ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಎಂಟನೆಯ ಕಂತು

January 9, 2008 - 9:56am — rameshbalaganchi

ಆಗಾಗ್ಗೆ ತತ್ತ್ವಾನ್ವೇಷಣೆಗಾಗಿ ಭಾರತಕ್ಕೆ ಹೋಗಿಬಂದ ಜನಗಳ ಭೇಟಿಯಾಗಿತ್ತು. ಆದರೆ ನಾನು ನನಗಾಗಿ ಬೇಡಿದ್ದು ಅದನ್ನಲ್ಲ. ನನಗೆ ಬೇಕಾದ ಏನನ್ನ್ನಾದರೂ ನಾನೇ ಸುತ್ತಾಟ ಮಾಡಿ ಪಡೆಯಬಹುದೆಂದು ಭಾವಿಸಿದ್ದೆ. ಈಗ ಅದರಲ್ಲಿ ಸೋತಿದ್ದರಿಂದ ಇನ್ನೊಂದರಲ್ಲಿ ನನಗೆ ಆಸಕ್ತಿ ಮೂಡಿತು. ಕೆಲವು ಪ್ರಾರ್ಥನಾ ಸಭೆಗಳಿಗೆ ಹೋಗತೊಡಗಿದೆ. ಅಲ್ಲಿಯ ಪರಿಸರ ನನಗೆ ತುಂಬಾ ಹಿಡಿಸಿತು. ಸಾಮಾನ್ಯವಾಗಿ ಪ್ರಾರ್ಥನಾಸಭೆಯನ್ನು ಸನ್ಯಾಸ ಪಡೆದು ಕಾವಿ ಧ್ದರಿಸುತ್ತಿದ್ದ ಒಬ್ಬ ಸ್ವಾಮಿ ನಡೆಸಿಕೊಡುತ್ತಿದ್ದ. ಅವನು ’ದೇವರು ಮತ್ತು ಪ್ರೀತಿ’ ಎಂಬ ವಿಷಯದಲ್ಲಿ ಉಪನ್ಯಾಸ ಮಾಡಿದ. ಎಲ್ಲರೂ ’ಪ್ರೀತಿ ಹಾಗೂ ಪರಮಾತ್ಮ’ ಎಂಬ ವಿಷಯವಾಗಿ ಭಜನೆ ಮಾಡಿದರು. ಈ ಪ್ರಾರ್ಥನಾ ಸಭೆಗೆ ಬರುತ್ತಿದ್ದವರು ಮಧ್ಯವಯಸ್ಕರೂ ಮತ್ತು ಸಾಕಷ್ಟು ಬಡವರೂ ಆಗಿದ್ದರು. ನಾನು ನನ್ನ ಪ್ರವಾಸದಲ್ಲಿ ಇಂಥ ಅನೇಕ ಜನಗಳನ್ನು ಭೇಟಿಯಾಗಿದ್ದೆ. ಏಕೆಂದರೆ ಸ್ಟೇಷನ್ನಿನ್ನ ಪ್ಲಾಟ್‌ಫಾರಂನಲ್ಲಿ, ಬಸ್ ಡಿಪೋಗಳಲ್ಲಿ ಸಹನೆಯಿಂದ ಕಾಯುತ್ತ ಕಂಡಕ್ಟರನೋ, ಬೇರೆ ಅಧಿಕಾರಿಯೋ ತಳ್ಳಿದರೂ ದೂರು ಹೇಳದ ಜನರೆಂದರೆ ಇವರೇ! ಇಕ್ಕಟ್ಟಿನ, ಅನಾರೋಗ್ಯಕರ ಜಾಗಗಳಲ್ಲಿ ವಾಸಮಾಡುತ್ತ, ನಲ್ಲಿಯ ನೀರು, ಒಳಚರಂಡಿ ವ್ಯವಸ್ಥೆ ಯಾವುದೂ ಇಲ್ಲದ ಕಾರಣ ಸ್ವಭಾವತ: ತುಂಬಾ ಶುಭ್ರರಾದರೂ ಸ್ವಚ್ಛವಾಗಿರಲು ಹೆಣಗುತ್ತಿದ್ದರೂ ಒಂದು ವಿಧವಾದ ಹಗುರವಾದ ಮೈವಾಸನೆ ಬೀರುವ ಸಾಧುಸ್ವಭಾವದ ಜನ. ಅವರು ದೇವರ ನಾಮ ಹಾಡುವಾಗ ಅವರ ಮುಖಗಳಲ್ಲಿ ವ್ಯಕ್ತವಾಗುವ ಭಾವ ನನಗೆ ಸೇರುತ್ತಿತ್ತು. ನಾನೂ ಅವರಂತಾಗಬೇಕಿತ್ತು. ಅದಕ್ಕೇ ನಾನು ಬಿಳಿಯ ಸಾದಾ ಸೀರೆಗಳನ್ನೇ ಉಡತೊಡಗಿದೆ. ನನ್ನ ಕೂದಲನ್ನು ಸರಳವಾಗಿ ಗಂಟುಹಾಕಿಕೊಳ್ಳತೊಡಗಿದೆ. ನಾನು ಧರಿಸಿದ ಒಂದೇ ಆಭರಣವೆಂದರೆ ಅದೊಂದು ಮಣಿಯ ಹಾರ. ಅದೂ ಅಲಂಕಾರವಲ್ಲ. ದೇವರ ಜಪ ಮಾಡುವಾಗ ಸಲುವಾಗಿ. ಸಸ್ಯಾಹಾರಿಯಾಗಿದ್ದುಕೊಂಡು ಅನಪೇಕ್ಷಣೀಯವಾದ ಸಹಜ ಮಾನವೀಯ ವಿಕಾರಗಳಾದ ಕಾಮ, ಕ್ರೋಧಗಳನ್ನು ತೊಡೆದುಹಾಕಲು ಸಾಧ್ಯವಾದಷ್ಟೂ ಪ್ರಯತ್ನ ಪಟ್ಟೆ. ಹೆನ್ರಿ ಒಂದು ಥರ ಕಿರಿಕಿರಿ ಮಾಡುವ ಜಗಳಗಂಟ ಮನ:ಸ್ಥಿತಿಯಲ್ಲಿದ್ದ. ನಾನೂ ಅವನಿಗೆ ಎದುರಾಡದೆ ಅವನೊಡನೆ ತುಂಬಾ ಕರುಣೆ ಹಾಗೂ ಸಹನೆಯಿಂದ ಇದ್ದೆ. ಆದರೆ ಅದು ಅವನ ಮೇಲೆ ಒಳ್ಳೆಯ ಪರಿಣಾಮ ಬೀರುವುದಿರಲಿ, ಅವನ ಸ್ವಭಾವ ಹದಗೆಟ್ಟಿತು. ಒಟ್ಟು ನಾನು ರೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿತ್ವ ಅವನಿಗೆ ಇಷ್ಟ ಆಗದೆ ನನ್ನ ಉಡುಪಿನ ವೈಖರಿಯನ್ನೂ, ಸರಳ ನೋಟವನ್ನೂ, ಸಾದಾ ಆಹಾರವನ್ನೂ ಹೀಯಾಳಿಸತೊಡಗಿದ. ನಿಜ ಹೇಳಬೇಕೆಂದರೆ, ಅವನು ನನ್ನೆದುರಿಗೆ ಕೂತು ಕಟ್ಲೆಟ್‌ಗಳನ್ನೂ, ಚಾಪ್ಸ್‌ಗಳನ್ನೂ ತಿನ್ನುತ್ತಿದ್ದಾಗ ನಾನು ಬರೀ ಬೇಯಿಸಿದ ಅನ್ನ ಮತ್ತು ಕಾಳಿನ ಊಟ ಮಾಡುವುದು ನನಗೇನಂಥ ಪ್ರಿಯವಾಗಿರದೆ ಶಿಕ್ಷೆಯೇ ಆಗಿರುತ್ತಿತ್ತು.

  • ಸಣ್ಣ ಕಥೆ
~.~
  • Login or register to post comments
  • 228 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹತ್ತನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಐದನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೆರಡನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಏಳನೆಯ ಕಂತು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಎರಡನೆಯ ಕಂತು
Syndicate content

ಲೇಖಕರು

rameshbalaganchi's picture

ಪೂರ್ಣ ಹೆಸರು
Ramesh Balaganchi

ಪರಿಚಯ

ನಾನು ಸರಳ ಮನುಷ್ಯ. ಬೆಂಗಳೂರಿನಲ್ಲಿ ಸಂಸ್ಕೃತ ಆನರ್ಸ್ ಮಾಡಿ 1979 ರಿಂದ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನ ಕೆಲಸ ಮಾಡುತ್ತಿದ್ದೇನೆ. ಭಾಷಾ ಕಲಿಕೆ, ಪಕ್ಷಿವೀಕ್ಷಣೆ ತುಂಬಾ ಇಷ್ಟದ ಹವ್ಯಾಸಗಳು. ಇತ್ತೀಚೆಗೆ ಕಂಪ್ಯೂಟರ್ ಬಳಸಲು ಕಲಿಯುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 38 ಅತಿಥಿಗಳು ಆನ್ಲೈನ್ ಇರುವರು.


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator