ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಭಗವದ್ಗೀತೆಯ ಬೆಳಕಿನಲ್ಲಿ (ಮುಂದುವರಿದುದು)

December 22, 2007 - 9:01am — csomsekraiah

ಯೋಯಂ ಯೋಗಸ್ತ್ವಯಾ ಪ್ರೋಕ್ತಾಃ ಸಾಮ್ಯೇನ ಮಧುಸೂದನ /
ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ಸ್ಟಿತಿಂ ಸ್ಥಿರಾಮ್ //

ಚಂಚಲಂ ಹಿ ಮನಃ ಕೃಷ್ಣ ಪ್ರಮಾಥೀ ಬಲವಧೃಢಮ್ /
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ // ಅ ೬ ಶ್ಲೋ ೩೩-೩೪

ಮನಸ್ಸು ಅತ್ಯಂತ ಚಂಚಲವಾದುದು , ಪುಂಡವಾದುದು , ಬಲಿಷ್ಟವಾದುದು , ಮನಸ್ಸನ್ನು ಬಿಗಿಹಿಡಿಯುವುದೆಂದರೆ , ಗಾಳಿಯನ್ನು ಬಟ್ಟೆಯಲ್ಲಿ ಬಿಗಿದು ಕಟ್ಟುವಷ್ಟೇ ಕಷ್ಟಸಾಧ್ಯವಾದ ಕೆಲಸ . ಹೀಗಿರುವಾಗ ನಿನ್ನ ಉಪದೇಶದಿಂದ ಪ್ರಾಪ್ತವಾಗುವ ಯೋಗವು ಹೇಗೆ ಸ್ಥಿರವಾಗಿ ನಿಲ್ಲಬಲ್ಲದು ? ಎಂದು ಅರ್ಜುನನು ಸಂಶಯಗ್ರಸ್ತನಾಗಿ ಕೃಷ್ಣನನ್ನು ಮೇಲಿನ ಶ್ಲೋಕಗಳಲ್ಲಿ ಪ್ರಶ್ನಿಸುವನು . ಮನಸ್ಸು ಚಂಚಲವಾದುದು ಎಂಬ ಅರ್ಜುನನ ಗ್ರಹಿಕೆಗೆ , ವಾಸ್ತವಾದಿಯಾದ ಕೃಷ್ಣನು , ಹೌದು ಎಂದೇ ಉತ್ತರಿಸುವನು .

ಅಸಂಶಯಂ ಮಹಾ ಬಾಹೋ ಮನೋದುರ್ನಿಗ್ರಹಂ ಚಲಮ್/
ಅಭ್ಯಾಸೇನತು ಕೌಂತೇಯ ವೈರಾಗ್ಯೇಣಚ ಗೃಹ್ಯತೇ // ಅ ೬ ಶ್ಲೋ ೩೫

ನಿಜ , ಮನಸ್ಸು ನಿಗ್ರಹಿಸಲು ಕಠಿಣವಾದುದು , ಚಂಚಲವಾದುದು , ಈ ಮಾತಿಗೆ ಸಂಶಯವಿಲ್ಲ .ಆದರೆ ವೈರಾಗ್ಯದಿಂದ , ಅಭ್ಯಾಸದಿಂದ ಅದನ್ನು ಬಿಗಿ ಹಿಡಿಯಬಹುದು . ಎಂಬ ಭರವಸೆ ವಾಸುದೇವನಿಂದ ಬರುತ್ತದೆ .

ಶನೈ ಶನೈರುಪರಮೇದ್ಬುದ್ಯಾ ಧೃತಿ ಗೃಹೀತಯಾ /
ಆತ್ಮ ಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ //

ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ /
ತತಸ್ತತೋ ನಿಯಮ್ಯೇತದಾತ್ಮನ್ನೇವ ವಶಂ ನಯೇತ್ // ಅ೬ ಶ್ಲೋ ೨೫-೨೬

ಮೆಲ್ಲ ಮೆಲ್ಲ ನೆ ಧೃಢವಾದ ಬುದ್ದಿಯಿಂದ , ಅಸ್ಥಿರವಾದ , ಚಂಚಲವಾದ ಮನಸ್ಸು ಯಾವ ಯಾವ ದಾರಿಗಳಲ್ಲಿ ಮುನ್ನುಗ್ಗಲೆತ್ನಿಸುವುದೋ , ಅಲ್ಲಿಯೇ ಅದನ್ನು ಕಟ್ಟಿ ವಶ ಮಾಡಿಕೊಳ್ಳುತ್ತಾ , ಆತ್ಮನಲ್ಲಿ ಸ್ಥಿರ ಮಾಡಿ , ಶಾಂತಿಯನ್ನು ದೊರಕಿಸಿಕೊಳ್ಳಬೇಕೆಂದು , ಮನೋನಿಗ್ರಹದ ಉಪಾಯಗಳನ್ನು ಸೂಚಿಸಲಾಗಿದೆ .

ಭಗವದ್ಗೀತೆ ಪ್ರಾರಂಭವಾಗಿದ್ದೇ - ಒಂದು ಉದ್ವಿಜ್ಝ ಮನಃಸ್ಥಿತಿಯಲ್ಲಿ ,ಸಮರ ಭೂಮಿಯಲ್ಲಿ ,ತನ್ನವರನ್ನೇ ನಾಶಪಡಿಸಬೇಕಾದ ಕ್ರೌರ್ಯಕ್ಕೆ ಹೇಸಿ ,ಕಿಂ ಕರ್ತವ್ಯಮೂಢನಾಗಿ , ಗಲಬಿಲಿಯ ಸ್ಥಿತಿಯಲ್ಲಿ ಗೊಂದಲಗೊಂಡಿದ್ದ ಅರ್ಜುನನ ಮನಸ್ಸನ್ನು , ಶಾಂತ ಧೃಢ ಸ್ಥಿತಿಗೆ ತರುವ ಉದ್ಯ್ಮಮದಲ್ಲಿ ,ತತ್ವಜ್ಝಾನದ ಮಹಾಪೂರವನ್ನೇ ಕೃಷ್ಣ ಹರಿಸಬೇಕಾಗಿ ಬಂತು . ಸಹಜವಾಗಿಯೇ ಮನಸ್ಸಿನ ವಿವಿಧ ಮುಖಗಳ ಪರಿಚಯ ,ಇಲ್ಲಿಂದಲೇ ಗೀತೆಯಲ್ಲಿ ತೊಡಗುತ್ತದೆ . ಉದ್ವಿಜ್ಝತೆಯಿಂದ, ಶಾಂತಿಯ ನಡುವಣ ಮನಸ್ಸಿನ ಎಲ್ಲ ಸ್ತರಗಳೂ , ವಿವಿಧ ರೂಪದಲ್ಲಿ ಇಲ್ಲಿ ತೆರೆದುಕೊಳ್ಳುತ್ತವೆ .

ಪ್ರತಿಯೊಂದು ಮನಸ್ಸಿಗೂ ಒಂದು ಸಹಜ ಸ್ವಭಾವವಿರುತ್ತದೆ , ಎಂದು ಗೀತೆ ಪ್ರತಿಪಾದಿಸುತ್ತದೆ . ಪ್ರತಿಯೊಬ್ಬ ವ್ಯಕ್ತಿ ಕೂಡಾ , ಅವನ ಮನಸ್ಸು ಹೇಗೋ, ಅವನು ಹಾಗೆ .ಮನಸ್ಸಿನ ಮೇಲೆ ಪರಿಸರದ ಪ್ರಭಾವಕ್ಕಿಂತ , ಸಹಜ ಸ್ವಭಾವದ ಪ್ರಭಾವವೇ ಹೆಚ್ಚು ಪರಿಣಾಮಕಾರಿ . ಅರಮನೆಯ ಸಮಸ್ತ ಭೋಗಗಳೂ ; ಸುಂದರಳಾದ ಮೋಹದ ಮಡದಿ , ಮುದ್ದು ಮಗು , ಇವಾವೂ ಸಿದ್ದಾರ್ಥನನ್ನು ತಡೆದು ನಿಲ್ಲಿಸಲು ಸಮರ್ಥವಾಗಲಿಲ್ಲ .ಅವನ ಸಹಜ ಸ್ವಭಾವವೇ ವಿಜಯಿಯಾಗಿ ,ಅವನು ಬುದ್ದನಾದ . ಅಪರೂಪದ ಪ್ರಸಂಗಗಳಲ್ಲಾದರೂ ಕೇವಲ ಮೂರು ನಾಲ್ಕು ವರ್ಷಕ್ಕೆಲ್ಲಾ , ಬೆರಳು ಕಚ್ಚುವ ರೀತಿಯಲ್ಲಿ ಸಂಗೀತ ಸಾಧನೆಯನ್ನು ಮೆರೆಯುವ ಮಕ್ಕಳು ,ಈ ಮನಸ್ಸಿನ ಸಹಜ ಸಾಮರ್ಥ್ಯಕ್ಕೆ ಒಂದು ಉದಾಹರಣೆ . ಒಂದೇ ಪರಿಸರದಲ್ಲಿ ಅದೇ ತಂದೆ ತಾಯಿಗಳ ಮಕ್ಕಳು ,ಪೂರ್ತೀ ವಿಭಿನ್ನ ರೀತಿಯ ಗುಣ , ಸ್ವಭಾವಗಳನ್ನು ಹೊಂದಿರುವುದು ಎಲ್ಲರ ಗಮನಕ್ಕೆ ಬರುವ ಸಾಮಾನ್ಯ ವಿಚಾರ . ಇದು ಮನಸ್ಸಿನ ಸ್ವಭಾವಸಿದ್ದ ಗುಣವನ್ನು ರುಜುವಾತು ಪಡಿಸುತ್ತದೆ . ಮನಸ್ಸಿನ ಈ ಗುಣವನ್ನು ಅರಿತ ಕೃಷ್ಣ ಅರ್ಜುನನಿಗೆ ಚುಚ್ಚಿ ನುಡಿಯುತ್ತಾನೆ ," ನಾನು ಯುದ್ದ ಮಾದುವುದಿಲ್ಲ , ಎಂಬ ನಿನ್ನ ಮಾತೇ ಸುಳ್ಳು ; ತೋರಿಕೆಯದು , ನಿಜಕ್ಕೂ ನೀನು ಯುದ್ದ ಮಾಡಿಯೇ ತೀರುತ್ತೀಯೆ ,ಯುದ್ದ ಮಾಡುವುದೇ ನಿನ್ನ ಸಹಜ ಸ್ವಭಾವ,, .

ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ /
ಮಿಥ್ಯೈವ ವ್ಯವಸಾಯಸ್ತೇ ಪ್ರಕೃತಿಸ್ತ್ವಾಮ್ ನ್ಬಿಯೋಕ್ಷತಿ //

ಸ್ವಭಾವಜೇನ ಕೌಂತೇಯ ನಿಬದ್ದಃ ಸ್ವೇನ ಕರ್ಮಣಾ /
ಕರ್ತುಂ ನೇಚ್ಚಸಿಯನ್ಮೋಹಾತ್ ಕರಿಷ್ಯಸ್ಯವಶೋಪಿ ತತ್ // ಅ ೧೮ ಶ್ಲೊ ೫೯-೬೦

ಅರ್ಜುನನ ಸ್ವಭಾವವನ್ನು , ಪೂರ್ತಿ ಅರಿತ ಕೃಷ್ಣ , ಧೃಢ ಕಂಠದಿಂದ ಹೇಳುವ ಮಾತುಗಳು ಮೇಲಿನ ಶ್ಲೋಕದವು .ಕುಮಾರ ವ್ಯಾಸನು , ಅರ್ಜುನನ ಈ ಕ್ಷಾತ್ರ ಸ್ವಭಾವವನ್ನು ಜನಮೇಜಯನಿಗೆ ಸೂತ ಪುರಾಣಿಕರ ಬಾಯಲ್ಲಿ ಇನ್ನೊಂದು ರೀತಿಯಲ್ಲಿ ಹೇಳಿಸುತ್ತಾನೆ .

  • ಜ್ಞಾನವಾಹಿನಿ
~.~
  • Login or register to post comments
  • 214 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸ್ಸು ( ಮತ್ತೂ ಮುಂದುವರಿದುದು)
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು (ಇನ್ನೂ ಮುಂದುವರಿದುದು )
  • ವಚನ ಚಿಂತನ: ೬: ಮನಸ್ಸು ಕೋತಿ
  • ಮನಸ್ಸಿನ ಮನಸ್ಸೆ...
  • ವಚನ ಚಿಂತನ: ೫: ಮನಸ್ಸು ಘನ
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಂಗಾರದ ಅರಮನೆ
  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚಿನ ಪ್ರತಿಕ್ರಿಯೆಗಳು

  • sirisobagu
    ಉ: ನನ್ನವಳು
    August 22, 2008 - 10:15am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 50 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator