ಕನಸ ಕದಿಯುವರಿಹರು ಹುಶಾರ್
ಹದಿ ಹರೆಯ ಮನದಲ್ಲಿ ವಿಷ ಬೀಜ ವಿದಳನ ನಡೆಸಿ ಕನಸ ಮಾರುವರಿಹರು ಎಚ್ಚರಿಕೆಯಿರಲೀಗ ಮನ ಮನೆಯ ಬಳಿಯಿಹರು ಕನಸ ಕದಿಯುವರಿವರು ಹುಶಾರ್ ನಮ್ಮೆಲ್ಲರ ನಡುವೆಯೇ ಜಗ್ಗನೆದ್ದು ಉದ್ಭವಿಸೋ ಈ ಅಸುರರು ಹದಿ ಮನಕೆ ಧಾಂಗುಡಿಯಿಟ್ಟು ದ್ವೇಶ ದಳ್ಳುರಿ ಬಿತ್ತಿ ಬೆಳೆಸಿ ಮಾರುವರು ದಳ್ಳಾಳಿಗಳಿಗೆ ಮನುಕುಲ ಸಂಕುಲದ ವೈರಿಗಳಿಗೆ ನೆಪಕೆ ಧರ್ಮದ ಹೆಸರ ಲೇಪಿಸಿ ಹುಚ್ಚು ಆವೇಶದ ದಾಹಕ್ಕೆ ಬಲಿ ಕೋಟಿ ಕೋಟಿ ಅಮಾಯಕ ಕನಸ ಲೂಟಿ ಕೊಳ್ಳುಮಾರುವರಿರುವ ಈ ವಿಶ್ವ ಸಂತೆಯಲಿ ಕನಸ ಕೊಳ್ಳುವವರಿಗೇನು ಬರ ದೇಶ ಭಾಷೆ ಜಾತಿ ಭೇಧ, ನ್ಯಾಯ ನೀತಿಗಳಿಲ್ಲದ ಇವರು ಅದನೆ ಬಿತ್ತಿ ಬೆಳೆಸುವರು ನಮ್ಮ ನಮ್ಮಲ್ಲಿ ಈ ಭಸ್ಮಾಸುರರು ಅವತರಿಸಿ ಬೆಳೆಯೋ ಮುನ್ನ ಅವತರಿಸಬೇಕಿದೆ ವಿಷ್ಣು- ಮೋಹಿನಿಯಾಗಿ ವಿಶ್ವಕ್ಕೆ ಶಾಂತಿಯನು ಕಲಿಸಿಹೆವು ನಾವು ಕಲಿಯಬೇಕಿದೆ ಸ್ವಾರ್ಥ ಅಳಿಸೊ ಪಾಠ ಕೋಟಿ ಕಂಗಳ ಕನಸ ನೆನಸಾಗಿಸಲು ಗೆಲ್ಲಬೇಕಿದೆ ಈ ಸಮರವನ್ನ ನಮಗೆ ನಾವೇ ಎಚ್ಚರಿಸ ಬೇಕಿದೆ ಈಗ ಕನಸು ಕದಿಯುವರಿಹರು ಹುಷಾರ್ ಗೋಪಿನಾಥ ರಾವ್ ಬಿ (ಮಂಗಳದಲ್ಲಿ ಪ್ರಕಟವಾಗಿದ್ದು)

- Login or register to post comments
- 220 hits
- Email this page





RSS: