ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು (ಇನ್ನೂ ಮುಂದುವರಿದುದು )

December 22, 2007 - 1:51pm — csomsekraiah

ತ್ರಿಗುಣಗಳೇ ಜಗತ್ತಿನ ಮೂಲ ಸ್ವಭಾವಗಳೆಂದು ಗುರುತಿಸಲ್ಪಟ್ಟ ನಂತರ, ಈ ಮೂರು ಗುಣಗಳಾಚೆಗಿನದೇ ಪರತತ್ವವೆಂದು ಗೀತೆ ಪ್ರತಿಪಾದಿಸುತ್ತದೆ .

ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾನುಪಸ್ಯತಿ /
ಗುಣೇಭ್ಯಶ್ಚ ಪರಂವೇತ್ತಿ ಮದ್ಭಾವಂ ಸೋಧಿಗಚ್ಚತಿ // (ಭಗವದ್ಗೀತೆ ಅ ೧೪ , ಶ್ಲೋ ೧೯)

ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹ ಸಮುದ್ಭವಂ /
ಜನ್ಮ ಮೃತ್ಯು ಜರಾ ದುಃಖೈರ್ವಿಮುಕ್ತೋಮೃತಮಶ್ನುತೇ //( ಭಗವದ್ಗೀತೆ ಅ ೧೪ ಶ್ಲೋ ೨೦)

ದೇಹದಲ್ಲೇ ಉತ್ಪನ್ನವಾಗುವ , ಈ ಮೂರು ಗುಣಗಳಾಚೆಗೆ ನಡೆದು ಜನನ , ಮರಣ , ಮುಪ್ಪು , ಸಂಕಟಗಳಿಂದ ಮುಕ್ತನಾದ ಆತ್ಮನು , ಅಮೃತ ಪದವನ್ನು ಪಡೆಯುವನು .

ಇಂಥ ಅವಸ್ಠೆಗೆ ಮುಟ್ಟುವ ಪೂರ್ವದಲ್ಲಿ , ಈ ಮನಸ್ಸು ಅನುಭವಿಸುವ , ಆಶಿಸುವ , ಪತಿತವಾಗುವ , ಹಾಗೆಯೇ ಉದ್ದಾರದ ಮಾರ್ಗಗಳನ್ನು ಕಂಡುಕೊಳ್ಳುವ ರೀತಿಗಳನ್ನು, ಭಗವದ್ಗೀತೆಯಷ್ಟು ಪರಿಣಾಮಕಾರಿಯಾಗಿ ಮಂಡಿಸಿರುವ ತಾತ್ವಿಕ ಗ್ರಂಥ , ತುಂಬಾ ಅಪರೂಪ . ಈ ಅವಸ್ಥೆಗೆ ಮುಟ್ಟಿದ ನಂತರದ ಸ್ಥಿತಿಯನ್ನೂ ಸಹ , ಅಷ್ಟೇ ಪರಿಣಾಮಕಾರಿಯಾಗಿ ಗೀತೆ ಚಿತ್ರಿಸುತ್ತದೆ .

ಧ್ಯಾಯತೋ ವಿಷಯಾನ್ ಪೂಂಸಃ ಸಂಗಸ್ತೇಷೂಪಜಾಯತೇ /
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ //

ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ /
ಸ್ಮೃತಿ ಭ್ರಂಶಾದ್ಬುದ್ದಿನಾಶೋ ಬುದ್ದಿ ನಾಶಾತ್ಪ್ರಣಶ್ಯತಿ // (ಭಗವದ್ಗೀತೆ ಅ ೨ , ಶ್ಲೋ ೬೨-೬೩

ವಿಷಯಗಳನ್ನೇ ಧ್ಯಾನಿಸುವವನಿಗೆ ವಿಷಯಾಸಕ್ತಿಯುಂಟಾಗುತ್ತದೆ . ಆಸಕ್ತಿಯು ಕಾಮಕ್ಕೆ ಮೂಲವಾಗುತ್ತದೆ , ಕಾಮವು ತಡೆ ಹಿಡಿದರೆ ಕ್ರೋಧವು ; ಕ್ರೋಧದಿಂದ ಎಚ್ಚರ ತಪ್ಪುವಿಕೆ , ಎಚ್ಚರ ತಪ್ಪುವಿಕೆಯಿಂದ ಬುದ್ದಿ ನಾಶ , ಬುದ್ದಿ ನಾಶವಾದ ವ್ಯಕ್ತಿ ಕೇಡಿಗೀಡಾಗುತ್ತಾನೆ .

ಇದು ಮನಸ್ಸಿನ ಪತನದ ಒಂದು ಪ್ರಭಾವಿ ಚಿತ್ರಣ . ಆಧುನಿಕ ಮನಶ್ಶಾಸ್ತ್ರಜ್ಝರು, ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ ಎರಡು ಸ್ತರಗಳಿರುತ್ತವೆಂದು ಪ್ರತಿಪಾದಿಸುತ್ತಾರೆ . ಒಂದು ಜಗತ್ತಿನ ವ್ಯಾಪಾರದಲ್ಲಿ ನಿರತವಾದ ತೋರ ಮನಸ್ಸೆಂದೂ ;ಇನ್ನೊಂದು ಇಂದ್ರಿಯಗಳ ಗ್ರಹಿಕೆಗೆ ಜವನಿಕೆಯಾದ ಆಳ ಮನಸ್ಸೆಂದೂ , ಈ ಆಳ ಮನಸ್ಸೆಂಬುದು ತೋರ ಮನಸ್ಸು ರೂಢಿಸಿಕೊಂಡ , ನಾಗರಿಕ ಶಿಷ್ಟಾಚರಗಳಿಗೆ ಹೊರತಾದ ,ಪ್ರಾಕೃತಿಕ ಸ್ವಭಾವದ ; ಎಲ್ಲ ಮೃಗೀಯ ಭಾವನೆಗಳಿಂದ ಕೂಡಿರುವ ಮತ್ತು ವಿಕಾಸದ ಹಂತದಲ್ಲಿ ,ಜೀವಿ ಮೆಟ್ಟಿ ಬಂದ ಮೆಟ್ಟಿಲುಗಳ , ಅನುಭವಗಳ ಮುದ್ರಣಗಳಿಂದ ಕೂಡಿದ , ಸಂಕೀರ್ಣ ಸ್ವಭಾವದ ವಿಭಾಗವೆಂದೂ ಮನಸ್ಸನ್ನು ವಿಭಾಜಿಸುತ್ತಾರೆ .

ತೋರ ಮನಸ್ಸಿನಲ್ಲಿ ಅದುಮಲ್ಪಟ್ಟ ಕಾಮನೆಗಳೇ, ವ್ಯಕ್ತಿಯ ಅರಿವಿಗೆ ಬಾರದಂತೆ ಆಳ ಮನಸ್ಸಿನಲ್ಲಿ ಹುದುಗಿರುತ್ತವೆಂದೂ ,ಆದರೆ ಅವು ನಾಶವಾಗಿರುವುದಿಲ್ಲವೆಂದು ಪ್ರತಿಪಾದಿಸುತ್ತಾರೆ .ಸಂದರ್ಭ ಒದಗಿದಾಗ ಸ್ವಪ್ನಾದಿಗಳಲ್ಲಿ ವಿಕೃತ ರೂಪ ಧರಿಸಿ, ಅಥವಾ ಬೇರಾವುದೋ ಅಸಹಜ ರೂಪದಲ್ಲಿ ಅವು ಹೊರ ಬರಲು ತುಡಿಯುತ್ತಿರುತ್ತವೆ .

ಈ ಆಳ ಮನಸ್ಸು ಮತ್ತು ತೋರ ಮನಸ್ಸಿನ ನಡುವಣ ಘರ್ಷಣೆಯೇ , ಅನೇಕ ಮನೋ ರೋಗಗಳೀಗೆ ; ಮನೋದೈಹಿಕ ಬೇನೆಗಳಿಗೆ ಕಾರಣವಾಗಿರುತ್ತದೆ .

ಆಧುನಿಕ ಮನಶ್ಶಾಸ್ತ್ರಜ್ಝರ ಅಭಿಪ್ರಾಯದಲ್ಲಿ , ಅದುಮಿಟ್ಟ ಕಾಮ ಭಯಂಕರ ಶತ್ರು ; ಅದು ಹುಚ್ಚಿನಲ್ಲಿ ಬುದ್ದಿ ಮಾಂದ್ಯದಲ್ಲಿ ಪರಿಣಮಿಸಬಹುದು .
ಗೀತೆಯ ಮೇಲಣ ಶ್ಲೋಕಗಳು ಆಧುನಿಕ ಅಭಿಪ್ರಾಯಗಳನ್ನೇ ಪ್ರತಿಪಾದಿಸುತ್ತವೆ .

ಇಂದ್ರಿಯಾಣಂ ಹಿ ಚರತಾಂ ಯನ್ಮನೋನು ವಿಧೀಯತೇ /
ತದಸ್ಯ ಹರತಿ ಪ್ರಜ್ಝಾಂ ವಾಯುರ್ನಾವಮಿವಾಂಭಸಿ // ಭಗವದ್ಗೀತೆ ಅ ೨ ಶ್ಲೋ ೬೭

ಮನಸ್ಸು ಚಂಚಲವಾದ ಇಂದ್ರಿಯಗಳ ಹಿಂದೆ ಹರಿಯತೊಡಗಿದರೆ , ಬಿರಗಾಳಿಯು ಸಾಗರದಲ್ಲಿ ನಾವೆಯನ್ನು ಎಳೆದೊಯ್ಯುವಂತೆ ,ಮನಷ್ಯನ ಬುದ್ದಿಯನ್ನು ದೆಶೆಗೆಡಿಸಿ ಎಳೆದೊಯ್ಯುವುಇದು .

ಈ ರೀತಿಯ ಪತನ ಮುಖಿಯಾದ ಮನಸ್ಸಿನ ಚಿತ್ರಣವನ್ನು ಕೊಟ್ಟಿರುವಂತೆಯೇ, ಧೃಢ ಮನಸ್ಸಿನ ಚಿತ್ರಣವನ್ನೂ ಸಹ ಗೀತೆ ಸಮರ್ಥವಾಗಿ ಚಿತ್ರಿಸುತ್ತದೆ .

ಅಪೂರ್ಯಮಾಣಮಚಲ ಪ್ರತಿಷ್ಟಂ /
ಸಮುದ್ರಮಾಪಃ ಪವಿಶಂತಿ ಯದ್ವತ್ /
ತದ್ವತ್ ಕಾಮಾಯಂ ಪ್ರವಿಶಂತಿ ಸರ್ವೇ /
ಸ ಶಾಂತಿಮಾಪ್ನೋತಿ ನ ಕಾಮ ಕಾಮಿ //

ಎಲ್ಲ ಕಡೆಗಳಿಂದಲೂ ಹರಿದು ಬರುವ ನೀರಿನಿಂದ ತುಂಬಲ್ಪಡುತ್ತಿದ್ದರೂ ,ಅಚಲವು ಸ್ಥಿರವೂ ಆಗಿರುವ ಸಮುದ್ರವನ್ನು ಸಕಲ ಪ್ರವಾಹಗಳೂ ಬಂದು ಸೇರುವಂತೆ ; ಎಲ್ಲ ಕಾಮನೆಗಳು ಬಂದು ಧುಮುಕಿದರೂ ,ಯಾವನ ಮನಸ್ಸು ಸ್ಥಿರವೋ ? ಅವನು ಶಾಂತಿಯನ್ನು ಪಡೇಯುವನು . ಕಾಮನೆಗಳ ಬೆನ್ನು ಬಿದ್ದವನಿಗೆ ಶಾಂತಿಯು ನಿಲುಕಲಾರದು .

ಈ ರೀತಿಯ ಧೃಢ ಮನಸ್ಸನ್ನು ಸಂಪಾದಿಸಲು , ಬೇಕಾದ ಸಾಧನ ಸಲಕರಣೆಗಳನ್ನು ,ಸಾಧನೆಗಳನ್ನು ಅಷ್ಟೇ ಪರಿಣಮಕಾರಿಯಾದ ರೀತಿಯಲ್ಲಿ , ಗೀತೆಯು ೫ ಮತ್ತು ೬ನೆಯ ಅಧ್ಯಾಯಗಳಲ್ಲಿ ವಿವರಿಸುತ್ತದೆ . ಈ ದೃಷ್ಟಿಯಿಂದ ಭಗವದ್ಗೀತೆ ಬರಿಯ ಮನಶ್ಶಾಸ್ತ್ರೀಯ ಗ್ರಂಥ ಮಾತ್ರವಾಗಿರದೆ , ಮನೋಚಿಕಿತ್ಸಕ ಗ್ರಂಥವೂ ಆಗಿದೆ .

ಅಪಾರ ವೇಗ ಮತ್ತು ಸ್ಪರ್ಧಾಪೂರ್ಣವಾದ , ಈ ಆಧುನಿಕ ಯುಗದಲ್ಲಿ ಜೀವಿಸುವ ಮನುಷ್ಯನ ಮನಸ್ಸು ,ಅಂದಿನ ಅರ್ಜುನನಿಗಿಂತ ಹೆಚ್ಚು ತಳಮಳಭರಿತವಾಗಿದೆ , ಗೀತೆಯ ತತ್ವಗಳು ಅವುಗಳ ಅನುಸರಣೆ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಗಳನ್ನು ನೀಡಬಲ್ಲದು . ಈ ಲೇಖನವನ್ನು ಮುಗಿಸುವ ಮುನ್ನ , ಗೀತೆ ಶಾಂತ ಮನಸ್ಸಿನ ಚಿತ್ರಣವನ್ನು ನೀಡಿರುವುದನ್ನು ಗಮನಿಸಿ :
ಅದ್ವೇಷ್ಟಾ ಸರ್ವ ಭೂತಾನಾಂ ಮೈತ್ರಃ ಕರುಣ ಏವಚ /
ನಿರ್ಮಮೋ ನಿರಹಂಕಾರಃ ಸಮ ದುಃಖ ಸುಖ ಕ್ಷಮೀ //

ಸಂತುಷ್ಟಃ ಸತತಂ ಯೋಗೀ ಯತಾತ್ಮಾ ಧೃಢ ನಿಶ್ಚಯಃ /
ಮಯ್ಯರ್ಪಿತ ಮನೋ ಬುದ್ದಿರ್ಯೋ ಮದ್ಭಕ್ತಃ ಸಮೇ ಪ್ರಿಯ //

ಯಸ್ಮನ್ನೋ ದ್ವಿಜತೇ ಲೋಕೋ ಲೋಕಾನ್ನೋದ್ವಿಜತೇಚಯಃ /
ಹರ್ಷಾಮರ್ಷ ಭಯೋದ್ವೇಗೈ ರ್ಮುಕ್ತೋ ಯಃ ಸಚಮೇ ಪ್ರಿಯಃ //

ಯಾವನು ದ್ವೇಷವಿಲ್ಲದವನು , ಪ್ರಾಣಿಗಳೆಲ್ಲರ ಮಿತ್ರನು , ಕೃಪಾ ಪೂರ್ಣನು , ಮಮತ್ವವಿಲ್ಲದ ನಿರಹಂಕಾರಿಯು ; ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವವನು ,ಕ್ಷಮಾಗುಣ ಪೂರ್ಣನು .

ಸರ್ವದಾ ಸಂತುಷ್ಟನು , ಯೋಗಿ , ಸಂಯಮಿ , ಧೃಢ ನಿಶ್ಚಯಿ , ಮನಸ್ಸು ಬುದ್ದಿಗಳನ್ನು ನನಗೆ ಅರ್ಪಿಸಿರುವವನು , ಅವನು ನನಗೆ ಪ್ರಿಯನು .

ಯಾವನಿಂದ ಜನರಿಗೆ ಆತಂಕವಿಲ್ಲ ; ಯಾವನು ಜನರಿಂದ ಆತಂಕ ಪಡೂವುದಿಲ್ಲ ,ಯಾವನು ಹರ್ಷ, ಕ್ರೋಧ , ಭಯ , ಉದ್ವೇಗಗಳಿಂದ ಮುಕ್ತನು ,ಅವನು ನನಗೆ ಪ್ರಿಯನು .

  • ಜ್ಞಾನವಾಹಿನಿ
~.~
  • Login or register to post comments
  • 305 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಗವದ್ಗೀತೆಯ ಬೆಳಕಿನಲ್ಲಿ (ಮುಂದುವರಿದುದು)
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸ್ಸು ( ಮತ್ತೂ ಮುಂದುವರಿದುದು)
  • ಮನಸ್ಸಿನ ಮನಸ್ಸೆ...
  • ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು
  • ವಚನ ಚಿಂತನ: ೬: ಮನಸ್ಸು ಕೋತಿ
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 77 ಅತಿಥಿಗಳು ಆನ್ಲೈನ್ ಇರುವರು.


ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ!
ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು
ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!

- ಅಲ್ಲಮಪ್ರಭು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator