ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ

January 10, 2008 - 8:57pm — agilenag

ಚಾರಿತ್ರಿಕ ನಾಟಕಗಳೆಂದರೆ ಅದೇನೋ ನಮ್ಮ ಜನರಿಗೆ ಒಂದು ರೀತಿಯ ಅಲರ್ಜಿ. ಯಾರದೋ ಕಥೆ, ಎಂದೋ ಆಗಿಹೋದ ಘಟನೆ, ಯಾರಿಗೆ ಬೇಕು ಎಂದು ಮೂಗು ಮುರಿಯುವವರೇ ಇಂದು ಹೆಚ್ಚಾಗಿ ಕಾಣುವ ಜನ. ನಾಟಕವೆಂದರೆ ಅವರ ಮನಸ್ಸಿನಲ್ಲಿ ಮೂಡುವುದು ಅದೊಂದು ಕೇವಲ ಮನರಂಜನೆಯ (ಕೆಲವುಸಾರಿ ಕೀಳು ಮಟ್ಟದ) ತಾಣ ಎಂಬ ಚಿತ್ರಣವೇ. ಇನ್ನು ಅವರ ಮಕ್ಕಳಿಗೆ ಪೂರ್ವಜರ ವಿಷಯ ತಿಳಿಸಿಕೊಡುವುದಂತೂ ಕನಸಿನ ಮಾತೇ ಸರಿ. ಹಿಂದಾನೊಂದು ಕಾಲದಲ್ಲಿ ಚಾರಿತ್ರಿಕ ನಾಟಕಗಳಾದ ಮೈಸೂರು ಹುಲಿ, ದುರ್ಗದ ಸಿಂಹ, ಕಿತ್ತೂರು ರಾಣಿ ಚೆನ್ನಮ್ಮ, ರಣಧೀರ ಕಂಠೀರವ, ಯಚ್ಚಮನಾಯಕ, ಚಿಕ್ಕದೇವರಾಯ, ಮೇವಾಡದ ರಾಣಿ ಸಂಯುಕ್ತಾ ಇತ್ಯಾದಿ ನಾಟಕಗಳು ಪ್ರದರ್ಶನ ಹಾಗು ಗಲ್ಲಾ ಪೆಟ್ಟಿಗೆಯಲ್ಲಿ ಜಯಭೇರಿ ಹೊಡೆದು ಜನಮನದಲ್ಲಿ ಹಾಸುಹೊಕ್ಕಾಗಿ ಉಳಿದುಕೊಂಡಿದ್ದವು. ಈಗಿನ ಜನಾಗಂಗದವರು ಅವರೆಲ್ಲಾ ಯಾರು, ಅವರಿಂದ ನಮಗೇನು ಪ್ರಯೋಜನವಾಗಿದೆ, ಎಂದು ಕೇಳುವ ವಿಷಾದಕರ ಬೆಳವಣಿಗೆ ನಮ್ಮ ಕಣ್ಣ ಮುಂದಿದೆ. ಚಲನ ಚಿತ್ರಗಳು, ಟಿವಿ ಸರಣಿಗಳೂ ಚಾರಿತ್ರಿಕ ಕಥಾ ವಸ್ತುವನ್ನು ಕಡೆಗಣ್ಣಿನಿಂದ ನೋಡುತ್ತಿರುವುದು, ಕೇವಲ ಬಣ್ಣದ ಬೆಡಗಿಗೆ ಒತ್ತುಕೊಟ್ಟು ನಮ್ಮ ಯುವ ಜನತೆಯನ್ನು ದಿಕ್ಕುಗೆಡಿಸುತ್ತಿರುವುದು ಬಹಳ ಖೇದಕರ ವಿಷಯವೇ.

ಇಂತಹ ಪ್ರತಿಕೂಲ ಸಂದರ್ಭದಲ್ಲಿಯೂ ಸಹ ತಮ್ಮ ಕಾರ್ಯದಲ್ಲಿ ಅತ್ಯಂತ ನಿಷ್ಠೆ, ಶ್ರದ್ಧೆ, ಭಕ್ತಿ, ದೃಢ ನಿಶ್ಚಯಗಳಿಂದ ಕನ್ನಡ ನಾಡಿನ ಜನತೆಗೆ, ಅದರಲ್ಲಿಯೂ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಚರಿತ್ರೆಯೆಂಬ ಸಮುದ್ರದ ಆಳಕ್ಕೆ ಇಳಿದು, ಜಾಲಾಡಿ, ಉತ್ತಮೋತ್ತಮ ರತ್ನಗಳನ್ನು ಹೆಕ್ಕಿ, ಸಂಸ್ಕರಿಸಿ, ಗತಿಸಿದ ಘಟನೆಗಳಿಗೆ ಜೀವಕೊಟ್ಟು ರಂಗದ ಮೇಲೆ ಗತಕಾಲದ ಸಂದರ್ಭವನ್ನು ನಿರ್ಮಿಸಿ, ಆಡಿ, ನೋಡಿ, ನಲಿದು, ಪ್ರೇಕ್ಷಕ ಪ್ರಭುಗಳ ಮನ ಸೂರೆಗೊಳ್ಳುತ್ತಿರುವ ವ್ಯಕ್ತಿ ಶ್ರೇ ವೆಂಕಟಪ್ಪ ಮತ್ತು ಶ್ರೀಮತಿ ತಿಮ್ಮಕ್ಕ ದಂಪತಿಗಳ ಪುತ್ರ ಆಂಜನೇಯ (೪೮).

ಕಲಾಪದವಿ (ಬಿಎ) ಹಾಗು ನಾಟಕದಲ್ಲಿ ಡಿಪ್ಲೊಮಾ ಪಡೆದಿರುವ ಆಂಜನೇಯ ಯಾವ ತಜ್ಞ ನಾಟಕಕಾರನಿಗೂ ಸರಿಸಾಟಿಯಾಗಬಲ್ಲರು. ಅವರು ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಮನೆ, ಮನೆತನ, ಮಹಾನ್ ತನ, ಹಿಂದಿನ ಮತ್ತು ಮುಂದಿನ ತಲೆಮಾರುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಹಲವಾರು ನಾಟಕಗಳನ್ನು ಬರೆದು, ಸಂಭಾಷಣೆ ತಯಾರಿಸಿ, ಹಾಡುಗಳನ್ನು ಕಟ್ತಿ, ವೇಶಭೂಷಣಗಳನ್ನು ಹೊಂದಿಸಿ, ಪರಿಕರಗಳನ್ನು ಜೊತೆ ಮಾದಿ, ಬೆಳಕು-ಧ್ವನಿ ಸಂಯೋಜಿಸಿ, ಪ್ರಸಾದನವನ್ನು ಪ್ರಾರೂಪಿಸಿ ಯಶಸ್ವಿಯಾಗಿದ್ದಾರೆ.

ಬೆಂಗಾಳೂರು ನಿರ್ಮಾಪಕ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ೧೫೩೭ರಲ್ಲಿ ಬೆಂಗಳೂರು ಕೋಟೆ ಹೆಬ್ಬಾಗಿಲಿಗೆ ತನ್ನ ಜೀವನವನ್ನೇ ಅರ್ಪಿಸಿಕೊಂಡದ್ದು ಐತಿಹಾಸಿಕ ಘಟನೆ. ಆಕೆಯ ಸಮಾಧಿ ಮತ್ತು ದೇವಾಲಯಗಳನ್ನು ಆಕೆಯ ತವರಾದ ಕೋರಮಂಗಲದಲ್ಲಿ ಕಟ್ಟಿಸಿದ ಕೆಂಪೇಗೌಡರು ಆಕೆಯ ಜೀವ ತ್ಯಾಗದ ವಿಷಯವಾಗಿ ಬಹಳ ನೊಂದು ವೈರಾಗ್ಯ ತಾಳಿ, ರಾಜ್ಯಾಡಳಿತವನ್ನು ತ್ಯಜಿಸಿ, ತಮ್ಮ ಕೊನೆಗಾಲವನ್ನು ಶಿವಗಂಗೆಯಲ್ಲಿ ಕಳೆದರು. ಲಕ್ಷ್ಮೀದೇವಿಯ ಸಮಾಧಿ ಮತ್ತು ದೇವಾಲಯಗಳ ರಕ್ಷಣೆಗಾಗಿ ಕೆಂಪೇಗೌಡರು ದತ್ತಿಯಾಗಿ ನೀಡಿದ್ದ ೧೩ ಎಕರೆ ಜಮೀನು ನೆಲಗಳ್ಳರ ಕೈವಶವಾಗಿ, ಸಮಾಧಿಯು ಹೇಸಿಗೆ ಮಾಡುವವರ ತಾಣವಾಗಿ ವಿನಾಶದ ಅಂಚಿನಲ್ಲಿತ್ತು. ಸತತವಾಗಿ ೪ ವರ್ಷಗಳ ಕಾಲ ಕೆಂಪೇಗೌಡರ ಮತ್ತು ಅವರ ವಂಶಸ್ಥರ ಬಗ್ಗೆ ಸಂಪೂರ್ಣ ಆಧಾರಗಳನ್ನು ಸಂಗ್ರಹಿಸಿ, ಬೆಂಗಾಳೂರ ಭಾಗ್ಯಲಕ್ಷ್ಮಿ ನಾಟಕವನ್ನು ಬರೆದು ಜನಮನವನ್ನು ಈ ಕಡೆ ಸೆಳೆಯಲು ಕರ್ನಾಟಕದಾದ್ಯಂತ ೨೪ ಪ್ರದರ್ಶನಗಳನ್ನು ನೀದಿ, ಹೋರಾಟವನ್ನು ನಡೆಸಿದರ ಫಲವಾಗಿ ೨೦೦೦ನೇ ಇಸವಿಯಲ್ಲಿ ಈ ಸಮಾಧಿ ಸರಕಾರದ ಸಂರಕ್ಷಣೆಗೆ ಒಳಪಟ್ಟಿತು. ಇದೀಗ ೪೨ ಪ್ರದರ್ಶನಗಳನ್ನು ಈ ನಾಟಕ ಕಂಡಿದ್ದು, ಸಧ್ಯದಲ್ಲಿಯೇ ೫೦ನೆ ಪ್ರದರ್ಶನವನ್ನು ನಡೆಸಿ ನಾಟಕದ ಸುವರ್ಣ ಮಹೋತ್ಸವವನ್ನು ಆಚರಿಸುವ ಗುರಿಯನ್ನು ಇಟ್ತುಕೊಂಡಿದ್ದಾರೆ.

ಮುಂದುವರೆಯುವುದು
ಎ.ವಿ. ನಾಗರಾಜು, ೯೮೪೫೪೯೬೪೫೯

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 207 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ - ಮುಂದುವರೆದ ಲೇಖನ
  • ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ - ಮುಂದುವರೆದ ಲೇಖನ
  • ೮೪ರ ಹರಯದ ಉತ್ಸಾಹಿ ರಂಗ ನಟ - ಚನ್ನಬಸಯ್ಯ ಗುಬ್ಬಿ
  • ಗೆಜ್ಜೆ ಹೆಜ್ಜೆ- ರಂಗಭೂಮಿ ಪತ್ರಿಕೆ - ರಘೋತ್ತಮ್ ಕೊಪ್ಪರ
  • ಈ ಟೀವಿಯಲ್ಲಿ ಕನ್ನಡ ನಾಟಕಗಳು
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 131 ಅತಿಥಿಗಳು ಆನ್ಲೈನ್ ಇರುವರು.


ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator