ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ

November 15, 2007 - 3:33pm — raghottama koppar

ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ

ಮೊದಲು ಬಿ.ಏ. ಕಲಿತರು ಸಾಕು ಅದೇ ದೊಡ್ಡ ಪದವಿ, ಜತೆಗೆ ಒಳ್ಳೆಯ ನೌಕರಿ ಸಿಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಏನೇನೋ ಪದವಿಗಳನ್ನು ಕಲಿತರೂ ಕೆಲಸ ಬೇಗನೆ ಸಿಗುವುದಿಲ್ಲ. ಶಿಕ್ಷಣ ಹೇಗಿರಬೇಕು ಎಂಬುದರ ಬಗ್ಗೆ ಹಲವಾರು ಲೇಖನಗಳನ್ನು ನಾವೆಲ್ಲ ಓದಿದ್ದೇವೆ. ಮೊನ್ನೆ ನಮ್ಮ ಹಳೆಯ ಮಿತ್ರರ ಕೂಟದಲ್ಲಿ ಈ ಚರ್ಚೆ ನಡೆಯಿತು. ಹಳೆಯ ಮಿತ್ರರ ಕೂಟ ಇದೇನು ಸಂಘಟನೆಯಲ್ಲ, ಬೆಂಗಳೂರಿನಲ್ಲಿದ್ದ ನನ್ನ (ಗದುಗಿನ) ಊರಿನ ಮಿತ್ರರು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿದಾಗ ಸ್ಪಷ್ಟ ವಾದದ್ದು ಪದವಿಯಲ್ಲಿ ಕಲಿತದ್ದೆ ಬೇರೆ ಪ್ರಾಯೋಗಿಕವಾಗಿ ಮಾಡುತ್ತಿರುವುದೇ ಬೇರೆ. ಇದು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಎಮ್.ಬಿ.ಎ ಹೀಗೆ ಅನೇಕ ವೃತ್ತಿಪರ ಕೋರ್ಸ್ ಗಳಿಗೂ ಅನ್ವಯಿಸುತ್ತದೆ. ಪದವಿಯಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಕೆಲಸಕ್ಕೆ ಸೇರಿದಾಗ ಮತ್ತೆ ಕಲಿಯುವುದು ಬೇರೆಯದನ್ನೆ ಅಂದಮೇಲೆ ಪದವಿಯಲ್ಲಿರುವ ಪಠ್ಯಕ್ರಮವನ್ನು ಕೊಂಚವಾದರೂ ಬದಲಿಸಿದರೆ ಸಮಂಜಸ ಅನ್ನಿಸಿತು. ಪತ್ರಿಕೋದ್ಯಮ ಪದವಿ ಪಡೆದ ವಿದ್ಯಾರ್ಥಿಗೆ ಬರಹ ಅಥವಾ ನುಡಿ ತಂತ್ರಾಶಗಳ ಗೊತ್ತಿರದಿದ್ದರೆ ಹೇಗೆ? ಈ ಸಮಸ್ಯೆಯನ್ನು ಬಹಳ ಜನರು ಅನುಭವಿಸಿದ್ದಾರೆ. ಅದನ್ನು ಪದವಿಯಲ್ಲಿ ಕಲಿಸಿದರೆ ಈ ಚಿಂತೆ ಇರುವುದಿಲ್ಲ ಅಲ್ಲವೇ. ಚಲನಚಿತ್ರ ನಿರ್ಮಾಣದ ಕುರಿತು ತರಬೇತಿಯನ್ನು ನೀಡುತ್ತಾರೆ. ಆದರೆ ಚಿತ್ರಿಕರಣ ಸಮಯ ಎಲ್ಲವೂ ಹೊಸತಾಗಿಯೇ ಕಾಣುತ್ತದೆ. ಕಲಿತ ಒಂದು ಅಂಶಗಳು ಅಲ್ಲಿರುವುದಿಲ್ಲ. ಇದೆಲ್ಲ ನಮ್ಮ ಮಿತ್ರರ ಅನುಭವಗಳು. ವಾಣಿಜ್ಯ ಪದವಿಯನ್ನು ಕಲಿತವರಿಗೆ ಸಿ.ಎ. ಕಡೆಗೆ ಕೆಲಸ ಸೇರಿದಾಗ ಲೆಕ್ಕಶಾಸ್ತ್ರ ವೆಲ್ಲ ಹೊಸತೇ ಕಾಣುತ್ತದೆ. ೧ ರಿಂದ ೧೦ ನೇ ತರಗತಿಯ ವರೆಗೆ ಕಲಿಯುವುದು ಸಾಮಾನ್ಯ ಜ್ನಾನವನ್ನು ವೃದ್ಧಿಸಿಕೊಳ್ಳುವುದಕ್ಕೆ ಅದಿರಲಿ. ಆದರೆ ಪದವಿಯಲ್ಲಿ ಏನು ಕೆಲಸ ಮಾಡಬೇಕೊ ಅದನ್ನು ಹೇಳಿಕೊಟ್ಟರೆ ಕೆಲಸ ಕೊಡುವವರಿಗೂ ಸುಲಭ ಅಲ್ಲವೇ. ಇಂದಿನ ಪಠ್ಯಕ್ರಮದಲ್ಲಿ ಏನೇನು ಬದಲಾಗಬೇಕು ? ನಿಮ್ಮ ಅನಿಸಿಕೆಯ ಅಗತ್ಯವೂ ಇದೆ.

  • ಪ್ರಚಲಿತ
~.~
  • Login or register to post comments
  • 428 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 16, 2007 - 7:29am — tarlesubba

ಉ: ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ

tarlesubba's picture

ನಮಪ್ಪ ಹೆಚಗಿ ಸಾಲಿ ಕಲ್ತವರಲ್ಲ. ’ಇದೆಲ್ಲ ಸಾಲಿಯಾಗ್ ಹೇಳಾಂಗಿಲ್ಲ’ ಅನ್ನೊದು ಅವರ ಕಾಮನ್ನ್ ಡಯಲಾಗು.

growing up we learnt all about the map of india, but knew nothing about the map of how our town. genghis khan, napolean and akbar we learnt about but nothing about abbakka, benki nawab and kempe gowda, who i now learn, via internet, was a pioneer in rainwater harvesting. the constitution of india and magna carta we learnt about but not who or what a mayor, a corporator or a panchayati head is. it is left to word of mouth learning post graduation to know how local governance works. what the byelaws and traffic rules are, what is meant by a revenue site or an agri land. what use is a education in civics without knowledge of these everyday essential facts?

(ಇದನ್ನ ಇನ್ನೊಂದ ಕಡಿ ಪೊಸ್ಟ ಮಾಡಿದ್ದೆ ಅದಕ ಹಂಗೆ ಇಳಶೀನಿ ಯೆನ್ ಅನಕೊಬ್ಯಾಡ್ರಿ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 16, 2007 - 12:25pm — gc

ಉ: ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ

gc's picture

ಸುಬ್ಬಣ್ಣಾರ, ನೀವು ಹೇಳಿದ್ದ ಖರೆ ಐತಿ. NCERT ಅಂಥಾ ಸಂಸ್ಥೆಗಳು ಎಲ್ಲಾರಿಗೂ ಒಂದ ಸೈಜಿನ ಅಂಗಿ ಹಾಕಬೇಕಂತಾವ. ಗಣಿತ ಮತ್ತ ವಿಜ್ಞಾನಕ್ಕ ಸರಿ, ಆದ್ರ ಇತಿಹಾಸ ಮತ್ತ ಸಮಾಜಶಾಸ್ತ್ರಕ್ಕ ಸರಿ ಹೋಗಂಗಿಲ್ಲಾ. ಸ್ಥಳೀಯ ಇತಿಹಾಸಾನ ನಾವು ಕಲಿಯೂದ ಕಮ್ಮಿ. ಬೆಂಗಳೂರಿನ ಎಷ್ಟ್ ಕನ್ನಡ ಮಕ್ಳಿಗೆ ಕೆಂಪೇಗೌಡನ ಬಗ್ಗೆ ಗೊತ್ತೈತಿ? ನಮ್ಮ ನಾಡಿನ್ಯಾಗ ಹರಿಯೋ ನದಿಗಳ ಬಗ್ಗೆ ಏಷ್ಟು ತಿಳ್ಕೊಂಡಿರ್ತಾರ ಈ ಮಕ್ಳು? ೧೮೫೭ರ ಸಿಪಾಯಿ ದಂಗೆ ಬಗ್ಗೆ ಎಲ್ಲಾರೂ ಓದಿರ್ತಾರ. ಆದ್ರ ಸುರಪುರದ ವೆಂಕಟಪ್ಪ ನಾಯಕ ಅಥವಾ ನರಗುಂದದ ಬಾಬಾಸಾಹೆಬನ ಬಗ್ಗೆ ಗೊತ್ತಿರೂದ ಕಮ್ಮಿ. ICSE/CBSE ಸಾಲಿಗಳಲ್ಲಿ ಸ್ಥಳೀಯ ಇತಿಹಾಸ, ಸಂಸ್ಕೃತಿ, ಭುಗೋಳದ ಬಗ್ಗೆ ಕಲಿಯೋದ ಇನ್ನೂ ಕಮ್ಮಿ.

ಕೊಪ್ಪರ್ ಸರ್, ಪಾಟೀಚೀಲಗಳು ಗೋಣಿಚೀಲದಷ್ಟು ವಜ್ಜ ಇರೂ ತನ್ಕಾ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಹೆಚ್ಚಿನ ನಿರೀಕ್ಷೆ ಇಟಗೋಬಾರ್ದ. ದಪ್ಪ ದಪ್ಪ ಪುಸ್ತಕಾ ಓದಿದ್ರ ಮಕ್ಳು "ಬುದ್ದಿವಂತ"ರಾಗ್ತಾರ ಅನ್ನೋ ಅಪನಂಬಿಕೀನೂ ಐತಿ. ನಮ್ಮ ವ್ಯವಸ್ಥೇಯೊಳಗ ಮಹತ್ವಾ ಕೊಡೋದು ಬರೆ quantatitative knowledgeಕ್ಕ ಮಾತ್ರ. ಸೃಜನಶೀಲತೆ (creativity), ಸ್ವತಂತ್ರವಾಗಿ ವಿಚಾರಾ ಮಾಡೋದು (independent thinking) ಮತ್ತು critical thinking (ವಿಮರ್ಶಾತ್ಮಕ ವಿಚಾರ?) ಗಳಿಗೆ ಹೆಚ್ಚಿನ ಮಹತ್ವಾನ ಇಲ್ಲ. ಕಾಲೇಜಗಳಲ್ಲಿ ಕೆಲಸಕ್ಕ ಬೇಕಾದ ಎಲ್ಲ skills ಕಲಿಸೊದು ಅಸಾಧ್ಯದ ಕೆಲ್ಸಾ. practical/project work ಗಳಿಗೆ ಸ್ವಲ್ಪ ಮಹತ್ವಾ ಇರಬೇಕ. Internship, apprenticeship and other forms of business/industry interactions should be encouraged. ಪಠ್ಯಕ್ರಮ ಬದಲ ಮಾಡಬಹುದು. ಅದಕ್ಕ ತಕ್ಕಂಗ ಹೆಚಗಿ ರೊಕ್ಕಾನೂ ಬೇಕು ನಮ್ಮ ಸಾಲಿ/ಕಾಲೇಜಗಳಿಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ವಿ ಟಿ ಯು ಸಹಯೋಗದಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ಶಿಕ್ಷಣ" - ಅನಗತ್ಯ, ನೀವೇನಂತೀರಿ?
  • ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ
  • ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ- ರಘೋತ್ತಮ್ ಕೊಪ್ಪರ
  • ಬರಹ ಹೇಳಿಕೊಡಿ, ನುಡಿ ಬೇಡ.. !
  • ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ
Syndicate content

ಲೇಖಕರು

raghottama koppar's picture

ಪೂರ್ಣ ಹೆಸರು
Raghottama Ravindra Koppar

ಪರಿಚಯ

I am Raghottama Ravindra Koppar. Working as Technical Writer in Bangalore. Also worked as sub-editor in Prajavani Kannada Daily. Written many articles in Prajavani and Deccan Herald. Also writing for shvoong.com and writingcampus.com. I am from Gadag. I have also written some lyrics, but no producers ha ha ha...........

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
  • D.S.NAGABHUSHANA
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 8:37pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator