ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಬಣ್ಣದ ಲೋಕಕ್ಕೆ ಬಂದ ಯುವಕರ ಬದುಕು- ರಘೋತ್ತಮ್ ಕೊಪ್ಪರ

November 22, 2007 - 2:01pm — raghottama koppar

ಬಣ್ಣದ ಲೋಕಕ್ಕೆ ಬಂದ ಯುವಕರ ಬದುಕು- ರಘೋತ್ತಮ್ ಕೊಪ್ಪರ

ಬೆಂಗಳೂರಿನ ಗಾಂಧಿನಗರಕ್ಕೆ ಕಣ್ಣಲ್ಲಿ ಕನಸುಗಳ ತುಂಬಿಕೊಂಡು ಬಂದ ಎಷ್ಟೋ ಜನ ಕಂಬಿನಿಯಿಟ್ಟು ತಮ್ಮ ಊರಿಗೆ ತಿರುಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ. ಅವರು ಇಲ್ಲಿ ಪಟ್ಟ ಪಾಡು, ಅವಮಾನ ಇವುಗಳ ಬಗ್ಗೆ ಒಂದು ನೋಟ. ನಾನು ಗಾಂಧಿನಗರದ ಯಾತ್ರಿನಿವಾಸ್ ಮುಂದೆ ಗೆಳೆಯನೊಬ್ಬನ ಜತೆಗೆ ಹರಟುತ್ತ ನಿಂತಾಗ ಯುವಕನೊಬ್ಬ ಗ್ರೀನ್ ಹೌಸ್ ನತ್ತ ಕಾಯುತ್ತ ನಿಂತಿದ್ದ. ನಾವು ಹರಟೆಯಲ್ಲಿ ಮಗ್ನ ರಾಗಿ ಒಂದು ಘಂಟೆಗೂ ಹೆಚ್ಚು ಕಾಲ ನಿಂತಿದ್ದೆವು. ಆದರೆ ಈ ಯುವಕ ಮಾತ್ರ ಹಾಗೆ ನಿಂತಿದ್ದ. ಕುತೂಹಲದಿಂದ ಮಾತನಾಡಿಸಿದೆ. ಅವನು ನಟನಾಗಬೇಕೆಂದು ಬೆಂಗಳೂರಿಗೆ ಬಂದವನು ಎಂದು ಗೊತ್ತಾಯಿತು. ಯಾರೋ ಅವನಿಗೆ ಚಲನಚಿತ್ರಗಳ ಸಭೆ ಸಮಾರಂಭಗಳು ಇಲ್ಲಿ ನಡೆಯುತ್ತವೆ ಎಂದು ಹೇಳಿದ್ದಾರೆ. ಅದಕ್ಕೆ ಯಾರಾದರೂ ಅಥವಾ ನಟರೋ ನಿರ್ದೇಶಕರೋ ಸಿಕ್ಕರೆ ಅವಕಾಶಗಳನ್ನು ಕೇಳಬೇಕೆಂದು ನಿಂತಿದ್ದೇನೆ ಅಂದ. ಕೈ ಯಲ್ಲಿ ಒಂದು ಚೀಲ, ಅದರಲ್ಲಿ ಅವನ ಏಕಪಾತ್ರಾಭಿನಯದ ಕೆಲವು ಚಿತ್ರಗಳಿದ್ದವು. ಆಗ ಇವನಂತೆ ಬಂದವರು ಎಷ್ಟು ಜನ ಸಫಲರಾಗಿದ್ದಾರೆ ಅನ್ನುವುದಕ್ಕಿಂತ ವಿಫಲರಾದವರು ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಗಾಂಧಿನಗರವನ್ನೆಲ್ಲ ತಿರುಗಿದೆ. ಸಿಕ್ಕರೂ ಕೇವಲ ಮೂರು ಜನ ಸಿಕ್ಕರು. ಒಬ್ಬನು ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಒಬ್ಬನು ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನೊಬ್ಬನು ಕೆಲಸವಿಲ್ಲದೆ ಅಲೆದಾಡುತ್ತಿದ್ದಾನೆ. ಅವನನ್ನು ಕೇಳಿದಾಗ, ಇಲ್ಲಾ ಸಾರ್ ಊರಿಂದ ದೊಡ್ಡ ಮನಷ್ಯಾ ಆಗ್ತಿನಂತ ಓಡಿ ಬಂದಿದ್ದೇನೆ. ಇಲ್ಲಿ ಬಂದರೆ ಹೀಗೆ, ಮೊದಲು ಕೈ ಯಲ್ಲಿ ಕಾಸಿದ್ದಾಗ ದೈನಿಕ್ ಪಾಸ್ ಕೊಂಡು ಬೆಂಗಳೂರನ್ನು ನೋಡ್ತಾ ಇದ್ದೆ. ಈಗ ಅದೂ ಇಲ್ಲ, ಇಲ್ಲೆ ಸೆಟ್ ದೋಸೆ ಅಥವಾ ಪೂರಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ನನ್ನಲ್ಲಿ ಪ್ರತಿಭೆ ಇದೆ ಸಾರ್ ಅವಕಾಶ ಇಲ್ಲಾ, ಆದರೂ ಬಿಡಲ್ಲ ಅನ್ನುತ್ತಾನೆ ಈ ಛಲದಂಕ ಮಲ್ಲ. ಇನ್ನಿಬ್ಬರು ಕೆಲಸವನ್ನೇನೊ ಮಾಡುತ್ತಿದ್ದಾರೆ. ಆದರೆ ನಟರಾಗುವ ಆಸೆಯನ್ನು ಮಾತ್ರ ಬಿಟ್ಟಿಲ್ಲ. ರಜೆ ಇದ್ದ ಸಮಯದಲ್ಲಿ ಜನಾರ್ದನ ಮತ್ತು ಕನಿಷ್ಕ್ ಹೋಟೆಲ್ ಕಡೆಗೆ ಹೋಗಿ ನಿರ್ಮಾಪಕರು ಮತ್ತು ಸಂಭಾಷಣೆಯನ್ನು ಬರೆಯುವವರನ್ನು ಭೇಟಿ ಮಾಡಿದ್ದೇವೆ. ಮುಂದಿನದು ಆ ಭಗವಂತನ ಇಚ್ಛೆ ಎನ್ನುತ್ತಾರೆ ಈ ಯುವಕರು. ಕನ್ನಡದಲ್ಲಿ ಹೊಸಬರ ಗಾಳಿ ಬೀಸುತ್ತಿದ್ದು ಅದು ನಮಗೆ ವರವಾದರೆ ಸಾಕು. ನಮ್ಮ ಜೀವನ ಸಾರ್ಥಕ ಎನ್ನುವುದು ಇವರಿಬ್ಬರ ಅಭಿಪ್ರಾಯ. ಇವರಿಗೆ ಒಳ್ಳೇಯದಾಗಲಿ ಎಂದು ಆ ದೇವರನ್ನು ಪ್ರಾರ್ಥಿಸಿದೆ. ಇಂತಹ ಎಷ್ಟೊ ಜನರು ಗಾಂಧಿನಗರದ ಬೀದಿ ಬೀದಿಗಳಲ್ಲಿ ಸುತ್ತುತ್ತಿದ್ದಾರೆ. ನಿಮಗೂ ಭೇಟಿಯಾದರೆ ಮಾತನಾಡಿಸಿ. ಮುಂದೆ ಅವರಲ್ಲೊಬ್ಬ ಸ್ಟಾರ್ ಆಗಬಹುದೇನೋ ಅಲ್ಲವೇ...

  • ಪ್ರಚಲಿತ
~.~
  • Login or register to post comments
  • 312 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ
  • ಶಿಕ್ಷಣ ಹೇಗಿರಬೇಕು- ರಘೋತ್ತಮ್ ಕೊಪ್ಪರ
  • ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)-ರಘೋತ್ತಮ್ ಕೊಪ್ಪರ
  • ಹನಿಗವನ-ರಘೋತ್ತಮ್ ಕೊಪ್ಪರ
  • ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ
Syndicate content

ಲೇಖಕರು

raghottama koppar's picture

ಪೂರ್ಣ ಹೆಸರು
Raghottama Ravindra Koppar

ಪರಿಚಯ

I am Raghottama Ravindra Koppar. Working as Technical Writer in Bangalore. Also worked as sub-editor in Prajavani Kannada Daily. Written many articles in Prajavani and Deccan Herald. Also writing for shvoong.com and writingcampus.com. I am from Gadag. I have also written some lyrics, but no producers ha ha ha...........

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪ್ರಧಾನಿಯವರ ಆರೋಗ್ಯ ಕಾಪಾಡಲು ಮನವ
  • ಬಿಡುಗಡೆಯ ನಂತರದ ಬೇಡಿಗಳು (೪)
  • ತಿಳಿ ಹಾಸ್ಯ ಮರೆತಿಲ್ಲ!
  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:49pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 4:41pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:18pm
  • dhanu.vijai
    ಉ: ಕಾದಿರುವೆ ನಿನಗಾಗಿ
    August 30, 2008 - 4:14pm
  • ಸಂಗನಗೌಡ
    ಉ: ಕಾದಿರುವೆ ನಿನಗಾಗಿ
    August 30, 2008 - 3:36pm
  • kadakolla05
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 2:09pm
  • srinivasps
    ಉ: ಕಚೇರಿ ಎಂಬ ನರಕ-೧
    August 30, 2008 - 1:56pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator