ಸ್ವ ಸಹಾಯ ಸಹಕಾರಿಗಳು ಮಾಡಿದ ಕ್ರಾಂತಿ
ಒಂದು ಸಹಕಾರಿ ಸಂಸ್ಥೆ ಗ್ರಾಮದಲ್ಲಿ ಮತ್ತು ಅಲ್ಲಿನ ಜನರಲ್ಲಿ ಏನೆಲ್ಲಾ ಬದಲಾವಣೆ ತರಬಹುದೆಂದು ಕರೀಂ ನಗರ ಜಿಲ್ಲೆಯ ಗಟ್ಲ ನರ್ಸಿಂಗಾಪುರಕ್ಕೆ ಹೋದರೆ ನಿಮಗೆ ಸ್ಪಷ್ಟವಾಗುತ್ತದೆ. ಇಲ್ಲಿನ ಪ್ರತಿಭಾ ಮಹಿಳಾ ಸ್ವಕೃಷಿ ಪೊದಪು ಪರಸ್ಪರ ಸಹಾಯಕ ಸಹಕಾರ ಪರಿಮಿತ ಸಂಘಂ ಇಲ್ಲಿನ ಜನರಲ್ಲಿ ಅಂತಹ ಬದಲಾವಣೆ ತಂದಿದೆ.
"1991 ರಲ್ಲಿ ಸಿಡಿಎಫ್ ನಿಂದ ಆಗಮಿಸಿದ ಶ್ರೀಮತಿ ವಸುಂಧರಾ ಸ್ವ ಸಹಾಯ ಗುಂಪಿನ ಬಗ್ಗೆ ಮಾಹಿತಿ ನೀಡಿ ಅದರಲ್ಲಿ ತೊಡಗಲು ಪ್ರೇರೇಪಿಸಿದ ನಂತರ ಮೂರೇ ದಿನದಲ್ಲಿ 150 ಜನರನ್ನು ಸೇರಿಸಿಕೊಂಡು ಸಂಘವನ್ನು ಆರಂಭಿಸಿದೆವು. ನಂತರ ಪರಸ್ಪರ ಸಹಾಯ ಸಹಕಾರ ಕಾಯ್ದೆ ಜಾರಿಗೆ ಬಂದ ನಂತರ 1996 ರಲ್ಲಿ ನಮ್ಮ ಸಂಘವನ್ನು ಸಹಕಾರಿ ಸಂಸ್ಥೆಯಾಗಿ ನೋಂದಾಯಿಸಿಕೊಂಡು ಇನ್ನಷ್ಟು ಹುಮ್ಮಸ್ಸಿನಿಂದ ಚಟುವಟಿಕೆಯಲ್ಲಿ ತೊಡಗಿದೆವು" ಎಂದು ಅಧ್ಯಕ್ಷೆ ಶ್ರೀಮತಿ ಶೋಭಾರಾಣಿ ನೆನಪಿಸಿಕೊಳ್ಳುತ್ತಾರೆ.
ಈ ಸಂಘ ಆರಂಭವಾದ ನಂತರ ನಮ್ಮ ಹಳ್ಳಿಯಲ್ಲಿ ಖಾಸಗಿ ಲೇವಾದೇವಿ ವ್ಯವಹಾರ ಸಂಪೂರ್ಣವಾಗಿ ನಿಂತಿದೆ, ಜನರ ಆರ್ಥಿಕ ಮಟ್ಟವೂ ಸುಧಾರಿಸಿದೆ. ಮಹಿಳೆಯರಲ್ಲಿ ಆತ್ಮ ವಿಶ್ವಾಸ ಎದ್ದು ಕಾಣುತ್ತಿದೆ. ಜಾತಿಗಳ ಆಧಾರದ ಮೇಲೆಯೇ ಗಲ್ಲಿಗಳಿರುವ ಈ ಗ್ರಾಮದಲ್ಲಿ ನಮ್ಮ ಸಂಸ್ಥೆ ಆರಂಭವಾದಾಗಿನಿಂದ ಕೇವಲ ಆರ್ಥಿಕ ಸುಧಾರಣೆಯಲ್ಲ, ಜಾತಿಗಳ ನಡುವಿನ ಕಂದಕವೂ ಕಡಿಮೆಯಾಗಿದೆ ಎಂದು ಶೋಭಾರಾಣಿ ಹೇಳುತ್ತಾರೆ. 31 ಡಿಸೆಂಬರ್ 2003 ರಂದಿನಂತೆ 2 ಲಕ್ಷ ರೂಪಾಯಿ ಲಾಭ ಗಳಿಸಿದ ಈ ಸಂಘದಲ್ಲಿ ಇಂದು ಒಟ್ಟು 836 ಸದಸ್ಯರ ಬಲ ಹೊಂದಿದ ಈ ಸಂಘದ ಸದಸ್ಯರು ಮಾಡುವ ಕಡ್ಡಾಯ ಉಳಿತಾಯದ ಹಣ ರೂ. 13, 35, 150 /- ಮತ್ತು ಒಟ್ಟು ವಿವಿಧ ರೀತಿಯ ಉಳಿತಾಯ ಖಾತೆಯಲ್ಲಿರುವ ನಿಧಿ ರೂ 33 ಲಕ್ಷ.
ಈ ರೀತಿಯ ಸ್ವ ಸಹಾಯ ಸಹಕಾರಿ ಸಂಘಗಳು ಒಟ್ಟು ಗೂಡಿ ತಮ್ಮದೇ ಆದ ಒಕ್ಕೂಟವನ್ನು ರಚಿಚಿಕೊಂಡಿವೆ. ಅಂತಹ ಒಂದು ಒಕ್ಕೂಟ ಕೊತ್ತ ಪಲ್ಲಿಯ ಶ್ರೀ ವಿಶ್ವ ಭಾರತಿ ಮಹಿಳಾ ಪೊದಪು ಸಮಿತಿ. 1991 ರಲ್ಲಿ ಆರಂಭವಾದ ಇದು 1995 ರಲ್ಲಿ ಪರಸ್ಪರ ಸಹಾಯಕ ಕಾಯ್ದೆ ಜಾರಿ ಬಂದ ನಂತರ ಅದರಡಿ ನೋಂದಾಯಿತವಾಗಿದೆ. 11 ಮಹಿಳಾ ಪರಸ್ಪರ ಸಹಾಯಕ ಸಂಘಗಳು ಸೇರಿ ರಚಿಸಿಕೊಂಡ ಒಕ್ಕೂಟವಿದು. ಈ ಒಕ್ಕೂಟಕ್ಕೆ ಎಲ್ಲಾ ಸಂಘಗಳು ತಮ್ಮಲ್ಲಿ ಸಂಗ್ರಹವಾದ ಕಡ್ಡಾಯ ಉಳಿತಾಯ ಹಣದ ಶೇ 5 ನ್ನು ಕಳುಹಿಸುತ್ತಾರೆ. ಒಕ್ಕೂಟವು ಸದಸ್ಯ ಸಂಘಗಳಿಗೆ ಅಗತ್ಯವಿದ್ದಲ್ಲಿ ಅವುಗಳಿಗೆ ಈ ಕಡ್ಡಾಯ ಉಳಿತಾಯದ 85 ರಷ್ಟು ಸಾಲ ಒದಗಿಸುತ್ತವೆ. ಈ ಒಕ್ಕೂಟದ ಒಟ್ಟು ನಿಧಿ ರೂ 2 ಕೋಟಿಗಳಷ್ಟು. ಎಲ್ಲಾ ಸದಸ್ಯ ಸಂಘಗಳು ತಮ್ಮಲ್ಲಿನ ಎಲ್ಲಾ ಹಣವನ್ನು ಈ ಒಕ್ಕೂಟದಲ್ಲಿರುವ ಖಾತೆಯಲ್ಲಿಡುತ್ತಾರೆ. ಒಕ್ಕೂಟ ಬ್ಯಾಂಕ್ ಖಾತೆ ಹೊಂದಿರುತ್ತದೆ. ಸದಸಯ ಸಹಕಾರಿಗಳ ಆಗು ಹೋಗುಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಈ ಒಕ್ಕೂಟದಲ್ಲಿ ಚರ್ಚೆಯಾಗಿ ಅವುಗಳಿಗೆ ಸಮಾಧಾನ ಕಂಡುಕೊಳ್ಳುವ, ಸದಸ್ಯರುಗಳಿಗೆ ಮಾರ್ಗದರ್ಶನ ನೀಡುತ್ತದೆ. ಇದುವೇ ನಿಜವಾದ ಸದಸ್ಯ ನಿಯಂತ್ರಣ. ಪ್ರಜಾರಾಜ್ಯ.

- Login or register to post comments
- 875 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಖಂಡಿತ!
ಒಳ್ಳೆಯ ಮಾಹಿತಿ ಅನೂಪ್. ಹಲವು ಸ್ತ್ರೀ ಶಕ್ತಿ ಸಂಘಗಳನ್ನು ನಾನೂ ನೋಡಿದ್ದೇನೆ. ಪ್ರಜಾರಾಜ್ಯದ ಅಸ್ಥಿತ್ವ ನಿಂತಿರುವುದೇ ಇಂತಹ ಸಂಘಟನೆಗಳ ಕಾರ್ಯಾಚರಣೆಯಲ್ಲಿ.. ಆದರೆ ಹಲವು ಕಡೆ ಇಂತಹ ಸಂಘಗಳು ಕೇವಲ ಪುಸ್ತಕದಲ್ಲಿವೆಯೇ ಹೊರತು ವಾಸ್ತವಿಕವಾಗಿ ಇಂತಹ ಸಂಘಗಳಲ್ಲಿಯೂ ಶೋಷಣೆ ನಡೆಯುತ್ತಲೇ ಇದೆ. ಆದರೆ ನೀವು ಹೇಳಿದಂತಹ ಸಕ್ಸಸ್ ಸ್ಟೋರಿಗಳೇ ಪ್ರಜಾರಾಜ್ಯದ ಚಳುವಳಿಗೆ ಸ್ಪೂರ್ತಿ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಖಂಡಿತಾ ಸಾಧ್ಯ
ಪ್ರತಿಕ್ರಿಯಿಸಿದ್ದಕ್ಕೆ ಶ್ರೀ ನಾಡಿಗರಿಗೆ, ಶ್ರೀ ಶ್ರೀನಿವಾಸರಿಗೆ ಧನ್ಯವಾದಗಳು. ಇನ್ನು ಶ್ರೀ ಗೋಪೀನಾಥ ರಾವ್ ಇವರು ಕೇಳಿದ ಪ್ರಶ್ನೆ: ಕನ್ನಡ ಲೇಖಕ ಹಾಗೂ ಪ್ರಕಾಶಕರ ಗುಂಪು ಮಾಡುವುದು ಸಾಧ್ಯವೇ ಎಂಬುದಕ್ಕೆ ನಾನು ಹೇಳುವುದು ಖಂಡಿತಾ ಸಾಧ್ಯ. ಆದರೆ, ಒಂದು ಮಾತು ಸ್ಪಷ್ಟ. ಸ್ವ ಸಹಾಯ ಸಹಕಾರಿಗಳು ಸೇವಾ ಸಂಸ್ಥೆಗಳಲ್ಲ. ವ್ಯವಹಾರ ನಡೆಸುವ ಸಂಸ್ಥೆಗಳು. ವ್ಯವಹಾರವಿದ್ದ ಎಲ್ಲಾ ಚಟುವಟಿಕೆಗಳನ್ನು ಸಹಕಾರಿಯ ಅಡಿಯಲ್ಲಿ ತರಬಹುದು.
ತಾವೆಲ್ಲ ಸಹೃದಯತೆಯಿಂದ ಮುಂದೆ ಬಂದಲ್ಲಿ ನಿಮ್ಮ ಬೆಂಬಲಕ್ಕೆ ಸದಾ ಸಿದ್ಧ.
ಕನ್ನಡ ಲೇಖಕರ ಸ್ವಸಹಾಯ ಗುಂಪು ಮಾಡಲು ಸಾಧ್ಯವೇ?
ಒಂದು ಚಿಂತನೆ: ಲೇಖಕರನ್ನೂ ಪ್ರಕಾಶಕರನ್ನೂ ಒಟ್ಟುಗೂಡಿಸಿ ಸಂಪದದ ಪ್ರಾಯೋಜಕತ್ವದಲ್ಲಿ ಒಂದು ಸ್ವಸಹಾಯ ಗುಂಪು ಮಾಡಿದರೆ ಹೇಗೆ?
- ಗೋಪೀನಾಥ ರಾವ್
ಕಪ್ಪೆ ತಕ್ಕಡಿ
ಪ್ರಕಾಶಕರನ್ನು ಮತ್ತು ಲೇಖಕರನ್ನು ಒಟ್ಟಿಗೆ ಒಂದೇ ಮನೆಯಲ್ಲಿ ಸೇರಿಸೋಕ್ಕಾಗತ್ತಾ? ಪ್ರಯತ್ನವನ್ನಂತೂ ಮಾಡಬಹುದು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
Re: ಕನ್ನಡ ಲೇಖಕರ ಸ್ವಸಹಾಯ ಗುಂಪು ಮಾಡಲು ಸಾಧ್ಯವೇ?
ಸುಲಭದ ಮಾತಲ್ಲ. ಎಲ್ಲರೂ ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರು ಒಂದೊಂದು ತರಹ. ಯಾವಾಗ ಯಾರು ಹೇಗೆ ನಡೆದುಕೊಳ್ತಾರೆ ಅನ್ನೋದೇ ತಿಳಿಯೋದಿಲ್ಲ. ಸ್ವಲ್ಪ ದಿನಗಳ ಹಿಂದೆಯೇ ಈ ರೀತಿಯ ಕಹಿ ಅನುಭವಗಳಾಗಿರುವಾಗ ಎಲ್ಲರನ್ನೂ ಒಟ್ಟು ಹಾಕುವ ಸಾಹಸಕ್ಕಂತೂ ನಾನು ಕೈ ಹಾಕುವುದಿಲ್ಲ.
ಒಳ್ಳೆಯ ಮಾಹಿತಿ
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ತಾವು ನಬಾರ್ಡ್ ನಲ್ಲಿದ್ಡೀರಾ?
ಇಂತಹ ಇನ್ನೂ ಹೆಚ್ಚಿನ ಉತ್ತ್ತಮ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸಿ ಕೊಡುವಿರಾ?
ವಂದನೆಗಳೊಂದಿಗೆ
---
ತವಿಶ್ರೀನಿವಾಸ