Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಿವೇಕರ ಕಥಾಲೋಕ-4

January 17, 2008 - 8:18pm — narendra

ಮೊದಲ ನಾಟಕ : ಸಕ್ಕರೆ ಗೊಂಬೆ(1999)

ಸಕ್ಕರೆ ಗೊಂಬೆ ನಾಟಕವನ್ನು ಗಮನಿಸಿದರೆ ವಿವೇಕರ ಹುಲಿಸವಾರಿ ಸಂಕಲನದ ಎಲ್ಲಾ ಕಥೆಗಳನ್ನು ಇದೊಂದೇ ಮೀರಿಸುವಂತಿದೆ. ಕಾರ್ಪೋರೇಟ್ ಜಗತ್ತು ಮತ್ತು ಅದು ತನ್ನ ತೆಕ್ಕೆಯೊಳಗಿರುವ ಮಧ್ಯಮವರ್ಗ ಮತ್ತು ಮೇಲ್ವರ್ಗದವರ ಹಾಗೂ ಈ ಕಾರ್ಪೊರೇಟ್ ಸಂಸ್ಕೃತಿಯ ತೀರಾ ಹೊರಗಿನ ವಲಯದಲ್ಲೇ ಒಂದು ಬದುಕನ್ನು ನಡೆಸುತ್ತಿರುವ ಕೆಲವು ವರ್ಗದವರ ದಿನನಿತ್ಯದ ಎಲ್ಲವನ್ನೂ ಹೇಗೆ ಮತ್ತು ಎಷ್ಟು ಪ್ರಭಾವಿಸಿದೆ ಎನ್ನುವುದನ್ನು ಇಲ್ಲಿ ಹೆಚ್ಚು ಸಂತುಲಿತ ಮನೋಭಾವದ ಗಮನಿಸುವಿಕೆ ಇದೆ. ಸ್ಥೂಲವಾಗಿ ಕಂತು ಕಥೆ ಮಾರುಕಟ್ಟೆಯ ಸೆಳೆತ ಹಳ್ಳಿಯ ಬದುಕನ್ನು ಹೇಗೆ ತಲ್ಲಣಗೊಳಿಸಬಲ್ಲದು ಎಂಬುದನ್ನು ಹೇಳಿದರೆ, ಪ್ರತ್ಯಕ್ಷ ಕಥೆ ತೀರಾ ಅಂತರಂಗದ್ದಾಗಬಹುದಾದ ಗಂಡು ಹೆಣ್ಣು ಸಂಬಂಧ, ಕೊನೆಗೆ ಕಾಮವನ್ನು ಕೂಡ ಅದು ತನ್ನ ಪ್ರಭಾವಳಿಯ ಒಳಗೆ ಸೆಳೆದುಕೊಳ್ಳುವ ಆಘಾತಕಾರಿ ಚಿತ್ರ ನೀಡುತ್ತದೆ. ಹುಲಿ ಸವಾರಿ ಕಾರ್ಪೋರೇಟ್ ಜಗತ್ತಿನ ಆಂತರಿಕ ವರ್ಗವನ್ನು ಹೇಗೆ ಮಾರುಕಟ್ಟೆಯೇ ಆವರಿಸಿಕೊಂಡು ಅವರ ಚಿಂತನಾ ಶೈಲಿ, ಬದುಕಿನ ಆದ್ಯತೆಗಳನ್ನು ಬದಲಿಸಬಲ್ಲದು ಎಂಬುದರತ್ತ ಹೆಚ್ಚು ಗಮನ ನೀಡಿದೆ. ಆದರೆ ಸಕ್ಕರೆಗೊಂಬೆ ಈ ಎಲ್ಲ ಬಗೆಯ ಮನುಷ್ಯರನ್ನು ಕೇವಲ ಮನುಷ್ಯರನ್ನಾಗಿಯೇ ಗ್ರಹಿಸುತ್ತ ಅವರ ಮನುಷ್ಯತ್ವವನ್ನು ಈ ಕಾರ್ಪೋರೇಟ್ ಸಂಸ್ಕೃತಿ ಹಲವು ಪಾತಳಿಗಳಲ್ಲಿ ಹೇಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನೇ ಸೂಕ್ಷ್ಮವಾಗಿ ಸೂಚಿಸುವಂತಿದೆ.

ಇಲ್ಲಿ ಬರುವ ಮುತ್ಯಾನ ಪಾತ್ರ ಗಮನಿಸಿ. ಇದು ಈ ನಾಟಕದ ಒಂದಾನೊಂದು ಆಯಾಮವನ್ನು ಸೂಚಿಸುವ ಬಹು ಮುಖ್ಯಪಾತ್ರ. ಅದೇ ರೀತಿ ನಂದಕುಮಾರನ ಪಾತ್ರ ಕೂಡ ತುಂಬ ನಾಜೂಕಾದದ್ದು. ಎಲ್ಲ ನಾಟಕೀಯತೆಯನ್ನು ಹೊಂದಿರುವಂಥದ್ದು. ಈತ ಬೇಕಾದಾಗ ಬೇಕಾದ ಹಾಗೆ ಕಾಣಿಸಿಕೊಳ್ಳಬಲ್ಲ ಸಾಧ್ಯತೆಯನ್ನು ಉಳಿಸಿಕೊಂಡಿರುವುದೇ ಈ ನಾಟಕದ ಮಹತ್ವದ ಅಂಶ. ಪಾರ್ಶ್ವವಾಯುವಿನಿಂದ ಓಡಾಡಲಾರದ, ಮಾತನಾಡಲಾರದ ಈತ ನ್ಯಾಯಾಲಯದ ಒಂದು ದೃಶ್ಯದಲ್ಲಿ ಮಾತಿಲ್ಲದೆ ನಿಂತು ತನ್ನ ಹಿಯರಿಂಗಿಗೆ ಸಾಕ್ಷಿಯಾಗುವ ಪ್ರಸಂಗವಿದೆ. ಅಲ್ಲಿ ಬರುವ ಆತನ ಮೇಲಿನ ಮಗನ ಆರೋಪಗಳು, ಅವನದೇ ಆದ ದೃಷ್ಟಿಕೋನದ ಸಮರ್ಥನೆ ಏನೇ ಇದ್ದರೂ ಈ ದೃಶ್ಯದ ಪರಿಕಲ್ಪನೆ ಬಹಳ ಕುತೂಹಲಕರ ಮತ್ತು ಅದರ ನಾಟಕೀಯತೆಗಾಗಿಯೇ ಅದು ಇಷ್ಟವಾಗುವಂಥದ್ದು. ಹಾಗೆಯೇ ನಾಟಕ ಅನೇಕ ಕಡೆಗಳಲ್ಲಿ ಸೂಚ್ಯವಾಗಿಯೇ ನಂದಕುಮಾರನ ಕಬಂಧ ಬಾಹುಗಳು ಎಲ್ಲೆಲ್ಲೂ ಚಾಚಿರುವುದನ್ನು ಕಾಣಿಸಿರುವ ರೀತಿ ಕೂಡ ಬಹಳ ಮೊನಚಾಗಿ, ಪ್ರೇಕ್ಷಕನನ್ನು ತಟ್ಟುವಂತೆ ಬಂದಿದೆ.

ಇನ್ನು ಡೈರೆಕ್ಟರುಗಳಲ್ಲಿ, ಅವರ ಮಾತುಕತೆ, ವ್ಯವಹಾರದಲ್ಲಿ ಮೇಲ್ನೋಟಕ್ಕೆ ಅಂಥ ವಿಶೇಷವೇನಿಲ್ಲ. ಆದರೆ ಅವರೆಲ್ಲ ಒಂದು ವರ್ಗದೊಳಗಿನ ಆಂತರಿಕ ಜಗತ್ತನ್ನು ನಮಗೆ ಕಾಣಿಸುತ್ತ ಇಡೀ ನಾಟಕ ಕೇವಲ ಕಾರ್ಪೊರೇಟ್ ಜಗತ್ತಿನ ಕುರಿತಾಗಿಲ್ಲ, ಅದು ಮನುಷ್ಯನ ಕುರಿತಾಗಿದೆ ಎನಿಸುವಂತೆ ಮಾಡುವುದು ಗಮನಾರ್ಹವಾಗಿದೆ. ಇಂಥ ಒಂದು ಆಯಾಮ ಈ ನಾಟಕಕ್ಕೆ ದಕ್ಕಿರುವುದು ಈ ಪಾತ್ರಗಳ ನಡೆ ನುಡಿಯ ಮೂಲಕವೇ.

ಹಾಗೆಯೇ ಇಲ್ಲಿ ಬರುವ ಶರ್ವಿಲಕನ ಗೀತೆ ಎಂಬ ಕಥೆಯ ಯಥೋಚಿತ ಬಳಕೆ. ಬಹುಷಃ ಇಡೀ ನಾಟಕದ ತಲ್ಲಣಗಳನ್ನು, ಆಘಾತಗಳನ್ನು ನಾಟಕದ ಈ ಅಂಕ ಅತ್ಯಂತ ಸುಪುಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಹಿಡಿದಿಟ್ಟಿದೆ. ನಾಟಕದ ಹೆಸರೇ ಸೂಚಿಸುವಂತೆ ಈ ಸಕ್ಕರೆಗೊಂಬೆಯ ಪ್ರಕರಣ ಕಾರ್ಪೊರೇಟ್ ಜಗತ್ತಿನ ಮೂಲಭೂತ ಸಿದ್ಧಾಂತವನ್ನು ಮತ್ತು ಅದರ ಅನಿವಾರ್ಯತೆಯನ್ನು ಜೊತೆಜೊತೆಯಾಗಿಯೇ ಪ್ರಸ್ತುತಪಡಿಸಿ ದಂಗುಬಡಿಸುವ ರೀತಿಯೇ ನಾಟಕದ ಯಶಸ್ಸನ್ನು ನಿರ್ಧರಿಸಿಬಿಟ್ಟಿರುವಂತಿದೆ. ಬೊಂಬೆ ಸಕ್ಕರೆಯದು. ಸಕ್ಕರೆಯನ್ನು ಸಮಾರಂಭದ ಕೊನೆಯಲ್ಲಿ ಎಲ್ಲರಿಗೂ ಹಂಚುವುದು ಇಲ್ಲಿನ ರಿಚ್ಯುಯಲ್, ಅದನ್ನು ಹಂಚಿಕೊಳ್ಳುವವರಿಗೆ, ಹಂಚಿಕೊಳ್ಳಲು ಉತ್ಸುಕರಾಗಿ ಕಾದು ನಿಂತವರಿಗೆ. ಅವರಿಗೆಲ್ಲ ಅದರ ಆಚೆ ಈ ರಿಚ್ಯುಯಲ್ ಕುರಿತು ಆಸಕ್ತಿ ಇಲ್ಲ. ಆದರೆ ಅದನ್ನು ಹಂಚುವವರು ಅದನ್ನು ಸಂಪಾದಿಸುವುದಕ್ಕೆ ಅನುಸರಿಸುವ ಒಂದು ರಿಚ್ಯುಯಲ್ ಕೂಡಾ ಇಲ್ಲಿ ಇದೆ. ಅದರ ಬಗ್ಗೆ ಕೂಡಾ ಸಂಪಾದನೆಯ, ವಿತರಣೆಯ ಹೊಣೆಹೊತ್ತವರಿಗೆ ಕುತೂಹಲವಿಲ್ಲ. ಹೀಗೆ ಈ ರಿಚ್ಯುಯಲ್‌ಗಳ ಬಗ್ಗೆ ಅದರ ಅಧ್ವರ್ಯುಗಳಿಗಾಗಲೀ, ಫಲಾನುಭವಿಗಳಿಗಾಗಲೀ ತಿಳಿದುಕೊಳ್ಳುವ ಕುತೂಹಲವೇ ಇಲ್ಲದಿರುವುದು ಮಹತ್ವದ ಅಂಶ. ಈ ರಿಚ್ಯುಯಲ್‌ನ ಮರ್ಮಗಳನ್ನು ಬಲ್ಲವರೇ ಬಲ್ಲರು. ಇದನ್ನು ಒಂದು ರೂಪಕದ ಮಾದರಿಯಲ್ಲಿ ತೆರೆದಿಡುವುದು ನಾಟಕದ ಕಲಾತ್ಮಕತೆಗೆ, ನಾಟಕೀಯತೆಗೆ ಜೊತೆಜೊತೆಯಾಗಿಯೇ ಪುಷ್ಟಿ ನೀಡಿದೆ ಮಾತ್ರವಲ್ಲ ನಾಟಕದ ಪರಿಣಾಮಕಾರತ್ವವನ್ನೂ ಹೆಚ್ಚಿಸಿದೆ. ನಾಟಕ ತೀವೃವಾಗಿ ತಟ್ಟುವಲ್ಲಿ ಎಷ್ಟು ಯಶಸ್ವಿಯಾಗಿದೆ ಎಂದರೆ ವಿವೇಕರ ಹುಲಿಸವಾರಿ ಸಂಕಲನದ ಎಲ್ಲಾ ಕತೆಗಳದ್ದು ಒಂದು ತೂಕವಾದರೆ ಈ ನಾಟಕದ್ದೇ ಇನ್ನೊಂದು ತೂಕ ಎನ್ನಬೇಕು.

  • ವಿಮರ್ಶೆ
Ornamental seperator
  • Login or register to post comments
  • 151 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿವೇಕರ ಕಥಾಲೋಕ-3
  • ವಿವೇಕರ ಕಥಾಲೋಕ-7
  • ಈ ಟೀವಿಯಲ್ಲಿ ಕನ್ನಡ ನಾಟಕಗಳು
  • ವಿವೇಕರ ಕಥಾಲೋಕ
  • ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಮ್ಮಜಿಖಷೆಸ್ಸ ಖನಮ ಒಜಿ
  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 7:26pm
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 5:56pm
  • ಸಂಗನಗೌಡ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 5:27pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator