ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಅವಮಾನಕ್ಕೆ ಅಂಜಬೇಡಿ...

January 6, 2008 - 6:10pm — prem_poo gour

’ಕಲಿಯೋದರಲ್ಲಿ ಈತ ತುಂಬ ನಿಧಾನ’ ಅಂತ ಆ ಪುಟ್ಟ ಹುಡುಗನ ಟೀಚರ್‍ ಒಬ್ಬಳು ಆ ಹುಡುಗನೆದುರೇ ಪಾಲಕರಿಗೆ ಹೇಳಿಬಿಡುತ್ತಾಳೆ. ಆ ಬಾಲಕನಿಗೆ ತುಂಬ ಅವಮಾನವಾಗಿಬಿಡುತ್ತದೆ. ಆತ ಆದ ಅವಮಾನವನ್ನು ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ. ’ಅವಮಾನ’ ಅನ್ನೋದು ಬಹುಶಃ ಹಾಗೆ ಸುಮ್ಮನೆ ಕೂರಿಸುವುದೂ ಇಲ್ಲ. ಆ ಅವಮಾನವನ್ನಾತ ಛಲವನ್ನಾಗಿ ಸ್ವೀಕರಿಸುತ್ತಾನೆ. ಅವಮಾನದ ಛಲವನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಮುಂದೊಂದು ದಿನ ಸಾಧನೆಯ ಪ್ರತೀಕವೆಂಬಂತೆ ಈ ಜಗತ್ತಿನ ಬಹುದೊಡ್ಡ ವಿಜ್ಞಾನಿಯಾಗಿಬಿಡುತ್ತಾನೆ. ಆತ ಬೇರಾರೂ ಅಲ್ಲ, "ಥಾಮಸ್ ಅಲ್ವಾ ಎಡಿಸನ್"!.

ಅಷ್ಟೇ ಯಾಕೆ, ಮೋಹನದಾಸ ಕರಮಚಂದ ಅನ್ನೋ ಗುಬ್ಬಿ ಗಾತ್ರದ ದೇಹದವನಿಗೆ ಬಿಳಿಯರು ಮಾಡಿದ ಅವಮಾನವು ಆತನನ್ನು ಮಹಾನ್ ಹೋರಾಟಗಾರ "ಗಾಂಧಿ"ಯನ್ನಾಗಿಸುತ್ತದೆ. ಅಸ್ಪೃಶ್ಯ ಎಂಬ ಭಾರತೀಯ ಸಮಾಜದ ಕ್ರೂರ ಅವಮಾನವೊಂದು ಭೀಮರಾವ್ ರಾಮ್‌ಜಿ ಸಕ್ಪಾಲ್ ಎಂಬಾತನಿಂದ ಭಾರತದ ’ಸಂವಿಧಾನ’ವನ್ನೇ ಬರೆಸಿಬಿಡುತ್ತದೆ. ಸ್ವಾತಂತ್ರ ಪೂರ್ವದ ದಿನಗಳಲ್ಲಿ ಬಿಳೀಯರು ಮಾಡುತ್ತಿದ್ದ ಎಷ್ಟೋ ಅವಮಾನಗಳನ್ನು ತಮ್ಮೊಳಗೆ ಅವಡುಗಚ್ಚಿಕೊಂಡೇ, ಭಗತ್‌ಸಿಂಗ್, ಸುಭಾಷ್‌ಚಂದ್ರ ಭೋಸ್, ವೀರ ಸಾವರ್ಕರ್‍ ರಂತಹವರು ಮಹಾನ್ ಹೋರಾಟಗಾರರಾಗಿ ರೂಪುಗೊಂಡು ಇತಿಹಾಸವಾಗಿದ್ದಾರೆ. ಇಷ್ಟೆಲ್ಲ ಕೆಚ್ಚೆದೆಯ ನಾಯಕರುಗಳು ಹುಟ್ಟಿಕೊಂಡಿದ್ದು ’ಅವಮಾನ’ ಅನ್ನೋ ’ಕಿಡಿ’ ಹೊತ್ತಿದ ನಂತರವೇ ಅಲ್ಲವೇ?

ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಎಷ್ಟೋ ಅವಮಾನಗಳನ್ನು ಸಹಿಸಿಕೊಂಡೇ ಜಗತ್ತನ್ನು ನಗಿಸಿದವನು ಚಾರ್ಲಿ ಚಾಪ್ಲಿನ್. ಇನ್ನೂ ಒಂದು ಸೋಜಿಗವೆಂದರೆ ಅವಮಾನಗಳ ನಡುವೆಯೇ ಹುಟ್ಟಿಕೊಂಡವನು ’ಚಾಣಕ್ಯ’!.

ಛಲವನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಹೆತ್ತ ಸಾಧನೆಯ ಪ್ರತೀಕಗಳೇ ಈ ಮೇರು ವ್ಯಕ್ತಿತ್ವಗಳು. ಆದರೆ ನೆನಪಿರಲಿ, ಅಂತಹ ಹೆರಬಲ್ಲಂತಹ ತಾಖತ್ತು ನಿಮ್ಮ ದೇಹಕ್ಕಿರಬೇಕಷ್ಟೆ. ಒಂದು ವೇಳೆ ಆ ತಾಖತ್ತು ನಿಮ್ಮಲ್ಲಿರದೇ ಹೋದಲ್ಲಿ, ಒಂದು ನೆಗ್ಲಿಜಿಬಲ್ ಅನ್ನುವಂತಹ ಸಣ್ಣ ಅವಮಾನ ಕೂಡ ನಿಮ್ಮಲ್ಲಿನ ಅಂತಃಶಕ್ತಿಯನ್ನು ಕೊಂದು ಹಾಕಿ ನಾಮರ್ಧನನ್ನಾಗಿಸಿಬಿಡುತ್ತದೆ.

ಅವಮಾನಗಳು ಬಹಳಷ್ಟು ಪಾಲು ಅನಿರೀಕ್ಷಿತವಾಗಿಯೇ ಆಗೋದು. ನಾಳಿನ ಅವಮಾನವನ್ನು ಎದುರಿಸಲು ಸಜ್ಜಾಗಿದ್ದೇನೆ ಎಂಬ ಮಾನಸಿಕ ಸಿದ್ಧತೆಗೆ ಅದು ಯಾವತ್ತಿಗೂ ಅವಕಾಶ ಮಾಡಿಕೊಡಲಾರದು. ಆದಾಗ್ಯೂ ಅವಮಾನ ಮಾಡುವವರೂ ಕೂಡ ಗೊತ್ತಿಲ್ಲದಂತೆಯೇ, ಅನಿರೀಕ್ಷಿತವಾಗಿ, ಕೆಲವೊಮ್ಮೆ ಅವರ ಗಮನಕ್ಕೆ ಬಾರದಂತೆಯೇ ಮಾಡಿಬಿಡುತ್ತಾರೆ. ಆದರೆ ಆ ಒಂದು ಅವಮಾನ ಇಡೀ ಜೀವನದಲ್ಲಿ ನೆನಪಿಟ್ಟುಕೊಳ್ಳಬೇಕು ಮತ್ತು ಅಲ್ಲಿಂದಲೇ ನಮ್ಮ ಸಾಧನೆಯೆಂಬ ಗೆಲುವಿನ ಮಹಾ ಜೈತ್ರ ಯಾತ್ರೆ ಪ್ರಾರಂಭಿಸಬೇಕು.

ಒಂದು ವೇಳೆ ಅವಮಾನವನ್ನೇನಾದರೂ ಮರೆತಿರೋ ಅಥವಾ ’ಇದ್ಯಾತರದ್ದು’ ಎಂದು ಕಡೆಗಾಣಿಸಿದಿರೋ, ನೀವು ಲಜ್ಜೆಗೆಟ್ಟವರಾಗಿಬಿಡುತ್ತೀರಿ. ಮತ್ತು ನಿಮಗೆ ಅವಮಾನ ಮಾಡಿದವರನ್ನು ಪರೋಕ್ಷವಾಗಿ ಪುಸಲಾಯಿಸಲು ನೀವೇ ಕಾರಣರಾಗಿಬಿಡುತ್ತೀರಿ. ಆದ ಅವಮಾನವು ನಿಮ್ಮನ್ನು ತುಳಿದು ಹಾಕಿದರಂತೂ ನೀವು ಹೇಡಿಗಳಂತಾಗಿಬಿಡುತ್ತೀರಿ. ಅವಮಾನಕ್ಕಂಜಿ ಅಳುತ್ತ ಕುಳಿತರಂತೂ ಜೀವಮಾನವಿಡೀ ನಿಮ್ಮ ಮನಸು ಅಳುಬುರುಕಿಯಾಗಿಬಿಡುತ್ತದೆ.

ಅವಮಾನವು ಹುಟ್ಟಿಸುವ ಛಲವನ್ನೇ ನೀವು ಗರ್ಭೀಕರಿಸಿಕೊಳ್ಳಬೇಕು, ಆ ಗರ್ಭದಿಂದ ಸಾಧನೆಯ ಮಗು ಹೆರಬೇಕು, ಆ ತಾಕತ್ತು ನಿಮ್ಮಲ್ಲಿದೆಯೆಂಬುದನ್ನು ಈ ಜಗತ್ತಿಗೆ ನೀವು ತೋರಿಸಿಕೊಡಬೇಕು ಮತ್ತು ಆ ಮೂಲಕ ಅವಮಾನಿಸಿದವರಿಗೆ ಮುಖಭಂಗ ಮಾಡಿಬಿಡಬೇಕು. ಖಂಡಿತವಾಗ್ಯೂ ಅಂತಹದ್ದೊಂದು ಸಾಧ್ಯತೆ ನಿಮ್ಮಲ್ಲಿನ ಛಲಕ್ಕೆ ಇದ್ದೇ ಇರುತ್ತದೆ. ಹಾಗೆಯೇ ಅದನ್ನು ಹುಟ್ಟಿಸುವ ಅವಮಾನಕ್ಕೂ ಕೂಡ. ಮುಂದೆಂದಾದರೂ ಅವಮಾನವಾಯಿತೆಂದರೆ, ಮುಸುಮುಸು ಅಳದೆ, ಛಲತೊಟ್ಟು ಗೆಲುವಿನೆಡೆಗೆ ಜೈತ್ರಯಾತ್ರೆ ಪ್ರಾರಂಭಿಸಿ.

ಪ್ರೇಮ್....

  • ಚುಟುಕು ಬರಹ
~.~
  • Login or register to post comments
  • 373 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 6, 2008 - 9:01pm — muralihr

ಉ: ಅವಮಾನಕ್ಕೆ ಅಂಜಬೇಡಿ...

muralihr's picture

ತು೦ಬಾ ಚೆನ್ನಾಗಿದೆ. ಇನ್ನೂ ಯಾವುದ್ಯಾವುದಕ್ಕೆ ಅ೦ಜಬಾರದೂ ಅ೦ತಾ ಸ್ವಲ್ಪ ಹೇಳ್ತೀರಾ ?
ಅವುಗಳ ಮೇಲೆ ಹೀಗೆ ಬರೆದು ಎಲ್ಲಾ ಆತ೦ಕ - ಅವಮಾನಗಳಿ೦ದಾ ಮುಕ್ತರನ್ನಾಗಿಸಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2008 - 10:52pm — Sunil Jayaprakash

ಉ: ಅವಮಾನಕ್ಕೆ ಅಂಜಬೇಡಿ...

Sunil Jayaprakash's picture

ತಕ್ಕುದಾದ ಬರಹ. ತಾರೆ ಝಮೀನ್ ಪೆ ಸಿನಿಮಾ ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ’ಸಿನಿಮಾ ಇನ್ನೂ ಮುಗಿದಿಲ್ಲ !’
  • ನೀನಿಲ್ಲದೆ...
  • ವಿಜ್ಞಾನಿಗಳ ನುಡಿಮುತ್ತುಗಳು - ಥಾಮಸ್ ಆಲ್ವಾ ಎಡಿಸನ್ - ೨
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಮನಸಲ್ಲಿ ಬರುತ್ತೆ ಯೋಚನೆ
Syndicate content

ಲೇಖಕರು

prem_poo gour's picture

ಪೂರ್ಣ ಹೆಸರು
ಪ್ರೇಮ್ ಗೌರ್‍

ಪರಿಚಯ

"ಮನುಷ್ಯನಿಗಿರೋದು ಒಂದೇ ನಾಲಗೆ, ಆತನ ಮಾತುಗಳು ಆನೆಯ ದಂತದ ಹಾಗೆ, ಅವು ಹೊರಕ್ಕೆ ಬರುತ್ತವೆಯೇ ವಿನಃ ಒಳಕ್ಕೆ ಹೋಗುವುದಿಲ್ಲ" ಇದನ್ನು ನಂಬಿದವನು ಮತ್ತು ಮುಖಕ್ಕಿಂತ ಮನಸು ಸುಂದರವಾಗಿರಬೇಕು ಅಂದುಕೊಳ್ಳುವ ಭಾವಜೀವಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಂಗಾರದ ಅರಮನೆ
  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 43 ಅತಿಥಿಗಳು ಆನ್ಲೈನ್ ಇರುವರು.


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator