Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ

ಬಡವಾ ನೀ ಮಡಗಿದ ಹಾಂಗಿರು ! - ಒಂದು ತರಲೆ ಗುಬ್ಬಚ್ಚಿಯ ನೀತಿ ಕಥೆ.

December 26, 2007 - 9:39pm — Ennares

(ಅನಾಮಧೇಯ ಇಂಗ್ಲೀಷ್ ಮೂಲದಿಂದ ಅನುವಾದಿತ)

- ನವರತ್ನ ಸುಧೀರ್.

 

ಗುಬ್ಬಚ್ಚಿ ಚಿಕ್ಕ ಪಕ್ಷಿ ಅದರ ರೆಕ್ಕೆ ಪುಕ್ಕಗಳು ಜಾಸ್ತಿಯಾಗಿಲ್ಲದಿರುವುದರಿಂದ ಹೆಚ್ಚಿನ ಚಳಿ ತಡೆಯಲಾಗುವುದಿಲ್ಲ. ಅದೇ ಕಾರಣಕ್ಕಾಗಿ ಉತ್ತರದ ಗುಬ್ಬಚ್ಚಿಗಳೆಲ್ಲವೂ ಚಳಿಗಾಲ ಬರುತ್ತಿದ್ದಂತೆ ಬೆಚ್ಚಗಿರುವ ದಕ್ಷಿಣ ಕ್ಕೆ ವಲಸೆ ಹೋಗುತ್ತವಂತೆ.

ಒಂದು ಗುಬ್ಬಚ್ಚಿ ಮಾತ್ರ ಎಲ್ಲರಿಗಿಂತಲೂ ತಾನು ಸ್ವಲ್ಪ ಜಾಸ್ತಿ ಬುದ್ಧಿವಂತ ಎಂದು ಅಹಂಭಾವವಿದ್ದು, ಎಲ್ಲರ ಹಾಗೆ ನಾನೇಕೆ ಮಾಡಬೇಕು? ಬದಲಾಗಿ ಈ ಬಾರಿ ಇಲ್ಲಿಯೇ ಉಳಿದು ಚಳಿಗಾಲದ ಆನಂದವನ್ನು ಸವಿಯೋಣ ಅಂದುಕೊಂಡು ತನ್ನ ಬಂಧು ಬಾಂಧವರ ಜೊತೆ ದಕ್ಷಿಣಕ್ಕೆ ಹೋಗದೆ ಉಳಿದುಕೊಂಡಿತು.

ಚಳಿಗಾಲ ಶುರುವಾದ ಮೊದಲ ಕೆಲವು ದಿನಗಳಲ್ಲೇ ಆ ಗುಬ್ಬಚ್ಚಿಗೆ ಮೈ ಕೊರೆತ ಮತ್ತು ನಡುಕ ಆರಂಭವಾಗಿ ಹೆದರಿಕೆಯಾಗತೊಡಗಿತು. ಆರಂಭದಲ್ಲೇ ಹೀಗಾದರೆ ಮುಂದೇನು ಗತಿಯಪ್ಪಾ ಎಂದು ಯೋಚಿಸಿ ಸ್ವಲ್ಪ ತಡವಾಗಿದ್ದರೂ ಚಿಂತೆಯಿಲ್ಲ ಈಗಲಾದರೂ ದಕ್ಷಿಣಕ್ಕೆ ಹಾರಿಬಿಡೋಣ ಎಂದು ನಿರ್ಧಾರ ಮಾಡಿ ಬೆಳಕಾಗುವ ಮೊದಲೇ ದಕ್ಷಿಣಾಭಿಮುಖವಾಗಿ ಹಾರತೊಡಗಿತು. ರೆಕ್ಕೆಗಳ ಮೇಲೆ ಶೇಖರವಾಗಿದ್ದ ಮಂಜಿನ ತೆಳು ಪದರ ಆ ಚಳಿಯಲ್ಲಿಯೇ ಸ್ವಲ್ಪ ಹಿಮಗಟ್ಟಿ ರೆಕ್ಕೆ ಭಾರ ಎನಿಸತೊಡಗಿತು. ಬೇಗನೆ ಅಯಾಸವೂ ಆಯಿತು. ದಿಗಂತದಲ್ಲಿ ಸೂರ್ಯ ಆಗತಾನೆ ಮೇಲೇರುತ್ತಿದ್ದ. ಅವನ ಕಿರಣಗಳು ಇನ್ನೂ ಅಷ್ಟು ಪ್ರಖರವಾಗಿರಲಿಲ್ಲ. ಆಗಾಗ ಮಧ್ಯೆ ಸ್ವಲ್ಪ ಭೂಮಿಯ ಮೇಲಿಳಿದು ವಿಶ್ರಾಂತಿ ಪಡೆದು ಮುಂದುವರೆಯುವುದು ಒಳಿತು ಎಂದೆನಿಸಿ ಆ ಗುಬ್ಬಚ್ಚಿ ಒಂದು ಹುಲ್ಲು ಗಾವಲಿನ ಮೇಲಿಳಿಯಿತು. ಅಲ್ಲಿಯೇ ಮೇಯುತ್ತಿದ್ದ ಹಸುವೊಂದರ ಹಿಂದೆ ನೆರಳಿನಲ್ಲಿ ಕುಳಿತು ವಿಶ್ರಮಿಸತೊಡಗಿತು. ತನ್ನ ಹಿಂದೆ ಕಾಲ ಬಳಿ ಸಣ್ಣ ಗುಬ್ಬಚ್ಚಿಯೊಂದು ಕುಳಿತಿದೆ ಎಂಬ ಅರಿವಿಲ್ಲದ ಆ ಹಸು ತನ್ನ ಪ್ರಾತರ್ವಿಧಿಗನುಗುಣವಾಗಿ ಸೆಗಣಿ ಹಾಕಿತು. ತಪತಪನೆ ಬಿದ್ದ ಬಿಸಿ ಬಿಸಿ ಸೆಗಣಿಯಲ್ಲಿ ಆ ಚಳಿಯಿಂದ ನಡುಗುತ್ತಿದ್ದ ಗುಬ್ಬಿ ಸಂಪೂರ್ಣವಾಗಿ ಮುಳುಗಿಹೋಯಿತು.

ಸದೈವವಶಾತ್ ಆ ಬಿಸಿ ಸೆಗಣಿಯಿಂದ ಗುಬ್ಬಚ್ಚಿಯ ರೆಕ್ಕೆಯ ಮೇಲ್ಗಟ್ಟಿದ್ದ ಹಿಮ ಬೇಗನೆ ಕರಗಿ ಅದರ ದೇಹಕ್ಕೂ ಸ್ವಲ್ಪ ತಾಪ ತಟ್ಟಿ ಮೈ ಬೆಚ್ಚಗಾಯಿತು. ಮನಸ್ಸಿಗೆ ಅದೇನೋ ಹಿತವಾದ ಅನುಭವವಾಯಿತು. ಗುಬ್ಬಿಗೆ ಹಾಡಬೇಕೆನಿಸಿತು. ತನಗೆಷ್ಟು ಸಾಧ್ಯವೋ ಅಷ್ಟುಎತ್ತರದ ಧ್ವನಿಯಲ್ಲಿಸುಶ್ರಾವ್ಯವಾಗಿ ಹಾಡತೊಡಗಿತು. ಅಲ್ಲಿ ಹತಿರದಲ್ಲಿಯೇ ನಡೆದು ಹೋಗುತ್ತಿದ್ದ ಒಂದು ಬೆಕ್ಕಿಗೆ ಈ ಹಾಡು ಕೇಳಿಸಿತು. ಈ ಹಾಡಿನ ಮೂಲ ಎಲ್ಲಿ ಎಂದು ಹುಡುಕಿದ ಆ ಬೆಕ್ಕು ಬೇಗನೆ ಆ ಸೆಗಣಿಯ ಕುಪ್ಪೆಯನ್ನು ಕೆದರಿಸಿ, ಅಲ್ಲಿ ಹುದುಗಿ ಹಾಡಿನಲ್ಲಿ ತನ್ಮಯನಾಗಿದ್ದ ಗುಬ್ಬಚ್ಚಿಯನ್ನು ಹಿಡಿದು ಕಚ್ಚಿ ನುಂಗಿಹಾಕಿತು.

ನೀತಿ ಪಾಠ ೧: ನಿಮ್ಮ ಮೇಲೆ ಸೆಗಣಿ ಹಾಕುವವರೆಲ್ಲರೂ ನಿಮ್ಮ ಶತ್ರುಗಳಲ್ಲ!

ನೀತಿ ಪಾಠ ೨: ನಿಮ್ಮನ್ನು ಸೆಗಣಿಯ ಕುಪ್ಪೆಯಿಂದ ಕೆದರಿ ಹೊರಗೆ ತೆಗಯುವರೆಲ್ಲರೂ ನಿಮ್ಮ ಮಿತ್ರರಲ್ಲ!

ನೀತಿ ಪಾಠ ೩: ನೀವು ಸೆಗಣಿಯ ರಾಶಿಯಲ್ಲಿ ಮುಳುಗಿದ್ದಾಗ್ಯೂ , ಬೆಚ್ಚನೆಯ ಅನುಭವವಾಗಿ ಮನಸ್ಸಿಗೆ
ಹಿತವೆನಿಸುತ್ತಿದ್ದರೆ ಬಾಯಿ ಮುಚ್ಚಿಕೊಂಡಿರಿ! ಹಾಡಬೇಡಿ! ಯಾರಾದರೂ ಉದ್ಧಾರ
ಮಾಡಿಯಾರು.ಎಚ್ಚರಿಕೆ!
**************************************************************

  • ಲಲಿತ ಪ್ರಬಂಧ, ಹಾಸ್ಯ
Ornamental seperator
  • Login or register to post comments
  • 343 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 28, 2007 - 12:23pm — csomsekraiah

ಉ: ಬಡವಾ ನೀ ಮಡಗಿದ ಹಾಂಗಿರು ! - ಒಂದು ತರಲೆ ಗುಬ್ಬಚ್ಚಿಯ ನೀತಿ ಕಥೆ.

csomsekraiah's picture

ಅನುವಾದ ಚನ್ನಾಗಿದೆ , ನಗುವೂ ಬರುತ್ತದೆ , ಯೋಚಿಸುವಂತೆಯೂ ಇದೆ ಧನ್ಯವಾದಗಳು .

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಜಕೀಯ
  • ಪ್ರೇಮದ ಓಲೆ
  • ನನ್ನ ಕಾವ್ಯ
  • ನುಡಿ ಮುತ್ತುಗಳು
  • ಕೈಕೊಟ್ಟೆ
Syndicate content

ಲೇಖಕರು

Ennares's picture

ಪೂರ್ಣ ಹೆಸರು
ನವರತ್ನ ಸುಧೀರ್

ಪರಿಚಯ

ನಿವೃತ್ತ ಲೋಹಶಾಸ್ತ್ರಜ್ನ. ಹಿಂದೂಸ್ತಾನಿ ಸಂಗೀತ ಕೇಳುವ, ಪುಸ್ತಕ ಓದುವ, ಬ್ಲಾಗಿಸುವ ಹವ್ಯಾಸ. ನಾಟಕದ ಗೀಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬೆಳಗಲ್ ವೀರಣ್ಣನವರ ಮಕುಟಕ್ಕಿನ್ನೊಂದು ಗರಿ!!
  • ಕಾರಂತರ ಜೀವಂತ ಪಾತ್ರಗಳು ೬ (೩)
  • ಕಾರಂತರ ಜೀವಂತ ಪಾತ್ರಗಳು ೬ (೨)
  • ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
  • ಕಾರಂತರ ಜೀವಂತ ಪಾತ್ರಗಳು ೬ (೧)
  • ಗಾಂಧಿ ಎಂಬ ರೂಪಕ, ಜೀವನವೆಂಬ ನಾಟಕ!
  • ವಿಂಡೋಸ್ ಪರ ಸರಕಾರಗಳ ಲಾಬಿ!

ಇತ್ತೀಚಿನ ಪ್ರತಿಕ್ರಿಯೆಗಳು

  • Prabhu Murthy
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 23, 2008 - 12:54am
  • ಮನಹ್ಪಠಲ
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 11:40pm
  • Sunil Jayaprakash
    ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
    May 22, 2008 - 11:10pm
  • prasannasp
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 9:32pm
  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 9:18pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 7:23pm
  • Sunil Jayaprakash
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 7:03pm
  • shylaswamy
    ಉ: ಅದೃಷ್ಟ
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:34pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...

— ಸರ್ ನಾರ್ಮನ್ ವಿಸ್ಡಮ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator