು ಹೊಸಗನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸದ ನಿರ್ಣಾಯಕವಾದ ಹಂತದಲ್ಲಿ ಮೂಡಿಬಂದವುಗಳು. ಅಂದು ದಲಿತ ಬಂಡಾಯ ಚಳುವಳಿಗಳು ನವ್ಯದ ಜೊತೆಯಲ್ಲಿ ವಾಗ್ವಾದದಲ್ಲಿ ತೊಡಗಿಕೊಂಡು 'ಸಾಹಿತ್ಯ,'ದ ಸಾಮಾಜಿಕ ನೆಲೆಗಳನ್ನು ಕುರಿತ ವಿಭಿನ್ನ ವಿಚಾರಗಳನ್ನು ಮಂಡಿಸುತ್ತಿದ್ದವು. ಆಗ, ಸಾಹಿತ್ಯದಿಂದ ಏನು ಸಾದ್ಯ ಎನೂ ಸಾಧ್ಯವಿಲ್ಲ ? ಅದರ ಶಕ್ತಿಯಾವುದು ? ಸಾಹಿತ್ಯಕ ಸೃಜನಶೀಲತೆಯ ಸ್ವರೂಪವೇನು ? ಮುಂತಾದ ವಿಷಯಗಳನ್ನು ತೀವ್ರವಾದ ರೂಪಕನಿಷ್ಠ, ಭಾವಗೀತಾತ್ಮಕ ಶೈಲಿಯಲ್ಲಿ ಪರಿಶೀಲಿಸಿದ ಚಿತ್ತಾಲರ ಬರಹಗಳು, ತುಂಬಾ ಪರಿಣಾಮಕಾರಿಯಾಗಿದ್ದವು.

ಅವರು ಸಾಹಿತ್ಯದ ಅನನ್ಯತೆಯ ಬಗ್ಗೆ ಹೇಳುವಾಗಲೂ ಸಾಹಿತ್ಯದ ಸಾಮಜಿಕ ನೆಲೆಯನ್ನು ನಿರಾಕರಿಸಲಿಲ್ಲ. ಅಂಥ ಕೆಲವು ವಿಚಾರಗಳು ಇಂದಿಗೂ ಮೌಲಿಕವೇ. ಸಾಹಿತ್ಯವನ್ನು ಕುರಿತ ಹಾದಿಬದಿಯ ಮಾತುಕತೆಗಳೋ ವ್ಯಕ್ತಿಕೇಂದ್ರಿತ ಕಸ ಎಸೆತಗಳೋ ತಾವೇ ತಾವಾಗಿರುವ ಈ ದಿನಗಳಲ್ಲಿ ಎಪ್ಪತ್ತು ದಾಟಿರುವ ಚಿತ್ತಾಲರ ಚಿಂತನ ಪರತೆ ಮತ್ತು ಭಾವನಾತ್ಮಕ ಕಾಳಜಿಗಳು ಬೆರಗು ಮತ್ತು ಸಮಾಧಾನಗಳನ್ನು ಉಂಟುಮಾಡುತ್ತವೆ. ಅವರ ವಿಚಾರಗಳನ್ನು ಚರ್ಚೆಗೆ ಒಳಗುಮಾಡುವಾಗಲೂ ಈ ಗೌರವ ಮುಕ್ಕಾಗುವುದಿಲ್ಲ.

(ಈ ಅನುಬಂಧವು ಮೂಲಲೇಖನಕ್ಕೆ ಪೂರಕವಾಗಿ ರೂಪಿತವಾಗಿದೆ. ಈಚೆಗೆ ಪ್ರಕಟವಾಗಿರುವ ಸಾಲುದೀಪಗಳು, ಕೃತಿಯ ಎರಡನೆಯ ಆವೃತ್ತಿಯಲ್ಲಿ ಪ್ರಕಟವಾದ ಈ ಬರಹವನ್ನು ಪಸ್ತುತ ಕೃತಿಗೆಂದೇ ಪರಿಷ್ಕರಿಸಲಾಗಿದೆ.)

~.~
  • Login or register to post comments
  • 348 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ
  • ಸಾಹಿತ್ಯದ ಗುರಿ ಮತ್ತು ಉದ್ದೇಶ
  • ಸಾಹಿತ್ಯದ ಗುರಿ ಮತ್ತು ಉದ್ದೇಶ
  • 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!
  • ಕನ್ನಡ ಸಾಹಿತ್ಯದ ಮಜಲುಗಳು-ಭಾಗ ೧
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • Atlantadalli gaade gaurajji
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 12:57pm
  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:30pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 7, 2008 - 12:18pm
  • savithasr
    ಉ: ಕಳೆದ ನೆನೆಪುಗಳು
    October 7, 2008 - 11:44am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 136 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator