'ಮೋರೆ'ಗೆ ಕಪ್ಪು ಬಳಿದರು
ನೆನ್ನೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಪ್ರತಿಭಟನೆ ಬಾಳಾ ಜೋರಾಗಿತ್ತು.
ಕನ್ನಡ ನೆಲದಲ್ಲಿದ್ದು ಕನ್ನಡಿಗರಾಗಿ, ಕರ್ನಾಟಕವನ್ನು ದ್ವೇಶಿಸುವ ಈ ಮೋರೆಯಂಥವರನ್ನು ಯಾವತ್ತೂ ಕ್ಷಮಿಸಬಾರದು.
ಇದು ಇನ್ನುಳಿದವರಿಗೆ ಪಾಟವಾಗಬೇಕು.
ಇನ್ನು ಮುಂದೆ ಗಡಿನಾಡ ಕನ್ನಡಿಗರು ಇಂತಹ ಮನೆ ಮುರಕರನ್ನು ಮಟ್ಟ ಹಾಕುವಲ್ಲಿ ರಕ್ಷಣಾ ವೇದಿಕೆಯವರಲ್ಲದೆ ಕನ್ನಡ ಜನರೂ ಕೈ ಮಿಲಾಯಿಸಬೇಕು.
ಜೈ ಕರ್ನಾಟಕ ಮಾತೆ

- Login or register to post comments
- 1459 hits
- Email this page





RSS:
ಪ್ರತಿಕ್ರಿಯೆಗಳು
ಮುಖಕ್ಕೆ ಕಪ್ಪು ಬಣ್ಣ
ಮುಖಕ್ಕೆ ಕಪ್ಪು ಬಣ್ಣ ಹಚ್ಚಿದ್ದು ಅತಿಯಾಯ್ತು ಎನ್ನೋದು ನನ್ನ ಅಭಿಪ್ರಾಯ. ದಿನಪತ್ರಿಕೆಗಳಲ್ಲಿ ಈ ಬಗ್ಗೆ ಚಿತ್ರಗಳನ್ನು ನೋಡಿದೆಯಾದರೂ ಮಾಮ್ಲಾ ಏನು ಎಂದು ತಿಳೀಲಿಲ್ಲ.
ಕಪ್ಪು ಬಣ್ಣ ಬಳಿಸಿಕೊಂಡ ಮೋರೆ ಮಾಡಿದ್ದೇನು?
--
http://hpnadig.net/blog
http://kn.wikipedia.org
"ಹೊಸ ಚಿಗುರು, ಹಳೆ ಬೇರು"
ಹಾಗಾದ್ರೆ...
ಹಾಗಾದ್ರೆ ಬೇರೆ ಯಾವ ಬಣ್ಣ ಬಳೀಬೇಕಿತ್ತು ಹೇಳಿ...!!!
ಯಾವ ಬಣ್ಣವೂ ಬಳೆಯಬಾರದಿತ್ತು
ಯಾವ ಬಣ್ಣವೂ ಬಳೆಯಬಾರದಿತ್ತು. ರೋಹಿತ್ ಮತ್ತು ತ ವಿ ಶ್ರೀ ಮೇಲೆ ತಿಳಿಸಿದಂತೆ ಇದು 'ಶಿವಸೇನೆ' ರೀತಿಯ activism. ಶಿವಸೇನೆಗೇನಾಯಿತು ಎಂಬುದು ನಮಗೆಲ್ಲ ತಿಳಿದಿದೆಯಲ್ಲವೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಕನ್ನಡಿಗರ ದೌರ್ಬಲ್ಯ
ಬೆಳಗಾವಿಯ ಮಹಾನಗರ ಪಾಲಿಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಬೇಕು ಎಂಬ ನಿರ್ಣಯ ಅಂಗೀಕರಿಸುವಾಗ ಅದನ್ನು ವಿರೋಧಿಸಲು ಅಲ್ಲಿ ಪಾಲಿಕೆಯ ಕನ್ನಡಿಗ ಸದಸ್ಯರೇ ಇರಲಿಲ್ಲವಂತೆ!
ಪ್ರಜಾಸತ್ತಾತ್ಮಕವಾದ ಮಾರ್ಗದಲ್ಲಿಯೇ ಇದನ್ನು ತಡೆಯಬಹುದಾದ ಅವಕಾಶವನ್ನು ಹಾಳು ಮಾಡಿಕೊಂಡದ್ದು ಕನ್ನಡಿಗರೇ. ಇಷ್ಟಕ್ಕೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂ.ಇ.ಎಸ್. ಅಧಿಕಾರಕ್ಕೆ ಏರುವುದು ಹೇಗೆ? ಇವರು ಗಳಿಸುವ ಓಟುಗಳ ಪ್ರಮಾಣವೆಷ್ಟು?
ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರಷ್ಟೇ ಸಮಸ್ಯೆ ಪರಿಹರಿಸಬಹುದು.
ಜವಾಬ್ದಾರಿ ಮರೆತರು
ಬೆಳಗಾವಿಯ ಮಹಾನಗರ ಪಾಲಿಕೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ನಿರ್ಣಯ ಅಂಗೀಕರಿಸುವಾಗ ಅದನ್ನು ವಿರೋಧಿಸಲು ಅಲ್ಲಿ ಪಾಲಿಕೆಯ ಕನ್ನಡಿಗ ಸದಸ್ಯರೇ ಇರಲಿಲ್ಲವಂತೆ!
ಒಳ್ಳೆಯ ವಿಚಾರ ತಿಳಿಸಿದ್ದೀರಿ, ನೋಡಿ. ತಮ್ಮ ಜವಾಬ್ದಾರಿ ತೋರಿಸುವ ಸಮಯ ಬಂದಾಗ ಅದನ್ನ ಮರೆತು ಈಗ activism ಮಾಡಿದ್ರೆ ಏನು ಬಂತು?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅಕ್ಟಿವಿಸಂ ಕೂಡ ಬೇಕಲ್ಲವೇ ?
ಈ ಮೇಲಿನ ಅಭಿಪ್ರಾಯಗಳನ್ನೆಲ್ಲಾ ... 'ಟೀಕಾಚಾರ್ಯರ ಸಹಜ ತೆವಲುಗಳು..' ಅಂತಲೋ ಅಥವಾ ಬೇರಾವುದಾದರು ಒರಟು ಮಾತಿನಿಂದ ... ತಳ್ಳೀಹಾಕುವುದು ಹೇಗೆ ತಪ್ಪಾಗಬಹುದೋ... ಹಾಗೆಯೇ, ಕ್ರಿಯಾಶೀಲರಾಗಿ, 'ದಂಡಂ ದಶಗುಣಂ' ಮಾರ್ಗ ಹಿಡಿದಿರುವವರನ್ನು ಹೀಗಳೆಯುವುದು ಸರಿಯಲ್ಲವೇನೋ ??
activism ಯಾಕೆ ಕೂಡದು
ಏನೇ ವಿಚಾರ ಕೈಗೆತ್ತಿಕೊಂಡ್ರೂ ಅದನ್ನ ಕಾರ್ಯಗತಗೊಳ್ಸೋದಕ್ಕೆ ಹಲವಾರು ವಿಧಾನಗಳಿರುತ್ವೆ. ಕಣ್ಮುಚ್ಕೊಂಡು, ಭಾವೋದ್ವೇಗಕೊಳ್ಗಾಗಿ activism ಸಪೋರ್ಟ್ ಮಾಡೋದಲ್ಲಾರೀ... ಸ್ವಲ್ಪ ವಿವೇಚನೆ ಬಳಸಿ ಆಲೋಚಿಸಿ ನೋಡ್ವೇಕು.
ಈಗ ಇವ್ರೆಲ್ಲಾ ಮಾಡಿದ್ದು ಕೊನೆಗೆ ಏನಾಯ್ತು? ಮ.ಏ.ಸ. ಗೆ ಭಿಟ್ಟಿ ಪಬ್ಲಿಸಿಟಿ! 'ಮಹಾರಾಷ್ಟ್ರ ಏಕೀಕರಣ' ಎಂಬುದೊಂದು ಇದೆ ಅಂತ ಎಷ್ಟು ಜನಕ್ಕೆ ಇದುವರೆಗೂ ಗೊತ್ತಿತ್ತು?
ನೀವು ಹೇಳೋ ಈ 'ದಂಡಂ ದಶಗುಣಂ' ಪಾಲಿಸಿಗೆ ಕೈಹಾಕಿ ಕೆಟ್ಟ ಇಮೇಜ್ ಪಡ್ಕೊಂಡ್ರು ನಮ್ ಕನ್ನಡ ಜನ. ಈಗ ಸಿಂಪೆಥಿ ಅವರ ಕಡೆಗೇನೆ! ಒಂದಷ್ಟು ಸಿವಿಲೈಸ್ಡ್ ಆಗಿ ನಡ್ಕೊಂಡು ವಿವೇಚನೆಯಿಂದ ಕಾರ್ಯವೆಸಗಬಹುದಿತ್ತೇನೊ... ಸಿಟ್ಟಿನ ಕೈಗೆ ಬುದ್ಧಿ ಕೊಟ್ರೆ ಏನೂ ಸಾಧಿಸಲಾಗುವುದಿಲ್ಲ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ, ಅಷ್ಟೆ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಮಸಿಯಲ್ಲದೆ ಫೇರ್ ಆಂಡ್ ಲವ್ಲೀ ಹಚ್ಚಬೇಕಿತ್ತೇ?
ಬೆಳಗಾವಿಯ ಮೇಯರ್ ಮುಖಕ್ಕೆ ಮಸಿಯಲ್ಲದೆ ಫೇರ್ ಆಂಡ್ ಲವ್ಲೀ ಹಚ್ಚಬೇಕಿತ್ತೇ? ಹೀಗೆಂದು ಕೇಳಿದ್ದು ಪೂರ್ಣಚಂದ್ರ ತೇಜಸ್ವಿಯವರು. ಈ ದಿನದ (೧೮-೧೧-೨೦೦೫) ಕನ್ನಡ ಪ್ರಭ ಓದಿ. ಈ ವರದಿಯನ್ನು ಇಂದೇ ಓದಬೇಕು. ನಾಳೆಗೆ ಅವರ ಲಿಂಕ್ ಕೆಲಸ ಮಾಡಲಾರದು.
ಸಿಗೋಣ,
ಪವನಜ
-----------
Vishva Kannada
Think globally, Act locally
ಕನ್ನಡಪ್ರಭ ಅಂತರ್ಜಾಲ ಕುಣಿಕೆಗಳು
ಕನ್ನಡಪ್ರಭ ಅಂತರ್ಜಾಲ ಆವೃತ್ತಿಯ ಕುಣಿಕೆಗಳು ಒಂದೇ ದಿನ ಊರ್ಜಿತವಾಗಿರುವುದಂತ ಏನೂ ಇಲ್ಲ.
ಇದೇ ಪುಟದ ಕುಣಿಕೆಯನ್ನು ಈ ರೀತಿ ಉಪಯೋಗಿಸಿದರೆ ಇವತ್ತು ಮಾತ್ರವಲ್ಲ, ನಾಳೆಯೂ, ನಾಡಿದ್ದೂ, ಮುಂದಿನ ದಿನಗಳಲ್ಲೂ ಆ ಪುಟ ನಿಮಗೆ ಲಭ್ಯವಿರುತ್ತದೆ!
ನಿಮ್ಮ ಮಾಹಿತಿಗಾಗಿ ಬರೆದೆ.
- ಶ್ರೀವತ್ಸ ಜೋಶಿ
ಕನ್ನಡ ಪ್ರಭ
ತಂತ್ರಜ್ಞಾನದ ಮಟ್ಟದಲ್ಲಿ ಪ್ರಜಾವಾಣಿ ತಾಣ ಕನ್ನಡಪ್ರಭ ತಾಣಕ್ಕಿಂತ ಉತ್ತಮ. ಆದರೆ ಇವೆರಡೂ ತಾಣಗಳು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು CNN, BBC ರೀತಿಯ ತಾಣಗಳಾಗಬೇಕು. ಸದ್ಯಕ್ಕೆ ಬರಿಯ ಜಾಹಿರಾತಿನ ಆಸೆಗೆ ಹಂಗೂ ಹಿಂಗೂ ಒಂದು ವೆಬ್ಸೈಟ್ ಮಾಡಿ ಬಿಸಾಕಿದ್ದಾರೆ ನಮ್ಮ ಕನ್ನಡ ಪತ್ರಿಕೆಗಳವರು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಇದೇ ಸ್ವಾಮೀ ನಾನು ಹೇಳಿದ್ದು.........
ರಣಧೀರರ ಈ ಕೆಲಸ ಎಂ.ಇ.ಎಸ್ ನವರಿಗೆ ಪಬ್ಲಿಸಿಟಿ ಕೊಡುವುದು ಮುಂದಿನ ವಿಷಯ.... ಸತ್ತ ಎಂ.ಇ.ಎಸ್ ನ ಹೆಣಕ್ಕೆ ರಣಧೀರರು ಜೀವ ಕೊಟ್ಟರು.
ಇನ್ನೊಂದು ವಿಷಯ..... ಇಂತಹದ್ದೇ ಕೆಲಸ ಬಜರಂಗಿಗಳು ಮಾಡಿದ್ದರೆ?..... ಚಂಪಾನಂತಹ ಸೋಗಲಾಡಿಗಳು ಏನೆನ್ನುತ್ತಿದ್ದರು? ಹುಚ್ಚು ಕೆಲಸ,ಭಯೋತ್ಪಾದನೆ ಯಾರೇ ಮಾಡಿದರೂ ತಪ್ಪೇ... ರಣಧೀರರಿಲಿ, ಬಜರಂಗಿಗಳಿರಲಿ....
ಇನ್ನೊಂದು ಮಾತು... ಪೋಲೀಸರು ಕೇಸ್ ಹಾಕಿದರೆ ಅದನ್ನು ಎದುರಿಸುವ ತಾಕತ್ತು ಇಲ್ಲದವರು ಅಂತಹ ಕೆಲಕ್ಕೆ ಕೈ ಹಾಕಲೇ ಬಾರದು. ಈಗ ಕೇಸ್ ಹಿಂತೆಗೆದುಕೊಳ್ಳಿ ಎಂದು ಕೂಗಿಕೊಳ್ಳುತ್ತಿರುವುದೇಕೆ???
ಕೊನೆಯ ಮಾತು..... ಬೆಂಗಳೂರಿನ ಈಗಿನ ಮೇಯರ್ ಗೆ.. ಮುಂಬರುವ ಮೇಯರಮ್ಮನಿಗೆ ಕನ್ನಡ ಸರಿ ಬರುವುದಿಲ್ಲವಂತೆ "ಚಂಪಾ ಅವರೇ ಹೌದಾ??? ದಯವಿಟ್ಟು ಚೆಕ್ ಮಾಡಿ.... ಮಸಿ ಡಬ್ಬ ಹಾಗೇ ಇಡಲು ರಣಧೀರರಿಗೆ ಹೇಳ ಬೇಕಾಗಬಹುದು" ಆದರೆ ಅದನ್ನು ಮಾಡುವ ಗಂಡಸುತನ ಇವರಿಗೆ ಇದೆಯೇ????
ಕನ್ನಡಿಗರೂ ಎಂದಿಗೂ ಹಾಗೆಯೇ
ಕನ್ನಡಿಗರು ಯಾವಾಗಲೂ ಹಾಗೆಯೇ. ಕೇಂದ್ರದ ಲೋಕಸಭೆಯಲ್ಲಿ ಹಾಗೂ ರಾಜ್ಯ ಸಭೆಯಲ್ಲಿ ಕರ್ನಾಟಕದ ಎಲ್ಲ ಸಂಸದರು ಒಟ್ಟು ಸೇರಿ ಕನ್ನಡದ ಬಗ್ಗೆ ಹೋರಾಡಿದ ದಾಖಲೆ ಇದೆಯೇ? ತಮಿಳುನಾಡಿನವರನ್ನು ನೋಡಿ. ಕಾವೇರಿ ನೀರಿನ ವಿಷಯ ಬಂದಾಗ ತಮಿಳುನಾಡಿನ ಎಲ್ಲ ಸದಸ್ಯರು ಪಕ್ಷಭೇದ ಮರೆತು ಒಂದಾಗುತ್ತಾರೆ.
ಧನಂಜಯ ಕುಮಾರ್ ಅವರು ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರಿಸಬೇಕೆಂಬ ಕೋರಿಕೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಈ ವಿಷಯ ಚರ್ಚೆಗೆ ಬಂದಾಗ ಅವರೊಬ್ಬರನ್ನು ಬಿಟ್ಟರೆ ಕರ್ನಾಟಕದ ಯಾವ ಸದಸ್ಯರೂ ಹಾಜರಿರಲಿಲ್ಲ.
ಸಿಗೋಣ,
ಪವನಜ
-----------
Vishva Kannada
Think globally, Act locally
ಕೇಸರಿ ಬಣ್ಣ
ಕೇಸರಿ ಬಣ್ಣ ಆಗಬಹುದು.... ಅದು ಮರಾಠಿಗರ ಆಫೀಶಿಯಲ್ ಬಣ್ಣ
ಅಲ್ಲಿಯವರಿಗೆ ಇಲ್ಲಿ!
ಬೆಳಗಾವಿಗೇ ಹೋಗಿ ಇದನ್ನು ಮಾಡಬಹುದಿತ್ತು. ಇಲ್ಲಾಂದ್ರೆ ಬೆಳಗಾವಿಯ ಕಾರ್ಯಕರ್ತರಿಂದ ಮಾಡಿಸಬಹುದಿತ್ತು. ಹೋಗಲಿ, ಈ ಕೃತ್ಯದಿಂದ ಸಾಧಿಸಿದ್ದಾದರೂ ಏನು? ಮಾಡೋದೆಲ್ಲಾ ಮಾಡಿ ಈಗ ಸರ್ಕಾರದ ಮುಂದೆ ನಮಗೇನೂ ಮಾಡಬೇಡಿ ಎಂದು ಬೇಡಿಕೊಳ್ಳುವುದೇಕೆ?
ಇದರಿಂದ ಕರ್ನಾಟಕದ ಮರಾಠಿ ಭಾಷಿಗರಿಗೆ ಪಾಠ ಕಲಿಸಿದಂತಾಯ್ತೋ ಅಥವಾ ರೊಚ್ಚಿಗೆಬ್ಬಿಸಿದಂತಾಯ್ತೋ?
ಇವರನ್ನು ಚುನಾವಣೆಗಳಲ್ಲಿ ಎದುರಿಸಿ ಸೋಲಿಸಿದರೆ ಆಗ ನಿಜವಾದ ಶಕ್ತಿಯ ಪ್ರದರ್ಶನವಾಗುವುದು.
ಇಂತಹದ್ದೇ ಕಾರ್ಯ ಮಾಡುತ್ತಿದ್ದ ಶಿವಸೇನೆ ಈಗ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ನೋಡಿದ್ದೀರಲ್ಲ.
ಇದು ನನ್ನ ಸ್ವಂತ ಅಭಿಪ್ರಾಯವಷ್ಟೇ. ಅವರವರಿಗೆ ಅವರದ್ದೇ ಆದ ಅಭಿಪ್ರಾಯಗಳಿರುತ್ತವೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
ಬೆಂಗಳೂರಲ್ಲಿ ಮಾತ್ರ ಕನ್ನಡ ವೇದಿಕೆ
ನಾನಂದುಕೊಂಡಿದ್ದನ್ನೇ ಹೇಳಿದ್ರಿ ಶ್ರೀನಿವಾಸ್ರವರೆ. ಇವರಿಗೆ ಬೆಳಗಾವಿಗೆ ಹೋಗಿ ಈ ಕೃತ್ಯ ಮಾಡುವಷ್ಟು ಧೈರ್ಯವಾದ್ರೂ ಎಲ್ಲಿ ಬರಬೇಕು. ಪ್ರಚಾರಕ್ಕಾಗಿ ಆ ಯಪ್ಪಾ ಬೆಂಗಳೂರಿಗೆ ಬಂದಾಗ ಮಾಡಿದ್ದಾರೆ. ಶಿವಸೇನೆಯಂಥ ಸಂಘಟನೆಯೇ ಈ ರಕ್ಷಣಾ ವೇದಿಕಯೂೆ ಕೂಡ. ಜನರ ಸೆಂಟಿಮೆಂಟನ್ನ ಕ್ಯಾಷ್ ಮಾಡಿಕೊಳ್ಳೋಕೆ ಪ್ರಯತ್ನಿಸ್ತಿದಾರೆ. ಎಂಇಎಸ್ ನವರದ್ದೂ ಅದೇ ಕತೇನೇ. ಮುಖ್ಯವಾಗಿ ನಮ್ಮ ಜನರೆಲ್ಲ ವಿದ್ಯಾವಂತರಾಗಿ(ಕೇವಲ ಅಕ್ಷರಸ್ಥರಲ್ಲ) ತಮ್ಮ ಸ್ವಂತ ವಿಚಾರಶಕ್ತಿ ಬೆಳೆಸಿಕೊಳ್ಳುವವರೆಗೆ ಇಂತಹವರ ಆಟ ಇದ್ದಿದ್ದೇ.