ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮೇರಾ ಧರಂ ಮಹಾನ್!

December 28, 2007 - 7:58pm — uniquesupri

ಒಂದು ತಮಾಷೆಯ ಸಂಗತಿಯನ್ನು ಹೇಳುತ್ತೇನೆ ಕೇಳಿ, ನಮ್ಮ ನಡುವಿನ ‘ಹಿಂದು' ಸಂಘಟನೆಗಳು, ಹಿಂದುತ್ವ ಒಂದು
ಜೀವನವಿಧಾನ, ಅದು
ಒಂದು ಧರ್ಮವಲ್ಲ ಎನ್ನುತ್ತಲೇ ಇತರ ಧರ್ಮಗಳೆದುರು ಹಿಂದುಗಳು ಒಗ್ಗೂಡಬೇಕು, ನಮಗೆ ಹಿಂದೂ ಧರ್ಮವೇ
ಮುಖ್ಯ ಎಂದೆನ್ನೆವ ಡೈನಮಿಕ್ ಯುವ ಪತ್ರಕರ್ತರ ವಾದವಿದು. ಅದು ಅಮೀರ್ ಖಾನ್ ಮೇಧಾ ಪಾಟ್ಕರ್‌ಳ ಹೋರಾಟಕ್ಕೆ ನಿಂತ
ವೇಳೆಯಾಗಲಿ, ಅರುಂಧತಿ
ರಾಯ್, ಅನಂತಮೂರ್ತಿಯಂತಹ
ಸಮಾಜ ಗುರುತಿಸಿದ ಚಿಂತಕರು ಗುಜರಾಥಿನ ಸರಕಾರಿ ಬೆಂಬಲಿತ ಕೋಮು ಗಲಭೆಯನ್ನು ಖಂಡಿಸಿ ಮಾತನಾಡಿದಾಗ
ಅಲ್ಲಿ ಕಾಶ್ಮೀರದಲ್ಲಿ ಲಕ್ಷಾಂತರ ಮಂದಿ ಹಿಂದುಗಳ ಮಾರಣಹೋಮ ನಡೆಯುವಾಗ ಇವರೆಲ್ಲಾ ಎಲ್ಲಿದ್ದರು? ಎಂದು
ಪ್ರಶ್ನಿಸುತ್ತಾರೆ. ತಾಕತ್ತಿದ್ದರೆ
ಮುಸ್ಲೀಮ ಧರ್ಮವನ್ನು ಟೀಕಿಸಿ ನೋಡೋಣ ಅಂತ ಉಗ್ರವಾಗಿ ಪ್ರತಾಪವನ್ನು ತೋರಿಸುತ್ತಾರೆ. ಅಯ್ಯೋ ಈ
ಮುಸ್ಲೀಮರಿಗೆ ಒಳ್ಳೆಯವರು ಆದರ್ಶವಾಗುವುದೇ ಇಲ್ಲವೇ ಎಂದು ಅಪಾರ ವೇದನೆಯನ್ನು ಅನುಭವಿಸುವವರಂತೆ
ಹುಯಿಲಿಡುತ್ತಾರೆ.

ಗಮನಿಸಿ ನೋಡಿ, ಅದು ರಾಮಸೇತುವಿನ ವಿವಾದವಿರಬಹುದು, ರಾಮ ಎಂಬ ಐತಿಹಾಸಿಕ
ವ್ಯಕ್ತಿಯ ಅಸ್ತಿತ್ವವನ್ನು ಪ್ರಶ್ನಿಸಿದ ಘಟನೆಯಾಗಿರಬಹುದು ಈ ಫೈರ್ ಬ್ರ್ಯಾಂಡ್
ಹಿಂದುತ್ವವಾದಿಗಳು ಹಾಗೂ knee jerk reactionary ಬರಹಗಾರರು ವಿವಾದವನ್ನು ವಸ್ತುನಿಷ್ಠವಾಗಿ ಪರಿಶೀಲಿಸುವ
ಬದಲು ರಸ್ತೆಯ ಬದಿಯಲ್ಲಿ ನಿಂತು ಭಾವಾದ್ವೇಗದಿಂದ ಅರಚುವ ಅಂಧಾಭಿಮಾನಿಯಂತೆ ‘ಹಾಗಿದ್ದರೆ
ಮುಸ್ಲೀಮರನ್ನು ನಿಂದಿಸಿ ನೋಡೋಣ, ಕ್ರೈಸ್ತರ ನಂಬಿಕೆಗಳನ್ನು ಸುಳ್ಳು ಎನ್ನಿ ನೋಡೋಣ' ಎಂದು ಸವಾಲು ಹಾಕುತ್ತಾರೆ. ಹಿಂದು ಧರ್ಮವನ್ನು
ಟೀಕಿಸಿದಾಗ, ನಂಬಿಕೆಗಳನ್ನು
ಪ್ರಶ್ನಿಸಿದಾಗ ತಮ್ಮ ಭಾವನೆಗಳಿಗೆ ನೋವಾಗುತ್ತದೆ ಎನ್ನುವವರು ಬೇರೆ ಧರ್ಮವನ್ನು ಟೀಕಿಸಿ ಆಗ
ನಮಗೆ ನೋವಾಗುವುದಿಲ್ಲವೆನ್ನುತ್ತಾರೆಂದರೆ ಇವರ ಭಾವನೆಗಳಾದರೂ ಎಂಥವು?

ಹಿಂದುಗಳು ಸೌಮ್ಯ ಸ್ವಭಾವದವರು, ಸಹಿಷ್ಣುಗಳು ಅವರು
ಧರ್ಮ ನಿಂದನೆಯನ್ನು ಸಹಿಸಿಕೊಂಡು, ಸಹಿಸಿಕೊಂಡು ಬಂದಿದ್ದರಿಂದಲೇ ಮಾತನಾಡುವವರಿಗೆ ಇಷ್ಟು ಧಿಮಾಕು ಎಂಬ ಧಾಟಿಯಲ್ಲಿ
ಮಾತನಾಡುವ ಯುವ ಹಿಂದು ನಾಯಕರು, ಪತ್ರಕರ್ತರು ಹಿಂದು ಧರ್ಮ ಇಸ್ಲಾಮಿಗಿಂತ ಎಷ್ಟೋ ಪ್ರಗತಿಹೊಂದಿದೆ, ಅಭಿಪ್ರಾಯ
ಸ್ವಾತಂತ್ರ್ಯವನ್ನು ಹತ್ತಿಕ್ಕುವ ತಾಲಿಬಾನಿ ಮನಸ್ಥಿತಿ ಇಲ್ಲ ಎಂದು ಸಾರುತ್ತಲೇ ಅದನ್ನೇ
ಅಪ್ಪಿಕೊಳ್ಳುವತ್ತ ಸಾಗುತ್ತಿದ್ದಾರೆಯೇ? ಕರುಣಾನಿಧಿಯ ವಿರುದ್ಧ ಘೋಷಣೆಯಾದ ‘ಹಿಂದು ಫತ್ವಾ' ಇರಬಹುದು, ‘ಪ್ರೀತಿ ಏಕೆ ಭೂಮಿ
ಮೇಲಿದೆ' ಚಿತ್ರದ
ಬಗ್ಗೆ ಅನಗತ್ಯ ವಿವಾದವನ್ನು ಎಬ್ಬಿಸಿದ್ದಿರಬಹುದು, ಮತಾಂತರ ಮಾಡುತ್ತಿದ್ದಾರೆ ಎಂಬ ಪುಕಾರು ಹಬ್ಬಿಸಿ ಅಮಾಯಕ
ಕ್ರೈಸ್ತರ ಮೇಲೆ ಹಲ್ಲೆ ನಡೆಸುವುದಿರಬಹುದು ಇವೆಲ್ಲಾ ಎಲ್ಲಿಯ ಹಿಂದು ಧರ್ಮದ ಗುಣಗಳಯ್ಯಾ? ಇವನ್ನೆಲ್ಲಾ
ಪ್ರಶ್ನಿಸುವವರು ‘ಲದ್ದಿ
ಜೀವಿಗಳು'... ಮೇರಾ
ಧರಂ ಮಹಾನ್! 

 

  • ಪ್ರಚಲಿತ
~.~
  • Login or register to post comments
  • 327 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಾತಿಯು ಧರ್ಮಾಧಾರಿತವೇ, ಸಾಮಾಜಿಕವೇ.
  • ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!
  • ಅಮೆರಿಕದಲ್ಲಿ ಹಿಂದು ಮತಾಂತರ
  • ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
  • ಹಿಂದು ಏನಿದು? ಅದರ ಸಿದ್ದಾಂತವೇನು
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

I am a simple life loving person with a sensitive heart.

ನಾನು ಇಂಜಿನಿಯರಿಂಗ್ ಓದುತ್ತಿದ್ದೇನೆ. ನಾನು ಹಾಗೂ ನನ್ನ ಗೆಳೆಯರು ಸೇರಿ ಒಂದು ಸಣ್ಣ ಪತ್ರಿಕೆಯೊಂದನ್ನು ಪ್ರತಿ ತಿಂಗಳು ಹೊರಡಿಸುತ್ತಿದ್ದೇವೆ. ಅದರ ಬ್ಲಾಗು ಇಲ್ಲಿದೆ:http://kalaravapatrike.wordpress.com/
ನನ್ನ ಬ್ಲಾಗು:
http://uniquesupri.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 16 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator