ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

೮೪ರ ಹರಯದ ಉತ್ಸಾಹಿ ರಂಗ ನಟ - ಚನ್ನಬಸಯ್ಯ ಗುಬ್ಬಿ

December 2, 2007 - 6:51pm — agilenag
ಚನ್ನಬಸಯ್ಯ ಗುಬ್ಬಿಯವರು

ಅಮರೇಶ್ವರ ವಿಜಯ ನಾಟಕ ಮಂಡಳಿಯು ಒಂದು ಸಂಸ್ಥಾಪಿತವಾದ ನೋಂದಾಯಿತ ವೃತ್ತಿ ನಾಟಕ ಕಂಪನಿ. ಈ ಕಂಪನಿಯನ್ನು ತಮ್ಮ ಎಂಭತ್ತರ ದಶಕದಲ್ಲಿರುವ ನಾಟಕ ರಂಗದ ಉನ್ನತ ಕಲಾಕಾರ ಶ್ರೀ ಚನ್ನಬಸಯ್ಯ ಗುಬ್ಬಿಯವರು ಹುಟ್ಟುಹಾಕಿ, ಸ್ಥಾಪನೆ ಮಾಡಿದರು. ಅವರ ಹೆಸರೇ ಹೇಳುವಂತೆ ಶ್ರೀಯುತರು ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮ (ಈಗ ಪಟ್ಟಣ)ದವರು. ೧೯೪೫ರಲ್ಲಿ ಅವರು ಚಿತ್ತರಗಿಯ ಸುಪ್ರಸಿದ್ದ ನಾಟಕಕಾರ ಗಂಗಾಧರ ಶಾಸ್ತ್ರಿಗಳ ಕುಮಾರ ವಿಜಯ ನಾಟಕ ಸಂಘ ಚಿತ್ತರಗಿಯನ್ನು ಸೇರಿ ತಮ್ಮ ಕಾಯಕವನ್ನು ಪ್ರಾರಂಭಿಸಿದರು. ಆನಂತರ ೧೯೬೦ರ ದಶಕದಲ್ಲಿ ಅವರು ಜಮಖಂಡಿಯ ಗಜಾನನ ಸಂಗೀತ ನಾಟಕ ಮಂಡಳಿಯಲ್ಲಿಯೂ ದುಡಿದರು.

೧೯೮೧ರಲ್ಲಿ ಶ್ರೀಯುತರು ರಾಯಚೂರು ಜಿಲ್ಲೆಯ ಗುರುಗುಂಟೆ ಎಂಬಲ್ಲಿ ತಮ್ಮದೇ ಆದ ಅಮರೇಶ್ವರ ನಾಟ್ಯ ಸಂಘವನ್ನು ಸ್ಥಾಪಿಸಿದರು. ಅವರು ಈ ಕಾರ್ಯದಲ್ಲಿ ಮಹತ್ತರವಾದ ಸಾಧನೆಯನ್ನು ಕಂಡು,ರಾಯಚೂರು, ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಸಂಚರಿಸಿ ವ್ಯಾಪಕ ನಾಟಕ ಪ್ರದರ್ಶನಗಳನ್ನು ನೀಡಿದರು. ೧೯೮೫ರಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಿ, ಎಂದರೆ ಬಿರುಗಾಳಿಗೆ ಸಿಕ್ಕಿ ಅವರ ನಾಟಕ ಮಂಡಳಿಯ ಸುಮಾರು ಒಂದು ಲಕ್ಷ ಮೌಲ್ಯದ ಸಮಸ್ಥ ಪರಿಕರಗಳೂ ನಾಶವಾಗಿಹೋದವು.

ಪ್ರಕೃತಿ ವಿಕೋಪದಲ್ಲಿ ಗುಬ್ಬಿಯವರು ತಮ್ಮ ಪರಿಕರಗಳನ್ನು ಕಳೆದುಕೊಂಡರೇ ವಿನಃ ತಮ್ಮ ಉತ್ಸಾಹ ಮತ್ತು ಆತ್ಮ ಸ್ಥೈರ್ಯವನ್ನಲ್ಲ. ಆರು ತಿಂಗಳಿನ ನಂತರ ಅವರೌ ಮತ್ತೆ ಅಮರೇಶ್ವರ ವಿಜಯ ನಾಟಕ ಮಂಡಳಿ ಎಂಬ ನಾಟಕವನ್ನು ಮತ್ತೂ ಹೆಚ್ಚಿನ ಧೈರ್ಯ ಮತ್ತು ಸ್ಥೈರ್ಯಗಳಿಂದ ಕಟ್ಟಿದರು ಈ ನಾಟಕ ಮಂಡಳಿಯಲ್ಲಿ ಪಾತ್ರವಹಿಸಲು ಅವರು ಹವ್ಯಾಸಿ ಹಾಗು ವ್ರುತ್ತಿ ನಟರನ್ನು ಒಂದುಗೂಡಿಸಿ ಬಳಸಿಕೊಂಡರು. ಬೆಂಗಳೂರು, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಾಟಕ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡರು. ಅವರ ಅತ್ಯಂತ ಜನಪ್ರಿಯ ನಾಟಕಗಳೆಂದರೆ ಶ್ರೀ ಗಂಗಾಧರ ಶಾಸ್ತ್ರಿ ವಿರಚಿತ ಸೌಭಾಗ್ಯಲಕ್ಷ್ಮಿ ಮತ್ತು ಶ್ರೀ ಕೆ.ಎನ್. ಸಲುಂಕಿಯವರ ದೇವರಿಗೆ ನೆನಪಿಲ್ಲ. ಇವೆರಡು ಅವರ ಅತಿ ಪ್ರಭಾವಯುಕ್ತ ನಾಟಕಗಳೆಂದು ಹೆಸರು ಗಳಿಸಿದವು. ಅವರಿಗೆ ಹೆಸರು ತಂದ ಇನ್ನಿತರ ನಾಟಕಗಳೆಂದರೆ ಹೆಚ್.ಎನ್. ಹೂಗಾರರ ಪುತ್ತಳಿಗೊಂಬೆ, ಮಾತೃವಾತ್ಸಲ್ಯ, ವರದಕ್ಷಿಣೆ ಮತ್ತು ಚಾರಿತ್ರಿಕ ನಾಟಕ ಬೆಂಗಾಳೂರ ಭಾಗ್ಯಲಕ್ಷ್ಮಿ ಹಾಗು ಜಾನಪದ ನಾಟಕ ಶಿಲಾಲಿಪಿ.

೮೪ರ ಹರಯದ ಅವರ ರಂಗ ಸೇವೆಗೆ ಈಗ ೬೦ರ ಹರಯ. ಇವರು ಸ್ಥಾಪಿಸಿದ ಶ್ರೀ ಅಮರೇಶ್ವರ ವಿಜಯ ನಾಟಕ ಮಂಡಳಿಗೆ ೨೬ರ ಹರಯ. ಸಂಘವು ಇತ್ತೀಚೆಗಷ್ಟೇ ತನ್ನ ಜನ್ಮದಿನದ ರಜತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿತು. ಮಳೆ ಬಂದಾಗ ತಲೆ ಎತ್ತಿ, ಬಿಸಿಲು ಕಂಡೊಡನೆಯೇ ಮಾಯವಾಗುವ ಅಣಬೆಗಳಂತೆ ಹುಟ್ಟಿ ಮಾಯವಾಗುವುದೇ ರಂಗ ಸಂಸ್ಥೆಗಳ ಹಣೆ ಬರಹವಾಗಿರುವಾಗ, ಇಂತಹ ದಶಕಗಳ ಇತಿಹಾಸ ಹೊಂದಿರುವ ಈ ಸಂಸ್ಥೆ ಗುಬ್ಬಿಯವರ ದೃಢಕಾಯದಂತೆಯೇ ಸದೃಢ.

ಕಾರಣ, ತಮ್ಮ ಕೈಂಕರ್ಯವನ್ನು ಅವರು ಹಣಕ್ಕಾಗಿ ಮಾಡದೆ, ಕಲೆಗಾಗಿ ಮಾಡುತ್ತಾ ಬರುತ್ತಿರುವುದು. ಈ ನಿಟ್ತಿನಲ್ಲಿ ಹಲವಾರು ಚರಿತ್ರೆಯ ಪುಟಗಳಿಮ್ದ ಆರಿಸಿಕೊಂಡ, ಚರಿತ್ರೆಯಿಂದ ಮರೆಯಾಗಿ ಹೊಗಿರುವಂತಹ ಹಾಗು ಚರಿತ್ರಕಾರರ ಗಮನಕ್ಕೆ ಬಾರದಿರುವಂತಹ ಹಲವಾರು ವಿಷಯಗಳನ್ನು ಕಾಲದಾಳದಿಂದ ಹೆಕ್ಕಿ ತೆಗೆದು, ಅದಕ್ಕೆ ಕಥೆ ಹೆಣೆದು, ಇಲ್ಲವೇ ತಜ್ಞರಿಂದ ಬರೆಯಿಸಿ, ನಾಟಕದ ರೂಪ ಕೊಟ್ಟು ರಂಗದ ಮೇಲೆ ತಂದಾಡಿಸಿ, ಕಾಲಚಕ್ರದಲ್ಲಿ ಮರೆಯಾಗಿ ಹೋಗುತ್ತಿದ್ದ ಮಕುಟಮಣಿಗಳಿಗೆ ಹೊಸ ಹೊಳಪು ನೀಡುತ್ತಿರುವ ವ್ಯಕ್ತಿ ಇವರು. ಈ ಯತ್ನದಲ್ಲಿ ಇವರಿಗೆ ವಯಸ್ಸು, ಲಿಂಗ, ಭಾಷೆ, ಕ್ಷೇತ್ರ ಯಾವ ಪ್ರಾಕಾರಗಳೂ ಅಡ್ಡ ಬರುವಂತಿಲ್ಲ. ಎಲ್ಲವನ್ನೂ ಭೇದಿಸಿ, ಮುನ್ನುಗ್ಗಿ ಕೆಲಸ ಸಾಧಿಸುವ ಹುಮ್ಮಸ್ಸು ಅವರಲ್ಲಿ ಇಂದಿಗೂ ಇದೆ. ಅದಕ್ಕಾಗಿಯೇ ಅವರಿಗೆ ರಾಜ್ಯ ಸರಕಾರದ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯೂ ದೊರೆತಿದೆ. ೨೦೦೭ರಲ್ಲಿ ಕೆಂಪೇಗೌಡ ಪ್ರಶಸ್ತಿಗೆ ಭಾಜನರೂ ಆಗಿದ್ದಾರೆ. ಇಂತಹ ವ್ಯಕ್ತಿ ಒಂದು ಪಕ್ಷ ಹಿಂದಿ ಸಾಂಸ್ಕೃತಿಕ ವಲಯದಲ್ಲಿದ್ದರೆ, ಇವರ ಹೆಸರು ರಾಷ್ಟ್ರವ್ಯಾಪಿಯಾಗಿ ಜನಜನಿತವಾಗುತ್ತಿದ್ದುದರಲ್ಲಿ ಸಂದೇಹವೇ ಇಲ್ಲ.

ಇವರ ಹೊಸಮನಿ ಸಿದ್ದಪ್ಪ ನಾಟಕವು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ಹೊಂದಿದ್ದು, ಹಾವೇರಿಯ ಹೊಸಮನಿ ಸಿದ್ದಪ್ಪನವರು ಅದರಲ್ಲಿ ತಮ್ಮದೇ ಆದ ಯೋಗದಾನವನ್ನು ನೀಡಿದ್ದಾರೆ. ಹೋರಾಟದ ದುರೀಣರುಗಳಾದ ನೆಹರು, ಗಾಂಧೀಜಿ, ನೇತಾಜಿಯವರಂತಹವರ ಒಡನಾಡಿಯಾಗಿದ್ದವರು. ಪ್ರಖ್ಯಾತ ಲೇಖಕ ಪಾಟೀಲ ಪುಟ್ಟಪ್ಪನವರ ಲೇಖನವನ್ನು ಆಧರಿಸಿ, ಜೊತೆಗೆ ಹಾವೇರಿ ಜಿಲ್ಲೆಯಾದ್ಯಂತ ಸಂಚರಿಸಿ, ವಿಷಯ ಸಂಗ್ರಹಣೆ ಮಾಡಿ, ಹೊಸಮನಿ ಸಿದ್ದಪ್ಪನವರ ಸಮಕಾಲೀನರಾಗಿದ್ದ ಚಿತ್ರದುರ್ಗದ ಮುರುಗರಾಜೇಂದ್ರ ಮಠದ ಪ್ರಸ್ತುತ ಲಿಂಗೈಕ್ಯ ಜಯದೇವ ಸ್ವಾಮೀಜಿಯವರಿಂದ ಸ್ವಾಮೀಜಿಯವರು ಗಾಂಧೀಜಿಯವರೊಂದಿಗೆ ಸಿದ್ದಪ್ಪನವರ ಬಗ್ಗೆ ವಿಚಾರ ವಿನಿಯಮ ಮಾಡಿರುವುದನ್ನೂ ಗಮನಿಸಿ, ಅದನ್ನೂ ತಮ್ಮ ಕ್ರುತಿಯಲ್ಲಿ ತಂದು, ತಮ್ಮ ಸಂಶೋಧನೆಯಿಂದ ಪಡೆದ ಮಾಹಿತಿಗಳನ್ನೂ ಸೇರಿಸಿ, ಇಂತಹ ವ್ಯಕ್ತಿಯನ್ನು ಸಾಮಾನ್ಯ ಜನತೆಗೆ ತಿಳಿಯುವಂತೆ ನಾಟಕರೂಪದಲ್ಲಿ ಜನರ ಮುಂದಿಟ್ಟಿರುವುದು ಹೆಮ್ಮೆಯ ವಿಷಯ.

ಸುಭಾಶ್ ಚಂದ್ರಬೋಸರು ಹಾವೇರಿಗೆ ಬೇಟಿಕೊಟ್ಟದ್ದನ್ನು ನಾಟಕವಾಗಿ ಪರಿವರ್ತಿಸಲು, ತಮ್ಮ ಇಳಿ ವಯಸ್ಸಿನಲ್ಲಿ ಕೊಲ್ಕತ್ತಾಗೇ ಹೋಗಿ, ದೇಶ ಭಾಷೆ ಅರಿಯದ ಜಾಗದಲ್ಲಿ ಬೋಸರ ಅಣ್ನನ ಮಗ ಶಿಶಿರ್ ಬೋಸರನ್ನು ಬೇಟಿ ಮಾಡಿ ವಿಷಯ ಸಂಗ್ರಹಣೆ ಮಾಡಿ, ಸೊಗಸಾದ ನಾಟಕವನ್ನು ಹೊರತಂದಿರುವುದು ಇವರ ರಂಗಜೀವನದಲ್ಲೊಂದು ಮೈಲಿಗಲ್ಲೇ ಸರಿ.

ಇಂತಹ ಪ್ರತಿಭಾವಂತ ಕಲಾವಿದರಿಗೆ ದೇವರು ಚಿರಕಾಲ ಆಯುರಾರೋಗ್ಯಗಳನ್ನು ಕೊಟ್ತು ಅವರಿಂದ ಇನ್ನೂ ಹೆಚ್ಚಿನ ಉತ್ಕೃಷ್ಟ ಕೃತಿಗಳನ್ನು ಹೊರತರಲೆಂದು ಭಗವಂತನಲ್ಲಿ ಪ್ರಾರ್ಥನೆ.

ಚನ್ನಬಸಯ್ಯ ಗುಬ್ಬಿಯವರ ವಿಳಾಸ: ನಂ. ೨೩, ವೇದಗಂಗಾ, ಪಾಂಡುರಂಗನಗರ, ತುಮಕೂರು ೫೭೨ ೧೦೧.

ಶ್ರೀಯುತರ ಹೊಸಮನಿ ಸಿದ್ದಪ್ಪ ನಾಟಕ ಕೃತಿಯು ಮಾರಾಟಕ್ಕೆ ದೊರಕುತ್ತಿದ್ದು, ಅವರಿಗೆ ರೂ.೪೯/- + ಪೋಸ್ಟೇಜ್ ಕಳುಹಿಸಿ ಪಡೆದುಕೊಳ್ಳಬಹುದು.

ಎ.ವಿ. ನಾಗರಾಜು
೯೮೪೫೪೯೬೪೫೯

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 335 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 2, 2007 - 9:46pm — Sunil Jayaprakash

ಉ: ೮೪ರ ಹರಯದ ಉತ್ಸಾಹಿ ರಂಗ ನಟ - ಚನ್ನಬಸಯ್ಯ ಗುಬ್ಬಿ

Sunil Jayaprakash's picture

ಚೆನ್ನಬಸವಯ್ಯ ಗುಬ್ಬಿಯವರಿಗೆ ಇಲ್ಲಿಂದಲೇ ಒಂದು ನಮಸ್ಕಾರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ - ಮುಂದುವರೆದ ಲೇಖನ
  • ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ - ಮುಂದುವರೆದ ಲೇಖನ
  • ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
  • ಇನ್ನೊಂದು ನಾಟಕ ನೋಡಲು ತಯಾರಾಗಿ!!
  • ವಿವೇಕ ಶಾನುಭಾಗರ ನಾಟಕ 'ರಂಗ ಶಂಕರ'ದಲ್ಲಿ
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 53 ಅತಿಥಿಗಳು ಆನ್ಲೈನ್ ಇರುವರು.


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator