ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ

January 24, 2008 - 2:01pm — agilenag

ವೃತ್ತಿ ರಂಗಭೂಮಿ ಹಾಗು ತೊಗಲುಗೊಂಬೆಯಾಟದ ಮಹಾನ್ ಕಲಾವಿದ ಶ್ರೀ ಬೆಳಗಲ್ಲು ವೀರಣ್ಣ, ರಾಷ್ಟ್ರೀಯ ಸ್ಥರದ ಪ್ರತಿಭಾಶಾಲಿ.

ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಆಟದ ಪ್ರಕಾರವನ್ನು ಐತಿಹಾಸಿಕ ಮತ್ತು ಸಾಮಾಜಿಕ ವಸ್ತುಗಳ ಕಥಾ ಪ್ರಸಂಗಗಳನ್ನು ನಿರೂಪಿಸಲು ಮೊಟ್ಟ ಮೊದಲಿಗೆ ಭಾರತದಲ್ಲಿ ಬಳಸಿದ ಏಕೈಕ ಕಲಾವಿದರೆಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಸುಮರು ೧೯೩೬ರಲ್ಲಿ ಸಿಳ್ಳೆಕ್ಯಾತ ಜನಾಂಗದಲ್ಲಿ ಹುಟ್ಟಿದ ಈ ಕಲಾವಿದರ ಪೂರ್ವಜರು ಸಹ ಮಹಾನ್ ಕಲಾವಿದರೇ. ತಂದೆ ದೊಡ್ಡ ಹನುಮಂತಪ್ಪ ಪ್ರಸಿದ್ಧ ಪಿಟೀಲು ವಾದಕರಾಗಿದ್ದರು. ಅಲ್ಲದೆ ಬಯಲಾಟದ ಸ್ತ್ರೀ ಪಾತ್ರ ವೇಶಧಾರಿಯಾಗಿದ್ದು, ಇವರ ಅಜ್ಜ ಗಂಜಿ ಹನುಮಂತಪ್ಪ ಜ್ಯೋತಿಷ್ಯ ಮತ್ತು ರಮಲ ವಿದ್ಯಾ ಪಂಡಿತರಾಗಿದ್ದರು.

ಬಾಲಕ ವೀರಣ್ಣ ತಂದೆಯ ಬಯಲಾಟದ ವಿದ್ಯೆಯನ್ನು ಮಗೂಡಿಸಿಕೊಂದ್ರು. ಅವರ ಧ್ವನಿ ಮತ್ತು ಗಾಯನ ಸಿರಿಯನ್ನು ಮೆಚ್ಚಿಕೊಂಡಿದ್ದ ಜೋಳದರಾಶಿ ದೊಡ್ಡನಗೌಡರು ಸಿಡಿಗಿನ ಮೊಳೆ ಶ್ರೀ ವೈ.ಎಂ. ಚಂದ್ರಯ್ಯಸ್ವಾಮಿ ತಮ್ಮ ಕಂಪನಿ ನಾಟಕಗಳಿಗೆ ಹುಟ್ಟು ಕಲಾವಿದರಾದ ವೀರಣ್ಣನವರನ್ನು ಸೇರಿಸಿಕೊಂಡು ಆರಂಭದ ದಿನಗಳಲ್ಲಿ ಪ್ರೋತ್ಸಾಹಿಸಿದರು.

ವೀರಣ್ಣನವರು ಯಾವುದೇ ಶಾಲೆಗೆ ಹೋಗಿ ಅಕ್ಷರ ಕಲಿತವರಲ್ಲ. ಅವರು ಕಲಿತದ್ದೆಲ್ಲಾ ರಂಗಭೂಮಿಯಿಂದ ಮತ್ತು ಬದುಕಿನಿಂದ. ಇವರ ಗುರುಗಳಾದ ವೈ.ಎಂ. ಚಂದ್ರಯ್ಯಸ್ವಾಮಿ ಹೇಳಿ ಕಲಿಸಿದ್ದೇ ವೀರಣ್ಣನವರ ಶಿಕ್ಷಣ. ಆ ಜ್ಞಾನವೇ ಅವರನ್ನು ಪುರಾಣವೇಕೆ, ಆಧುನಿಕ ಸಾಹಿತ್ಯವನ್ನೂ ಅರಿಯುವ ಮಟ್ಟಕ್ಕೇರಿಸಿದೆ.

ವೀರಣ್ಣನವರು ಹಲವು ಕಂಪನಿಗಳಲ್ಲಿ ನಟರಾಗಿ, ಗಾಯಕರಾಗಿ ದುಡಿದಿದ್ದಾರೆ. ಅವರು ಎಲ್ಲಾ ಭಗೆಯ ಪಾತ್ರಗಳನ್ನೂ ಅಭಿನಯಿಸಿದ್ದಾರೆ. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಬಾಲ ನಟರಾಗಿ, ಸ್ತ್ರೀ ಪಾತ್ರಧಾರಿಯಾಗಿ, ಖಳನಾಯಕನಾಗಿ, ಹಾಸ್ಯಗಾರನಾಗಿ ಅಭಿನಯಿಸಿದ್ದಾರೆ. ಕಂದಗಲ್ಲು ಹನುಮಂತರಾಯರ ರಕ್ತರಾತ್ರಿ ನಾಟಕದ ಶಕುನಿ ಪಾತ್ರ ಅವರಿಗೆ ಅಪಾರ ಯಶಸ್ಸು ತಂದಿತು. ಅವರು ಕೆಲಸ ಮಾಡಿದ ಪ್ರಸಿದ್ಧ ನಾಟಕ ಕಂಪನೆಗಳೆಂದರೆ ಹೊನ್ನಪ್ಪ ಭಾಗವತರ ಶ್ರೀ ಉಮಾಮಹೇಶ್ವರ ನಾಟ್ಯ ಸಂಘ, ಬಳ್ಳಾರಿ ಲಲಿತಮ್ಮನವರ ಶ್ರೀ ಲಲಿತ ಕಲಾ ನಾಟ್ಯ ಸಂಘ, ಚಂದ್ರಯ್ಯ ಸ್ವಾಮಿಯವರ ಶ್ರೀ ನಟರಾಜ ನಾಟಕ ಮಂಡಳಿ.

ಮುಂದೆ ವೀರಣ್ಣನವರು ತಮ್ಮದೇ ಆದ "ನಾಟಕ ಕಲಾ ಮಿತ್ರ ಮಂಡಳಿ" ಸ್ಥಾಪಿಸಿ ಎರಡು ದಶಕಕ್ಕೂ ಮಿಗಿಲು ಕಾಲ ನಡೆಸಿದರು. ಆಗ ವೀರಣ್ನನವರು ಕಲೆಗಾಗಿ ಬದುಕಿನಿಂದ ಕಲಿತ ಅಪಾರ ಅನುಭವ ಒಂದು ಮಜಲು. ಆ ಸಾಧನೆಯ ಬೆಳಕಿನಲ್ಲಿ ಬೆಳಗಲ್ಲು ವೀರಣ್ಣ ಮುಂದೆ ಆರಂಭಿಸಿದ್ದು, ನೆಳಲು-ಬೆಳಕಿನ ತೊಗಲುಗೊಂಬೆಯಾಟ. ತಾವೇ ಬಣ್ಣ ಹಚ್ಚಿ ಪಾತ್ರ ಮಾಡುವಾಗ ಜನ ಪ್ರೋತ್ಸಾಹಕ್ಕೆ ನೆರಳು ಮುಸುಕಿದಾಗ, ವೀರಣ್ಣ ತಾನು ಫರದೆಯ ಹಿಂದಕ್ಕೆ ಸರಿದು, ಅಭಿವ್ಯಕ್ತಗೊಂಡ ಮೂಕ ತೊಗಲುಗೊಂಬೆಗಳಿಗೆ ಜೀವ ನೀಡಿದ್ದು ಎರಡನೆ ಮಜಲು.

ರಾಜ್ಯದ ದಕ್ಷ ಪೊಲೀಸ್ ಅಧಿಕಾರಿ ದಿ. ವಿಜಯ ಸಾಸನೂರರು ೧೯೮೦ರಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಲಯದ ನಿರ್ದೇಶಕರಾಗಿದ್ದಾಗ, ವೀರಣ್ಣನವರಿಗೆ ಕರ್ನಾಟಕದ ಅಪರೂಪದ ಕಲೆಯಾದ ತೊಗಲು ಗೊಂಬೆಯಾಟವನ್ನು ಪುನರುಜ್ಜೀವನಗೊಳಿಸುವ ಮಾತುಗಳಿಂದ ಹುರಿದುಂಬಿಸಿದಾಗ, ವೀರಣ್ಣನವರು ತಮ್ಮ ರಕ್ತ ಸಂಬಂಧಿ , ರಾಜ್ಯ ಪ್ರಶಸ್ತಿ ವಿಜೇತ ದಿ. ಹೊಲೆಪ್ಪನವರ ಸಹಕಾರದಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇಟ್ರದಲ್ಲಿ ರಾಮಾಯಣದ ಕಥಾ ಪ್ರಸಂಗ "ಪಂಚವಟಿ" ತೊಗಲುಗೊಂಬೆಯಾಟ ಆಡಿಸಿ ಒಂದು ದಾಖಲೆಯನ್ನೇ ನಿರ್ಮಿಸಿದರು.

ನಂತರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯರು ನೀಡಿದ ಆರ್ಥಿಕ ಸಹಾಯ ಮತ್ತು ಕಲಾ ಪ್ರಶಂಸೆಯ ಪ್ರೋತ್ಸಾಹದಿಂದ ವೀರಣ್ಣನವರು ತೊಗಲುಗೊಂಬೆಯಾಟದ ಕಾಯಕವನ್ನು ಮುಂದುವರೆಸಲು ಸಾಧ್ಯವಾಯಿತು.

ಮುಮ್ದೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ. ಹೆಚ್.ಎಲ್. ನಾಗೇಗೌಡರು ಹಲವುರೀತಿಯ ಪ್ರೋತ್ಸಾಹ ನೀಡಿ ವೀರಣ್ನನವರ ತೊಗಲುಗೊಂಬೆಯಾಟ ಸಮರ್ಥ ರೀತಿಯಲ್ಲಿ ನೆಲೆ ನಿಲ್ಲಲು ಸಹಾಯ ಮಾಡಿದರು. ಅಲ್ಲಿಂದ ತಮ್ಮದೇ ಆದ ’ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ"ವನ್ನು ಆರಂಭಿಸಿದ ವೀರಣ್ನ ಈ ಕ್ಷೇತ್ರದಲ್ಲಿ ಸಾಧಿಸಿದ್ದು ಅಪಾರ. ಅವರಿಗೆ ಸಾಹಿತ್ಯದ ಸಾಥಿ ಶ್ರೀ ವೈ. ರಾಘವೇಂದ್ರ ರಾವ್ ಬಳ್ಳಾರಿ ಮತ್ತು ರೇಖಾ ಚಿತ್ರ ತಯಾರಿಕೆಯ ಸಾಥಿ ವಿ.ಟಿ. ಕಾಳೇಮಾಸ್ಟರ್ ಸಂಡೂರು. ವೀರಣ್ಣನವರ ಪೂರ್ಣ ಕುಟುಂಬ ಬೊಂಬೆ ಕಲಾವಿದರದ್ದೇ. ಅವರ ಪತ್ನಿ ಶ್ರೀಮತಿ ಮಹಾಲಿಂಗಮ್ಮ, ಸಾಹಿತ್ಯದಲ್ಲಿ ಎಂ.ಎ ಪದವಿ ಗಳಿಸಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಮಗ ಬಿ.ವಿ. ಪ್ರಕಾಶ್, ಇನ್ನಿತರ ಮಕ್ಕಳಾದ ಬಿ.ವಿ. ಮಲ್ಲಿಕಾರ್ಜುನ, ಬಿ.ವಿ. ಮಹೇಶ್, ಬಿ.ವಿ. ಹನುಮಂತ ಮತ್ತು ಮಗಳು ಲಕ್ಷ್ಮೀದೇವಿ ಬೊಂಬೆ ತಯಾರಿಕೆ, ಬೊಂಬೆಯಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ನಾಟಕಕಾರ, ನಿಸರ್ಗಪ್ರಿಯ, ಹಿರಿಯ ವಿದ್ವಾಂಸ ಪ್ರೊ. ಎಂ.ಎಂ. ಕಲ್ಬುರ್ಗಿ ಮತ್ತು ಡಾ. ಹೆಚ್.ಜೆ. ಲಕ್ಕಪ್ಪ ಗೌಡರಂತಹ ಹಿರಿಯ ಬರಹಗಾರರು ವೀರಣ್ಣನವರಿಗೆ ಸಾಹಿತ್ಯವನ್ನೊದಗಿಸಿ ಪ್ರಯೋಗಗಳ ಯಶಸ್ಸಿಗೆ ಕಾರಣರಾಗಿದ್ದಾರೆ.

ಪ್ರಸಿದ್ಧ ನಾಟಕಕಾರರಾದ ಗಿರೀಶ್ ಕಾರ್ನಾಡರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ "ಭಾರತ ಸ್ವಾತಂತ್ರ್ಯ ಸಂಗ್ರಾಮ" ತೊಗಲುಗೊಂಬೆಯಾಟಕ್ಕೆ ಅಪಾರ ಸಹಾಯ ಮಾಡಿದವರಾಗಿದ್ದಾರೆ. ವೀರಣ್ಣನವರ ಬೊಂಬೆಯಾಟ ಕೇವಲ ಪೌರಾಣಿಕ ಪ್ರಸಂಗಗಳಿಗೇ ಮೀಸಲಾಗದೆ ಐತಿಹಾಸಿಕ ಮತ್ತು ಸಾಮಾಜಿಕ ಕಥಾ ಪ್ರಸಂಗಗಳನ್ನೊಳಗೊಂಡು ವ್ಯಾಪಕವಾಗಿ ಬೆಳೆದದ್ದಲ್ಲದೆ ಸಮಕಾಲೀನತೆಯನ್ನು ಮೈಗೂಡಿಸಿಕೊಂಡುದುದಾಗಿದೆ. ಮುಖ್ಯವಾದ ಪ್ರಸಂಗಗಳೆಂದರೆ:
ಭಾರತ ಸ್ವಾಂತ್ರ್ಯ ಸಂಗ್ರಾಮ - ಸಹಕಾರ: ಕೇಂದ್ರ ಸಂಗೀತ ನಾಟಕ ಅಕಾಡೆಮಿ, ದೆಹಲಿ,
ಬಾಪು - ಸಹಕಾರ: ಇಂದಿರಾಗಾಂಧಿ ರಾಷ್ಟ್ರೀಯ ಸಾಂಸ್ಕೃತಿಕ ಕಲಾಕೇಂದ್ರ, ದೆಹಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಪ್ರವಾದಿ ಬಸವೇಶ್ವರ - ಸಹಕಾರ: ಪರಮ ಪೂಜ್ಯ ಡಾ. ತೋಂಟದಾರ್ಯ ಜಗದ್ಗುರುಗಳು, ತೋಂಟದಾರ್ಯ ಮಠ, ಗದಗ್
ಕಿತ್ತೂರು ಚೆನ್ನಮ್ಮ - ಸಹಕಾರ: ಕೇಂದ್ರ ಸಂಸ್ಕೃತಿ ಇಲಾಖೆ, ದೆಹಲಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು
ಸಾಕ್ಷರತಾ ಆಂದೋಳನ - ಸಹಕಾರ: ಮಂಗಳೂರು ಜಿಲ್ಲಾ ಆಡಳಿತ
ಕಬ್ಬಿನ ಬೆಳೆ - ಸಹಕಾರ: ಗೋದಾವರಿ ಸಹಕಾರ ಸಕ್ಕರೆ ಕಾರ್ಖಾನೆ, ಸಮೀರವಾಡಿ.
ಅಲ್ಲದೆ,
ಕುಟುಂಬ ನಿಯಂತ್ರಣ ಯೋಜನೆ, ತಾಯಿ ಮತ್ತು ಮಗುವಿನ ಆರೋಗ್ಯ (ಆರ್.ಸಿ.ಹೆಚ್), ಏಯ್ಡ್ಸ್, ಪಲ್ಸ್ ಪೋಲಿಯೋ, ಮಲೇರಿಯಾ, ಡೆಂಗ್ಯು ಜ್ವರ, ಅನಕ್ಷರತೆ, ಮದ್ಯವ್ಯಸನ
ಹೀಗೆ ಸಾಮಾಜಿಕ ಸಮಸ್ಯೆಗಳನ್ನು ಕುರಿತು ತಮ್ಮ ತೊಗಲುಗೊಂಬೆಯಾಟದ ಮೂಲಕ ಜನರಿಗೆ ಅರಿವು ಮೂಡಿಸುವಲ್ಲಿ ಸಫಲರಾಗಿದ್ದಾರೆ.
(ಮುಂದುವರೆಯುವುದು)

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 263 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ - ಮುಂದುವರೆದ ಲೇಖನ
  • ಬೆಳಗಲ್ಲು ವೀರಣ್ಣನವರ ತಲೆಗೊಂದು ಹೊಸ ಗರಿ ಮೂಡಿದೆ
  • ನಾಟಕ ಅಕಾಡೆಮಿ ಪ್ರಶಸ್ತಿಗಳು
  • ಕನ್ನಡ ರಂಗಭೂಮಿಯ ಸುತ್ತ
  • " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
Syndicate content

ಲೇಖಕರು

agilenag's picture

ಪೂರ್ಣ ಹೆಸರು
A.V. Nagaraju

ಪರಿಚಯ

I am a retired (VRS) Bank Officer. I have a flair for writing in Kannada as well as English.

Recently, I along with the help of my family members released a book on Family Tree of our family, commencing from 1700 AD. The book was acclaimed by many well known historians and writers like Prof. Suryanatha Kamath, Horeyala Doreswamy and Babu Krishnamurthy. Late Mathighatta Krishnamurthy who has given foreword to the book has called it as a unique contribution to Kannada literary world.

Another achievement is renovation of a 1200 year old Udbhava Kalleshwara Temple at Belavadi, Chikkamagalur Dist, Karnataka and that too was appreciated many luminaries like Sri Gowrishankar, Administrator, Shringeri Sharada and the like.

I am working presently on the Editorial Board of GEJJEHEJJE Monthly Theatre Magazine.

I also undertake translation of legal, technical and literary works from Kannada to English and vice-versa.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
  • ಪರಂಪರೆ-ಪ್ರವಾಹ-ಪ್ರತಿರೋಧ
  • ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
  • ’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”
  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:02pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:00pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:59am
  • mahesha
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:59am
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:57am
  • Chetan.Jeeral
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 11:55am
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:52am
  • thoughtsarenotenough
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 11:41am
  • roshan_netla
    ಉ: Attitude
    October 13, 2008 - 11:29am
  • ASHOKKUMAR
    ಉ: Attitude
    October 13, 2008 - 11:17am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator