ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಹಿನ್ನೀರಿನಲ್ಲಿ ಬೆರೆತ ಕಣ್ಣೀರು (ರಕ್ತಕಣ್ಣೀರು?)

December 18, 2007 - 3:16pm — ಮಂಜುಬೊಮ್ನಳ್ಳಿ
m4.JPG

ವಾರಾಹಿ ಹಿನ್ನಿರಿನಿಂದ ಸುತ್ತುವರೆಯಲ್ಪಟ್ಟಿರುವ ಕೆಲವು ಹಳ್ಳಿಗಳು ಚಿತ್ರವಿಚಿತ್ರ ಸಮಸ್ಯೆಗಳಿಂದ ಬಳಲುತ್ತಿವೆ. ಮೆಲ್ಸುಂಕ ಎಂಬ ಗ್ರಾಮವೊಂದರ ಕಥೆ ಇಲ್ಲಿದೆ.
ಯಡೂರಿನಲ್ಲಿ ಒಂದಿಬ್ಬರಿಗೆ ಮೆಲ್ಸುಂಕದ ದಾರಿ ತೋರಿಸಬನ್ನಿ ಎಂದು ಕರೆದರೆ ‘ಅದು ನಕ್ಸಲರ ಅಡ್ಡ ಕಣ್ರೀ’ ಎಂದು ಹೆದರಿಸಿದರು. ಅವರನ್ನು ಹೇಗೋ ಒಪ್ಪಿಸಿ ಮಾಣಿ ಆಣೆಕಟ್ಟೆಯ ಮೂಲಕ ಕರ್ರಗಿನ ಕಾಡಿನ ನಡುವೆ ಕಚಡಾ ರಸ್ತೆಯಲ್ಲಿ ೧೮ ಕಿಮೀ ದೂರದ ಉಳ್ತಿಗ ತಲುಪುವಷ್ಟರಲ್ಲಿ ನಮ್ಮ ಬೈಕು ಪಂಚರ್ ಅಗದಿದ್ದುದೇ ಅದ್ರಷ್ಟ. ಅಲ್ಲಿಂದ ಮೆಲ್ಸುಂಕಕ್ಕೆ ಕಾಲ್ನಡಿಗೆ.
ಮೇಲ್ಸುಂಕದ ಜನ ೨೫ ವರ್ಷಗಳ ಹಿಂದೆ ಮುಳುಗಡೆಯ ಪರಿಹಾರ ಪಡೆದಿದ್ದಾರೆ, ಅದರೆ ಕಂತುಗಳಲ್ಲಿ. ಕೈಯಲ್ಲಿ ಹಣ ನಿಂತಿಲ್ಲ, ನೀರು ಹತ್ತದ ಎತ್ತರದ ಜಾಗದಲ್ಲಿ ಮನೆ-ಜಮೀನು ಮಾಡಿದ್ದಾರೆ. ಅಲ್ಲಿಂದ ಕೆಪಿಸಿಯ ನಿರ್ಭಂಧಿತ ಪ್ರದೇಶದಲ್ಲಿ ಅವರ ವಾಸ. ರಸ್ತೆ-ಕರೆಂಟು ಅಂತ ಯಾವ ಸೌಲಭ್ಯವನ್ನೂ ಅಲ್ಲಿ ಕೇಳಬೇಡಿ. ಏನೇ ಬೇಕಾದರೂ ಯಡೂರಿಗೆ ನಡೆಯಲೇಬೇಕು. ಒಂದಿಷ್ಟು ತೋಟ ಗದ್ದೆ, ಕಣ್ಣು ಹರಿದಷ್ಟು ದೂರ ಹಿನ್ನೀರು, ಬಿದಿರಿನ ಬುಟ್ಟಿ ಹೆಣೆಯುವುದು ಇದೇ ಜೀವನ. ನಕ್ಸಲರಿಗೆ ಆದರ್ಷ ಅಡಗುತಾಣ.
ದಟ್ಟ ಕಾಡಿನ ನಡುವೆ ಉಡುಪಿ ಜಿಲ್ಲೆಯ ಕೆಳಸುಂಕಕ್ಕೆ ಇಲ್ಲಿಂದ ಒಂದು ತಾಸಿನ ಕಾಲುಹಾದಿ. ಅಮಾಸೆಬೈಲು ಪ್ರದೇಶದಲ್ಲಿ ನಕ್ಸಲರಿಗೂ, ಪೋಲೀಸರಿಗೂ ಘರ್ಷಣೆ ಅದಾಗಲೆಲ್ಲ ನಕ್ಸಲರು ಮೇಲ್ಸುಂಕಕ್ಕೆ ಬರುತ್ತಾರೆ ಅನ್ನೋದು ಪೋಲೀಸರಿಗೂ ಗೊತ್ತು. ಅಲ್ಲಿಗೆ ಹೋಗುವುದು ಎಷ್ಟು ಅಪಾಯದ ಕೆಲಸ ಅಂತಾನೂ ಗೊತ್ತು.
ಅಲ್ಲಿ ನಕ್ಸಲರನ್ನು ನೆಂಟರು ಅಂತ ಕರೀತಾರೆ. “ಅವರಿಂದ ನಮ್ಗೆ ಏನೂ ತೊಂದರೆ ಇಲ್ಲ. ಅರಣ್ಯ ಇಲಾಖೆಯವರ ಕಾಟವೂ ತಪ್ಪಿದೆ” ಅಂತಾರೆ ಜನ. ಹಾಗಂತ ಪೊಲೀಸರ ಬಗ್ಗೆನೂ ಅವರಿಗೆ ಏನೂ ಅಸಮಾಧಾನ ಇಲ್ಲ. ಈದು ಎನ್ ಕೌಂಟರ್ ನಲ್ಲಿ ಸತ್ತ ಪಾರ್ವತಿ ಈ ಊರಿನವಳು. ಇಲ್ಲಿಯ ಯುವಕರು ನಿಧಾನಕ್ಕೆ ನಕ್ಸಲವಾದದತ್ತ ಆಕರ್ಷಿತರಾಗುತ್ತಿದ್ದಾರೆ ಅನ್ನೋದೇ ಆತಂಕ.
ಹಳ್ಳಿಗರ ಪ್ರಕಾರ ಅಭಿವ್ರದ್ಧಿ ಆದರೆ ಸಮಸ್ಸ್ಯೆ ಬಗೆಹರಿದೀತು. ಹಿನ್ನೀರಿಗೊಂದು ಸೇತುವೆ, ರಸ್ತೆ, ವಿದ್ಯುತ್ತು, ವಾಹನ ಸಂಚಾರ, ಹೀಗೆ. ಇನ್ನು ಕೆಲವರಿಗೆ ಬೇರೆ ಊರಿನಲ್ಲಿ ಜಾಗ, ಒಂದಿಷ್ಟು ಹಣ, ಕೆಪಿಸಿಯಲ್ಲಿ ಉದ್ಯೋಗ ತಮ್ಮೆಲ್ಲ ಕಷ್ಟಗಳಿಗೂ ಅಂತ್ಯ ಹಾಡೀತು ಅನ್ನುವ ಅನಿಸಿಕೆ.

  • ಪ್ರವಾಸ ಕಥನ
~.~
  • Login or register to post comments
  • 304 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಳೆಕಾಡಿನ ಮಡಿಲಲ್ಲಿ ಅಪರೂಪದ ಅಬ್ಬಿ
  • ಕದಡುತ್ತಿರುವ ಮಲೆನಾಡಿನ ನೆಮ್ಮದಿ..!
  • ನಕ್ಸಲರ ನಾಡಿನಲ್ಲೊಂದು ಚಾರಣ
  • ನಮ್ಮುರ ರಸ್ತೆ
  • ಅವಕ್ಕೆ ಅದೆಲ್ಲಾ ಯಾಕೆ ಅರ್ಥವಾಗಲ್ಲ…?!
Syndicate content

ಲೇಖಕರು

ಮಂಜುಬೊಮ್ನಳ್ಳಿ's picture

ಪರಿಚಯ

ಇರಲೇ ಬೇಕಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator