Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಚನ ಚಿಂತನ: ಬಸವಣ್ಣ: ಬಿದಿರು ಆಗಬೇಕು

July 30, 2005 - 9:09am — olnswamy

ಬಿದಿರಲಂದಣವಕ್ಕು
ಬಿದಿರಲಿ ಸತ್ತಿಗೆಯಕ್ಕು
ಬಿದಿರಲ್ಲಿ ಗುಡಿಯು ಗುಡಾರವಕ್ಕು
ಬಿದಿರಲ್ಲಿ ಸಕಲ ಸಂಪದವೆಲ್ಲವು
ಬಿದಿರದವರ ಮೆಚ್ಚ
ನಮ್ಮ ಕೂಡಲಸಂಗಮದೇವ

ಈ ವಚನವು ಬಿದಿರನ್ನು ಒಂದು ರೂಪಕವಾಗಿ ಬಳಸಿಕೊಂಡು ನಮ್ಮ ಬದುಕು ಹೇಗೆ ಇರಬೇಕು ಎಂಬ ಆಶಯವನ್ನು ಹೇಳುತ್ತಿದೆ.
ಬಿದಿರು ಏನೇನೆಲ್ಲ ಆಗಬಹುದು- ದೊಡ್ಡವರನ್ನೋ ದೇವರನ್ನೋ ಮೆರೆಸುವ ಪಲ್ಲಕ್ಕಿಯಾಗುತ್ತದೆ, ಬಿಸಿಲು ಮಳೆಯಿಂದ ಕಾಪಾಡುವ ಛತ್ರಿಯಾಗುತ್ತದೆ, ಬಡವರ ಮನೆಯ ಚಾವಣಿಯೂಗುತ್ತದೆ, ಬಾವುಟದ ಕೋಲು ಕೂಡ ಆಗುತ್ತದೆ.
ಸೆಟೆದು ನಿಲ್ಲುವ ಮತ್ತು ಮುರಿಯದೆ ಬಾಗಿ ಬಳುಕುವ ಎರಡೂ ಗುಣ ಬಿದಿರಿಗೆ ಇದೆ. ಹಾಗೆ ಫ್ಲೆಕ್ಸಿಬಲ್ ಆಗದವರನ್ನು ಕೂಡಲಸಂಗಮದೇವ ಒಪ್ಪುವುದಿಲ್ಲ ಅನ್ನುವುದು ಬಸವಣ್ಣನ ಮಾತು.
ನಾವು ಮನಸ್ಸಿನೊಳಗೆ ಬೆಳಸಿಕೊಂಡ ಪೂರ್ವಾಗ್ರಹ, ನಮ್ಮದೇ ಸರಿ ಎಂಬ ಹಠ, ಲೋಕ ಹೀಗೇ ಇರಬೇಕು ಎಂಬ ಹುಂಬ ಮೊಂಡು ವಾದ ಇತ್ಯಾದಿಗಳಿಂದ ಸೆಟೆದುನಿಲ್ಲುವುದನ್ನು ಮಾತ್ರ ಕಲಿತಿದ್ದೇವೆ. ಅಥವ ನಮ್ಮ ಕೈಯಲ್ಲಿ ಏನೂ ಆಗುವುದಿಲ್ಲ, ನಾನು ಅಸಮರ್ಥ, ನಾನು ನಿರುಪಯುಕ್ತ ಎಂದು ನಮ್ಮನ್ನೇ ಕೀಳುಮಾಡಿಕೊಂಡು ಅನಗತ್ಯ ಮತ್ತು ದುರ್ಬಲ ವಿನಯವಂತರಾಗಿರುತ್ತೇವೆ.
ಮುರಿದೇನು ಬಾಗುವುದಿಲ್ಲ ಎಂಬ ಸೆಟೆವ ಗುಣ ಮತ್ತು ನಾನು ಕ್ಷುದ್ರ ಎಂಬ ಸುಳ್ಳು ವಿನಯ ಎರಡೂ ತಪ್ಪು. ಬಿದಿರಿನ ಹಾಗೆ ಈ ಎರಡೂ ಗುಣ ಮೈಗೂಡಿಸಿಕೊಳ್ಳುವುದು ಒಳ್ಳೆಯದೇನೋ! ಹಟ ಮತ್ತು ವಿನಯಗಳ ಹದವಾದ ಮಿಶ್ರಣದಿಂದ ಬಿದಿರಿನ ಹಾಗೆ ನಮ್ಮ ಬದುಕು ಕೂಡ ಅನೇಕ ಬಗೆಗಳಲ್ಲಿ ಲೋಕಕ್ಕೆ ಉಪಕಾರವಾದೀತು.

  • ಚಿಂತನೆ
Ornamental seperator
  • Login or register to post comments
  • 889 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 30, 2005 - 9:58am — tvsrinivas41

basavaNNanavaru badukannu

tvsrinivas41's picture

basavaNNanavaru badukannu bidirina jotege oLLeya hOlike mADiddAre. bidirina hAge gALi baMda kaDE tUrikoLLuvudannu aritavanE sariyAgi jIvana naDesaballa.

idoMdu uttama adhyAtma ciMtane. kliShTavAda saMskRutavannu toredu sulalitavAda kastUri kannaDadalli manadaTTu mADikoTTa basavaNNanavaru paramAtmarE aMdare atiSayOktiyalla

nanage sattige annuva pada gottiralE illa. adE Catri annuva pada saMskRutada mUla irabEku allavE?
urdu mattu hiMdiya Cat eMba pada kUDA Catri iMdalE baMdirabEku. Cat aMdre sUru ennuva artha.

ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
July 30, 2005 - 11:20am — olnswamy

ಸತ್ತಿಗೆ ಎಂಬ ಪದವನ್ನು ಕುರ

olnswamy's picture

ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
ಕಿಟೆಲ್ ನಿಘಂಟು ಸತ್ತಿಗೆ ಎಂಬ ಮಾತು ಛತ್ರಿಕೆ ಎಂಬ ಸಂಸ್ಕೃತ ಪದದ ತದ್ಭವ ಎಂದು ವಿವರಿಸುತ್ತದೆ. ಬಿತ್ತಿದ ಬೀಜಕ್ಕೆ ಸತ್ತಿಗೆ ಹಿಡಿದ ಹಾಗೆ ಎಂಬ ಗಾದೆಯನ್ನು ಉದಾಹರಣೆ ಕೊಟ್ಟಿದೆ. ಬಿಳಿಯ ಸತ್ತಿಗೆ ಎಂಬುದು ಸಿತಾತಪತ್ರ ಎಂಬ ಸಂಸ್ಕೃತ ಮಾತಿನ ಕನ್ನಡ ಅನುವಾದ.
ನಾಗಭೂಷಣ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಝೆನ್ ಕತೆಗಳು ೧೨: ಆರಿಹೋದ ದೀಪ
  • ಹಸೀನಾ ಮತ್ತು ಪಹೇಲಿ
  • ನಮನ-೦೩-ಸುದ್ದಿಗಾರರೇ ಸುದ್ದಿಯಾದಾಗ!
  • ಪದಬೆಳಗು:೨: ಬದುಕು!
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ
  • ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
  • ಚಂದಮಾಮನಿಗೆ ಅರವತ್ತು......
  • ವೈನ್ ಡೋರ್ಸ್ - ವಿಂಡೋಸ್ ತಂತ್ರಾಂಶದ ಲಿನಕ್ಸ್ ಎಮ್ಯುಲೇಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ಶ್ರೀಬಸವೇಶ್ವರರ ವಚನಗಳು
    May 10, 2008 - 9:16pm
  • sudhimail
    ಉ: lifestyle exhibition ನಲ್ಲಿ ಲಿನಕ್ಸು !!!
    May 10, 2008 - 8:34pm
  • raghava
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 10, 2008 - 6:41pm
  • csomsekraiah
    ಉ: ಶ್ರೀಬಸವೇಶ್ವರರ ವಚನಗಳು
    May 10, 2008 - 4:08pm
  • ವೈಭವ
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 10, 2008 - 3:17pm
  • Shivakumar.Revadi
    ಉ: ಉಳ್ಳವರು ಶಿವಾಲಯವ ಮಾಡುವರು
    May 10, 2008 - 2:45pm
  • Shivakumar.Revadi
    ಉ: ಡ್ರೈವರ್‌ ಎಂಬ ಆಪತ್ಬಾಂಧವ
    May 10, 2008 - 2:24pm
  • Shivakumar.Revadi
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 10, 2008 - 12:58pm
  • Shivakumar.Revadi
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 10, 2008 - 12:52pm
  • kadakolla05
    ಉ: ಹೀಗೊಂದು ಊರು !
    May 10, 2008 - 11:30am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator