ಕೆಲವು ಹನಿಗವನಗಳು
ಜೀವನ
------
ರೀತಿಯಂತೆ, ನೀತಿಯಂತೆ
ಯಾರು ವಿಧಿಸಿದರು ಸ್ವಾಮಿ
ಬದುಕಿಗೊಂದು ಅಳತೆ ಮಾಪನ.
ಅಳತೆಗೆ ಸಿಕ್ಕುವುದಲ್ಲ,
ಅನುಭೂತಿಗೆ ದಕ್ಕುವುದು ಜೀವನ.
ಮೂರ್ಖತನ
---------
ಬೊಚ್ಚುಬಾಯಿಂದ ಬೊಚ್ಚುಬಾಯಿಗೆ
ಬೆಳದಿಂಗಳನ್ನೇ ಅಂಗೈಲಿ
ಹಿಡಿದಿಟ್ಟಂತೆ ಬದುಕಿದ
ಶತಾಯುಷಿಗೆ ಕೊಡುಗೆ
’ಬದುಕಲು ಕಲಿಯಿರಿ’ ಹೊತ್ತಗೆ !

- Login or register to post comments
- 256 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: