ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಕಾರಂತರ ಜೀವಂತ ಪಾತ್ರಗಳು ೩

January 13, 2008 - 2:42pm — csomsekraiah

(ಸಂಕಲನದ ೩೭ನೇ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

ಜಗತ್ತಿನ ಜನರೆಲ್ಲರೂ ಪ್ರಸಿದ್ದರಲ್ಲ ; ಈ ಜಗತ್ತಿನ ಅಪಾರ ಜನಜಂಗುಳಿಯ ಎದುರು ,ಪ್ರಸಿದ್ದರ ಸಂಖ್ಯೆಯು ಅತ್ಯಂತ ಸಣ್ಣದು . ಪ್ರಸಿದ್ದರಲ್ಲಿ ಪ್ರಸಿದ್ದಿಯ ಯಾವ ಆಕಾಂಕ್ಶೆಯೂ ಇಲ್ಲದೆ,ಕೇವಲ ತಮ್ಮ ಕರ್ತವ್ಯದಲ್ಲಿ ಮುಳುಗಿ , ತನ್ಮಯತೆಯಿಂದ ಲೋಕದ ಹಿತದ ಬಗ್ಗೆ ಮಾತ್ರ ಯೋಚಿಸಿ , ಕಾರ್ಯ ತತ್ಪರರಾದವರನ್ನು, ಯಾವು ಯಾವುದೋ ರೀತಿಯಿಂದ ಜನತೆ ಗುರುತಿಸಿ,ಅವರನ್ನು ಗೌರವದಿಂದ ನಡೆಸಿಕೊಳ್ಳುವುದು ಸ್ವಾಭಾವಿಕ ; ಬಹುಶಃ ಇದು ನಿಸರ್ಗದ ಆಯ್ಕೆಯೂ ಇರಬಹುದು . ಅದರ ಹೊರತಾಗಿ , ಲೋಕದ ಹಿತದ ಬಗ್ಗೆ ಕಾಳಜಿ ಇದ್ದೂ ಸಹ, ತಮಗೆ ಪ್ರಸಿದ್ದಿ ದೊರಕಲೆಂದು ಹಂಬಲಿಸುವುದು , ಮಧ್ಯಮ ಮನಸ್ಸುಗಳ ಪ್ರವೃತ್ತಿ , ಇಂತಹವರಿಗೆ ಸಹ ಗೌರವಾದರಗಳು ದೊರಕುವುದೂ ಸಹ ಅಸಂಭವವಲ್ಲ . ಆದರೆ ಯಾವ ಜನ ಹಿತವನ್ನೂ ಲೆಕ್ಕಿಸದೆ ; ಯಾವುದೇ ಸಾಧನೆಯನ್ನೂ ಸಾಧಿಸದೆ , ಕೀರ್ತಿಗಾಗಿ ಬಾಯಿ ಬಾಯಿ ಬಿಡುವ ಅಥವಾ ವಾಮಮಾರ್ಗದಿಂದ ಪ್ರಚಾರ ಗಿಟ್ಟಿಸುವ ಕ್ಷುದ್ರ ಜೀವಿಗಳಿಗೆ , ಈ ಭೂಮಿಯ ಮೇಲೆ ಬರಗಾಲವೇ?

ತೋರಿಕೆಯ ಆಷಾಢಭೂತಿತನದಿಂದ ಪ್ರಸಿದ್ದಿಯನ್ನು ಸಾಧಿಸಲು , ಆಧ್ಯಾತ್ಮದ ಸೋಗು ಅತ್ಯಂತ ಸುಲಭದ ದಾರಿ . ನಿಜವಾದ ಆಧ್ಯಾತ್ಮವು ,ವ್ಯಕ್ತಿಯ ಅಂತರಂಗದ ಅನನ್ಯ ಹುಡುಕಾಟ, ಸೋಗಿನ ಆಧ್ಯಾತ್ಮಕ್ಕೆ, ಅಂತರಂಗವೂ ಬೇಡ , ಹುಡುಕಾಟವೂ ಬೇಡ . ಯಾರಿಗೂ ಅರ್ಥವಾಗದ ಪರಿ ಭಾಷೆಯಲ್ಲಿ , ಎಲ್ಲರೂ ತಲೆದೂಗುವಂತೆ ಬೋಧಿಸಬಹುದಾದ ವಾಚಾಳಿತನವಿದ್ದರೆ ಸಾಕು; ಬೊಧಿಸುವವನಿಗೇ ಅದರ ತಲೆ ಬುಡ ಅರ್ಥವಾಗದಿದ್ದರೂ ,ಎದುರಿಗಿರುವವರನ್ನು ತಲೆದೂಗಿಸುವ ಕಲೆ ಗೊತ್ತಿದ್ದರೆ ,ಇಲ್ಲಿ ಬಚಾವಾಗಬಹುದು . ಇಂತಹ ನಾಟಕದ ಸಾಧಕರನ್ನು ನಂಬುವ, ಮುಗ್ಧರ ಜನ ಸಾಗರವೇ ಇರುವುದರಿಂದ, ಸೋಗಲಾಡಿಗಳ ನಾಟಕಗಳಿಗೆ ಇದು ತುಂಬಾ ಪ್ರಶಸ್ತವಾದ ಕ್ಷೇತ್ರ.ಶಿವರಾಮ ಕಾರಂತರಿಗೆ ಇಂತಹ ಜನಗಳ ಬೂಟಕಗಳನ್ನು ಕಂಡರೆ ,ಕೆಂಡಾಮಂದಲದಂತಹ ಸಿಟ್ಟು.ಅವರ ಅನೇಕ ಕಾದಂಬರಿಗಳಲ್ಲಿ, ಈ ಸಾತ್ವಿಕ ಕೋಪ ಹೊರಹೊಮ್ಮುತ್ತಲೇ ಇರುತ್ತದೆ.

ಈ ಪ್ರಸಿದ್ದರು, ಪ್ರಸಿದ್ದರ ಪಾತ್ರಧಾರಿಗಳು, ಇವರೆಲ್ಲರ ಕತೆ ಹಾಗಿರಲಿ , ಇನ್ನು ಕೋಟ್ಯಾಂತರ ಜನ ಅನಾಮಧೇಯರು , ಅವರ ಪಾಡು ಹೇಗೆ ? ಅವರದು ನಿರರ್ಥಕ ಬದುಕೇ ? ಎಂಬ ಪ್ರಶ್ನೆಗೆ, ಉತ್ತರ ಮಾತ್ರ ಕುತೂಹಲ ಕಾರಿ . ಬದುಕು ಎಂಬುದು ಯಾವುದೂ ನಿರರ್ಥಕವಲ್ಲ ; ನಿರರ್ಥಕವಾಗಿದ್ದರೆ ಬದುಕು ರೂಪುಗೊಳ್ಳುತ್ತಲೇ ಇರಲಿಲ್ಲ.ಅನೇಕ ಬಾರಿ ಸಮಾಜದ ಯಾವುದೋ ಮೂಲೆಯಲ್ಲಿ , ತನ್ನ ಭಾಗಕ್ಕೆ ವಿಧಿಯಾಗಿ ಬಂದ ,ಅಥವಾ ಆಕಸ್ಮಿಕವಾಗಿ ಒದಗಿದ ಸನ್ನಿವೇಶಗಳನ್ನೇ ಸಹ್ಯವಾಗಿಸಿಕೊಂಡು, ಯಾರನ್ನೂ ; ಯಾವುದನ್ನೂ ದೂರದೆ ತನ್ನ ಪಾಡಿಗೆ ತಾನು ನಿಸ್ಪೃಹವಾಗಿ ಬಾಳು ನಡೆಸುತ್ತಾ , ಅನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವ ಜೀವ , ಹೇಗೆ ದೊಡ್ಡದಲ್ಲ? ಅದು ದೊಡ್ಡದಲ್ಲವಾದರೆ , ಆಷಾಡಭೂತಿತನವೇ ದೊಡ್ಡದೇ?ಎಂಬ ಸಹಜ ಪ್ರಶ್ನೆಗಳಿಗೆ , ’ಸನ್ಯಾಸಿಯ ಬದುಕು’ ಕಾದಂಬರಿಯು, ತಾನೇ ಅನಾಥಯಾದ ,ಆದರೂ ಅನೇಕ ಅಸಹಾಯಕರಿಗೆ ,ಅನೇಕ ರೀತಿಯಿಂದ ಆಶ್ರಯದಾತೆಯಾದ ರುಕ್ಮಾಯಿಯ ಜೀವನವೇ ಉತ್ತರ . ಕಾರಂತರು ಚಿತ್ರಿಸಿರುವ ಅನೇಕ ಜೀವಂತ ಪಾತ್ರಗಳಲ್ಲಿ, ಈ ರುಕ್ಮಾಯಿ ಸದಾ ನೆನಪಿನಲ್ಲಿ ಉಳಿಯುವ ಅತ್ಯಂತ ಸರಳ ಜೀವ .

’ಸನ್ಯಾಸಿಯ ಬದುಕು’ ’ ಕನ್ನಡಿಯಲ್ಲಿ ಕಂಡಾತ’ ಈ ಎರಡೂ ಕಾದಂಬರಿಗಳಲ್ಲಿ ಇಂತಹ ಎರಡು ರೀತಿಯ ಮನಸ್ಸುಗಳ ಚಿತ್ರಣ, ಸೊಗಸಾಗಿ ಮೂಡಿಬಂದಿದೆ .ಎರಡೂ ಕಾದಂಬರಿಗಳ ನಾಯಕರೂ ಸಹ , ಯಾವು ಯಾವುದೋ ಕಾರಣಗಳಿಂದಾಗಿ , ಮನೆ ತೊರೆದು ಹೋಗುತ್ತಾರೆ . ಹಾಗೆಂದು ಇವರೇನೂ ಬುದ್ದರಲ್ಲ ; ಅಪ್ರಬುದ್ದರು. ಇವರು ಮಾಡಿದ ಘನ ಕಾರ್ಯವೆಂದರೆ , ಕಟ್ಟಿಕೊಂಡ ಮಡದಿಯರನ್ನು ನಡು ನೀರಿನಲ್ಲಿ ಕೈ ಬಿಟ್ಟು ಪಲಾಯಾನ ಮಾಡಿದ್ದು .ಇವರನ್ನು ಕಟ್ಟಿಕೊಂಡ ತಪ್ಪಿಗೆ ಆ ಹೆಣ್ಣು ಜೀವಗಳು ಇವರು ದಯ ಪಾಲಿಸಿದ ಮಕ್ಕಳು ಮರಿಗಳನ್ನು ಕಟ್ಟಿಕೊಂಡು, ಪಟ್ಟದ್ದು ಮಾತ್ರ ಪಡಬಾರದ ಯಾತನೆಯನ್ನು .

ಎರಡೂ ಕಾದಂಬರಿಗಳಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಒಂದೇ ರೀತಿಯ ಕಥಾ ನಾಯಕರಂತೆ ಕಂಡು ಬರುವ , ಸನ್ಯಾಸಿ ಬದುಕಿನ ಶಂಕರರಾಯ ಮತ್ತು ಕನ್ನಡಿಯಲ್ಲಿ ಕಂಡಾತದ ಮಂಗಲಪಾಡಿಯ ಪರಮೇಶ್ವರ , ಕಾದಂಬರಿಗಳ ಕೊನೆಯ ಭಾಗಕ್ಕೆ ಬರುವ ವೇಳೆಗೆ ಅವರ ವ್ಯಕ್ತಿತ್ವಗಳಲ್ಲಿ ಸಂಭವಿಸುವ ಅಪಾರ ವ್ಯತ್ಯಾಸವೆಂಬುದು , ಬೆರಗುಗೊಳಿಸುವಂತಹುದು. ಆರಂಭಕ್ಕೆ ಕಾರಂತರೇತಕ್ಕೆ ಒಂದೇ ರೀತಿಯ ಪಾತ್ರಗಳನ್ನು ಎರಡು ಕಾದಂಬರಿಗಳನಲ್ಲಿ ಚಿತ್ರಿಸಲು ಹೊರಟರು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದಾದರೂ ,ಈ ಎರಡು ಪಾತ್ರಗಳ ಮನಸ್ಸಿನ ಸೂಕ್ಷ್ಮವ್ಯತ್ಯಾಸಗಳು , ನಂತರ ಸಂಭವಿಸುವ ವಿಭಿನ್ನ ಮನೋವ್ಯಾಪಾರಗಳು , ಸಂಪೂರ್ಣ ಭಿನ್ನ ಗುಣ ಸ್ವಭಾವಗಳನ್ನು ಅನಾವರಣಗೊಳಿಸುತ್ತವೆ.

ಶಂಕರರಾಯ ತನ್ನ ಧಣಿಯ ದುಡ್ಡನ್ನು ಲಪಟಾಯಿಸಿ, ಸಿಕ್ಕುಹಾಕಿಕೊಳ್ಳುವ ಕಾರಣಕ್ಕೆ ಹೆದರಿ , ಊರು ತೊರೆದವನು . ಪರಮೇಶ್ವರ ಟೀಚರ್ ಚಂದ್ರಿಯ ಕಾರಣಕ್ಕೆ ಊರು ತೊರೆದನೋ ? ಅಥವಾ ಅವನ ಮನಸ್ಸೇ ಅಂತಹ ಅಧ್ವಾನದ ಹಾದಿಯಲ್ಲಿತ್ತೋ? ಯಾವುದೂ ಅರ್ಥವಾಗದ ಗೊಂದಲದ ಪರಿಸ್ಥಿತಿ . ಅವನು ಅವನ ಸಡ್ಡುಗ ಜಯರಾಮನಲ್ಲಿ ಕೋಪದಲ್ಲಿ ವ್ಯಕ್ತಪಡಿಸುವುದು ಮಾತ್ರ ಹೆಂಡತಿ ಕಾವೇರಿಯ ಮೇಲಿನ ಅಸಮಧಾನವನ್ನು . ಅವನು ಮದ್ರಾಸು ಬಿಡುವಾಗ ಯಾರ, ಯಾವ ವಿಧವಾದ ಸಮಾಧಾನದ ಮಾತುಗಳನ್ನೂ ಕಿವಿಯ ಮೇಲೆ ಹಾಕಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ . ಹೆಂಡತಿಗೆಗೆ ಸರಿಯಾದ ಬುದ್ದಿ ಕಲಿಸುವ ಪ್ರತಿ ಜ್ಝೆಯೊಡನೆಯೇ ಅವನು ಲೋಕ ಸಂಚಾರಿಯಾಗುತ್ತಾನೆ ; ಆದರೆ ಬುದ್ದಿ ಕಲಿತದ್ದು ಮಾತ್ರ ಸ್ವತಹ ಅವನೇ . ಅವನಿಗೆ ಅವನದೇ ಅವನದೇ ನಿಜವಾದ ಅಂತರಂಗದ ಕನ್ನಡಿ , ಪ್ರತಿಬಿಂಬಿಸುತ್ತಾ ಹೋಗಿದ್ದು ಮಾತ್ರ ಅವನದೇ ಪ್ರತಿ ರೂಪವನ್ನು ; ಕನ್ನಡಿಯ ಗುಣ ಧರ್ಮವೇ ಹಾಗೆ , ಎದುರಿಗಿದ್ದುದನ್ನು ಇದ್ದಹಾಗೆಯೇ ತೋರಿಸುವುದು ; ಅದರಿಂದಾಗಿ ಕುರೂಪಿ ಕೋಪಗೊಂಡರೆ , ಆ ಕನ್ನಡಿಯದು ಹೇಗೆ ತಾನೆ ತಪ್ಪಾದೀತು ?

ಅವನು ಉತ್ತರ ಇಂಡಿಯಾದ ಬಹು ಭಾಗಗಳನ್ನು ಗತಿ , ಗುರಿ ಎರಡು ಇಲ್ಲದೆ ತಿರುಗಿ , ಪುನಃ ಮರಳಿದ್ದು ಮಾತ್ರ ಗೇರುಸೊಪ್ಪೆಗೆ; ತನ್ನ ಊರಿನ ಸನಿಹದ ಊರಿಗೆ . ಈ ವೇಳೆಗೆ ಪರಮೇಶ್ವರನಿಗೆ ತನ್ನ ತಪ್ಪಿನ ಅರಿವಾಗಿರುತ್ತದೆ , ಆದರೆ ಆ ತಪ್ಪನ್ನು ತಿದ್ದಿಕೊಳ್ಳಲಾರದಷ್ಟು ಕಾಲ ಸರಿದಿರುತ್ತದೆ . ಗಂಡ ಪುನಃ ತನಗೆ ದಕ್ಕಲಾರನೆಂದು ಅರಿತುಕೊಂಡ ಅವನ ಹೆಂಡತಿ ಕಾವೇರಿ ಮಕ್ಕಳನ್ನು ಕಟ್ಟಿಕೊಂಡು ಬಾಳಿನ ಹೋರಾಟದಲ್ಲಿ ತೊಡಗಿಕೊಳ್ಳುತ್ತಾಳೆ . ಅಕ್ಷ್ರಶಃ ಬೀದಿಗೆ ಬಿದ್ದವನೆಂದರೆ ನಮ್ಮ ಪರಮೇಶ್ವರನೇ .

ಇಷ್ಟೆಲ್ಲಾ ಮೂರ್ಖತನವಿದ್ದೂ , ಅವನ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಕಪಟದ ವಿರುದ್ದದ ಮನೋಭಾವವಿರುತ್ತದೆ ; ತಾನು ಮಾಡಿಕೊಂಡ ಸ್ವಯಂಕೃತಾಪರಾಧಗಳ ಬಗ್ಗೆ ಅರಿವಿರುತ್ತದೆ , ಹೀಗಾಗಿ ಜನರ ಮುಗ್ಧತೆಯ ದುರುಪಯೋಗವನ್ನು ಅವನು ಮಾಡಿಕೊಳ್ಳುವುದಿಲ್ಲ .( ಮುಂದುವರಿಯುವುದು)

  • ವಿಮರ್ಶೆ
~.~
  • Login or register to post comments
  • 311 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂತರ ಜೀವಂತ ಪಾತ್ರಗಳು ೮ (೧)
  • ಕಾರಂತರ ಜೀವಂತ ಪಾತ್ರಗಳು ೩
  • ಕಾರಂತರ ಜೀವಂತ ಪಾತ್ರಗಳು -೫ (೨)
  • ಕಾರಂತರ ಜೀವಂತ ಪಾತ್ರಗಳು ೬ (೧)
  • ಕಾರಂತರ ಜೀವಂತ ಪಾತ್ರಗಳು ೩ (೩ರಲ್ಲಿ ಕೊನೆಯಭಾಗ)
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 135 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator