ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬದಲಾಗುತ್ತಿರುವ ಸಂಸತ್ತಿನ ನಡವಳಿಕೆಗಳು

November 21, 2007 - 12:28pm — csomsekraiah

ಭಾರತದ ಸ್ವಾತಂತ್ರ್ಯಾನಂತರದ ಈ ಅರವತ್ತು ವರ್ಷಗಳಲ್ಲಿ , ಸಕಲ ಕ್ಷೇತ್ರಗಳಲ್ಲೂ ಆಗುತ್ತಿರುವ, ಆಗಿರುವ ಬದಲಾವಣೆಗಳು ಅಲೋಚಿಸುವ ಮನಸ್ಸುಗಳನ್ನು , ದಂಗುಬಡಿಸುವ ರೀತಿಯಲ್ಲಿ ಜರುಗಿವೆ .

ಕಳೆದ ಆರು ದಶಕಗಳಲ್ಲಿ ,ಪ್ರಾಕೃತಿಕವಾದ ಈ ಸಮೃದ್ದ ಭೂಮಿಯ , ಸಸ್ಯ ಸಂಪತ್ತು, ಖನಿಜ ಸಂಪತ್ತು,ಜೈವಿಕ ವೈವಿಢ್ಯದ ಅಪಾರ ತಳಿಗಳು ಮುಂತಾದ ಮೂಲ ಆಕರಗಳನ್ನು ಶರವೇಗದಿಂದ ನಾಶಾಪಡಿಸುತ್ತಿದ್ದೇವೆ .

ಇನ್ನು ಮನುಷ್ಯನ ಮನಸ್ಸಿನ ಸ್ಠಿತಿಗತಿಗಳಿಗೆ ಬಂದರೆ , ಎಲ್ಲ ವಿಧವಾದ ಮೌಲ್ಯಗಳು, ನೈತಿಕ ನಡವಳಿಕೆಗಳು, ಮಾನವ ಸಂಬಂಧಗಳು ನಿರ್ನಾಮವಾಗಿ ಹೋಗುತ್ತಿವೆ .

ಈ ರೀತಿಯ ದುಷ್ಟ ಬದಲಾವಣೆಗಳಿಗೆ ಪ್ರೇರಕವೂ, ಪೂರಕವೂ ಆಗಿರುವ ರಾಜಕೀಯ ಸ್ಠಿತ್ಯಂತರಗಳ ಬಗ್ಗೆ , ಗಮನ ಹರಿಸಿದರೆ ಅತ್ಯಂತ ನಿರಾಶಾದಾಯಕ ವಾತಾವರಣ ಎದುರಾಗುತ್ತದೆ .

ಐವತ್ತು, ಅರವತ್ತರ ದಶಕಗಳಲ್ಲಿ , ಕೇಂದ್ರದ ಲೋಕಸಭೆ, ರಾಜ್ಯಗಳ ವಿಧಾನಸಭೆಗಳ ಕಲಾಪಗಳನ್ನು ಗಮನಿಸಿದವರಿಗೆ , ಇಂದಿನ ಸ್ಠಿತಿ ವಿಷಾದ ಮೂಡೀಸುತ್ತದೆ.

ಭಾರತೀಯ ಪ್ರಜಾಸತ್ತೆ ನಿಂತಿರುವುದೇ ಆಡಳಿತ ಪಕ್ಷ ಮತ್ತು ಅದಕ್ಕೆ ನಿಯಂತ್ರಕ ರೀತಿಯಲ್ಲಿ ವಿರೋಧ ಪಕ್ಷಗಳ ಸಂಯುಕ್ತ ಪದ್ದತಿಗಳ ಆಧಾರದ ಮೇಲೆ ಎರಡಕ್ಕೂ ಅಪಾರ ಜವಾಬ್ದಾರಿ ಸಾಂವಿಧಾನಿಕ ಕರ್ತವ್ಯಗಳೀದ್ದೇ ಇವೆ.

ಅಂದು ರಾಮಮನೋಹರ ಲೋಹಿಯಾ, ಮಹಾವೀರತ್ಯಾಗಿ, ಅಟಲ್ ಬಿಹಾರಿ ವಾಜಪೇಯಿ, ನೆಹರೂ, ಜಯಪ್ರಕಾಶನಾರಾಯಣ , ಮೊರಾರ್ಜಿದೇಸಾಯಿ ಮುಂತಾದ ಸಂಸದೀಯ ಪಟುಗಳು ಕಾರ್ಯ ನಿರ್ವಹಿಸುತ್ತಿದ್ದ ರೀತಿ ; ಸಂಸತ್ತಿನಲ್ಲಿ ಮಂಡಿಸುತ್ತಿದ್ದ ವಿಷಯಗಳು , ಅಧ್ಯಯನ ಯೋಗ್ಯವಾಗಿರುತ್ತಿದ್ದವು . ವಿರೋಧಪಕ್ಷಗಳ ನಾಯಕರುಗಳ ಮಾತನ್ನು ಆಡಳಿತ ಪಕ್ಷ ಗಂಭೀರವಾಗಿ ,ಸಹನೆಯಿಂದ ಆಲಿಸುತ್ತಿತ್ತು. ಆಡಳಿತ ಪಕ್ಷದವರ ಉತ್ತರಗಳನ್ನು ಸಹ ವಿರೋಧಪಕ್ಷಗಳು ಪೂರ್ವಾಗ್ರಹವಿಲ್ಲದೆ, ವಿಮರ್ಶಾತ್ಮಕವಾಗಿ ಸ್ವೀಕರಿಸುತ್ತಿದ್ದವ . ಆದರೆ ಇಂದು ವಿರೋಧದ ಜಾಗದಲ್ಲಿ ಪರಸ್ಪರ ದ್ವೇಷ, ಅಸಹನೆ ,ಮನೆ ಮಾಡಿದೆ .

ಸಂಸತ್ತಿನಲ್ಲಿ ವಿಷಯತಜ್ಝ ಸದಸ್ಯರ ಕೊರತೆಯಿಂದಾಗಿ; ಕ್ರಿಮನಲ್ ಹಿನ್ನೆಲೆಯ ಸದಸ್ಯರಿಂದಾಗಿ , ತೋಳ್ಬಲದ, ಪ್ರತಿಗಾಮಿ ನಡವಳಿಕೆಯ,ಅಥವಾ ವಿವೇಚನಾ ಹೀನ ನಾಯಕನಿಷ್ತೆಯ, ಹೌದಪ್ಪಗಳ ಸಂತೆಯಾಗಿ ಘನತೆವೆತ್ತ ಸಂಸತ್ತು ಪರಿವರ್ತನೆಗೊಳ್ಳುತ್ತಿರುವುದು ಗಾಬರಿಗೊಳಿಸುವ ವಿದ್ಯಮಾನವಾಗಿದೆ.

ಕಳೆದ ಸಂಸತ್ತಿನಲ್ಲಿ ಜಾರ್ಜ್ ಫರ್ನಾಂಡಿಸ್ ರ ವಿರುದ್ದವಾಗಿ ಲೋಕಸಭೆಯ ಕಲಾಪಗಳನ್ನು ವರ್ಷಾನುಗಟ್ಟಲೆ ಬಹಿಷ್ಕರಿಸಿ ಕೆಟ್ಟ ಸಂಪ್ರದಾಯವನ್ನು ಹಾಕಿದ ಪರಿಣಾಮವಾಗಿ; ಅದರ ವಿಷವೃಕ್ಷದ ಮೊಳೆತ ಬೀಜದ ಅಗಾಧ ಬೆಳವಣಿಗೆ ಎನ್ನುವಂತೆ ಇಂದಿನ ಅಢಿವೇಶನಗಳು ನಿರಂತರ ಬೇಜವಾಬ್ದಾರಿ , ಅಸಾಂವಿಧನಿಕ ನಡವಳಿಕೆಗಳಿಂದಾಗಿ ಗೊಂದಲದ ಗೂಡಾಗಿ, ಸಂಸದೀಯ ಪ್ರಜಾತಂತ್ರದ ತತ್ವಗಳನ್ನೇ ಅಪನಂಬಿಕೆಯಿಂದ ನೋಡುವ ಸ್ಠಿತಿ ನಿರ್ಮಾಣವಗಿದೆ .

ಭಾರತೀಯ ಜನತಂತ್ರದಲ್ಲಿ ಮಂತ್ರಿಮಂಡಲ ಪ್ರಮಾಣವಚನವನ್ನು ಸ್ವೀಕರಿಸುವುದು - ’ಯಾವುದೇ ರೀತಿಯ ಅನುರಾಗ ,ಕ್ರೋಧ, ಭಯ, ಪಕ್ಷಪಾತಗಳಿಲ್ಲದೆ,ಭಾರತದ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ ಎಂಬ ಶಪಠದ ಮೂಲಕ. ಆದರೆ ದೇಶದ ನಾಯಕರು ದೇಶಕ್ಕೆ ಕೊಡುವ ಈ ವಚನವನ್ನು ಕೊಟ್ಟ ದಿವಸವೇ ಮರೆತುಬಿಡುತ್ತಾರೆ .

ಕಾಗ್ರೆಸ್ಸಿನ ಮಂತ್ರಿಗಳು ಮೊದಲು ಕಾಂಗ್ರೆಸ್ ಕಾರ್ಯಕರ್ತರು ನಂತರ ಮಂತ್ರಿಗಳು;ಬಿಜೆಪಿಯವರು ಮೊದಲು ಸಂಘಪರಿವಾರದ ಕಾರ್ಯಕರ್ತರು , ನಂತರ ಮಂತ್ರಿಗಳು; ಕಮ್ಯೂನಿಷ್ತರು ಮೊದಲು ಆ ಪಕ್ಷದ ಕಾರ್ಯಕರ್ತರು. ನಂತರದ ಮಂತ್ರಿಗಳು .ಈ ವಿಕೃತ ಮನೋಭಾವವೇ ದೆಹಲಿಯ ಸಿಕ್ಕರ ಮಾರಣಹೋಮ. ಗುಜರಾತಿನ ಮುಗ್ಢರ ಕಗ್ಗೊಲೆ. ನಂದಿಗ್ರಾಮದ ದಾರುಣ ಹತ್ಯೆಗಳು ಇಂತಹ ಘಟನೆಗಳ ಮೂಲ ಬೀಜಗಳು .

ಅಧಿಕಾರಕ್ಕೆ ಬಂದ ಕೂಡಲೇ ನಾಯಕನಾದವನು ಯಾವ ಪಕ್ಷದ ನಿಷ್ಟನೂ ಆಗಿರದೆ ; ದೇಶನಿಷ್ಟನೂ.ಪ್ರಜಾನಿಷ್ಟನೂ,ಸಂವಿಧಾನ ನಿಷ್ಟನೂ ಆಗುವುದೇ ಅವರು ಕಲಿಯಬೇಕಾದ ಮೊದಲ ಪಾಠ.

ಇಂದಿನ ಜನ ನಾಯಕರ ಸ್ವಜನ ಪಕ್ಷಪಾತ, ಸ್ವಾರ್ಠ ರಾಜಕೀಯ, ಅಧಿಕಾರದ ಅಸಹ್ಯ ಆಕಾಂಕ್ಷೆ ಗಳೇ ಈ ನಾಡಿನ ಸಂಪನ್ಮೂಲಗಳ ನಾಶಕ್ಕೆ, ಪರಿಸರ ನಾಶಕ್ಕೆ, ಜನರ ದುರಂತಕ್ಕೆ ಮುಖ್ಹ್ಯ ಕಾರಣಗಳು .ಭಾರತೀಯರು ಎಚ್ಚರಗೊಳ್ಳದಿದ್ದರೆ ಇಲ್ಲಿನ ಕೆಟ್ಟ ರಾಜಕಾರಣದಿಂದಾಗಿ ಅನಿಷ್ತ ಪರಂಪರೆಗಳು ಎದುರಾಗುತ್ತವೆ.

  • ಚಿಂತನೆ - ಸ್ಟಾಲ್ಮನ್
~.~
  • Login or register to post comments
  • 280 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾರತೀಯ ಪ್ರಜಾಸತ್ತೆ
  • ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್
  • ಅಡ್ವಾಣಿಯವರ ಅಗ್ನಿ ಪರೀಕ್ಷೆ
  • ನಮ್ಮ ಮತ ಯಾರಿಗೆ?
  • ಐಶ್ ಮದುವೆಯ multi effects!!!!!
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 48 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator